AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Power Grid- Tata Case: ಲಂಚ ಪ್ರಕರಣದಲ್ಲಿ ಪವರ್​ ಗ್ರಿಡ್​ನ ಪ್ರಮುಖ ಅಧಿಕಾರಿ ಸೇರಿ ಇತರ ಐವರನ್ನು ಬಂಧಿಸಿದ ಸಿಬಿಐ

ಪವರ್​ ಗ್ರಿಡ್- ಟಾಟಾ ಪ್ರಾಜೆಕ್ಟ್ ಹಗರಣದಲ್ಲಿ ಪವರ್​ ಗ್ರಿಡ್​ನ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಎಸ್​. ಝಾ ಸೇರಿದಂತೆ ಇತರ ಐವರನ್ನು ಸಿಬಿಐ ಬಂಧಿಸಿದೆ.

Power Grid- Tata Case: ಲಂಚ ಪ್ರಕರಣದಲ್ಲಿ ಪವರ್​ ಗ್ರಿಡ್​ನ ಪ್ರಮುಖ ಅಧಿಕಾರಿ ಸೇರಿ ಇತರ ಐವರನ್ನು ಬಂಧಿಸಿದ ಸಿಬಿಐ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Jul 07, 2022 | 4:53 PM

Share

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ.ಎಸ್​.ಝಾ ಮತ್ತು ಟಾಟಾ ಪವರ್ ಪ್ರಾಜೆಕ್ಟ್​ನ ಐವರು ಅಧಿಕಾರಿಗಳನ್ನು ಕೇಂದ್ರೀಯ ತನಿಖಾ ದಳದಿಂದ (CBI) ಗುರುವಾರದಂದು ಬಂದಿಸಲಾಗಿದೆ. ಲಂಚದ ಪ್ರಕರಣದಲ್ಲಿ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ದೇಶರಾಜ್ ಪಾಠಕ್ ಮತ್ತು ಸಹಾಯಕ ಉಪಾಧ್ಯಕ್ಷ ಆರ್​.ಎನ್. ಸಿಂಗ್​ ಅವರನ್ನು ಸಹ ಬಂಧನ ಮಾಡಲಾಗಿದೆ. ನಾರ್ಥ್ ಈಸ್ಟರ್ನ್ ರೀಜನಲ್ ಪವರ್ ಸಿಸ್ಟಮ್ ಇಂಪ್ರೂವ್​ಮೆಂಟ್ ಪ್ರಾಜೆಕ್ಟ್​ನಲ್ಲಿ ಪವರ್​ಗ್ರಿಡ್ ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರಿಗಳನ್ನು ಬಂಧಿಸಲಾಗಿದೆ. ನವದೆಹಲಿ, ಗುರುಗ್ರಾಮ್, ನೋಯ್ಡಾ ಮತ್ತು ಘಾಜಿಯಾಬಾದ್​​ನಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ವರದಿಗಳ ಪ್ರಕಾರ, ಶೋಧ ಕಾರ್ಯಾಚರಣೆ ವೇಳೆಯಲ್ಲಿ ಬಿ.ಎಸ್​. ಝಾ ಅವರಿಗೆ ಸೇರಿದ ಸ್ಥಳದಿಂದ 93 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಸದ್ಯಕ್ಕೆ ಝಾ ಅವರು ಇಟಾನಗರ್​ನಲ್ಲಿ ಪೋಸ್ಟಿಂಗ್​ನಲ್ಲಿದ್ದಾರೆ. ಅಕ್ರಮ ಪಾವತಿ ಪಡೆದಿದ್ದರ ಬದಲಿಯಾಗಿ ಝಾ ಅವರು ಟಾಟಾ ಪ್ರಾಜೆಕ್ಟ್​ಗಳಿಗೆ ವಿಶೇಷವಾಗಿ ಅನುಕೂಲ ಮಾಡಿಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಆರೋಪದ ಮೇಲೆ ಬಂಧಿಸಲಾದ ಆರು ಆರೋಪಿಗಳನ್ನು ಗುರುವಾರದಂದು ಪಂಚಕುಲ ಕೋರ್ಟ್​ ಮುಂದೆ ಹಾಜರು ಮಾಡಲಾಗುವುದು.

ಪಿಟಿಐ ವರದಿ ಮಾಡಿರುವಂತೆ, ತನಿಖಾ ದಳವು ಝಾ ಅವರ ಮೇಲೆ ಕಣ್ಣಿರಿಸಿತ್ತು. ಅದಕ್ಕೂ ಮುನ್ನ ಸಿಕ್ಕ ವಿದ್ಯಮಾನದ ಪ್ರಕಾರ, ಟಾಟಾ ಪ್ರಾಜೆಕ್ಟ್ಸ್ ಮತ್ತು ಇತರ ಕಂಪೆನಿಗಳ ಅಧಿಕಾರಿಗಳಿಂದ ರುಷುವತ್ತು ಪಡೆದ ಝಾ, ವಿವಿಧ ಕೆಲಸಗಳಿಗೆ ಅನುಮತಿ ನೀಡುತ್ತಿದ್ದರು. ಎಲ್ಲೆಲ್ಲಿ ಅಕ್ರಮ ಪಾವತಿಯನ್ನು ಮಾಡಲಾಗಿತ್ತೋ ಅಲ್ಲೆಲ್ಲ ಕೇಂದ್ರೀಯ ತನಿಖಾ ದಳ ಬುಧವಾರದಂದು ಅಲ್ಲಿ ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿತ್ತು.

ಇದನ್ನೂ ಓದಿ: 34,615 ಕೋಟಿ ರೂಪಾಯಿ ವಂಚನೆ: ಡಿಎಚ್​ಎಫ್​ಎಲ್​, ಕಪಿಲ್- ಧೀರಜ್ ವಾಧ್ವಾನ್ ವಿರುದ್ಧ ಸಿಬಿಐ ಪ್ರಕರಣ

Published On - 4:53 pm, Thu, 7 July 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!