AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD Account: ಒಂದೇ ದಿನದಲ್ಲಿ ಎಫ್​ಡಿ ದರಗಳನ್ನು ಹೆಚ್ಚಿಸಿದ ಈ ನಾಲ್ಕು ಬ್ಯಾಂಕುಗಳು

ರೆಪೋ ದರ ಹೆಚ್ಚಳದ ನಂತರ ನಿಶ್ಚಿತ ಠೇವಣಿಗಳ ಬಡ್ಡಿದರಗಳನ್ನು ಹೆಚ್ಚಿಸುವ ಪ್ರಕ್ರಿಯೆಯು ಮುಂದುವರಿಯುತ್ತಿದ್ದು, ಎಚ್​ಡಿಎಫ್​ಸಿ ಸೇರಿದಂತೆ ಒಟ್ಟು ಐದು ಬ್ಯಾಂಕ್​ಗಳು ಎಫ್​ಡಿ ದರವನ್ನು ಹೆಚ್ಚಿಸಿದೆ.

TV9 Web
| Edited By: |

Updated on:Oct 13, 2022 | 12:30 PM

Share
ರೆಪೋ ದರ ಹೆಚ್ಚಳದ ನಂತರ ನಿಶ್ಚಿತ ಠೇವಣಿಗಳ ಬಡ್ಡಿದರಗಳನ್ನು ಹೆಚ್ಚಿಸುವ ಪ್ರಕ್ರಿಯೆಯು ಮುಂದುವರಿಯುತ್ತಿದೆ. ಪ್ರತಿದಿನ ಬ್ಯಾಂಕ್‌ಗಳು ಎಫ್‌ಡಿ ದರವನ್ನು ಹೆಚ್ಚಿಸುತ್ತಿವೆ. ಈ ಸಂಚಿಕೆಯಲ್ಲಿ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಯೆಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಧನಲಕ್ಷ್ಮಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರವನ್ನು ಹೆಚ್ಚಿಸಿವೆ. ಹಬ್ಬದ ಋತುವಿನಲ್ಲಿ ಗ್ರಾಹಕರು ಎಫ್​ಡಿ ದರದಲ್ಲಿ ಬಂಪರ್ ಬಡ್ಡಿಯನ್ನು ಪಡೆಯಲಿದ್ದಾರೆ. ಯೆಸ್ ಬ್ಯಾಂಕ್ ತನ್ನ 2 ಕೋಟಿ ರೂ.ಗಿಂತ ಕಡಿಮೆ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಬದಲಾಯಿಸಿದ್ದು, ಇದರಲ್ಲಿ ಗರಿಷ್ಠ ಬಡ್ಡಿ ದರವನ್ನು ಸಾಮಾನ್ಯ ಜನರಿಗೆ ಶೇ 6.75 ಮತ್ತು ವೃದ್ಧರಿಗೆ ಶೇ 7.50 ವರೆಗೆ ನೀಡಲಾಗುತ್ತದೆ.

Personal finance savings tips Four banks hike FD rates

1 / 5
ಎಚ್‌ಡಿಎಫ್‌ಸಿ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೊಸ ದರಗಳು ಅಕ್ಟೋಬರ್ 11ರಿಂದ ಜಾರಿಗೆ ಬರುತ್ತವೆ. ದರಗಳಲ್ಲಿನ ಬದಲಾವಣೆಯ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್ ಚಿಲ್ಲರೆ ಹೂಡಿಕೆದಾರರಿಗೆ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು 75 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಿದೆ. ಹೂಡಿಕೆದಾರರು ಈಗ ಸಾಮಾನ್ಯ ಜನರಿಗೆ ಶೇ 3.00 ರಿಂದ ಶೇ 6.00 ವರೆಗೆ ಮತ್ತು ಹಿರಿಯ ನಾಗರಿಕರಿಗೆ ಶೇ 3.50 ರಿಂದ ಶೇ 6.75 ವರೆಗೆ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಎಫ್​ಡಿಗಳ ಬಡ್ಡಿದರಗಳನ್ನು ಪಡೆಯಲಿದ್ದಾರೆ.

Personal finance savings tips Four banks hike FD rates

2 / 5
Personal finance savings tips Four banks hike FD rates

ಖಾಸಗಿ ವಲಯದ ಬ್ಯಾಂಕ್ ಐಡಿಬಿಐ ಬ್ಯಾಂಕ್ ತನ್ನ ಎರಡು ವಿಶೇಷ ಎಫ್​ಡಿ ಯೋಜನೆ (ಐಡಿಬಿಐ ನಮನ್ ಹಿರಿಯ ನಾಗರಿಕ ಠೇವಣಿ ಮತ್ತು ಅಮೃತ್ ಮಹೋತ್ಸವ ಎಫ್​ಡಿ ಯೋಜನೆ)ಗಳ ಅವಧಿಯನ್ನು 2022ರ ಅಕ್ಟೋಬರ್ 31ರಿಂದ 2022ರ ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ. ಇದಲ್ಲದೇ ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್‌ಡಿಗಳ ಮೇಲಿನ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಐಡಿಬಿಐ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಹೊಸ ಎಫ್​ಡಿ ಬಡ್ಡಿದರಗಳು 2022ರ ಅಕ್ಟೋಬರ್ 11 ರಿಂದ ಜಾರಿಗೆ ಬರುತ್ತವೆ. ಒಂದು ವರ್ಷದ ಎಫ್‌ಡಿ ಬಡ್ಡಿ ಶೇ 5.60ರಿಂದ ಶೇ 5.70ಕ್ಕೆ ಏರಿಕೆಯಾಗಿದೆ.

3 / 5
Personal finance savings tips Four banks hike FD rates

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರ, 2 ಕೋಟಿ ರೂ.ಗಿಂತ ಕಡಿಮೆ ಚಿಲ್ಲರೆ ಎಫ್‌ಡಿ ಯೋಜನೆಗಳ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೊಸ ದರಗಳು ಇದೇ ತಿಂಗಳ 10ರಿಂದ ಜಾರಿಗೆ ಬರುತ್ತವೆ. ಬದಲಾವಣೆಯ ನಂತರ ಬ್ಯಾಂಕ್ ಬಹು ಅವಧಿಗಳ ಎಫ್​ಡಿಗಳ ಮೇಲಿನ ಬಡ್ಡಿ ದರಗಳನ್ನು 85 ಬೇಸಿಕ್ ಪಾಯಿಂಟ್ಸ್​ವರೆಗೆ ಹೆಚ್ಚಿಸಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಈಗ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಎಫ್​ಡಿಗಳ ಮೇಲೆ ಶೇ 2.75 ರಿಂದ ಶೇ 5.50 ವರೆಗೆ ಬಡ್ಡಿದರವನ್ನು ನೀಡುತ್ತದೆ.

4 / 5
Personal finance savings tips Four banks hike FD rates

ಖಾಸಗಿ ವಲಯದ ಬ್ಯಾಂಕ್ ಧನಲಕ್ಷ್ಮಿ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಚಿಲ್ಲರೆ ಎಫ್​ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೊಸ ದರಗಳು ಅಕ್ಟೋಬರ್ 12 ರಿಂದ ಜಾರಿಗೆ ಬರುತ್ತವೆ. ಬಡ್ಡಿದರದ ಬದಲಾವಣೆಯ ನಂತರ ಧನಲಕ್ಷ್ಮಿ ಬ್ಯಾಂಕ್ 555 ದಿನಗಳಲ್ಲಿ ಪಕ್ವವಾಗುವ ಎಫ್​ಡಿಗಳ ಮೇಲಿನ ಬಡ್ಡಿದರಗಳನ್ನು 40 ಮೂಲಾಂಶಗಳವರೆಗೆ ಹೆಚ್ಚಿಸಿದೆ. ಧನಲಕ್ಷ್ಮಿ ಬ್ಯಾಂಕ್ ಈಗ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಎಫ್​ಡಿಗಳ ಮೇಲೆ ಶೇ 3.25 ರಿಂದ ಶೇ 6.10 ವರೆಗೆ ಬಡ್ಡಿಯನ್ನು ನೀಡುತ್ತಿದೆ.

5 / 5

Published On - 12:30 pm, Thu, 13 October 22

Web contact
Web contact

TV9 Kannada

Read More
Follow Us
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!