AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD Account: ಒಂದೇ ದಿನದಲ್ಲಿ ಎಫ್​ಡಿ ದರಗಳನ್ನು ಹೆಚ್ಚಿಸಿದ ಈ ನಾಲ್ಕು ಬ್ಯಾಂಕುಗಳು

ರೆಪೋ ದರ ಹೆಚ್ಚಳದ ನಂತರ ನಿಶ್ಚಿತ ಠೇವಣಿಗಳ ಬಡ್ಡಿದರಗಳನ್ನು ಹೆಚ್ಚಿಸುವ ಪ್ರಕ್ರಿಯೆಯು ಮುಂದುವರಿಯುತ್ತಿದ್ದು, ಎಚ್​ಡಿಎಫ್​ಸಿ ಸೇರಿದಂತೆ ಒಟ್ಟು ಐದು ಬ್ಯಾಂಕ್​ಗಳು ಎಫ್​ಡಿ ದರವನ್ನು ಹೆಚ್ಚಿಸಿದೆ.

TV9 Web
| Updated By: Rakesh Nayak Manchi|

Updated on:Oct 13, 2022 | 12:30 PM

Share
ರೆಪೋ ದರ ಹೆಚ್ಚಳದ ನಂತರ ನಿಶ್ಚಿತ ಠೇವಣಿಗಳ ಬಡ್ಡಿದರಗಳನ್ನು ಹೆಚ್ಚಿಸುವ ಪ್ರಕ್ರಿಯೆಯು ಮುಂದುವರಿಯುತ್ತಿದೆ. ಪ್ರತಿದಿನ ಬ್ಯಾಂಕ್‌ಗಳು ಎಫ್‌ಡಿ ದರವನ್ನು ಹೆಚ್ಚಿಸುತ್ತಿವೆ. ಈ ಸಂಚಿಕೆಯಲ್ಲಿ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಯೆಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಧನಲಕ್ಷ್ಮಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರವನ್ನು ಹೆಚ್ಚಿಸಿವೆ. ಹಬ್ಬದ ಋತುವಿನಲ್ಲಿ ಗ್ರಾಹಕರು ಎಫ್​ಡಿ ದರದಲ್ಲಿ ಬಂಪರ್ ಬಡ್ಡಿಯನ್ನು ಪಡೆಯಲಿದ್ದಾರೆ. ಯೆಸ್ ಬ್ಯಾಂಕ್ ತನ್ನ 2 ಕೋಟಿ ರೂ.ಗಿಂತ ಕಡಿಮೆ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಬದಲಾಯಿಸಿದ್ದು, ಇದರಲ್ಲಿ ಗರಿಷ್ಠ ಬಡ್ಡಿ ದರವನ್ನು ಸಾಮಾನ್ಯ ಜನರಿಗೆ ಶೇ 6.75 ಮತ್ತು ವೃದ್ಧರಿಗೆ ಶೇ 7.50 ವರೆಗೆ ನೀಡಲಾಗುತ್ತದೆ.

Personal finance savings tips Four banks hike FD rates

1 / 5
ಎಚ್‌ಡಿಎಫ್‌ಸಿ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೊಸ ದರಗಳು ಅಕ್ಟೋಬರ್ 11ರಿಂದ ಜಾರಿಗೆ ಬರುತ್ತವೆ. ದರಗಳಲ್ಲಿನ ಬದಲಾವಣೆಯ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್ ಚಿಲ್ಲರೆ ಹೂಡಿಕೆದಾರರಿಗೆ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು 75 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಿದೆ. ಹೂಡಿಕೆದಾರರು ಈಗ ಸಾಮಾನ್ಯ ಜನರಿಗೆ ಶೇ 3.00 ರಿಂದ ಶೇ 6.00 ವರೆಗೆ ಮತ್ತು ಹಿರಿಯ ನಾಗರಿಕರಿಗೆ ಶೇ 3.50 ರಿಂದ ಶೇ 6.75 ವರೆಗೆ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಎಫ್​ಡಿಗಳ ಬಡ್ಡಿದರಗಳನ್ನು ಪಡೆಯಲಿದ್ದಾರೆ.

Personal finance savings tips Four banks hike FD rates

2 / 5
Personal finance savings tips Four banks hike FD rates

ಖಾಸಗಿ ವಲಯದ ಬ್ಯಾಂಕ್ ಐಡಿಬಿಐ ಬ್ಯಾಂಕ್ ತನ್ನ ಎರಡು ವಿಶೇಷ ಎಫ್​ಡಿ ಯೋಜನೆ (ಐಡಿಬಿಐ ನಮನ್ ಹಿರಿಯ ನಾಗರಿಕ ಠೇವಣಿ ಮತ್ತು ಅಮೃತ್ ಮಹೋತ್ಸವ ಎಫ್​ಡಿ ಯೋಜನೆ)ಗಳ ಅವಧಿಯನ್ನು 2022ರ ಅಕ್ಟೋಬರ್ 31ರಿಂದ 2022ರ ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ. ಇದಲ್ಲದೇ ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್‌ಡಿಗಳ ಮೇಲಿನ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಐಡಿಬಿಐ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಹೊಸ ಎಫ್​ಡಿ ಬಡ್ಡಿದರಗಳು 2022ರ ಅಕ್ಟೋಬರ್ 11 ರಿಂದ ಜಾರಿಗೆ ಬರುತ್ತವೆ. ಒಂದು ವರ್ಷದ ಎಫ್‌ಡಿ ಬಡ್ಡಿ ಶೇ 5.60ರಿಂದ ಶೇ 5.70ಕ್ಕೆ ಏರಿಕೆಯಾಗಿದೆ.

3 / 5
Personal finance savings tips Four banks hike FD rates

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರ, 2 ಕೋಟಿ ರೂ.ಗಿಂತ ಕಡಿಮೆ ಚಿಲ್ಲರೆ ಎಫ್‌ಡಿ ಯೋಜನೆಗಳ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೊಸ ದರಗಳು ಇದೇ ತಿಂಗಳ 10ರಿಂದ ಜಾರಿಗೆ ಬರುತ್ತವೆ. ಬದಲಾವಣೆಯ ನಂತರ ಬ್ಯಾಂಕ್ ಬಹು ಅವಧಿಗಳ ಎಫ್​ಡಿಗಳ ಮೇಲಿನ ಬಡ್ಡಿ ದರಗಳನ್ನು 85 ಬೇಸಿಕ್ ಪಾಯಿಂಟ್ಸ್​ವರೆಗೆ ಹೆಚ್ಚಿಸಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಈಗ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಎಫ್​ಡಿಗಳ ಮೇಲೆ ಶೇ 2.75 ರಿಂದ ಶೇ 5.50 ವರೆಗೆ ಬಡ್ಡಿದರವನ್ನು ನೀಡುತ್ತದೆ.

4 / 5
Personal finance savings tips Four banks hike FD rates

ಖಾಸಗಿ ವಲಯದ ಬ್ಯಾಂಕ್ ಧನಲಕ್ಷ್ಮಿ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಚಿಲ್ಲರೆ ಎಫ್​ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೊಸ ದರಗಳು ಅಕ್ಟೋಬರ್ 12 ರಿಂದ ಜಾರಿಗೆ ಬರುತ್ತವೆ. ಬಡ್ಡಿದರದ ಬದಲಾವಣೆಯ ನಂತರ ಧನಲಕ್ಷ್ಮಿ ಬ್ಯಾಂಕ್ 555 ದಿನಗಳಲ್ಲಿ ಪಕ್ವವಾಗುವ ಎಫ್​ಡಿಗಳ ಮೇಲಿನ ಬಡ್ಡಿದರಗಳನ್ನು 40 ಮೂಲಾಂಶಗಳವರೆಗೆ ಹೆಚ್ಚಿಸಿದೆ. ಧನಲಕ್ಷ್ಮಿ ಬ್ಯಾಂಕ್ ಈಗ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಎಫ್​ಡಿಗಳ ಮೇಲೆ ಶೇ 3.25 ರಿಂದ ಶೇ 6.10 ವರೆಗೆ ಬಡ್ಡಿಯನ್ನು ನೀಡುತ್ತಿದೆ.

5 / 5

Published On - 12:30 pm, Thu, 13 October 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ