AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gpay Aadhaar: ಡೆಬಿಟ್ ಕಾರ್ಡ್ ಇಲ್ಲದೇ ಆಧಾರ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡಲು ಗೂಗಲ್ ಪೇ ಅವಕಾಶ

Aadhaar For UPI Activation: ಗೂಗಲ್ ಪೇನಲ್ಲಿ ಈ ಹಿಂದೆ ಯುಪಿಐ ಆ್ಯಕ್ಟಿವೇಶನ್​ಗೆ ಡೆಬಿಟ್ ಕಾರ್ಡ್ ಮಾತ್ರ ಕೇಳಲಾಗುತ್ತಿತ್ತು. ಈಗ ಆಧಾರ್ ಆಪ್ಷನ್ ಕೂಡ ಸೇರಿಸಲಾಗಿದೆ. ಆಧಾರ್​ಗೆ ನೊಂದಾಯಿತವಾದ ಮೊಬೈಲ್ ನಂಬರ್, ಮತ್ತು ಬ್ಯಾಂಕ್​ಗೆ ಜೋಡಿತವಾದ ಮೊಬೈಲ್ ನಂಬರ್ ಸಹಾಯದಿಂದ ಯುಪಿಐ ಆ್ಯಕ್ಟಿವೇಟ್ ಮಾಡಬಹುದು.

Gpay Aadhaar: ಡೆಬಿಟ್ ಕಾರ್ಡ್ ಇಲ್ಲದೇ ಆಧಾರ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡಲು ಗೂಗಲ್ ಪೇ ಅವಕಾಶ
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 08, 2023 | 2:00 PM

ನೀವು ಈಗ ಡೆಬಿಟ್ ಕಾರ್ಡ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡುವ ಅಗತ್ಯ ಇರುವುದಿಲ್ಲ. ಆಧಾರ್ ಮೂಲಕವೂ ಯುಪಿಐ ವೆರಿಫಿಕೇಶನ್ ಮಾಡಬಹುದು. ಗೂಗಲ್ ಪೇ ಇಂಥದ್ದೊಂದು ಸೌಲಭ್ಯ ಕಲ್ಪಿಸಿದೆ. ಗೂಗಲ್ ಪೇನಲ್ಲಿ ಗ್ರಾಹಕರು ಆಧಾರ್ ಕಾರ್ಡ್ ಮೂಲಕ ಯುಪಿಐಗೆ ನೊಂದಣಿ ಮಾಡಿಸಬಹುದು. ಈ ಫೀಚರ್​ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಬೆಂಬಲಿಸುತ್ತದೆ.

ನೊಂದಾಯಿತ ಮೊಬೈಲ್ ನಂಬರ್ ಇರಬೇಕು

ಗೂಗಲ್ ಪೇನಲ್ಲಿ ಈ ಹಿಂದೆ ಯುಪಿಐ ಆ್ಯಕ್ಟಿವೇಶನ್​ಗೆ ಡೆಬಿಟ್ ಕಾರ್ಡ್ ಮಾತ್ರ ಕೇಳಲಾಗುತ್ತಿತ್ತು. ಈಗ ಆಧಾರ್ ಆಪ್ಷನ್ ಕೂಡ ಸೇರಿಸಲಾಗಿದೆ. ಆಧಾರ್​ಗೆ ನೊಂದಾಯಿತವಾದ ಮೊಬೈಲ್ ನಂಬರ್, ಮತ್ತು ಬ್ಯಾಂಕ್​ಗೆ ಜೋಡಿತವಾದ ಮೊಬೈಲ್ ನಂಬರ್ ಸಹಾಯದಿಂದ ಗ್ರಾಹಕರು ಯುಪಿಐ ಆ್ಯಕ್ಟಿವೇಟ್ ಮಾಡಬಹುದು. ಇಲ್ಲಿ ಬ್ಯಾಂಕ್ ಖಾತೆ ಮತ್ತು ಆಧಾರ್​ಗೆ ಜೋಡಿತವಾದ ಮೊಬೈಲ್ ನಂಬರ್ ಒಂದೇ ಆಗಿರಬೇಕು.

ಗೂಗಲ್ ಪೇ ಗ್ರಾಹಕರು ತಮ್ಮ ಆಧಾರ್ ನಂಬರ್​ನ ಮೊದಲ 6 ಅಂಕಿಗಳನ್ನು ನಮೂದಿಸಿದಾಗ ಯುಐಡಿಎಐ ಡಾಟಾಬೇಸ್​ನಲ್ಲಿ ಆ ಮಾಹಿತಿ ಶೇಖರಣೆ ಆಗುತ್ತದೆ. ಈ ಆರು ನಂಬರ್ ನಮೂದಿಸಿದ ಬಳಿಕ ಯುಐಡಿಎಐ ಮತ್ತು ಬ್ಯಾಂಕ್​ನಿಂದ ಒಟಿಪಿ ಬರುತ್ತದೆ. ಇದನ್ನು ಹಾಕಿದ ಬಳಿಕ ಗ್ರಾಹಕರ ಬ್ಯಾಂಕ್​ನಿಂದ ಯುಪಿಐ ಸಕ್ರಿಯಗೊಳ್ಳುತ್ತದೆ. ಆ ಬಳಿಕ ಗ್ರಾಹಕರು ಯುಪಿಐ ಪಿನ್ ಸೆಟ್ ಮಾಡಬಹುದು.

ಇದನ್ನೂ ಓದಿNote Withdrawal: 2,000 ರೂ ನೋಟು ಹಿಂಪಡೆದ ಬಳಿಕ ಮರಳಿದೆ ಶೇ. 50ರಷ್ಟು ಹಣ; ಶೇ. 15ರಷ್ಟು ನೋಟು ಬದಲಾವಣೆ

ಗಮನಿಸಬೇಕಾದ ಸಂಗತಿ ಎಂದರೆ ಆಧಾರ್ ನಂಬರ್​ನ ಮೊದಲ ಆರು ಅಂಕಿಗಳನ್ನು ಗೂಗಲ್ ಪೇ ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಯುಐಡಿಎಐನಿಂದ ದೃಢೀಕರಣಕ್ಕಾಗಿ ಮಾತ್ರ ಅದರ ಬಳಕೆ ಆಗುತ್ತದೆ ಎಂದು ಗೂಗಲ್ ಸಂಸ್ಥೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ಬಹುತೇಕ ಜನರು ಆಧಾರ್ ನಂಬರ್ ಬಳಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಆಧಾರ್​ಗೆ ಮೊಬೈಲ್ ಸಂಖ್ಯೆಯನ್ನೂ ಜೋಡಿಸಿದ್ದಾರೆ. ಹೀಗಾಗಿ, ಯುಪಿಐ ಆ್ಯಕ್ಟಿವೇಶನ್​ಗೆ ಆಧಾರ್ ಬಳಕೆ ಮಾಡುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ ಎನ್ನುವುದು ಗೂಗಲ್​ನ ಲೆಕ್ಕಾಚಾರ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್
ಹಣದ ವಂಚನೆ ಮಾಡಿ ಮನೆತನದ ಮಾನ ಹರಾಜು ಹಾಕಿದಳು: ಚೈತ್ರಾ ತಂದೆ
ಹಣದ ವಂಚನೆ ಮಾಡಿ ಮನೆತನದ ಮಾನ ಹರಾಜು ಹಾಕಿದಳು: ಚೈತ್ರಾ ತಂದೆ
ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ತಂದೆ ಪ್ರಶ್ನೆ
ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ತಂದೆ ಪ್ರಶ್ನೆ
ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್