AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

POMIS: ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪಿಪಿಎಫ್​ಗಿಂತಲೂ ಹೆಚ್ಚು ಬಡ್ಡಿ

POMIS- Post Office Monthly Income Scheme: ನೀವು ಲಂಪ್ಸಮ್ ಆಗಿ ಹಣ ಹೂಡಿಕೆ ಮಾಡಿ ಮಾಸಿಕವಾಗಿ ಬಡ್ಡಿಹಣ ಪಡೆಯಬಯಸುತ್ತಿದ್ದರೆ ಪೋಸ್ಟ್ ಆಫೀಸ್ ಮಂಥ್ಲಿ ಇನ್ಕಮ್ ಸ್ಕೀಮ್ ಹೇಳಿ ಮಾಡಿಸಿದ್ದಾಗಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್​ಗಿಂತಲೂ ಹೆಚ್ಚು ಬಡ್ಡಿ ಈ ಮಾಸಿಕ ಆದಾಯ ಯೋಜನೆಯಿಂದ ಸಿಗುತ್ತದೆ. 10 ವರ್ಷದ ಮೇಲ್ಪಟ್ಟ ಯಾವುದೇ ವ್ಯಕ್ತಿಗಳು ಈ ಸ್ಕೀಮ್​ನಲ್ಲಿ ಖಾತೆ ಆರಂಭಿಸಬಹುದು.

POMIS: ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪಿಪಿಎಫ್​ಗಿಂತಲೂ ಹೆಚ್ಚು ಬಡ್ಡಿ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 17, 2024 | 4:07 PM

Share

ಮಾರುಕಟ್ಟೆಯ ಅನಿಶ್ಚಿತತೆಯ ನಡುವೆ ಜನರಿಗೆ ತಮ್ಮ ಹಣದ ಸುರಕ್ಷತೆ ಪ್ರಧಾನ ಎನಿಸುತ್ತಿದೆ. ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸದವರು ಬ್ಯಾಂಕ್ ಠೇವಣಿ ಅಥವಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ ನೆಮ್ಮದಿಯಾಗಿರಬಹುದು. ಅಧಿಕ ಬಡ್ಡಿ, ಸ್ಥಿರ ಆದಾಯ ತರುವ ಹೂಡಿಕೆಗಳಲ್ಲಿ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಒಂದು. ಸರ್ಕಾರದಿಂದ ನಡೆಸಲಾಗುವ ಪೋಸ್ಟ್ ಆಫೀಸ್ ಮಂಥ್ಲಿ ಇನ್ಕಮ್ ಸ್ಕೀಮ್ (ಪಿಒಎಂಐಎಸ್) ಮೂಲಕ ಪಕ್ಕಾ ಸುರಕ್ಷಿತ ಆದಾಯ ಸೃಷ್ಟಿಸಬಹುದು. ಇತರ ಸಣ್ಣ ಉಳಿತಾಯ ಯೋಜನೆಗಳಂತೆ ಪಿಒ ಮಾಸಿಕ ಆದಾಯ ಯೋಜನೆಯ ಬಡ್ಡಿದರವನ್ನು ಪ್ರತೀ ಕ್ವಾರ್ಟರ್​ನಲ್ಲಿ ಪರಿಷ್ಕರಿಸಲಾಗುತ್ತದೆ. ಸದ್ಯ ಈ ಕ್ವಾರ್ಟರ್​ನಲ್ಲಿ ಶೇ. 7.4ರಷ್ಟು ಬಡ್ಡಿ ಇದೆ. ಪಿಪಿಎಫ್​ನ ಶೇ. 7.1ಕ್ಕಿಂತ ಇದು ಹೆಚ್ಚು ಹೆಚ್ಚು ಬಡ್ಡಿ ನೀಡುತ್ತದೆ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಹೇಗೆ?

ಇದು ಏಕಕಾಲಕ್ಕೆ ಮಾಡಲಾಗುವ ಹೂಡಿಕೆ. ಐದು ವರ್ಷದ ಸ್ಕೀಮ್ ಇದು. ಕನಿಷ್ಠ ಹೂಡಿಕೆ 1,000 ರೂ ಇದೆ. ಒಂದು ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ ಠೇವಣಿ ಇಡಬಹುದು. ಜಂಟಿ ಖಾತೆಯಾದರೆ 15 ಲಕ್ಷ ರೂವರೆಗೂ ಠೇವಣಿ ಇಡಲು ಅವಕಾಶ ಇರುತ್ತದೆ.

ಒಂದಕ್ಕಿಂತ ಹೆಚ್ಚು ಖಾತೆಗಳಲ್ಲಿ ನೀವು ಮಂಥ್ಲಿ ಇನ್ಕಮ್ ಅಕೌಂಟ್​ಗಳನ್ನು ತೆರೆಯಬಹುದಾದರೂ ಒಟ್ಟಾರೆ ಸೇರಿ ಠೇವಣಿಗಳು 9 ಲಕ್ಷ ರೂ ಮೀರುವಂತಿಲ್ಲ.

ನೀವು 5 ಲಕ್ಷ ರೂ ಠೇವಣಿ ಇರಿಸಿದರೆ ತಿಂಗಳಿಗೆ 3,083 ರೂ ಆದಾಯ ಸಿಗುತ್ತಾ ಹೋಗುತ್ತದೆ.

ಒಂಬತ್ತು ಲಕ್ಷ ರೂ ಠೇವಣಿಗೆ ಮಾಸಿಕ ಆದಾಯ 5,550 ರೂ ಇರುತ್ತದೆ. ಜಂಟಿ ಖಾತೆಯ್ಲಿ 15 ಲಕ್ಷ ರೂ ಡೆಪಾಸಿಟ್ ಇಟ್ಟರೆ 9,250 ರೂ ಮಾಸಿಕ ಆದಾಯ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ: ಎಸ್​ಐಪಿ ಮತ್ತು ಎಸ್​ಡಬ್ಲ್ಯುಪಿ ಸಂಯೋಜನೆಯಲ್ಲಿ ನಿಮ್ಮ ಜೀವನಕ್ಕೊಂದು ಭದ್ರತೆ ನೀಡುವುದು ಹೇಗೆ?

ನೀವು ಠೇವಣಿ ಇರಿಸಿದ ನಂತರ ತಿಂಗಳಿನಿಂದಲೇ ಬಡ್ಡಿ ಆದಾಯ ಸಿಗುತ್ತಾ ಹೋಗುತ್ತದೆ. ಐದು ವರ್ಷದವರೆಗೂ ನಿಮಗೆ ಸ್ಥಿರ ಆದಾಯ ಪ್ರಾಪ್ತವಾಗುತ್ತದೆ. ಐದು ವರ್ಷದ ಬಳಿಕ ನಿಮ್ಮ ಠೇವಣಿ ನಿಮಗೆ ಮರಳುತ್ತದೆ. ಅಗತ್ಯ ಬಿದ್ದರೆ ನೀವು ಮತ್ತೆ ಆ ಯೋಜನೆ ಮುಂದುವರಿಸಿಕೊಂಡು ಹೋಗಬಹುದು.

ಅವಧಿಗೆ ಮುನ್ನ ಠೇವಣಿ ಹಿಂಪಡೆದರೆ?

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಠೇವಣಿ ಇರಿಸಿದ ಬಳಿಕ ಒಂದು ವರ್ಷದವರೆಗೂ ಠೇವಣಿ ಹಣ ಹಿಂಪಡೆಯಲು ಆಗುವುದಿಲ್ಲ. ಬಡ್ಡಿ ಹಣ ಮಾತ್ರವೇ ಸಿಗುತ್ತಿರುತ್ತದೆ. ಒಂದು ವರ್ಷದ ಬಳಿಕ ನೀವು ಅಕೌಂಟ್ ಮುಚ್ಚಲು ಅವಕಾಶ ಇದೆ.

ಠೇವಣಿ ಇಟ್ಟು ಒಂದು ವರ್ಷದ ಬಳಿಕ ಮತ್ತು ಮೂರು ವರ್ಷದ ಒಳಗೆ ಮುಚ್ಚಲ್ಪಟ್ಟರೆ ಠೇವಣಿ ಮೊತ್ತದ ಶೇ. 2ರಷ್ಟು ಹಣವನ್ನು ಮುರಿದುಕೊಂಡು ಉಳಿದ ಮೊತ್ತವನ್ನು ನೀಡಲಾಗುತ್ತದೆ. ಮೂರು ವರ್ಷದ ಬಳಿಕ ಅಕೌಂಟ್ ಕ್ಲೋಸ್ ಮಾಡಿದರೆ ಶೇ. 1ರಷ್ಟು ಹಣವನ್ನು ಮುರಿದುಕೊಳ್ಳಲಾಗುತ್ತದೆ.

ಇದನ್ನೂ ಓದಿ: ನೀವು ಕೆಲಸ ಮಾಡೋದು ನಿಲ್ಲಿಸಿ ಆರಾಮವಾಗಿ ಬದುಕಬೇಕಾದರೆ ಎಷ್ಟು ಸೇವಿಂಗ್ಸ್ ಹೊಂದಿರಬೇಕು? ತಪ್ಪದೇ ನೋಡಿ ಲೆಕ್ಕಾಚಾರ

ಬಡ್ಡಿ ಹಣ ಪಡೆಯದಿದ್ದರೆ ಏನಾಗುತ್ತೆ?

ಅಂಚೆ ಕಚೇರಿ ಮಾಸಿಕ ಬಡ್ಡಿ ಯೋಜನೆಯಲ್ಲಿ ನೀವು ಠೇವಣಿ ಇಟ್ಟರೆ ಪ್ರತೀ ತಿಂಗಳು ನಿಗದಿತ ಬಡ್ಡಿಯನ್ನು ನೀವು ಪಡೆಯಬಹುದು. ಒಂದು ವೇಳೆ ಬಡ್ಡಿಹಣವನ್ನು ಹಿಂಪಡೆಯದೆ ಹಾಗೇ ಬಿಟ್ಟರೆ ಹಣ ಖಾತೆಯಲ್ಲೇ ಇರುತ್ತದೆ. ಈ ಬಡ್ಡಿ ಹಣಕ್ಕೆ ಚಕ್ರಬಡ್ಡಿ ಸೇರುವುದಿಲ್ಲ. ಹಣಕ್ಕೆ ಹಣ ಬೆಳೆಯುತ್ತಾ ಹೋಗುವುದಿಲ್ಲ. ಆದ್ದರಿಂದ ಬಡ್ಡಿಹಣ ಕಾಲಕಾಲಕ್ಕೆ ಹಿಂಪಡೆಯುವುದು ಸೂಕ್ತ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು