AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan: ಪಿಎಂ ಕಿಸಾನ್ ಯೋಜನೆ; ಒಂದೇ ಕುಟುಂಬದ ಇಬ್ಬರು ವರ್ಷಕ್ಕೆ 6,000 ರೂ ಪಡೆಯಬಹುದಾ?

Can 2 Persons From 1 Family Get Benefit?: ಪಿಎಂ ಕಿಸಾನ್ ಯೋಜನೆಯ ನಿಯಮದ ಪ್ರಕಾರ ಜಮೀನು ಮಾಲಿಕತ್ವ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಯೋಜನೆ ಅನ್ವಯ ಆಗುತ್ತದೆ. ಒಂದು ಕುಟುಂಬದಲ್ಲಿ ಯಾರ ಹೆಸರಲ್ಲಿ ಜಮೀನು ಇದೆಯೋ ಅವರು ಮಾತ್ರ 2,000 ರೂ ಕಂತು ಹಣ ಪಡೆಯಬಹುದು.

PM Kisan: ಪಿಎಂ ಕಿಸಾನ್ ಯೋಜನೆ; ಒಂದೇ ಕುಟುಂಬದ ಇಬ್ಬರು ವರ್ಷಕ್ಕೆ 6,000 ರೂ ಪಡೆಯಬಹುದಾ?
ಪಿಎಂ ಕಿಸಾನ್ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 24, 2023 | 4:34 PM

ನವದೆಹಲಿ: ಕೇಂದ್ರ ಸರ್ಕಾರ ಕಳೆದ ಮೂರ್ನಾಲ್ಕು ವರ್ಷಗಳಿಂದ ಜಾರಿ ಮಾಡಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಕೋಟ್ಯಂತರ ರೈತ ಕುಟುಂಬಗಳಿಗೆ ಉಪಯುಕ್ತ ಎನಿಸಿದೆ. ಕೇಂದ್ರ ಸರ್ಕಾರ ವರ್ಷಕ್ಕೆ 6,000 ರೂ ಹಣವನ್ನು 3 ಕಂತುಗಳಲ್ಲಿ ನೀಡುತ್ತದೆ. 2019ರಿಂದ ಈಚೆಗೆ ಕೇಂದ್ರ ಸರ್ಕಾರ 2,000 ರೂಗಳ 13 ಕಂತುಗಳನ್ನು ರೈತರಿಗೆ ನೀಡಿದೆ. ಈಗ 14ನೇ ಕಂತಿನ ಹಣಕ್ಕೆ ಜನರು ಕಾಯುತ್ತಿದ್ದಾರೆ. ಈ ತಿಂಗಳು ಮುಗಿಯುವುದರೊಳಗೆ 2,000 ರೂಗಳ 14ನೇ ಕಂತು ಫಲಾನುಭವಿ ರೈತರ ಖಾತೆಗಳಿಗೆ ಬಂದು ಬೀಳುವ ನಿರೀಕ್ಷೆ ಇದೆ. ಇನ್ನು, ಕರ್ನಾಟಕ ಸರ್ಕಾರ ವರ್ಷಕ್ಕೆ ಕೇಂದ್ರ ನೀಡುವ 3 ಕಂತುಗಳ ಜೊತೆ ತಾನೂ ಇನ್ನೆರಡು ಕಂತುಗಳನ್ನು ಸೇರಿಸಿಕೊಡುತ್ತಿತ್ತು. ಈಗ ಸರ್ಕಾರ ಬದಲಾಗಿರುವ ಹಿನ್ನೆಲೆಯಲ್ಲಿ ಹೊಸ ಸರ್ಕಾರ ಈ ಕ್ರಮ ಮುಂದುವರಿಸುತ್ತದಾ ಇಲ್ಲವಾ ಎಂಬುದು ಗೊತ್ತಿಲ್ಲ.

ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಬಹುದಾ?

ಪಿಎಂ ಕಿಸಾನ್ ಯೋಜನೆಯ ನಿಯಮದ ಪ್ರಕಾರ ಜಮೀನು ಮಾಲಿಕತ್ವ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಯೋಜನೆ ಅನ್ವಯ ಆಗುತ್ತದೆ. ಒಂದು ಕುಟುಂಬದಲ್ಲಿ ಯಾರ ಹೆಸರಲ್ಲಿ ಜಮೀನು ಇದೆಯೋ ಅವರು ಮಾತ್ರ 2,000 ರೂ ಕಂತು ಹಣ ಪಡೆಯಬಹುದು. ಗಂಡ ಹೆಂಡತಿ ಅಥವಾ ಬೇರೆಯವರ ಜೊತೆ ಜಂಟಿ ಮಾಲಿಕತ್ವ ಇದ್ದು ಇಬ್ಬರೂ ಕೂಡ ಯೋಜನೆಗೆ ನೊಂದಾಯಿಸಿಕೊಂಡಿದ್ದರೆ ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ರೀತಿ ಇದ್ದರೆ ಒಬ್ಬರಿಗೆ ಮಾತ್ರವೇ ಯೋಜನೆ ಲಾಭ ಸಿಗುವುದು. ಹಾಗೊಂದು ವೇಳೆ ಇಬ್ಬರೂ ಇದರ ಲಾಭ ಪಡೆಯುತ್ತಿದ್ದರೆ ಒಬ್ಬರು ಅದನ್ನು ವಾಪಸ್ ಮಾಡಬೇಕಾಗಬಹುದು.

ಇನ್ನೂ ಕೆಲ ವರದಿ ಪ್ರಕಾರ, ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಯೋಜನೆಗೆ ನೊಂದಾಯಿಸಿಕೊಳ್ಳುವಂತಿಲ್ಲ. ಒಂದು ಕುಟುಂಬ ಎಂದರೆ ಇಲ್ಲಿ ಗಂಡ, ಹೆಂಡತಿ ಮತ್ತು ಅವರ ಮಕ್ಕಳು.

ಇದನ್ನೂ ಓದಿELSS: ತಿಂಗಳಿಗೆ 5,000 ರೂ ಕಟ್ಟಿ, 10 ವರ್ಷದಲ್ಲಿ 22 ಲಕ್ಷದವರೆಗೆ ರಿಟರ್ನ್; ತೆರಿಗೆ ಮತ್ತು ಲಾಭ ಎರಡೂ ಕೊಡುವ ಇಎಲ್​ಎಸ್​ಎಸ್ ಫಂಡ್​ಗಳು

ಹಾಗೆಯೇ, ಒಂದು ಕುಟುಂಬದಲ್ಲಿ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಜಮೀನು ಮಾಲಿಕತ್ವದ ಹೊಂದಿದ್ದರೆ ಅವರು ಯೋಜನೆಯ ಲಾಭ ಪಡೆಯಬಹುದಾ ಎಂಬ ಪ್ರಶ್ನೆಗೆ ಉತ್ತರ ನೀಡಲಾಗಿಲ್ಲ. ಆದರೆ, ಯೋಜನೆ ನಿಯಮ ಗಮನಿಸಿದಾಗ ಅದು ಸಾಧ್ಯ.

ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ನಿಮಗೆ ಸಿಗುತ್ತಾ? ಫಲಾನುಭವಿಗಳ ಪಟ್ಟಿ ಒಮ್ಮೆ ನೋಡಿ

ಪಿಎಂ ಕಿಸಾನ್ ಯೋಜನೆಯಲ್ಲಿ ಕೆಲವೊಮ್ಮೆ ನಮ್ಮ ಹೆಸರು ಕೈಬಿಟ್ಟು ಹೋಗಿರಬಹುದು ಎಂಬ ಭಯ ಯಾರಿಗಾದರೂ ಕಾಡಬಹುದು. ನಿಮಗೆ ಹಾಗನಿಸಿದಲ್ಲಿ ಆನ್​ಲೈನ್​ನಲ್ಲಿ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯಾ ಎಂದು ಖಚಿತಪಡಿಸಿಕೊಳ್ಳಬಹುದು.

ಇದನ್ನೂ ಓದಿTips: ನಿಮ್ಮ ವಯಸ್ಸಿನ್ನೂ 30 ದಾಟಿಲ್ಲವೇ? ಹಣ ಸಂಪಾದನೆ, ಹಣಭದ್ರತೆಗೆ ತಪ್ಪದೇ ಈ ಕ್ರಮ ಅನುಸರಿಸಿ

  • ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್ pmkisan.gov.inಗೆ ಹೋಗಿ
  • ಅಲ್ಲಿ ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಬೆನಿಫಿಶಿಯರಿ ಲಿಸ್ಟ್ ಇತ್ಯಾದಿಯನ್ನು ಕಾಣಬಹುದು.
  • ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆದುಕೊಳ್ಳುತ್ತದೆ.
  • ಅದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರನ್ನು ಆರಿಸಿಕೊಳ್ಳಿ.
  • ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ.

ಹಾಗೆಯೇ, ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ನ್ಯೂ ಫಾರ್ಮರ್ಸ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿದರೆ, ಅಲ್ಲಿ ನೀವು ಹೊಸದಾಗಿ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಈಗ ಮಾಡಿದರೆ ಈ ವಾರ ಬಿಡುಗಡೆ ಆಗುವ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಮುಂದಿನ ಕಂತಿನ ಹಣ ಪಡೆಯಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ
ಜೀವಂತ ಕ್ಷಿಪಣಿಯನ್ನು ಗಮನಿಸಿದ ಸ್ಥಳೀಯರಿಂದ ಸೇನೆಗೆ ಮಾಹಿತಿ
ಜೀವಂತ ಕ್ಷಿಪಣಿಯನ್ನು ಗಮನಿಸಿದ ಸ್ಥಳೀಯರಿಂದ ಸೇನೆಗೆ ಮಾಹಿತಿ
ಸೋನು ನಿಗಂ ವಿವಾದದ ಬಗ್ಗೆ ನಟ ಧನಂಜಯ್ ಮಾತು
ಸೋನು ನಿಗಂ ವಿವಾದದ ಬಗ್ಗೆ ನಟ ಧನಂಜಯ್ ಮಾತು
ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ
ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ
ಜಮೀರ್ ಅಹ್ಮದ್ ಯುದ್ಧಕ್ಕೆ ಹೋಗುವ ಮಾತನ್ನು ಹೇಳಿ ನಕ್ಕ ನಿಖಿಲ್
ಜಮೀರ್ ಅಹ್ಮದ್ ಯುದ್ಧಕ್ಕೆ ಹೋಗುವ ಮಾತನ್ನು ಹೇಳಿ ನಕ್ಕ ನಿಖಿಲ್
ಡಿಸ್ನಿ ಲ್ಯಾಂಡ್, ಕಾವೇರಿ ಆರತಿ ಯೋಜನೆಗಳನ್ನು ವಿರೋಧಿಸಿದ ರೈತ ಮಹಿಳೆಯರು
ಡಿಸ್ನಿ ಲ್ಯಾಂಡ್, ಕಾವೇರಿ ಆರತಿ ಯೋಜನೆಗಳನ್ನು ವಿರೋಧಿಸಿದ ರೈತ ಮಹಿಳೆಯರು