AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR Filing: ಜುಲೈ 18ರವರೆಗೂ 3 ಕೋಟಿ ಮಂದಿಯಿಂದ ಐಟಿ ರಿಟರ್ನ್ ಸಲ್ಲಿಕೆ; ಕಳೆದ ವರ್ಷಕ್ಕಿಂತ ಹೆಚ್ಚು

Faster Filing of ITR in 2023: ಜುಲೈ 18ರವರೆಗೂ ಒಟ್ಟು 3.06 ಐಟಿಆರ್​ಗಳು ಸಲ್ಲಿಕೆ ಆಗಿವೆ. ಕಳೆದ ವರ್ಷ 3 ಕೋಟಿ ಐಟಿಆರ್ ಸಲ್ಲಿಕೆಯಾಗಲು ಜುಲೈ 25 ಆಗಿತ್ತು. ಈ ವರ್ಷ 7 ದಿನ ಮುಂಚಿತವಾಗಿ 3 ಕೋಟಿ ಗಡಿದಾಟಿದೆ.

ITR Filing: ಜುಲೈ 18ರವರೆಗೂ 3 ಕೋಟಿ ಮಂದಿಯಿಂದ ಐಟಿ ರಿಟರ್ನ್ ಸಲ್ಲಿಕೆ; ಕಳೆದ ವರ್ಷಕ್ಕಿಂತ ಹೆಚ್ಚು
ಐಟಿಆರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 19, 2023 | 3:02 PM

Share

ನವದೆಹಲಿ, ಜುಲೈ 19: ಆದಾಯ ತೆರಿಗೆ ರಿಟರ್ನ್ (IT Return) ಸಲ್ಲಿಸಲು ಗಡುವು ಸಮೀಪಿಸುತ್ತಿದೆ. ಜುಲೈ 31ರವರೆಗೆ ಐಟಿಆರ್ ಸಲ್ಲಿಕೆಗೆ ಅವಕಾಶ ಕೊಡಲಾಗಿದೆ. ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜುಲೈ 18ರವರೆಗೂ ಐಟಿಆರ್ ಫೈಲಿಂಗ್ ಮಾಡಿರುವವರ ಸಂಖ್ಯೆ 3 ಕೋಟಿ ಗಡಿ ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮಂದಿ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ. 2022ರಲ್ಲಿ ಜುಲೈ 25ಕ್ಕೆ 3 ಕೋಟಿ ಮಂದಿ ಐಟಿಆರ್ ಸಲ್ಲಿಸಿದ್ದರು. ಈ ವರ್ಷ 7 ದಿನ ಮುಂಚಿತವಾಗಿ ಈ ಸಂಖ್ಯೆ ಮುಟ್ಟಿದೆ.

2023ರ ಜುಲೈ 18ರವರೆಗೂ 3.06 ಕೋಟಿ ಐಟಿಆರ್​ಗಳು ಸಲ್ಲಿಕೆಯಾಗಿವೆ. ಇದರಲ್ಲಿ 2.81 ಕೋಟಿ ಐಟಿಆರ್​ಗಳನ್ನು ಇವೆರಿಫೈ ಮಾಡಲಾಗಿದೆ. ಈ ಪೈಕಿ 1.50 ಕೋಟಿಗಿಂತ ಹೆಚ್ಚು ಐಟಿಆರ್​ಗಳನ್ನು ಪ್ರೋಸಸ್ ಕೂಡ ಮಾಡಲಾಗಿದೆ ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ.

ಇನ್ನೂ ಐಟಿ ರಿಟರ್ನ್ ಫೈಲ್ ಮಾಡದ ತೆರಿಗೆದಾರರಿಗೆ ಇನ್ನು 12-13 ದಿನ ಕಾಲಾವಕಾಶ ಮಾತ್ರ ಇದೆ. ಕಳೆದ ವರ್ಷ ಜುಲೈ 31ಕ್ಕೆ ಡೆಡ್​ಲೈನ್ ಇತ್ತು. ಅದನ್ನು ವಿಸ್ತರಿಸಲಾಗಿರಲಿಲ್ಲ. ಈ ವರ್ಷವೂ ಡೆಡ್​ಲೈನ್ ವಿಸ್ತರಣೆ ಆಗುವ ಸಾಧ್ಯತೆ ಕಡಿಮೆ. ಹೀಗಾಗಿ, ಜುಲೈ 31ರೊಳಗೆ ಐಟಿ ರಿಟರ್ನ್ ಪಾವತಿಸಿ, ಅನಗತ್ಯ ದಂಡ ಕಟ್ಟುವುದನ್ನು ತಪ್ಪಿಸಬಹುದು.

ಇದನ್ನೂ ಓದಿITR: ಬ್ಯಾಂಕ್ ಅಕೌಂಟ್ ತಪ್ಪಾಗಿ ಹಾಕಿ ಐಟಿಆರ್ ಸಲ್ಲಿಸಿಬಿಟ್ರಾ? ಇಲ್ಲಿದೆ ಸರಿಪಡಿಸುವ ಉಪಾಯ

ಆನ್​ಲೈನ್​ನಲ್ಲಿ ಐಟಿಆರ್ ಫೈಲ್ ಮಾಡುವ ಕ್ರಮಗಳು

  • ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್​ಗೆ ಭೇಟಿ ನೀಡಿ: www.incometax.gov.in/iec/foportal/
  • ಇ ಫೈಲಿಂಗ್ ಪೋರ್ಟಲ್​ಗೆ ಯೂಸರ್ ಐಡಿ, ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು. ಇಲ್ಲಿ ಪ್ಯಾನ್ ನಂಬರ್ ಯೂಸರ್ ಐಡಿ ಆಗಿರುತ್ತದೆ.
  • ಲಾಗಿನ್ ಆದ ಬಳಿಕ ಮುಖ್ಯಪುಟದಲ್ಲಿ ಕಾಣುವ ‘ಇಫೈಲ್’ ಮೆನು ಕೆಳಗೆ ‘ಇನ್ಕಮ್ ಟ್ಯಾಕ್ಸ್ ರಿಟರ್ನ್’ ಲಿಂಕ್ ಅನ್ನು ಕ್ಲಿಕ್ ಮಾಡಿ
  • ಇಲ್ಲಿ ನೀವು ಅಸೆಸ್ಮೆಂಟ್ ವರ್ಷ, ಆನ್​ಲೈನ್ ಮೋಡ್ ಆಯ್ಕೆ ಮಾಡಬೇಕು. ನಂತರ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ. ಅದಾದ ನಂತರ ಫೈಲಿಂಗ್ ಪ್ರಕ್ರಿಯೆ ಆರಂಭಿಸಬಹುದು.
  • ಐಟಿಆರ್ ಫಾರ್ಮ್ ಸಂಖ್ಯೆ ಆರಿಸಿಕೊಳ್ಳಬೇಕು. ಫೈಲಿಂಗ್ ಟೈಪ್ ಅನ್ನು ಒರಿಜಿನಲ್ ಅಥವಾ ರಿವೈಸ್ಡ್ ರಿಟರ್ನ್ ಎಂದು ಆರಿಸಬೇಕು. ಸಬ್ಮಿಶನ್ ಮೋಡ್ ಅನ್ನು ಪ್ರಿಪೇರ್ ಅಂಡ್ ಸಬ್ಮಿಟ್ ಆನ್ಲೈನ್ ಎಂದು ಆರಿಸಿಕೊಳ್ಳಬೇಕು.
  • ನಂತರ ಕಂಟಿನ್ಯೂ ಕ್ಲಿಕ್ ಮಾಡಿ
  • ಆನ್​ಲೈನ್ ಐಟಿಆರ್ ಫಾರ್ಮ್​ನಲ್ಲಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿ, ಜಾಗ್ರತೆಯಿಂದ ಮಾಹಿತಿ ತುಂಬಿರಿ.
  • ಅದಾ ಬಳಿಕ ಸೇವ್ ಡ್ರಾಫ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈ ಡ್ರಾಫ್ಟ್ 30 ದಿನಗಳವರೆಗೂ ನಿಮ್ಮ ದತ್ತಾಂಶವನ್ನು ಉಳಿಸಿಟ್ಟಿರುತ್ತದೆ.
  • ಒಟ್ಟು ಆದಾಯ, ಡಿಡಕ್ಷನ್, ಪಾವತಿಸಿದ ತೆರಿಗೆ, ತೆರಿಗೆ ಬಾಕಿ ಇತ್ಯಾದಿ ಎಲ್ಲಾ ವಿವರವೂ ಭರ್ತಿಯಾಗಿರಲಿ. ತೆರಿಗೆ ಉಳಿಸುವ ಯಾವುದೇ ಹೂಡಿಕೆ ಇದ್ದರೂ ಅದರ ವಿವರ ಇಲ್ಲಿ ತಪ್ಪದೇ ಹಾಕಿ. ಇದರಿಂದ ಹೆಚ್ಚು ತೆರಿಗೆ ಉಳಿಸಬಹುದು.
  • ಈಗ ವೆರಿಫಿಕೇಶನ್ ಪ್ರಕ್ರಿಯೆ. ‘ಟ್ಯಾಕ್ಸಸ್ ಪೇಯ್ಡ್ ಅಂಡ್ ವೆರಿಫಿಕೇಶನ್’ ಟ್ಯಾಬ್​ನಲ್ಲಿ ಮೂರು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕು. ನೀವು ಇವೆರಿಫೈ ಮಾಡುವ ಬದಲು ಫಾರ್ಮ್ ಅನ್ನು ಪೋಸ್ಟ್ ಮೂಲಕ ಸಿಪಿಸಿ ಕಚೇರಿಗೆ ಕಳುಹಿಸುವುದಾದರೆ ಮೂರನೇ ಆಯ್ಕೆ ಚೆಕ್ ಮಾಡಬೇಕು.
  • ಇದಾದ ಬಳಿಕ ಪ್ರಿವ್ಯೂ ಅಂಡ್ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಐಟಿಆರ್​ನಲ್ಲಿ ನಮೂದಾದ ಎಲ್ಲಾ ಮಾಹಿತಿ ವೆರಿಫೈ ಆಗುತ್ತದೆ. ಈಗ ಐಟಿಆರ್ ಸಬ್ಮಿಟ್ ಮಾಡಿ.
  • ಒಂದು ವೇಳೆ ನೀವು ಇ ವೆರಿಫೈ ಆಯ್ಕೆ ಆರಿಸಿಕೊಂಡರೆ ಅದರಲ್ಲೂ ವಿವಿಧ ಆಯ್ಕೆಗಳಿವೆ. ಇವಿಸಿ ಅಥವಾ ಒಟಿಪಿ ಮೂಲಕ ವೆರಿಫಿಕೇಶನ್ ಮಾಡಬಹುದು. ನೊಂದಾಯಿತ ಮೊಬೈಲ್ ನಂಬರ್​ಗೆ ಇವಿಸಿ ಅಥವಾ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ವೆರಿಫಿಕೇಶನ್ ಪೂರ್ಣಗೊಳಿಸಬೇಕು.
  • ಒಟಿಪಿಯನ್ನು 60 ಸೆಕೆಂಡ್​ನೊಳಗೆ ನಮೂದಿಸಿ ಸಬ್ಮಿಟ್ ಮಾಡದಿದ್ದರೆ ಮೈ ಅಕೌಂಟ್ ಹಾಗೂ ಇವೆರಿಫೈ ರೆಟರ್ನ್​ಗೆ ಹೋಗಿ ಮತ್ತೊಮ್ಮೆ ವೆರಿಫಿಕೇಶನ್ ಮಾಡಬೇಕಾಗುತ್ತದೆ.

ಇ ವೆರಿಫಿಕೇಶನ್ ಆದ ಬಳಿಕ ನಿಮ್ಮ ಐಟಿ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ನೀವು ಇದೇ ಪೋರ್ಟಲ್​ನಲ್ಲಿ ಸಲ್ಲಿಕೆಯಾದ ಐಟಿಆರ್ ಅನ್ನು ವೀಕ್ಷಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್