AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳ ಪರಿಣಾಮಕಾರಿ ಜಾರಿ: ಪ್ರಧಾನಿ ಮೋದಿ, ‘ಪ್ರಗತಿ’ ಪರಿಣಾಮ ಗುರುತಿಸಿದ ಆಕ್ಸ್​ಫರ್ಡ್ ಅಧ್ಯಯನ

PRAGATI platform for digital governance: ಭಾರತದಲ್ಲಿ ಪ್ರಮುಖ ಹಾಗೂ ಕ್ಲಿಷ್ಟ ಮೂಲಸೌಕರ್ಯ ಯೋಜನೆಗಳ ಪರಿಣಾಮಕಾರಿ ಜಾರಿಗೆ ‘ಪ್ರಗತಿ’ ಪ್ರಮುಖ ಪಾತ್ರ ವಹಿಸಿದೆ. ಆಕ್ಸ್​ಫರ್ಡ್ ಯೂನಿವರ್ಸಿಟಿ ಮತ್ತು ಗೇಟ್ಸ್ ಫೌಂಡೇಶನ್ ಭಾರತದಲ್ಲಿ ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳ ಪ್ರಗತಿ ಬಗ್ಗೆ ಅಧ್ಯಯನ ಮಾಡಿ ‘ಪ್ರಗತಿ’ ಪ್ಲಾಟ್​ಫಾರ್ಮ್​ನ ಪಾತ್ರವನ್ನು ಗುರುತಿಸಿದೆ. ಬೆಂಗಳೂರು ಮೆಟ್ರೋ ರೈಲು ಸೇರಿದಂತೆ ದೇಶದ ವಿವಿಧ ಯೋಜನೆಗಳನ್ನು ಕೇಸ್ ಸ್ಟಡಿಯಾಗಿ ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದೆ.

ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳ ಪರಿಣಾಮಕಾರಿ ಜಾರಿ: ಪ್ರಧಾನಿ ಮೋದಿ, ‘ಪ್ರಗತಿ’ ಪರಿಣಾಮ ಗುರುತಿಸಿದ ಆಕ್ಸ್​ಫರ್ಡ್ ಅಧ್ಯಯನ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 02, 2024 | 7:55 PM

Share

ನವದೆಹಲಿ, ಡಿಸೆಂಬರ್ 2: ಭಾರತದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಮೂಲಸೌಕರ್ಯ ಯೋಜನೆಗಳನ್ನು ಕಳೆದ ಕೆಲ ವರ್ಷಗಳಲ್ಲಿ ಪೂರ್ಣಗೊಳಿಸಿದೆ. ಇನ್ನೂ ಹಲವು ಯೋಜನೆಗಳು ಕ್ಷಿಪ್ರ ವೇಗದಲ್ಲಿ ಪ್ರಗತಿಯಲ್ಲಿವೆ. ಇದೆಲ್ಲವೂ ಸಾಧ್ಯವಾಗಿದ್ದು ಪ್ರಗತಿ (PRAGATI: Pro-active Governance and Timely Implementation) ಎನ್ನುವ ಡಿಜಿಟಲ್ ಗವರ್ನೆನ್ಸ್ ಪ್ಲಾಟ್​ಫಾರ್ಮ್​ನಿಂದ. ಈ ವಿಚಾರವನ್ನು ಆಕ್ಸ್​ಫರ್ಡ್ ಯೂನಿವರ್ಸಿಟಿ ಮತ್ತು ಗೇಟ್ಸ್ ಫೌಂಡೇಶನ್​ನಿಂದ ನಡೆದ ಜಂಟಿ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಈ ಅಧ್ಯಯನದ ವರದಿಯನ್ನು ಇಂದು ಸೋಮವಾರ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ 201 ಬಿಲಿಯನ್ ಡಾಲರ್ ಮೌಲ್ಯದ ಪ್ರಮುಖ ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳಿಗೆ ವೇಗದ ಸ್ಪರ್ಶನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ‘ಪ್ರಗತಿ’ ಪ್ಲಾಟ್​ಫಾರ್ಮ್ ಕಾರಣವಾಗಿವೆ ಎಂದು ಈ ವರದಿಯು ಎತ್ತಿ ತೋರಿಸಿದೆ.

‘ಒಂಬತ್ತು ವರ್ಷದ ಹಿಂದೆ ಪ್ರಗತಿ ಪ್ಲಾಟ್​ಫಾರ್ಮ್​ ಶುರುವಾದಾಗ, ಮೂಲಸೌಕರ್ಯ ಅಭಿವೃದ್ಧಿಗೊಳಿಸುವ ಬಹಳ ಕಠಿಣ ಸವಾಲು ಮುಂದಿತ್ತು. 2023ರ ಜೂನ್​ನಲ್ಲಿ 17.05 ಲಕ್ಷ ಕೋಟಿ ರೂ ಮೌಲ್ಯದ 340 ಯೋಜನೆಗಳು ಪ್ರಗತಿ ಪರಾಮರ್ಶೆಗೆ ಒಳಪಟ್ಟಿವೆ. ಖುದ್ದು ಪ್ರಧಾನಿ ಮೋದಿ ಅವರೇ ಈ ಪ್ರಗತಿ ವಿಚಾರದಲ್ಲಿ ಮುತುವರ್ಜಿ ತೋರಿರುವುದು ಈ ಯಶಸ್ಸಿಗೆ ಕಾರಣ’ ಎಂದು ವರದಿಯಲ್ಲಿ ಶ್ಲಾಘಿಸಲಾಗಿದೆ.

ಇದನ್ನೂ ಓದಿ: ಈಶಾನ್ಯ ರಾಜ್ಯಗಳ ಎಂಟು ಸ್ಥಳಗಳನ್ನು ಅದ್ಭುತ ಪ್ರವಾಶೀ ತಾಣಗಳಾಗಿ ಅಭಿವೃದ್ಧಿ: ಕೇಂದ್ರದ ಯೋಜನೆ

ಆಕ್ಸ್​ಫರ್ಡ್ ಯೂನಿವರ್ಸಿಟಿ ಮತ್ತು ಗೇಟ್ಸ್ ಫೌಂಡೇಶನ್ ಈ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದೆ. ಪ್ರಗತಿ ಪರಿಣಾಮವಾಗಿ ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳು ಹೇಗೆ ಬೆಳವಣಿಗೆ ಹೊಂದಿವೆ ಎನ್ನುವುದರ ಕೇಸ್ ಸ್ಟಡಿಯನ್ನು ಈ ವರದಿಯಲ್ಲಿ ಮಂಡಿಸಲಾಗಿದೆ. ಬೆಂಗಳೂರಿನ ಮೆಟ್ರೋ ರೈಲು ಯೋಜನೆ, ನವಿ ಮುಂಬೈ ಏರ್ಪೋರ್ಟ್, ಜಮ್ಮು ಉಧಂಪುರ್ ಶ್ರೀನಗರ್ ಬಾರಾಮುಲ್ಲಾ ರೈಲು ಲಿಂಕ್ ಇತ್ಯಾದಿ ಹಲವು ಯೋಜನೆಗಳ ಕೇಸ್ ಸ್ಟಡಿಯನ್ನು ನೀಡಲಾಗಿದೆ.

2015ರಲ್ಲಿ ಆರಂಭವಾದ ಪ್ರಗತಿಯು ಪರಿವೇಶ್, ಪಿಎಂ ಗತಿ ಶಕ್ತಿ, ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ ಮೊದಲಾದ ಇತರ ಸರ್ಕಾರೀ ಡಿಜಿಟಲ್ ಪ್ಲಾಟ್​ಫಾರ್ಮ್​ಗಳೊಂದಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಬಹಳ ಸಂಕೀರ್ಣವಾಗಿರುವ ಮತ್ತು ಪ್ರಮುಖವಾಗಿರುವ ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳ ವಿಚಾರದಲ್ಲಿ ಮಲ್ಟಿ ಪ್ಲಾಟ್​ಫಾರ್ಮ್​ಗಳ ಸಹಯೋಗ ಅವಶ್ಯಕತೆ ಇರುತ್ತದೆ.

ಈ ವರದಿಯಲ್ಲಿ ಪ್ರಗತಿ ಜೊತೆಗೆ ಪಿಎಂ ಗತಿ ಶಕ್ತಿ ಇತ್ಯಾದಿ ಇತರ ಪ್ಲಾಟ್​ಫಾರ್ಮ್​ಗಳು ಯಾವುದೇ ಯೋಜನೆಯ ಜಾರಿಗೆ ಎಷ್ಟು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪ್ರಕರಣಗಳ ಸಹಿತ ಈ ವರದಿಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಬೆಳೆ ತ್ಯಾಜ್ಯ ನಿರ್ವಹಣೆಗೆ ಸರ್ಕಾರದಿಂದ 3,623 ಕೋಟಿ ರೂ ವೆಚ್ಚ; ಪಂಜಾಬ್, ಹರ್ಯಾಣ ರಾಜ್ಯಕ್ಕೆ ಹೆಚ್ಚಿನ ವ್ಯಯ

ಬೆಂಗಳೂರಿನ ಮೆಟ್ರೋ ರೈಲು ಪ್ರಾಜೆಕ್ಟ್ ಬಗ್ಗೆ ಪ್ರಸ್ತಾಪಿಸಿದ ಈ ವರದಿಯು, ಯೋಜನೆಗೆ ಭೂಮಿ ಪಡೆಯುವುದು ಬಹಳ ದೊಡ್ಡ ಸವಾಲಾಗಿತ್ತು ಎಂಬುದನ್ನು ಹೇಳಿದೆ. ಈ ಯೋಜನೆಯ ಎರಡು ಹಂತಗಳನ್ನು ಪೂರ್ಣಗೊಳಿಸಲಾಗಿದೆ. ಮೂರನೇ ಹಂತವು 2028ಕ್ಕೆ ಮುಗಿಯುವ ಗುರಿ ಇದೆ. ಈ ಮೆಟ್ರೋ ರೈಲಿನಿಂದಾಗಿ ಬೆಂಗಳೂರು ನಗರದ ವಾಹನ ದಟ್ಟಣೆ ಕಡಿಮೆ ಆಗಲು ಸಹಕಾರಿಯಾಗಿರುವುದನ್ನು ಇದು ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:48 pm, Mon, 2 December 24

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ