AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Mallya: ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಫೀಸ್​ ಕೊಡಬೇಕು… ದಯವಿಟ್ಟು ಹಣ ನೀಡಿ ಎಂದು ಲಂಡನ್​ ಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ!

London court: ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಶುಲ್ಕ​ ಜಸ್ಟ್​ 5.7 ಕೋಟಿ ರೂಪಾಯಿ ನೀಡಬೇಕಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಇದೇ ಲಾಯರುಗಳಿಗೆ ನಾನು ಇನ್ನೂ 2 ಕೋಟಿ ರೂಪಾಯಿ (£ 758,000) ಖರ್ಚು ಮಾಡಬೇಕಾದೀತು. ಆದರೆ ಇಷ್ಟು ಹಣ ನನ್ನ ಬಳಿ ಇಲ್ಲ. ಹಾಗಾಗಿ ಕೋರ್ಟ್​ ಈ ಹಣ ಕ್ರೋಢೀಕರಣಕ್ಕೆ ನನಗೆ ನೆರವು ನೀಡಬೇಕು ಎಂದು ವಿಲಾಸಿ ಮನುಷ್ಯ ವಿಜಯ್​ ಮಲ್ಯ ಯುಕೆ ಕೋರ್ಟ್​ಗೆ ಕೇಳಿಕೊಂಡಿದ್ದಾನೆ.

Vijay Mallya: ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಫೀಸ್​ ಕೊಡಬೇಕು... ದಯವಿಟ್ಟು ಹಣ ನೀಡಿ ಎಂದು ಲಂಡನ್​ ಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ!
ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಫೀಸ್​ ಕೊಡಬೇಕು... ದಯವಿಟ್ಟು ಹಣ ನೀಡಿ ಎಂದು ಲಂಡನ್​ ಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ!
Follow us
ಸಾಧು ಶ್ರೀನಾಥ್​
|

Updated on:May 26, 2021 | 11:30 AM

ಲಂಡನ್​: ನಿನ್ನಯಷ್ಟೇ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಆಂಟಿಗೋವಾದಿಂದ ಪರಾರಿಯಾಗಿರುವ ಬಗ್ಗೆ ವರದಿ ಕೇಳಿದಿರಿ. ಈ ಮಧ್ಯೆ ಮತ್ತೊಬ್ಬ ವಂಚಕ ನೀರವ್​ ಮೋದಿ ಸದ್ಯ ಲಂಡನ್​ ಜೈಲಿನಲ್ಲಿದ್ದು, ಆತನನ್ನು ಭಾರತಕ್ಕೆಹಸ್ತಾಂತರಿಸಿ ಎಂದು ಅಲ್ಲಿನ ಕೋರ್ಟ್​ ಆದೇಶಿಸಿದೆ. ಆದರೆ ಅವನೋ ದಮ್ಮಯ್ಯ ನನ್ನನ್ನು ದಯವಿಟ್ಟು ಭಾರತಕ್ಕೆ ಕಳಿಸಿಕೊಡಬೇಕಿ ಎಂದು ಅದೇ ಲಂಡನ್​ನಲ್ಲಿ ಕೋರ್ಟ್​ ಮೊರೆ ಹೋಗಿರುವುದೂ ವರದಿಯಾಗಿದೆ. ಈ ಮಧ್ಯೆ ಇವರೆಲ್ಲರಿಗಿಂತ ಮಹಾ ವಂಚಕ, ಕನ್ನಡಿಗ ವಿಜಯ್​ ಮಲ್ಯ ಎಂಬ ಮದ್ಯದ ದೊರೆ ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಶುಲ್ಕ​ ಕೊಡಬೇಕು… ದಯವಿಟ್ಟು ಹಣ ನೀಡಿ ಎಂದು ಲಂಡನ್​ ಕೋರ್ಟ್​ ಮೊರೆ ಹೋಗಿದ್ದಾನೆ!

ಏನಿಲ್ಲ ​​ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಶುಲ್ಕ​ ಜಸ್ಟ್​ 5.7 ಕೋಟಿ ರೂಪಾಯಿ ನೀಡಬೇಕಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಇದೇ ಲಾಯರುಗಳಿಗೆ ನಾನು ಇನ್ನೂ 2 ಕೋಟಿ ರೂಪಾಯಿ (£ 758,000) ಖರ್ಚು ಮಾಡಬೇಕಾದೀತು. ಆದರೆ ಇಷ್ಟು ಹಣ ನನ್ನ ಬಳಿ ಇಲ್ಲ. ಹಾಗಾಗಿ ಕೋರ್ಟ್​ ಈ ಹಣ ಕ್ರೋಢೀಕರಣಕ್ಕೆ ನನಗೆ ನೆರವು ನೀಡಬೇಕು ಎಂದು ವಿಲಾಸಿ ಮನುಷ್ಯ ವಿಜಯ್​ ಮಲ್ಯ ಯುಕೆ ಕೋರ್ಟ್​ಗೆ ಕೇಳಿಕೊಂಡಿದ್ದಾನೆ. ನನ್ನ ವಿರುದ್ಧ ದಿವಾಳಿ ಪ್ರಕರಣಗಳು ದಾಖಲಾಗಿವೆ. ಕೋರ್ಟ್​​ನಲ್ಲಿ ಇದರ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ನನ್ನ ಅಷ್ಟೂ ಆಸ್ತಿಯನ್ನು ನಾನಾ ಕೋರ್ಟ್​​ಗಳು ಮುಟ್ಟುಗೋಲು ಹಾಕಿಕೊಂಡಿವೆ. ಇದರಿಂದ ನನ್ನ ಬಳಿ ಹಣವೇ ಇಲ್ಲವಾಗಿದೆ. ಹಾಗಾಗಿ ಕೋರ್ಟ್​ ಫಂಡ್​ ನಿಂದ (court funds office) ಹಣ ಬಿಡುಗಡೆ ಮಾಡಬೇಕು ಎಂದು ವಿಜಯ್​ ಮಲ್ಯ ಕೋರ್ಟ್​ಗೆ ಅಲವತ್ತುಕೊಂಡಿದ್ದಾನೆ.

ಏನಿದು ಕೋರ್ಟ್​ ಫಂಡ್ ಬಾಬತ್ತು (court funds office)?:

ಸಾಲ ಶೂಲದಲ್ಲಿ ಮುಳುಗಿರುವ ವಿಲಾಸಿ ವಿಜಯ್​ ಮಲ್ಯ ವಿರುದ್ಧ ಡೆಪ್ಯುಟಿ ಐಸಿಸಿ ಜಡ್ಜ್​ ಬರ್ನೆಟ್​ ಅವರು ಕಳೆದ ಫೆಬ್ರವರಿಯಲ್ಲಿ ಆರ್ಡರ್​ ಒಂದನ್ನು ಪಾಸ್​ ಮಾಡಿ ವಿಜಯ್​ ಮಲ್ಯನಿಗೆ ಜೀವನೋಪಾಯಕ್ಕಾಗಿ ಪ್ರತಿ ತಿಂಗಳೂ ಕೋರ್ಟ್​ ಫಂಡ್​ ನಿಂದ (court funds office) 23 ಲಕ್ಷ ರೂಪಾಯಿ ಬಿಡುಗಡೆ ಮಾಡುವಂತೆ ಸೂಚಿಸಿದ್ದರು. ಆದರೆ ಅದರಲ್ಲಿ ಆತ ಭಾರತದಲ್ಲಿರುವ ತನ್ನ ವಕೀಲರುಗಳಿಗೆ ನೀಡಬೇಕಾದ ಶುಲ್ಕವನ್ನು ಸೇರಿಸಿರಲಿಲ್ಲ. ಬಳಿಕ, ಮಲ್ಯನ ಹೆಸರಿನಲ್ಲಿರುವ ಒಟ್ಟು ಕೋರ್ಟ್​ ಫಂಡ್​ ನಿಂದ 12 ಕೋಟಿ ರೂಪಾಯಿ ಬಳಸಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಈಗ ವಿಜಯ್​ ಮಲ್ಯ ತನ್ನ ವಕೀಲರುಗಳಿಗೆ ಸುಮಾರು 8 ಕೋಟಿ ರೂಪಾಯಿ ಶುಲ್ಕ​ ಕೊಡಬೇಕು ಎಂದು ತಿಳಿಸಲಾಗಿ, ಕೋರ್ಟ್​ ಈಗ ಆ ಹಣವನ್ನು ಬಳಸಿಕೊಳ್ಳುವಂತೆ ಹೇಳಿದೆ.

(Vijay Mallya application in UK court to give him Rs 7 point 8 crore from court funds office in London to pay his lawyers in India)

ವಂಚಕ ಮೆಹೂಲ್ ಚೋಸ್ಕಿ ಆಂಟಿಗುವಾದಲ್ಲಿ ನಾಪತ್ತೆ? ವಾಹನ ಜಾಲಿ ಬಂದರು ಪ್ರದೇಶದಲ್ಲಿ ಪತ್ತೆ! ಆತಂಕದಲ್ಲಿ ಕುಟುಂಬಸ್ಥರು

Published On - 11:06 am, Wed, 26 May 21

ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ