Masked Aadhaar: ಮಸುಕು ಮಾಡಿದ ಆಧಾರ್ ಕಾರ್ಡ್ ಯಾಕೆ ಅಗತ್ಯ? ಹೇಗೆ ಪಡೆಯುವುದು, ಇಲ್ಲಿದೆ ಡೀಟೇಲ್ಸ್

How To Get Masked Aadhaar: ಆಧಾರ್ ಕಾರ್ಡ್​ನಲ್ಲಿ ಪೂರ್ಣ 12 ಅಂಕಿಗಳ ಬದಲು 8 ಅಂಕಿಗಳು ಕಾಣುವ ಫೀಚರ್ ಅನ್ನು ಯುಐಡಿಎಐ ನೀಡುತ್ತದೆ. ಗೌಪ್ಯತೆ ರಕ್ಷಣೆ ಬಯಸುವವರಿಗೆ ಈ ಮಸುಕುಮಾಡಿದ ಆಧಾರ್ ಕಾರ್ಡ್ ಅನುಕೂಲವಾಗುತ್ತದೆ.

Masked Aadhaar: ಮಸುಕು ಮಾಡಿದ ಆಧಾರ್ ಕಾರ್ಡ್ ಯಾಕೆ ಅಗತ್ಯ? ಹೇಗೆ ಪಡೆಯುವುದು, ಇಲ್ಲಿದೆ ಡೀಟೇಲ್ಸ್
ಆಧಾರ್ ಕಾರ್ಡ್

Updated on: Jun 08, 2023 | 2:42 PM

ಆಧಾರ್ ಕಾರ್ಡ್​ನಲ್ಲಿ ವೈಯಕ್ತಿಕ ಮಾಹಿತಿ ಕಳುವಾಗುತ್ತದೆ ಎಂದು ಹಲವರು ಅಳುಕುವುಂಟು. ಈ ಭಯ ನಿವಾರಣೆಗೆ ಯುಐಡಿಎಐ ಮಸುಕು ಮಾಡಿದ ಆಧಾರ್ ಕಾರ್ಡ್ (Aadhaar Card) ಸೌಲಭ್ಯ ನೀಡಿದೆ. ಈ ಮಾಸ್ಕ್ಡ್ ಆಧಾರ್​ನಲ್ಲಿ (Masked Aadhaar) ಹೆಚ್ಚಿನ ಮಾಹಿತಿ ಹೊರಗೆ ಕಾಣುವುದಿಲ್ಲ. ವ್ಯಕ್ತಿಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಇಂಥ ಫೀಚರ್ ಅನ್ನು ಜಾರಿಗೆ ತರಲಾಗಿದೆ. ಈ ಮಸುಕಾದ ಆಧಾರ್​ನಲ್ಲಿ ಪೂರ್ಣ 12 ಅಂಕಿಗಳು ಕಾಣುವುದಿಲ್ಲ. ಕೆಲವೇ ಅಂಕಿಗಳಿದ್ದು ಉಳಿದವನ್ನು ಮಾಸ್ಕ್ ಮಾಡಲಾಗಿರುತ್ತದೆ. ಒಟ್ಟು 12 ಅಂಕಿಗಳ ಪೈಕಿ ಮೊದಲ 8 ಅಂಕಿಗಳು ಕಾಣುತ್ತವೆ. ಉಳಿದ 4 ಅಂಕಿಗಳ ಜಾಗದಲ್ಲಿ X ಕಾಣುತ್ತದೆ. ಆದರೆ, ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೆಸರು, ಫೋಟೋ, ಕ್ಯೂಆರ್ ಕೋಡ್ ಇತ್ಯಾದಿ ಡೆಮಾಗ್ರಾಫಿಕ್ ಮಾಹಿತಿ ಮಾತ್ರ ಕಾಣುತ್ತದೆ.

ಮಸುಕು ಮಾಡಿದ ಆಧಾರ್​ನಿಂದ ಏನು ಉಪಯೋಗ?

  • ಗೌಪ್ಯತೆಯ ಪಾಲನೆ
  • ಆಧಾರ್ ನಂಬರ್ ದುರ್ಬಳಕೆ ಆಗದಂತೆ ತಡೆಯುವುದು
  • ಮಸುಕು ಮಾಡಿದ ಆಧಾರ್ ಕೂಡ ಅಧಿಕೃತ ದಾಖಲೆಯಾಗಿರುತ್ತದೆ.

ನೀವು ಯಾರಿಗಾದರೂ ಆಧಾರ್ ದಾಖಲೆ ನೀಡುವ ಅಗತ್ಯ ಇದ್ದರೆ ನಿಶ್ಚಿಂತೆಯಿಂದ ಮಾಸ್ಕ್ಡ್ ಆಧಾರ್ ಅನ್ನು ಕೊಡಬಹುದು. ಇದರಿದ ನಿಮ್ಮ ವೈಯಕ್ತಿಕ ಮಾಹಿತಿ ದುರ್ಬಳಕೆ ಆಗಬಹುದು ಎನ್ನುವ ಭಯ ಇರುವುದಿಲ್ಲ.

ಇದನ್ನೂ ಓದಿGpay Aadhaar: ಡೆಬಿಟ್ ಕಾರ್ಡ್ ಇಲ್ಲದೇ ಆಧಾರ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡಲು ಗೂಗಲ್ ಪೇ ಅವಕಾಶ

ಮಸುಕು ಮಾಡಿದ ಆಧಾರ್ ಎಲ್ಲಿ ಪಡೆಯುವುದು?

ಇದನ್ನು ಯುಐಡಿಎಐನ ಅಧಿಕೃತ ವೆಬ್​ಸೈಟ್ ಮೂಲಕವೇ ಪಡೆಯಬಹುದು. ಅದರ ಕ್ರಮಗಳು ಇಲ್ಲಿವೆ

  • ಯುಐಡಿಎಐ ವೆಬ್​ಸೈಟ್​ಗೆ ಹೋಗಿ
  • ವೆಬ್​ಸೈಟ್​ನಲ್ಲಿ ಮೈ ಆಧಾರ್ ಸೆಕ್ಷನ್ ಅಡಿಯಲ್ಲಿ ಡೌನ್​ಲೋಡ್ ಆಧಾರ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಆಧಾರ್ ಕಾರ್ಡ್​ನ 12 ಅಂಕಿಗಳನ್ನು ನಮೂದಿಸಿ. ಅಥವಾ 16 ಅಂಕಿಗಳ ವರ್ಚುವಲ್ ಐಡಿ ನಂಬರ್ ನಮೂದಿಸಿ.
  • ನಿಮ್ಮ ಹೆಸರು, ಪಿನ್ ಕೋಡ್ ಮತ್ತು ಸೆಕ್ಯೂರಿಟಿ ಕೋಡ್ ಮೊದಲಾದ ವಿವರ ತುಂಬಿರಿ
  • ಬಳಿಕ ಸೆಲೆಕ್ಟ್ ಯುವರ್ ಪ್ರಿಫರೆನ್ಸ್ ಸೆಕ್ಷನ್​ನಲ್ಲಿ ಮಾಸ್ಕ್ಡ್ ಆಧಾರ್ ಆಯ್ಕೆ ಆರಿಸಿಕೊಳ್ಳಿ.
  • ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ಗೆ ಒಟಿಪಿ ಬರುವ ಆಯ್ಕೆ ಅರಿಸಿ.
  • ಒಟಿಪಿ ಬಂದ ಬಳಕ ಅದನ್ನು ನಮೂದಿಸಿದರೆ ವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಈಗ ನೀವು ಮಸುಕುಮಾಡಿದ ಆಧಾರ್ ಅನ್ನು ಪಿಡಿಎಫ್ ಫೈಲ್​ನಲ್ಲಿ ಡೌನ್​​ಲೋಡ್ ಮಾಡಿಕೊಳ್ಳಬಹುದು. ಪಾಸ್​ವರ್ಡ್ ರಕ್ಷಣೆ ಒಳಗೊಂಡಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us