AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೂ ಇದೆ ವಿಮಾ ಸುರಕ್ಷೆ; ವೆಡ್ಡಿಂಗ್ ಇನ್ಷೂರೆನ್ಸ್ ಪಾಲಿಸಿಯಲ್ಲಿ ಏನೇನು ಕವರೇಜ್ ಇರುತ್ತದೆ?

Wedding Insurance: ಲಕ್ಷಾಂತರ ರೂ ವೆಚ್ಚವಾಗುವ ಮದುವೆ ದಿಢೀರ್ ನಿಂತು ಹೋದರೆ ಒಬ್ಬ ವ್ಯಕ್ತಿಗೆ ಭಾರೀ ನಷ್ಟ ಆಗುತ್ತದೆ. ಮದುವೆ ಹಾಲ್​ಗೆ ಕೊಟ್ಟಿದ್ದ ಅಡ್ವಾನ್ಸ್, ಅಡುಗೆ ಮತ್ತಿತರ ಸರ್ವಿಸ್​ಗೆ ಕೊಟ್ಟ ಅಡ್ವಾನ್ಸ್ ಇವೆಲ್ಲವೂ ನಷ್ಟವಾಗುತ್ತದೆ. ಇದನ್ನು ಭರಿಸಲು ವಿವಾಹ ವಿಮೆಗಳು ಅಸ್ತಿತ್ವದಲ್ಲಿವೆ. ಮದುವೆಗೆ ಏಳು ದಿನ ಮುಂಚಿನಿಂದಲೇ ವಿಮಾ ಕವರೇಜ್ ಇರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...

ಮದುವೆಗೂ ಇದೆ ವಿಮಾ ಸುರಕ್ಷೆ; ವೆಡ್ಡಿಂಗ್  ಇನ್ಷೂರೆನ್ಸ್ ಪಾಲಿಸಿಯಲ್ಲಿ ಏನೇನು ಕವರೇಜ್ ಇರುತ್ತದೆ?
ವಿವಾಹ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2023 | 1:06 PM

ಇದೀಗ ವೈವಾಹಿಕ ಸೀಸನ್. ಸಾಕಷ್ಟು ಮದುವೆಗಳು ನಡೆಯುತ್ತವೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ಎಂದು ಹಿರಿಯರು ಅನುಭವ ಮಾತನ್ನು ಹೇಳಿರುವುದು ಸುಮ್ಮನೆ ಅಲ್ಲ. ಮದುವೆ ಯಾವುದೇ ವ್ಯಕ್ತಿಯ ಬಾಳಿನಲ್ಲಿ ಪ್ರಮುಖ ಘಟ್ಟ ಎಂಬುದು ಎಷ್ಟು ನಿಜವೋ ಹಾಗೆಯೇ, ವಿವಾಹ ಕಾರ್ಯಕ್ರಮದ ಖರ್ಚೂ ಕೂಡ ವ್ಯಕ್ತಿಯ ಜೀವನದ ಪ್ರಮುಖ ವೆಚ್ಚ ಎಂಬುದೂ ಸತ್ಯ. ಸಾಕಷ್ಟು ಖರ್ಚುಗಳನ್ನು ಮಾಡಿ ಮದುವೆ ಕಾರ್ಯಕ್ರಮ ಆಯೋಜಿಸುತ್ತೇವೆ. ಒಬ್ಬ ಸಾಮಾನ್ಯ ಮಧ್ಯಮವರ್ಗದ ವ್ಯಕ್ತಿ ಇವತ್ತು ಮದುವೆ ಸಮಾರಂಭಕ್ಕೆ (wedding function) 10 ಲಕ್ಷಕ್ಕೂ ಹೆಚ್ಚು ಖರ್ಚು ಮಾಡುತ್ತಾರೆ. ಹೀಗಿರುವಾಗ ಮದುವೆ ದಿಢೀರನೇ ಮುರಿದುಬಿದ್ದರೆ, ಅಥವಾ ಮುಂದೂಡಿಕೆ ಆದರೆ ಲಕ್ಷಾಂತರ ಹಣ ನಷ್ಟ ಆಗಿಬಿಡಬಹುದು. ಇಂಥ ನಷ್ಟಗಳನ್ನು ಭರಿಸಿಕೊಡಲು ಈಗ ಮದುವೆಗೂ ಇನ್ಷೂರೆನ್ಸ್ ಪಾಲಿಸಿಗಳು (wedding insurance) ಬಂದಿವೆ. ಈ ವಿವಾಹ ವಿಮೆ ಯಾವ್ಯಾವೆಲ್ಲಾ ಅವಘಡಗಳನ್ನು ಕವರ್ ಮಾಡಲು ಸಾಧ್ಯ? ಒಂದಷ್ಟು ಮೂಲಭೂತ ವಿವರ ಇಲ್ಲಿದೆ…

ವಿವಾಹ ವಿಮೆ ಯಾವುದನ್ನೆಲ್ಲಾ ಕವರ್ ಮಾಡುತ್ತದೆ?

ಮದುವೆ ಕಾರ್ಯಕ್ರಮ ನಿಗದಿಯಾದ ದಿನಕ್ಕೆ ಒಂದು ವಾರ ಮುಂಚಿನಿಂದ ವಿವಾಹ ವಿಮೆ ಕವರೇಜ್ ಆರಂಭವಾಗುತ್ತದೆ. ಈ ಕೆಳಗಿನ ಕೆಲ ಸಂಗತಿಗಳು ವಿಮಾ ಕವರೇಜ್ ವ್ಯಾಪ್ತಿಗೆ ಸೇರುತ್ತವೆ:

  • ನೈಸರ್ಗಿಕ ವಿಕೋಪ, ಕಟ್ಟಡಕ್ಕೆ ಹಾನಿ, ಕಳ್ಳತನ, ದರೋಡೆ ಇತ್ಯಾದಿ ಅನಿರೀಕ್ಷಿತ ಕಾರಣಕ್ಕೆ ಮದುವೆ ರದ್ದಾದರೆ ಅಥವಾ ಮುಂದೂಡಿಕೆ ಆದರೆ ವಿವಾಹ ವಿಮೆಯಲ್ಲಿ ಕ್ಲೈಮ್ ಮಾಡಬಹುದು. ಕಾರ್ಡ್ ಮುದ್ರಣ ವೆಚ್ಚ, ವಿವಿಧ ಸೇವೆಗಳಿಗೆ ಕೊಟ್ಟಿರುವ ಮುಂಗಡ ಹಣ, ಪ್ರಯಾಣಕ್ಕೆ ಬುಕ್ ಮಾಡಿದ್ದ ಟಿಕೆಟ್ ಹಣವನ್ನು ವಿಮಾ ಸಂಸ್ಥೆ ಭರಿಸುತ್ತದೆ.
  • ಭೂಕಂಪ ಇತ್ಯಾದಿ ವಿಕೋಪಗಳು, ಕಳ್ಳತನ ಮೊದಲಾದ ಕಾರಣದಿಂದ ಮದುವೆ ಸ್ಥಳದ ಡೆಕೋರೇಶನ್​ಗೆ ಹಾನಿಯಾಗಿದ್ದರೆ, ಒಡವೆ ಕಳುವಾದರೆ, ಅಥವಾ ಪಟ್ಟಿ ಮಾಡಿದ್ದ ವಸ್ತುಗಳ ಪೈಕಿ ಯಾವುದಾದರೂ ಕಳೆದುಹೋಗಿದ್ದರೆ ಆ ನಷ್ಟವನ್ನು ಭರಿಸಲಾಗುತ್ತದೆ.
  • ಥರ್ಡ್ ಪಾರ್ಟಿಗಳಿಗೆ ಅಪಘಾತ, ಗಾಯವಾದರೆ ವಿಮಾ ಕವರೇಜ್ ಇರುತ್ತದೆ.
  • ಮದುವೆ ಕಾರ್ಯಕ್ರಮದ ವೇಳೆ ಅಪಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಬೇಕಿದ್ದರೆ ಆ ವೆಚ್ಚವನ್ನೂ ವಿಮಾ ಕಂಪನಿ ಭರಿಸುತ್ತದೆ.

ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿಗೆ ನಾಮಿನಿ ಎಷ್ಟು ಮುಖ್ಯ? ನಾಮಿನಿ ಹೆಸರು ಬದಲಿಸಲು ಸಾಧ್ಯವೇ? ಇಲ್ಲಿದೆ ಡೀಟೇಲ್ಸ್

ಯಾವ್ಯಾವುದಕ್ಕೆಲ್ಲಾ ವಿಮಾ ಕವರೇಜ್ ಇರುವುದಿಲ್ಲ?

  • ವಧು ಅಥವಾ ವರ ಓಡಿ ಹೋಗಿ ಅಥವಾ ಅಪಹರಣವಾಗಿ ಮದುವೆ ನಿಂತರೆ ವಿಮಾ ಕವರೇಜ್ ಇರುವುದಿಲ್ಲ.
  • ಭಯೋತ್ಪಾದನೆ ಇತ್ಯಾದಿ ಕಾರಣಕ್ಕೆ ಮದುವೆ ಮುಂದೂಡಿಕೆ ಆದರೂ ಕವರೇಜ್ ಇರುವುದಿಲ್ಲ.
  • ಫ್ಲೈಟ್ ವಿಳಂಬವಾದ ಕಾರಣ
  • ನಿರ್ಲಕ್ಷ್ಯತನದಿಂದ ಕಟ್ಟಡಕ್ಕೆ ಹಾನಿಯಾದರೆ
  • ಕಟ್ಟಡ ಹಳೆಯದ್ದಾಗಿದ್ದರೆ ವಿವಾಹ ವಿಮೆಯ ಕವರೇಜ್​ಗೆ ಬರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ