AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Doorstep Banking: ಮನೆ ಬಾಗಿಲಲ್ಲೇ ಸಿಗುತ್ತೆ ಎಸ್​ಬಿಐ ಬ್ಯಾಂಕಿಂಗ್; ಸೇವೆ ಪಡೆಯಲು ಹೀಗೆ ಮಾಡಿ

ನಗದು/ಚೆಕ್ ಸ್ವೀಕೃತಿ, ನಗದು ವಿತರಣೆ, ಗ್ರಾಹಕರ ವಿವರ ಸಂಗ್ರಹ (ಕೆವೈಸಿ), ಚೆಕ್​ಪುಸ್ತಕ ಸೇವೆಗೆ ನೋಂದಣಿ, ಫಾರಂ ನಂ 15 ಎಚ್​ ಸ್ವೀಕೃತಿ, ಎಫ್​ಡಿ ಪ್ರಮಾಣ ಪತ್ರ ವಿತರಣೆ, ಜೀವಂತ ಪ್ರಮಾಣ ಪತ್ರ ಸ್ವೀಕೃತಿ ಸೇರಿದಂತೆ ಹಲವು ಜನಪ್ರಿಯ ಸೇವೆಗಳನ್ನು ಎಸ್​ಬಿಐ ಮನೆ ಬಾಗಿಲಿಗೇ ಒದಗಿಸುತ್ತಿದೆ.

SBI Doorstep Banking: ಮನೆ ಬಾಗಿಲಲ್ಲೇ ಸಿಗುತ್ತೆ ಎಸ್​ಬಿಐ ಬ್ಯಾಂಕಿಂಗ್; ಸೇವೆ ಪಡೆಯಲು ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 19, 2023 | 3:16 PM

Share

ಸುಮಾರು 2 ವರ್ಷಗಳ ಹಿಂದೆ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಪ್ರಯತ್ನ ಅರಂಭಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಮತ್ತಷ್ಟು ಆಯ್ಕೆಗಳೊಂದಿಗೆ ಜನರ ಮುಂದೆ ಬಂದಿದೆ. ಅಂಗವಿಕಲರು (disabled individuals), ಹಿರಿಯ ನಾಗರಿಕರು (senior citizens) ಹಣ ಪಡೆಯಲು ಎಟಿಎಂ ಅಥವಾ ಬ್ಯಾಂಕ್ ಶಾಖೆಗೆ ತೆರಳುವುದನ್ನು ತಪ್ಪಿಸಲು ಎಸ್​ಬಿಐ ಈ ಯೋಜನೆ ಜಾರಿಗೊಳಿಸಿತ್ತು. ಕೋವಿಡ್ ಸಾಂಕ್ರಾಮಿಕದ ಸಂದರ್ಭದ ಲಾಕ್​ಡೌನ್ ವೇಳೆ ಅನುಷ್ಠಾನಕ್ಕೆ ಬಂದಿದ್ದ ಈ ಯೋಜನೆ ನಂತರದ ದಿನಗಳಲ್ಲಿ ಜನಪ್ರಿಯವಾಗಿತ್ತು. ನಗದು/ಚೆಕ್ ಸ್ವೀಕೃತಿ, ನಗದು ವಿತರಣೆ, ಗ್ರಾಹಕರ ವಿವರ ಸಂಗ್ರಹ (ಕೆವೈಸಿ), ಚೆಕ್​ಪುಸ್ತಕ ಸೇವೆಗೆ ನೋಂದಣಿ, ಫಾರಂ ನಂ 15 ಎಚ್​ ಸ್ವೀಕೃತಿ, ಎಫ್​ಡಿ ಪ್ರಮಾಣ ಪತ್ರ ವಿತರಣೆ, ಜೀವಂತ ಪ್ರಮಾಣ ಪತ್ರ ಸ್ವೀಕೃತಿ ಸೇರಿದಂತೆ ಹಲವು ಜನಪ್ರಿಯ ಸೇವೆಗಳನ್ನು ಎಸ್​ಬಿಐ ಮನೆ ಬಾಗಿಲಿಗೇ ಒದಗಿಸುತ್ತಿದೆ.

ಆ್ಯಪ್ ಮೂಲಕ ಸೇವೆ ಪಡೆಯಲು ಏನು ಮಾಡಬೇಕು?

ಗ್ರಾಹಕರು ಮೊದಲಿಗೆ ‘ಎಸ್​ಬಿಐ ಡೋರ್​ಸ್ಟೆಪ್ ಬ್ಯಾಂಕಿಂಗ್ ಸರ್ವೀಸ್’ಗೆ ನೋಂದಣಿ ಮಾಡಿಕೊಳ್ಳಬೇಕು. ನಂತರ ‘ಎಸ್​ಬಿಐ ಡೋರ್​ಸ್ಟೆಪ್ ಬ್ಯಾಂಕಿಂಗ್ ಆ್ಯಪ್’ ಅನ್ನು ಇನ್​ಸ್ಟಾಲ್ ಮಾಡಬೇಕು. ಆ್ಯಪ್​ಗೆ ಲಾಗಿನ್ ಆಗಿ ವಿಳಾಸವನ್ನು ಅಪ್​ಡೇಟ್ ಮಾಡಬೇಕು. ಹಣ ವಿತ್​ಡ್ರಾಗೆ ಆ್ಯಪ್ ಮೂಲಕ ಮನವಿ ಸಲ್ಲಿಸಬಹುದು. ಮನವಿ ಸಲ್ಲಿಸುವ ಮುನ್ನ ಖಾತೆ ಸಂಖ್ಯೆಯ ಕೊನೆಯ ಆರು ಅಂಕೆಗಳನ್ನು ನಮೂದಿಸಬೇಕು. ಬಳಿಕ ಮೊಬೈಲ್​ಗೆ ಬಂದ ಒಟಿಪಿಯನ್ನು ನಮೂದಿಸಬೇಕಾಗುತ್ತದೆ. ನಂತರ ಎಷ್ಟು ಮೊತ್ತದ ಹಣ ಬೇಕು? ಯಾವ ಮಾದರಿಯ ಟ್ರಾನ್ಸಾಕ್ಷನ್ ಬೇಕು ಎಂಬುದನ್ನು ಉಲ್ಲೇಖಿಸಬೇಕು.

ಒಂದು ತಿಂಗಳಲ್ಲಿ ಎಷ್ಟು ಬಾರಿ ಸಿಗುತ್ತೆ ಸೇವೆ?

ಒಂದು ತಿಂಗಳ ಅವಧಿಯಲ್ಲಿ ಅಂಗವಿಕಲರಿಗಾದರೆ ಮೂರು ಬಾರಿ ಉಚಿತ ಸೇವೆ ನೀಡಲಾಗುತ್ತದೆ. ಮೂರು ಬಾರಿಗಿಂತ ಹೆಚ್ಚು ಬಾರಿ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ಪಡೆಯುವುದಿದ್ದರೆ ಹಣಕಾಸು ಮತ್ತು ಹಣಕಾಸೇತರ ಸೇವೆಗಳಿಗೆ 75 ರೂ. ಮತ್ತು ಜಿಎಸ್​ಟಿ ಪಾವತಿಸಬೇಕಾಗುತ್ತದೆ. ಗ್ರಾಹಕರಿಗೆ ಸೇವೆ ಪಡೆದ ಬಗ್ಗೆ ಎಸ್​ಎಂಎಸ್ ಮೂಲಕ ದೃಢೀಕರಣದ ಸಂದೇಶ ಬರುತ್ತದೆ. ಎಸ್​ಬಿಐನಲ್ಲಿರುವ ಖಾತೆಗೆ ಕೆವೈಸಿ (ಗ್ರಾಹಕರ ವಿವರ) ಸಮರ್ಪಕವಾಗಿ ಅಪ್​ಡೇಟ್ ಆಗಿರಬೇಕು. ಸಮರ್ಪಕ ಕೆವೈಸಿ ದಾಖಲೆ ಕೊಟ್ಟಿರುವವರು ಮತ್ತು ಖಾತೆ ಇರುವ ಶಾಖೆಯಿಂದ 5 ಕಿಮೀ ಅಂತರದಲ್ಲಿ ವಾಸವಿರುವವರಿಗೆ ಮಾತ್ರ ಈ ಸೇವೆ ಸಿಗುತ್ತದೆ.

ದೂರವಾಣಿ ಕರೆ ಮಾಡಿ ಸೇವೆ ಪಡೆಯಲು ಅವಕಾಶ ಇದೆಯೇ?

ಬ್ಯಾಂಕ್ ಕಾರ್ಯನಿರ್ವಹಣೆಯ ದಿನಗಳಂದು ಬೆಳಿಗ್ಗೆ 9ರಿಂದ ಸಂಜೆ 4ರ ಒಳಗೆ ಟೋಲ್​ಫ್ರೀ ಸಂಖ್ಯೆ 1800 1111 03 ಕರೆ ಮಾಡಿ, ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆಗೆ ನೋಂದಣಿ ಮಾಡಿಕೊಳ್ಳಬಹುದು. ಖಾತೆಯಿರುವ ಬ್ರಾಂಚ್​ನಲ್ಲಿ ನಿಮ್ಮ ಮನವಿಯನ್ನು ನೋಂದಾಯಿಸಲಾಗುತ್ತದೆ. ಹಣಕಾಸು ವಹಿವಾಟು ಆಗಿದ್ದರೆ 100 ರೂ ಹಾಗೂ ಜಿಎಸ್​ಟಿ, ನಗದು ಅಲ್ಲದ ವಹಿವಾಟು ಆಗಿದ್ದರೆ 60 ರೂ ಹಾಗೂ ಜಿಎಸ್​ಟಿ ಶುಲ್ಕ ವಿಧಿಸಲಾಗುತ್ತದೆ. ಈ ಸೇವೆಯಡಿ ಒಂದು ದಿನದಲ್ಲಿ 20,000 ರೂ. ನಗದು ಜಮೆ ಅಥವಾ ಸ್ವೀಕೃತಿ ಸಾಧ್ಯ.

ದೂರವಾಣಿ ಕರೆಯ ಮೂಲಕ ಸೇವೆ ಪಡೆಯಲು ಇಚ್ಛಿಸಿದ್ದಲ್ಲಿ ಅನುಸರಿಸಬೇಕಾದ ವಿಧಾನ ಇಲ್ಲಿದೆ;

  •  ಈ ಸೇವೆ ಪಡೆದುಕೊಳ್ಳಲು ಇಚ್ಛಿಸುವ ಗ್ರಾಹಕರು ನಿಮ್ಮ ನೋಂದಾಯಿತ ಮೊಬೈಲ್​ಸಂಖ್ಯೆಯಿಂದ 1800111103 ಸಂಖ್ಯೆಗೆ ಬೆಳಿಗ್ಗೆ 9ರಿಂದ ಸಂಜೆ 4ರ ಒಳಗೆ ನೋಂದಾಯಿಸಿಕೊಳ್ಳಿ.
  • ಕಾಲ್ ಕನೆಕ್ಟ್ ಆದ ನಂತರ ನಿಮ್ಮ ಉಳಿತಾಯ ಅಥವಾ ಚಾಲ್ತಿ ಖಾತೆಯ ಕೊನೆಯ 4 ಅಂಕಿಗಳನ್ನು ನಮೂದಿಸಬೇಕು. ಈ ಪ್ರಕ್ರಿಯೆ ಯಶಸ್ವಿಯಾದ ನಂತರ ನಿಮ್ಮ ಕರೆಯನ್ನು ಕಸ್ಟಮರ್​ ಕೇರ್​ ಎಕ್ಸಿಕ್ಯುಟಿವ್ ಸ್ವೀಕರಿಸುತ್ತಾರೆ. ಅಲ್ಲಿ ಮತ್ತೊಮ್ಮೆ ನಿಮ್ಮ ವಿವರಗಳನ್ನು ಪರಿಶೀಲಿಸಲಾಗುತ್ತದೆ.
  • ನೀವು ಬೆಳಿಗ್ಗೆ 9ರಿಂದ ಸಂಜೆ 5ರ ನಡುವೆ ಸೇವೆ ಪಡೆದುಕೊಳ್ಳುವ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಕೋರಿಕೆಯನ್ನು ಬ್ಯಾಂಕ್ ಒಪ್ಪಿಕೊಂಡ ನಂತರ ನಿಮ್ಮ ಮೊಬೈಲ್​​ಗೆ ದೃಢೀಕರಣದ ಎಸ್​ಎಂಎಸ್ ಬರುತ್ತದೆ.
  • ನಿಮ್ಮ ಮನೆಗೆ ಬರುವ ಬ್ಯಾಂಕ್ ಪ್ರತಿನಿಧಿ (Doorstep Banking Agent) ನಿಮಗೆ ಕರೆ ಮಾಡಿ ಸಮಯ ನಿಗದಿಪಡಿಸಿಕೊಳ್ಳುತ್ತಾರೆ. ನಿಗದಿತ ಸಮಯದಲ್ಲಿ ಅವರು ನಿಮ್ಮ ಮನೆಗೆ ಬಂದು ತಮ್ಮ ಗುರುತಿನ ಚೀಟಿ ಮತ್ತು ಬ್ಯಾಂಕ್​ನ ಅಧಿಕೃತ ಪತ್ರ ತೋರಿಸಿ ಪರಿಚಯಿಸಿಕೊಳ್ಳುತ್ತಾರೆ. ನಿಮ್ಮ ಗುರುತಿನಚೀಟಿ ಮತ್ತು ಬ್ಯಾಂಕ್ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳುತ್ತಾರೆ.
  • ಬ್ಯಾಂಕ್ ಪ್ರತಿನಿಧಿ ತಮ್ಮ ಬಳಿಯಿರುವ ಮೊಬೈಲ್​ ಆ್ಯಪ್​ನಲ್ಲಿ ಗ್ರಾಹಕರಿಗೆ ಬ್ಯಾಂಕ್​ನಿಂದ ಬಂದಿರುವ ಎಸ್​ಎಂಎಸ್​ನಲ್ಲಿರುವ ಕೋಡ್​ ನಮೂದಿಸುತ್ತಾರೆ. ನಂತರ ಗ್ರಾಹಕರು ಕೋರಿರುವ ಬ್ಯಾಂಕಿಂಗ್​ ಸೇವೆ ಒದಗಿಸುತ್ತಾರೆ. ವಹಿವಾಟು ಪೂರ್ಣಗೊಂಡ ನಂತರ ಗ್ರಾಹಕರಿಗೆ ಮತ್ತೊಮ್ಮೆ ದೃಢೀಕರಣದ ಎಸ್​ಎಂಎಸ್ ಬರುತ್ತದೆ.
  • ಅಪ್ರಾಪ್ತರ ಖಾತೆಗಳು, ಜಂಟಿ ಖಾತೆಗಳಿಗೆ ಈ ಸೇವೆ ಸಿಗುವುದಿಲ್ಲ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್