AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan: ಪಿಎಂ ಕಿಸಾನ್ ಯೋಜನೆ; ಜುಲೈ 27ಕ್ಕೆ 14ನೇ ಕಂತು; ಆಧಾರ್ ಪ್ರಕಾರ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ

How To Ensure PM Kisan Instalment: ಪಿಎಂ ಕಿಸಾನ್ ಯೋಜನೆಯಲ್ಲಿ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದ್ದರೂ 14ನೇ ಕಂತಿನ ಹಣ ಸಿಗದೇ ಹೋಗಬಹುದು. ಆಧಾರ್ ಪ್ರಕಾರ ನಿಮ್ಮ ಹೆಸರು ನೊಂದಾಯಿತವಾಗದೇ ಇದ್ದರೆ ಹಣ ಸಿಗುವುದಿಲ್ಲ.

PM Kisan: ಪಿಎಂ ಕಿಸಾನ್ ಯೋಜನೆ; ಜುಲೈ 27ಕ್ಕೆ 14ನೇ ಕಂತು; ಆಧಾರ್ ಪ್ರಕಾರ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ
ಪಿಎಂ ಕಿಸಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2023 | 2:59 PM

ನವದೆಹಲಿ, ಜುಲೈ 24: ರೈತರ ವ್ಯವಸಾಯಕ್ಕೆ ಅನುಕೂಲವಾಗಲೆಂದು ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 14ನೇ ಕಂತಿನ ಹಣ ಜುಲೈ 27ರಂದು ಬಿಡುಗಡೆ ಆಗಲಿದೆ. ಅಂದು 8.5 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ತಲಾ 2,000 ರೂ ಹಣ ಜಮೆ ಆಗಲಿದೆ. ಸರ್ಕಾರ 2019ರಲ್ಲಿ ಆರಂಭಿಸಿದ ಈ ಯೋಜನೆಯಲ್ಲಿ 2,000 ರೂಗಳ 3 ಕಂತಿನಲ್ಲಿ ವರ್ಷಕ್ಕೆ 6,000 ರೂವನ್ನು ರೈತರ ಖಾತೆಗಳಿಗೆ ನೀಡಲಾಗುತ್ತದೆ. ಈವರೆಗೆ ಸರ್ಕಾರ 13 ಕಂತುಗಳನ್ನು ಬಿಡುಗಡೆ ಮಾಡಿದೆ. ಫೆಬ್ರುವರಿ 27ರಂದು 13ನೇ ಕಂತು ಬಿಡುಗಡೆ ಆಗಿತ್ತು.

ಕಳೆದ ವರ್ಷದ ಕೊನೆಯಲ್ಲಿ ಸರ್ಕಾರ ಪಿಎಂ ಕಿಸಾನ್ ಫಲಾನುಭವಿಗಳಿಗೆ ಇಕೆವೈಸಿ ಅಪ್​ಡೇಟ್ ಮಾಡುವಂತೆ ತಿಳಿಸಿತ್ತು. ಇಕೆವೈಸಿ ಮಾಡಿಸಿದವರಿಗೆ ಮಾತ್ರವೇ ಕಿಸಾನ್ ಯೋಜನೆ ಹಣ ಸಿಗುತ್ತದೆ. 13ನೇ ಕಂತಿನಲ್ಲಿ ಇದೇ ಕಾರಣಕ್ಕೆ ಬಹಳ ಮಂದಿಗೆ ಹಣ ಸಿಕ್ಕಿರಲಿಲ್ಲ.

ಪಿಎಂ ಕಿಸಾನ್​ನ ಅಧಿಕೃತ ವೆಬ್​ಸೈಟ್​ಗೆ ಹೋದರೆ ಅಲ್ಲಿ ಇಕೆವೈಸಿ ಮಾಡಲು ಅವಕಾಶ ಇದೆ. ಹಾಗೆಯೇ ಹೊಸದಾಗಿ ನೊಂದಣಿ ಮಾಡಿಸಲು, ನೊಂದಣಿ ಅಪ್​ಡೇಟ್ ಮಾಡಲು, ಫಲಾನುಭವಿಗಳ ಪಟ್ಟಿ ವೀಕ್ಷಿಸಲು, ಆಧಾರ್ ಪ್ರಕಾರ ಹೆಸರು ಬದಲಾಯಿಸಲು ಇತ್ಯಾದಿ ಅವಕಾಶಗಳಿವೆ.

ಇದನ್ನೂ ಓದಿ: PM Kisan: ಮೊಬೈಲ್​ನಲ್ಲಿ ಮುಖ ಸ್ಕ್ಯಾನ್ ಮಾಡಿ, ಪಿಎಂ ಕಿಸಾನ್ ಸ್ಕೀಮ್​ಗೆ ಇಕೆವೈಸಿ ಪೂರ್ಣಗೊಳಿಸಿ; ಫಿಂಗರ್ ಪ್ರಿಂಟ್ ಬೇಕಿಲ್ಲ, ಕೂತಲ್ಲೇ ಮುಗಿಯುತ್ತೆ ಇ-ಕೆವೈಸಿ

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದರೂ ಹಣ ಬರದೇಹೋಗಬಹುದು…

ನೀವು ಇಕೆವೈಸಿ ಮಾಡಿದ್ದಿರಬಹುದು. 13ನೇ ಕಂತಿನ ಹಣವನ್ನೂ ಪಡೆದಿರಬಹುದು. ಫಲಾನುಭವಿಗಳ ಪಟ್ಟಿಯಲ್ಲೂ ನಿಮ್ಮ ಹೆಸರಿರಬಹುದು. ಆದರೂ ಕೂಡ 14ನೇ ಕಂತಿನ ಹಣ ಬರುತ್ತದೆ ಎಂದು ಖಾತ್ರಿ ಪಡುವಂತಿಲ್ಲ. ಪಿಎಂ ಕಿಸಾನ್ ಯೋಜನೆಯ ನೊಂದಣಿಯಲ್ಲಿರುವ ನಿಮ್ಮ ಹೆಸರು ಆಧಾರ್​ನಲ್ಲಿರುವ ಹೆಸರಿನೊಂದಿಗೆ ತಾಳೆಯಾಗದಿದ್ದರೆ 14ನೇ ಕಂತಿನ ಹಣ ಸಿಗುವುದಿಲ್ಲ.

ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋದರೆ ಅಲ್ಲಿ ಫಾರ್ಮರ್ಸ್ ಕಾರ್ನರ್ ಸೆಕ್ಷನ್​ನಲ್ಲಿ ಆಧಾರ್ ಪ್ರಕಾರ ಹೆಸರು ತಿದ್ದುಪಡಿ ಮಾಡುವ ಅವಕಾಶ ಇದೆ.

ಇದನ್ನೂ ಓದಿ: PM Kisan 14th Instalment: ಪಿಎಂ ಕಿಸಾನ್ 14ನೇ ಕಂತಿನ ಹಣ ಬಿಡುಗಡೆ ದಿನಾಂಕ ಬಹಿರಂಗ; ಮುಂದಿನ ವಾರವೇ ಹಣ ಬಿಡುಗಡೆ; ಫಲಾನುಭವಿಗಳ ಪಟ್ಟಿ ನೋಡಿ

  • ‘ನೇಮ್ ಕರೆಕ್ಷನ್ ಆ್ಯಸ್ ಪರ್ ಆಧಾರ್’ ಎಂದು ಬರೆದಿರುವ ಟ್ಯಾಬ್ ಅನ್ನು ಕ್ಲಿಕ್ ಮಾಡಿದರೆ ಬೇರೊಂದು ಪುಟ ತೆರೆಯುತ್ತದೆ.
  • ಅಲ್ಲಿ ಯೋಜನೆಯ ನಿಮ್ಮ ರಿಜಿಸ್ಟ್ರೇಶನ್ ನಂಬರ್ ನಮೂದಿಸಿ
  • ರಿಜಿಸ್ಟ್ರೇಶನ್ ನಂಬರ್ ಗೊತ್ತಿಲ್ಲದಿದ್ದರೆ ‘ನೋ ಯುವರ್ ರಿಜಿಸ್ಟ್ರೇನ್ ನಂಬರ್’ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಆಧಾರ್ ನಂಬರ್ ಅಥವಾ ನೊಂದಾಯಿತ ಮೊಬೈಲ್ ನಂಬರ್ ಮೂಲಕ ರಿಜಿಸ್ಟ್ರೇಶನ್ ನಂಬರ್ ಪಡೆದುಕೊಳ್ಳಿ
  • ಈಗ ಆ ರಿಜಿಸ್ಟ್ರೇಶನ್ ನಂಬರ್ ಹಾಕಿ ಸರ್ಚ್ ಕೊಡಿ.

ಅಲ್ಲಿ ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ಹೆಸರನ್ನು ಪಿಎಂ ಕಿಸಾನ್ ಯೋಜನೆಗೆ ಅಪ್​ಡೇಟ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು