AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar PAN: ನಿಮ್ಮ ಪ್ಯಾನ್ ನಂಬರ್ ಬೇರೆಯವರ ಆಧಾರ್​ಗೆ ಲಿಂಕ್ ಆಗಿದೆಯಾ? ಸರಿಪಡಿಸಲು ಹೀಗೆ ಮಾಡಿ

Wrong Linking of Aadhaar and PAN: ಆಧಾರ್ ನಂಬರ್​ಗೆ ತಪ್ಪಾದ ಪ್ಯಾನ್ ನಂಬರ್ ಜೋಡಣೆ ಆಗಿಬಿಟ್ಟಿದ್ದರೆ ಆಗ ಆಧಾರ್​ನಿಂದ ಪ್ಯಾನ್ ನಂಬರ್ ಅನ್ನು ಡೀಲಿಂಕ್ ಮಾಡಬೇಕು. ಅಂದರೆ ಲಿಂಕ್ ಆಗಿರುವುದನ್ನು ಹಿಂಪಡೆಯಬೇಕು. ಆ ಬಳಿಕ ಆಧಾರ್ ನಂಬರ್​ಗೆ ಸರಿಯಾದ ಪ್ಯಾನ್ ನಂಬರ್ ಅನ್ನು ಲಿಂಕ್ ಮಾಡಬೇಕು.

Aadhaar PAN: ನಿಮ್ಮ ಪ್ಯಾನ್ ನಂಬರ್ ಬೇರೆಯವರ ಆಧಾರ್​ಗೆ ಲಿಂಕ್ ಆಗಿದೆಯಾ? ಸರಿಪಡಿಸಲು ಹೀಗೆ ಮಾಡಿ
ಆಧಾರ್ ಪ್ಯಾನ್ ನಂಬರ್ ಲಿಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 19, 2023 | 6:34 PM

Share

ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ (Aadhaar PAN linking) ಮಾಡಲು ಕೊನೆಯ ಗಡುವು 2023 ಜೂನ್ 30ರವರೆಗೆ ಇದೆ. ಗಡುವಿಗೆ 10 ದಿನ ಮಾತ್ರವೇ ಬಾಕಿ ಇದೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ತಮ್ಮ ಪ್ಯಾನ್ ನಂಬರ್​ಗೆ ಆಧಾರ್ ನಂಬರ್ ಲಿಂಕ್ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಪ್ಯಾನ್ ನಂಬರ್ ಬೇರೆಯವರ ಆಧಾರ್ ನಂಬರ್​ಗೆ ಲಿಂಕ್ ಆಗಿದೆ ಎಂದೋ, ತಮ್ಮ ಆಧಾರ್ ನಂಬರ್​ಗೆ ಬೇರೆಯವರ ಪ್ಯಾನ್ ನಂಬರ್ ಲಿಂಕ್ ಆಗಿದೆ ಎಂದೋ ಹೇಳುತ್ತಿರುವುದುಂಟು. ನಿಮ್ಮ ಆಧಾರ್ ನಂಬರ್​ಗೆ ಬೇರೆ ಪ್ಯಾನ್ ನಂಬರ್ ಲಿಂಕ್ ಆಗಿದ್ದರೆ ಏನು ಮಾಡಬೇಕು? ಈ ನಿಟ್ಟಿನಲ್ಲಿ ಕೆಲ ಮಾರ್ಗೋಪಾಯಗಳಿವೆ.

ಮೇಲೆ ಹೇಳಿದ ರೀತಿಯ ಸಮಸ್ಯೆ ನಿಮ್ಮದಾಗಿದ್ದರೆ, ಅಂದರೆ, ಆಧಾರ್ ನಂಬರ್​ಗೆ ತಪ್ಪಾದ ಪ್ಯಾನ್ ನಂಬರ್ ಜೋಡಣೆ ಆಗಿಬಿಟ್ಟಿದ್ದರೆ ಆಗ ಆಧಾರ್​ನಿಂದ ಪ್ಯಾನ್ ನಂಬರ್ ಅನ್ನು ಡೀಲಿಂಕ್ ಮಾಡಬೇಕು. ಅಂದರೆ ಲಿಂಕ್ ಆಗಿರುವುದನ್ನು ಹಿಂಪಡೆಯಬೇಕು. ಆ ಬಳಿಕ ಆಧಾರ್ ನಂಬರ್​ಗೆ ಸರಿಯಾದ ಪ್ಯಾನ್ ನಂಬರ್ ಅನ್ನು ಲಿಂಕ್ ಮಾಡಬೇಕು.

ನೀವು ಯಾವಾಗೆಲ್ಲಾ ಆಧಾರ್ಪಾನ್ ಡೀಲಿಂಕ್ ಮಾಡಬೇಕು?

ಕೆಲವೊಮ್ಮೆ ತಾಂತ್ರಿಕ ದೋಷದಿಂದಾಗಿ ಐಟಿ ಇಲಾಖೆಯು ಒಂದೇ ಪ್ಯಾನ್ ನಂಬರ್ ಅನ್ನು ಹೆಚ್ಚು ಮಂದಿಗೆ ನೀಡುವುದುಂಟು. ಇದೇನಾದರೂ ಅಗಿದ್ದು ಗಮನಕ್ಕೆ ಬಂದ ಕೂಡಲೇ ಆಧಾರ್​ನಿಂದ ಆ ಪ್ಯಾನ್ ನಂಬರ್ ಅನ್ನು ಡೀಲಿಂಕ್ ಮಾಡಬೇಕು.

ಇದನ್ನೂ ಓದಿPAN-Aadhaar Link: ಪಾನ್ ಆಧಾರ್ ಲಿಂಕ್ ಮಾಡಿಲ್ಲವಾ? ಹೊಸ ಡೆಡ್​ಲೈನ್ ಕೂಡ ಹತ್ತಿರ ಬರ್ತಿದೆ; ತಪ್ಪಿಸಿಕೊಂಡರೆ ಏನಾಗುತ್ತೆ ಪರಿಣಾಮ? ನೋಡಿ ಡೀಟೇಲ್ಸ್

ಇನ್ನೂ ಕೆಲ ಬಾರಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್​ಗಳನ್ನು ಪಡೆದಿರುವುದುಂಟು. ಅದರಲ್ಲಿ ಒಂದನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ನೀವು ಅದನ್ನು ಆಧಾರ್​ಗೆ ಲಿಂಕ್ ಮಾಡಿದ್ದರೆ ಡೀಲಿಂಕ್ ಮಾಡಬೇಕು.

ಈಗ ಒಬ್ಬ ವ್ಯಕ್ತಿಯ ಪ್ಯಾನ್ ಕಾರ್ಡ್ ಬೇರೊಬ್ಬ ವ್ಯಕ್ತಿಯ ಆಧಾರ್ ನಂಬರ್​ಗೆ ಲಿಂಕ್ ಮಾಡಿದ್ದಿರಬಹುದು. ಇದು ತಪ್ಪಾಗಿ ಆಗಿದ್ದಿರಬಹುದು. ಹೀಗಾಗಿದ್ದರೆ ಡೀಲಿಂಕ್ ಮಾಡಬೇಕು.

ಪ್ಯಾನ್ ನಂಬರ್​ಗೆ ಬೇರೆಯವರ ಆಧಾರ್ ಲಿಂಕ್ ಆಗಿದ್ದರೆ ಏನು ಮಾಡಬೇಕು?

  • ಒಬ್ಬರ ಪ್ಯಾನ್ ನಂಬರ್ ಇನ್ನೊಬ್ಬರ ಆಧಾರ್ ನಂಬರ್​ಗೆ ಲಿಂಕ್ ಆಗಿದ್ದರೆ ಆಗ ಪ್ಯಾನ್ ಸರ್ವಿಸ್ ಪ್ರೊವೈಡರ್​ನಿಂದ ಪ್ಯಾನ್ ಕಾರ್ಡ್ ಪ್ರೋಸಸಿಂಗ್​ನ ವಿವರ ಪಡೆಯಿರಿ.
  • ಇನ್ಕಂ ಟ್ಯಾಕ್ಸ್ ಬ್ಯುಸಿನೆಸ್ ಅಪ್ಲಿಕೇಶನ್​ನಿಂದ ಆಡಿಟ್ ಲಾಗ್ ಪಡೆಯಿರಿ
  • ತಪ್ಪಾಗಿ ಲಿಂಕ್ ಮಾಡಿದ್ದಕ್ಕೆ ಕಾರಣ ಏನೆಂದು ತಿಳಿದು, ಅಗತ್ಯಬಿದ್ದರೆ ಡೀಲಿಂಕ್ ಮಾಡಲು ನಿರ್ಧರಿಸಿ
  • ಇನ್ಕಂ ಟ್ಯಾಕ್ಸ್ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ

ಇದನ್ನೂ ಓದಿPAN Card: ಆಧಾರ್ ಮೂಲಕ ನಿಮ್ಮ ಪ್ಯಾನ್ ಕಾರ್ಡ್​ನಲ್ಲಿನ ವಿಳಾಸ ಬದಲಿಸುವ ವಿಧಾನ

ಜೆಎಒಗೆ ಮನವಿ ಸಲ್ಲಿಸಿ

ಆಧಾರ್​ನಿಂದ ಪ್ಯಾನ್ ಅನ್ನು ಡೀಲಿಂಕ್ ಮಾಡಲು ನೀವು ಜೆಎಒಗೆ (JAO- Jurisdictional Assessment Officer) ಮನವಿ ಸಲ್ಲಿಸಬೇಕು.

ಜೆಎಒ ಯಾರು?

ಡೀಲಿಂಕ್​ಗೆ ಯಾವ ಜೆಎಒಗೆ ಮನವಿ ಸಲ್ಲಿಸಬೇಕು ಎಂಬುದನ್ನು ತಿಳಿಯಲು ಇನ್ಕಂ ಟ್ಯಾಕ್ಸ್ ಪೋರ್ಟಲ್ ಅಥವಾ ಇಫೈಲಿಂಗ್ ಪೋರ್ಟಲ್​ಗೆ ಲಾಗಿನ್ ಆಗಿ ಪರಿಶೀಲನೆ ನಡೆಸಬಹುದು. ಇನ್ಕಂ ಟ್ಯಾಕ್ಸ್ ಪೋರ್ಟಲ್​ನಲ್ಲಿನ ಅದರ ಲಿಂಕ್ ಇಲ್ಲಿದೆ: eportal.incometax.gov.in/iec/foservices/#/pre-login/knowYourAO

ಇಫೈಲಿಂಗ್ ಪೋರ್ಟಲ್​ಗೆ ಹೋದರೆ ಅಲ್ಲಿ ಲಾಗಿನ್ ಆದ ಬಳಿಕ ಗೋ ಟು ಪ್ರೊಫೈಲ್ ಕ್ಲಿಕ್ ಮಾಡಿ, ಬಳಿಕ ಜುರಿಸ್​ಡಿಕ್ಷನಲ್ ಡೀಟೇಲ್ಸ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಜೆಎಒಗೆ ಆಧಾರ್ ಡೀಲಿಂಕ್​ಗೆ ಮನವಿ ಸಲ್ಲಿಸಬಹುದು. ಅಲ್ಲಿಯೇ ಜೆಎಒ ಅವರ ಅಧಿಕೃತ ಇಮೇಲೆ ಐಡಿಯೂ ಇದ್ದು ಆ ಮೂಲಕವೂ ನೀವು ಸಂಪರ್ಕಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!