AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Power Grid- Tata Case: ಲಂಚ ಪ್ರಕರಣದಲ್ಲಿ ಪವರ್​ ಗ್ರಿಡ್​ನ ಪ್ರಮುಖ ಅಧಿಕಾರಿ ಸೇರಿ ಇತರ ಐವರನ್ನು ಬಂಧಿಸಿದ ಸಿಬಿಐ

ಪವರ್​ ಗ್ರಿಡ್- ಟಾಟಾ ಪ್ರಾಜೆಕ್ಟ್ ಹಗರಣದಲ್ಲಿ ಪವರ್​ ಗ್ರಿಡ್​ನ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಎಸ್​. ಝಾ ಸೇರಿದಂತೆ ಇತರ ಐವರನ್ನು ಸಿಬಿಐ ಬಂಧಿಸಿದೆ.

Power Grid- Tata Case: ಲಂಚ ಪ್ರಕರಣದಲ್ಲಿ ಪವರ್​ ಗ್ರಿಡ್​ನ ಪ್ರಮುಖ ಅಧಿಕಾರಿ ಸೇರಿ ಇತರ ಐವರನ್ನು ಬಂಧಿಸಿದ ಸಿಬಿಐ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Jul 07, 2022 | 4:53 PM

Share

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ.ಎಸ್​.ಝಾ ಮತ್ತು ಟಾಟಾ ಪವರ್ ಪ್ರಾಜೆಕ್ಟ್​ನ ಐವರು ಅಧಿಕಾರಿಗಳನ್ನು ಕೇಂದ್ರೀಯ ತನಿಖಾ ದಳದಿಂದ (CBI) ಗುರುವಾರದಂದು ಬಂದಿಸಲಾಗಿದೆ. ಲಂಚದ ಪ್ರಕರಣದಲ್ಲಿ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ದೇಶರಾಜ್ ಪಾಠಕ್ ಮತ್ತು ಸಹಾಯಕ ಉಪಾಧ್ಯಕ್ಷ ಆರ್​.ಎನ್. ಸಿಂಗ್​ ಅವರನ್ನು ಸಹ ಬಂಧನ ಮಾಡಲಾಗಿದೆ. ನಾರ್ಥ್ ಈಸ್ಟರ್ನ್ ರೀಜನಲ್ ಪವರ್ ಸಿಸ್ಟಮ್ ಇಂಪ್ರೂವ್​ಮೆಂಟ್ ಪ್ರಾಜೆಕ್ಟ್​ನಲ್ಲಿ ಪವರ್​ಗ್ರಿಡ್ ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರಿಗಳನ್ನು ಬಂಧಿಸಲಾಗಿದೆ. ನವದೆಹಲಿ, ಗುರುಗ್ರಾಮ್, ನೋಯ್ಡಾ ಮತ್ತು ಘಾಜಿಯಾಬಾದ್​​ನಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ವರದಿಗಳ ಪ್ರಕಾರ, ಶೋಧ ಕಾರ್ಯಾಚರಣೆ ವೇಳೆಯಲ್ಲಿ ಬಿ.ಎಸ್​. ಝಾ ಅವರಿಗೆ ಸೇರಿದ ಸ್ಥಳದಿಂದ 93 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಸದ್ಯಕ್ಕೆ ಝಾ ಅವರು ಇಟಾನಗರ್​ನಲ್ಲಿ ಪೋಸ್ಟಿಂಗ್​ನಲ್ಲಿದ್ದಾರೆ. ಅಕ್ರಮ ಪಾವತಿ ಪಡೆದಿದ್ದರ ಬದಲಿಯಾಗಿ ಝಾ ಅವರು ಟಾಟಾ ಪ್ರಾಜೆಕ್ಟ್​ಗಳಿಗೆ ವಿಶೇಷವಾಗಿ ಅನುಕೂಲ ಮಾಡಿಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಆರೋಪದ ಮೇಲೆ ಬಂಧಿಸಲಾದ ಆರು ಆರೋಪಿಗಳನ್ನು ಗುರುವಾರದಂದು ಪಂಚಕುಲ ಕೋರ್ಟ್​ ಮುಂದೆ ಹಾಜರು ಮಾಡಲಾಗುವುದು.

ಪಿಟಿಐ ವರದಿ ಮಾಡಿರುವಂತೆ, ತನಿಖಾ ದಳವು ಝಾ ಅವರ ಮೇಲೆ ಕಣ್ಣಿರಿಸಿತ್ತು. ಅದಕ್ಕೂ ಮುನ್ನ ಸಿಕ್ಕ ವಿದ್ಯಮಾನದ ಪ್ರಕಾರ, ಟಾಟಾ ಪ್ರಾಜೆಕ್ಟ್ಸ್ ಮತ್ತು ಇತರ ಕಂಪೆನಿಗಳ ಅಧಿಕಾರಿಗಳಿಂದ ರುಷುವತ್ತು ಪಡೆದ ಝಾ, ವಿವಿಧ ಕೆಲಸಗಳಿಗೆ ಅನುಮತಿ ನೀಡುತ್ತಿದ್ದರು. ಎಲ್ಲೆಲ್ಲಿ ಅಕ್ರಮ ಪಾವತಿಯನ್ನು ಮಾಡಲಾಗಿತ್ತೋ ಅಲ್ಲೆಲ್ಲ ಕೇಂದ್ರೀಯ ತನಿಖಾ ದಳ ಬುಧವಾರದಂದು ಅಲ್ಲಿ ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿತ್ತು.

ಇದನ್ನೂ ಓದಿ: 34,615 ಕೋಟಿ ರೂಪಾಯಿ ವಂಚನೆ: ಡಿಎಚ್​ಎಫ್​ಎಲ್​, ಕಪಿಲ್- ಧೀರಜ್ ವಾಧ್ವಾನ್ ವಿರುದ್ಧ ಸಿಬಿಐ ಪ್ರಕರಣ

Published On - 4:53 pm, Thu, 7 July 22

Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ