AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ಮಲ್ಯ ಆಸ್ತಿ, ಸೆಕ್ಯೂರಿಟೀಸ್ ಹರಾಜಿಗೆ ಬ್ಯಾಂಕ್​ಗಳಿಗೆ ಅನುಮತಿ ನೀಡಿದ ಪಿಎಂಎಲ್ಎ ಕೋರ್ಟ್

ವಿಜಯ್ ಮಲ್ಯರಿಂದ ಬರಬೇಕಾದ ಸಾಲವನ್ನು ವಸೂಲಿ ಮಾಡುವುದಕ್ಕೆ 5600 ಕೋಟಿ ರೂಪಾಯಿಯ ಸೆಕ್ಯೂರಿಟೀಸ್, ರಿಯಲ್ ಎಸ್ಟೇಟ್ ಆಸ್ತಿಗಳನ್ನು ಮಾರಾಟ ಮಾಡುವುದಕ್ಕೆ ಬ್ಯಾಂಕ್​ಗಳಿಗೆ ಪಿಎಂಎಲ್​ಎ ಕೋರ್ಟ್ ಅನುಮತಿ ನೀಡಿದೆ.

ವಿಜಯ್ ಮಲ್ಯ ಆಸ್ತಿ, ಸೆಕ್ಯೂರಿಟೀಸ್ ಹರಾಜಿಗೆ ಬ್ಯಾಂಕ್​ಗಳಿಗೆ ಅನುಮತಿ ನೀಡಿದ ಪಿಎಂಎಲ್ಎ ಕೋರ್ಟ್
ವಿಜಯ್ ಮಲ್ಯ (ಸಂಗ್ರಹ ಚಿತ್ರ)
TV9 Web
| Edited By: |

Updated on:Jun 05, 2021 | 3:52 PM

Share

ದೇಶದಿಂದ ಓಡಿಹೋಗಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ರಿಯಲ್ ಎಸ್ಟೇಟ್ ಆಸ್ತಿಗಳು ಮತ್ತು ಸೆಕ್ಯೂರಿಟೀಸ್​ಗಳನ್ನು ಮಾರಾಟ ಮಾಡುವುದಕ್ಕೆ ಪಿಎಂಎಲ್​ಎ ಕೋರ್ಟ್​ನಿಂದ ಬ್ಯಾಂಕ್​ಗಳಿಗೆ ಅನುಮತಿ ನೀಡಲಾಗಿದೆ. ವಿಜಯ್ ಮಲ್ಯರಿಂದ ಬರಬೇಕಾದ 5600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ವಸೂಲಿ ಮಾಡಬೇಕಿರುವುದರಿಂದ ಈ ಅನುಮತಿ ನೀಡಲಾಗಿದೆ. ಈ ಹಿಂದೆ ಇದು ಜಾರಿ ನಿರ್ದೇಶನಾಲಯ (Enforcement Directorate) ಅಡಿಯಲ್ಲಿ ಇತ್ತು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್​ ಕಾರ್ಯನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ ರಾವ್ ಹೇಳಿದ್ದಾರೆ.

ಇದೀಗ ಪ್ರಮುಖ ಬ್ಯಾಂಕ್ ಆಸ್ತಿ ಮಾರಾಟಕ್ಕೆ ಮುಂದಾಗಲಿದೆ. ಕಿಂಗ್​ಫಿಷರ್​ಗೆ ನೀಡಿದ ಸಾಲದಲ್ಲಿ ಪಿಎನ್​ಬಿ ಹೆಚ್ಚಿನ ಮೊತ್ತವನ್ನು ನೀಡಿಲ್ಲ. ಪ್ರಮುಖ ಬ್ಯಾಂಕ್​ನಿಂದ ಆಸ್ತಿ ಮಾರಾಟ ಮಾಡಿದಲ್ಲಿ ನಮ್ಮ ಪಾಲನ್ನು ಪಡೆಯುತ್ತೇವೆ ಎಂದು ರಾವ್ ಹೇಳಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್​ಗಳ ಒಕ್ಕೂಟವು ಈಗ ದೇಶಭ್ರಷ್ಟ ವಿಜಯ್ ಮಲ್ಯ ಆಸ್ತಿಯನ್ನು ಮಾರಾಟ ಮಾಡಬಹುದು. ಕಿಂಗ್​ಫಿಷರ್​ಗಾಗಿ ಬ್ಯಾಂಕ್​ಗಳ ಒಕ್ಕೂಟದಿಂದ ಸಾಲ ನೀಡಲಾಗಿತ್ತು. ಒಟ್ಟು 11 ಬ್ಯಾಂಕ್​ಗಳ ಒಕ್ಕೂಟವು ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಕೋರ್ಟ್ ಬಳೆ ತೆರಳಿದ್ದವು. ಜಾರಿ ನಿರ್ದೇಶನಾಲಯದಿಂದ ವಶಪಡಿಸಿಕೊಂಡ ಆಸ್ತಿಯನ್ನು ಮರಳಿಸಬೇಕು ಎಂದು ಕೇಳಲಾಗಿತ್ತು.

ಈ ಹನ್ನೊಂದು ಬ್ಯಾಂಕ್​ಗಳ ಒಕ್ಕೂಟದಲ್ಲಿ ಪಂಜಾಬ್​ ನ್ಯಾಷನಲ್ ಬ್ಯಾಂಕ್ ಕೂಡ ಒಂದು. “ವಿಜಯಲ್ ಮಲ್ಯಗೆ ಸೇರಿದ 5600 ಕೋಟಿ ರೂಪಾಯಿ ಮೌಲ್ಯದ ಸೆಕ್ಯೂರಿಟೀಸ್, ರಿಯಲ್ ಎಸ್ಟೇಟ್ ಆಸ್ತಿ ಮಾರಾಟಕ್ಕೆ ಪಿಎಂಎಲ್​ಎ ಕೋರ್ಟ್ ಅನುಮತಿ ನೀಡಿದೆ. ಈ ಹಿಂದೆ ಅದು ಜಾರಿ ನಿರ್ದೇಶನಾಲಯದ ಬಳಿ ಇತ್ತು,” ಎಂದು ಪಿಎನ್​ಬಿ ಮ್ಯಾನೇಜಿಂಗ್ ಡೈರೆಕ್ಟರ್ ಮಲ್ಲಿಕಾರ್ಜುನ ರಾವ್ ಹೇಳಿದ್ದಾರೆ. ಈಗ ನೇತೃತ್ವ ವಹಿಸಿರುವ ಪ್ರಮುಖ ಬ್ಯಾಂಕ್ ಎಲ್ಲ ಆಸ್ತಿಗಳನ್ನು ಮಾರಾಟ ಮಾಡಲಿದೆ. ಪಿಎನ್​ಬಿಯಿಂದ ಹೆಚ್ಚಿನ ಸಾಲವನ್ನು ಕಿಂಗ್​ಫಿಷರ್​ಗೆ ನೀಡಿಲ್ಲ. ಒಂದು ಸಲ ಆಸ್ತಿ ಮಾರಾಟ ಮಾಡಿದ ಮೇಲೆ ಬರುವ ಹಣದಲ್ಲಿ ನಾವು ಸಹ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿರುವ ಪಿಎಂಎಲ್​ಎ ಕೋರ್ಟ್​ ಹೇಳಿರುವ ಪ್ರಕಾರ, ವಿಜಯ್​ ಮಲ್ಯಗೆ ಸೇರಿದ 5646.54 ಕೋಟಿ ಮೌಲ್ಯದ ಆಸ್ತಿಯನ್ನು ಮತ್ತೆ ಬ್ಯಾಂಕ್​ಗಳಿಗೆ ವಹಿಸಿಕೊಡುವಂತೆ ತಿಳಿಸಲಾಗಿದೆ. ವರದಿಗಳ ಪ್ರಕಾರ, ಬ್ಯಾಂಕ್​ಗಳು ಸಾಂಕೇತಿಕವಾಗಿ ಆಸ್ತಿಗಳ ಸ್ವಾಧೀನ ಪಡೆಯುತ್ತವೆ. ಅದಕ್ಕೂ ಮುನ್ನ ಕಾನೂನು ನಿಯಮಾವಳಿಗಳು ಪಾಲನೆ ಆಗಬೇಕು.

ಇದನ್ನೂ ಓದಿ: Vijay Mallya: ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಫೀಸ್​ ಕೊಡಬೇಕು… ದಯವಿಟ್ಟು ಹಣ ನೀಡಿ ಎಂದು ಲಂಡನ್​ ಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ!

(PMLA court allowed banks to auction Vijay Mallya’s property in India to recover loan)

Published On - 3:19 pm, Sat, 5 June 21

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ