Note Withdrawal: 2,000 ರೂ ನೋಟು ಹಿಂಪಡೆದ ಬಳಿಕ ಮರಳಿದೆ ಶೇ. 50ರಷ್ಟು ಹಣ; ಶೇ. 15ರಷ್ಟು ನೋಟು ಬದಲಾವಣೆ

Rs 2,000 Notes Back From Public: ಆರ್​ಬಿಐ ಮಾಹಿತಿ ನೀಡಿದ ಪ್ರಕಾರ 2,000 ರೂ ಮುಖಬೆಲೆಯ ಶೇ. 50ರಷ್ಟು ನೋಟುಗಳನ್ನು ಸಾರ್ವಜನಿಕರು ಮರಳಿಸಿದ್ದಾರೆ. ಇದರಲ್ಲಿ ಶೇ. 85ರಷ್ಟು ನೋಟುಗಳು ಖಾತೆಗಳಿಗೆ ಡೆಪಾಸಿಟ್ ಆಗಿವೆಯಂತೆ.

Note Withdrawal: 2,000 ರೂ ನೋಟು ಹಿಂಪಡೆದ ಬಳಿಕ ಮರಳಿದೆ ಶೇ. 50ರಷ್ಟು ಹಣ; ಶೇ. 15ರಷ್ಟು ನೋಟು ಬದಲಾವಣೆ
2,000 ರೂ ಮುಖಬೆಲೆಯ ನೋಟು
Follow us
|

Updated on: Jun 08, 2023 | 1:21 PM

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿತ್ತು. 3.50 ಲಕ್ಷಕ್ಕೂ ಹೆಚ್ಚು ಕೋಟಿ ರೂ ಮೊತ್ತದ 2000 ರೂ ನೋಟುಗಳ ಪೈಕಿ ಅರ್ಧದಷ್ಟು ನೋಟುಗಳು ಆರ್​ಬಿಐ ಅಥವಾ ಬ್ಯಾಂಕುಗಳಿಗೆ ಮರಳಿವೆಯಂತೆ. ಆರ್​ಬಿಐನ ಎಂಪಿಸಿ ಸಭೆ ಬಳಿಕ ನಡೆದ ಮಾಧ್ಯಮ ಸಂವಾದದಲ್ಲಿ ಆರ್​ಬಿಐ ಈ ಬಗ್ಗೆ ಮಾಹಿತಿ ನೀಡಿದ್ದು, ಇಲ್ಲಿಯವರೆಗೆ 1.82 ಲಕ್ಷ ಕೋಟಿ ರೂ ಮೌಲ್ಯದ 2,000 ರೂ ಮುಖಬೆಲೆಯ ನೋಟುಗಳು ವಾಪಸ್ ಬಂದಿವೆ ಎಂದು ಹೇಳಿದೆ. ಈ ಪೈಕಿ ಶೇ. 85ರಷ್ಟು ನೋಟುಗಳು ಗ್ರಾಹಕರ ಬ್ಯಾಂಕ್ ಖಾತೆಗೆ ಠೇವಣಿಯಾಗಿವೆ. ಅಂದರೆ ಶೇ. 15ರಷ್ಟು ನೋಟು ಬದಲಾವಣೆ ಆಗಿರುವುದು ತಿಳಿದುಬಂದಿದೆ.

2,000 ರೂ ಮುಖಬೆಲೆಯ ನೋಟುಗಳನ್ನು ಹೊಂದಿರುವ ಜನರು ತಮಗೆ ಅನುಕೂಲವಾಗುವ ಸಮಯದಲ್ಲಿ ಬ್ಯಾಂಕ್​ಗೆ ಹೋಗಿ ಠೇವಣಿ ಇಟ್ಟು ಬರಬಹುದು ಅಥವಾ ನೋಟು ಬದಲಾವಣೆ ಮಾಡಿಕೊಳ್ಳಬಹುದು. ಯಾವುದೇ ಆತುರ ಬೇಡ. ಆದರೆ, ಕೊನೆಯ ಕ್ಷಣದವರೆಗೂ ಕಾಯುವುದೂ ಬೇಡ ಎಂದು ದಾಸ್ ಹೇಳಿದರು.

ಆರ್​ಬಿಐ ಘೋಷಣೆ ಪ್ರಕಾರ 2,000 ರೂ ನೋಟುಗಳನ್ನು ವಾಪಸ್ ಮಾಡಲು ಸೆಪ್ಟೆಂಬರ್ 30ರವರೆಗೂ ಕಾಲಾವಕಾಶ ಇದೆ. ಮೇ 19ರಂದು 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದಾಗಿ ಆರ್​ಬಿಐ ಘೋಷಣೆ ಮಾಡಿತ್ತು.

ಇದನ್ನೂ ಓದಿRBI: ಈ ಹಣಕಾಸು ವರ್ಷ ಹಣದುಬ್ಬರ ಶೇ. 5.1, ಜಿಡಿಪಿ ಶೇ. 6.5; ಆರ್​ಬಿಐ ಅಂದಾಜು

ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಗವರ್ನರ್ ಶಕ್ತಿಕಾಂತ ದಾಸ್ ಸೇರಿ 6 ಮಂದಿ ಸದಸ್ಯರಿದ್ದಾರೆ. ಡಾ. ಮೈಕೇಲ್ ದೇಬಬ್ರತ ಪಾತ್ರ, ಡಾ. ಶಶಾಂಕ ಭಿಡೆ, ಡಾ. ಅಶಿಮಾ ಗೋಯಲ್, ಪ್ರೊ. ಜಯಂತ್ ವರ್ಮಾ, ಡಾ. ರಾಜೀವ್ ರಂಜನ್ ಅವರೂ ಈ ಸಮಿತಿಯಲ್ಲಿದ್ದಾರೆ. ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ಈ ಆರೂ ಸದಸ್ಯರು ಸರ್ವಾನುಮತದಿಂದ ನಿರ್ಧಾರ ಕೈಗೊಂಡಿರುವುದು ತಿಳಿದುಬಂದಿದೆ.

2023-24ರ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ. 5.1ರಷ್ಟು ಇರಬಹುದು ಎಂದು ಆರ್​ಬಿಐ ಅಂದಾಜು ಮಾಡಿದೆ. ಆದರೆ, ಹಣದುಬ್ಬರವನ್ನು ಶೇ. 4ಕ್ಕೆ ಇಳಿಸುವುದು ತನ್ನ ಗುರಿ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿರುತ್ತವೆ. ಆದರೆ, ಅನಿಶ್ಚಿತ ಸಂದರ್ಭಗಳಿಂದಾಗಿ ಈ ಗುರಿ ನಿಖರವಾಗಿ ಈಡೇರಿಸಲಾಗುತ್ತದೆ ಎಂದು ಹೇಳಲು ಆಗುವದಿಲ್ಲ ಎಂದು ಮಾಧ್ಯಮ ಸಂವಾದದ ವೇಳೆ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇದನ್ನೂ ಓದಿe-RUPI: ಬ್ಯಾಂಕೇತರ ಸಂಸ್ಥೆಗಳಿಂದಲೂ ಇ-ರುಪೀ ವೋಚರ್ ವಿತರಣೆಗೆ ಅವಕಾಶ; ಏನಿದು ಇ-ರುಪೀ?

ಆರ್​ಬಿಐ ಪ್ರಕಟಣೆ ಬಳಿಕವೂ ಏರಿಕೆ ಮುಂದುವರಿಸಿದ ಸೆನ್ಸೆಕ್ಸ್, ನಿಫ್ಟಿ

ಭಾರತೀಯ ರಿಸರ್ವ್ ಬ್ಯಾಂಕ್ ಎಂಪಿಸಿ ಸಭೆ ಮುಗಿಯುವ ಮುನ್ನವೇ ನಿನ್ನೆ ಷೇರುಮಾರುಕಟ್ಟೆಗಳು ಗರಿಗೆದರಿದ್ದವು. ಇಂದು ಬೆಳಗ್ಗೆಯೂ ಏರಿಕೆ ಆಗಿತ್ತು. ಗವರ್ನರ್ ಸುದ್ದಿಗೋಷ್ಠಿ ಬಳಿಕ ಷೇರುಪೇಟೆ ಇನ್ನಷ್ಟು ಕಳೆಗಟ್ಟಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ದಾಖಲೆ ಮಟ್ಟಕ್ಕೆ ಏರಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ