AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NDTV: ಎನ್​ಡಿಟಿವಿಯಲ್ಲಿ ಪ್ರಣಯ್ ರಾಯ್, ರಾಧಿಕಾ ರಾಯ್ ಆಡಳಿತ ಸಂಪೂರ್ಣ ಅಂತ್ಯ; ನಿರ್ದೇಶಕರ ಮಂಡಳಿಗೆ ರಾಜೀನಾಮೆ

ಅದಾನಿ ಎಂಟರ್​​ಪ್ರೈಸಸ್ ಸದ್ಯ ಅಂಗಸಂಸ್ಥೆ ಆರ್​​ಆರ್​ಪಿಆರ್​ ಹೋಲ್ಡಿಂಗ್ಸ್ ಮತ್ತು ವಿಶಪ್ರಧಾನ್ ಕಮರ್ಷಿಯಲ್ ಮೂಲಕ ಎನ್​​ಡಿಟಿವಿ ಒಡೆತನ ಹೊಂದಿದೆ. ರಾಯ್ ದಂಪತಿ ಬಳಿ ಶೇಕಡಾ 2.5ರ ಪಾಲು ಇರಲಿದೆ ಎಂದು ಷೇರುಪೇಟೆಯ ಪ್ರಕಟಣೆ ತಿಳಿಸಿದೆ.

NDTV: ಎನ್​ಡಿಟಿವಿಯಲ್ಲಿ ಪ್ರಣಯ್ ರಾಯ್, ರಾಧಿಕಾ ರಾಯ್ ಆಡಳಿತ ಸಂಪೂರ್ಣ ಅಂತ್ಯ; ನಿರ್ದೇಶಕರ ಮಂಡಳಿಗೆ ರಾಜೀನಾಮೆ
ಪ್ರಣಯ್ ರಾಯ್Image Credit source: PTI
TV9 Web
| Edited By: |

Updated on: Dec 31, 2022 | 11:18 AM

Share

ನವದೆಹಲಿ: ಎನ್​ಡಿಟಿವಿಯಲ್ಲಿ (NDTV) ಅದರ ಸ್ಥಾಪಕರಾದ ಪ್ರಣಯ್ ರಾಯ್ (Prannoy Roy) ಮತ್ತು ರಾಧಿಕಾ ರಾಯ್ ಅವರ ಆಡಳಿತ ಸಂಪೂರ್ಣ ಅಂತ್ಯಗೊಂಡಿದೆ. ಸಂಸ್ಥೆಯ ಶೇಕಡಾ 64.71ರಷ್ಟು ಷೇರುಗಳು ಉದ್ಯಮಿ ಗೌತಮ್ ಅದಾನಿ ಪಾಲಾದ ಬೆನ್ನಲ್ಲೇ ಇಬ್ಬರೂ ಸಹ ನಿರ್ದೇಶಕರ ಮಂಡಳಿಗೂ ರಾಜೀನಾಮೆ ನೀಡಿದ್ದಾರೆ. ರಾಯ್ ದಂಪತಿ ಜತೆಗೆ ಇತರ ನಾಲ್ವರು ಸ್ವತಂತ್ರ ನಿರ್ದೇಶಕರೂ ರಾಜೀನಾಮೆ ನೀಡಿದ್ದಾರೆ ಎಂದು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಎನ್​​ಡಿಟಿವಿ ತಿಳಿಸಿದೆ. ಶುಕ್ರವಾರವಷ್ಟೇ ಅದಾನಿ ಸಮೂಹವು ಎನ್​ಡಿಟಿವಿ ಒಡೆತನವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅದಾನಿ ಎಂಟರ್​​ಪ್ರೈಸಸ್ ಸದ್ಯ ಅಂಗಸಂಸ್ಥೆ ಆರ್​​ಆರ್​ಪಿಆರ್​ ಹೋಲ್ಡಿಂಗ್ಸ್ ಮತ್ತು ವಿಶಪ್ರಧಾನ್ ಕಮರ್ಷಿಯಲ್ ಮೂಲಕ ಎನ್​​ಡಿಟಿವಿ ಒಡೆತನ ಹೊಂದಿದೆ. ರಾಯ್ ದಂಪತಿ ಬಳಿ ಶೇಕಡಾ 2.5ರ ಪಾಲು ಇರಲಿದೆ ಎಂದು ಷೇರುಪೇಟೆಯ ಪ್ರಕಟಣೆ ತಿಳಿಸಿದೆ.

‘ಕಂಪನಿಯಲ್ಲಿ ನಾನು ಹೊಂದಿರುವ ಪ್ರವರ್ತಕ ಸ್ಥಾನವನ್ನು ತೆರವುಗೊಳಿಸಿ ‘ಪಬ್ಲಿಕ್’ ಕೆಟಗರಿಯಲ್ಲಿ ಪರಿಗಣಿಸುವಂತೆ ವಿನಂತಿಸುತ್ತೇನೆ. ಸದ್ಯ ಶೇಕಡಾ 2.5ರಷ್ಟು ಷೇರುಗಳನ್ನು ಮಾತ್ರ ಹೊಂದಿದ್ದೇನೆ. ನಾನೀಗ ಮ್ಯಾನೇಜ್​​ಮೆಂಟ್ ವ್ಯವಹಾರಗಳಲ್ಲಿ ಭಾಗಿಯಾಗುತ್ತಿಲ್ಲ. ನಿರ್ದೇಶಕರನ್ನು ನೇಮಕ ಮಾಡುವ ಅಥವಾ ಇತರ ಯಾವುದೇ ಅಧಿಕಾರವನ್ನು ಹೊಂದಿಲ್ಲ’ ಎಂದು ಪ್ರಣಯ್ ರಾಯ್ ಷೇರುಪೇಟೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: NDTV: ಎನ್​ಡಿಟಿವಿ ನಿರ್ದೇಶಕರ ಮಂಡಳಿಗೆ ಪ್ರಣಯ್ ರಾಯ್, ರಾಧಿಕಾ ರಾಯ್ ರಾಜೀನಾಮೆ

ಒಂದು ತಿಂಗಳ ಹಿಂದಷ್ಟೇ ಎನ್​ಡಿಟಿವಿಯ ಆಡಳಿತ ಮಂಡಳಿಗೆ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಕಳೆದ ತಿಂಗಳಷ್ಟೇ ರಾಜೀನಾಮೆ ನೀಡಿದ್ದರು. ನವೆಂಬರ್ 29ರಂದು ಆರ್​ಆರ್​ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಎನ್​ಡಿವಿಯ ಶೇಕಡಾ 29.18 ಪಾಲು ತನ್ನದಾಗಿಸಿಕೊಂಡಿತ್ತು. ನಂತರದ ಹಂತದಲ್ಲಿ ಉಳಿದ ಷೇರುಗಳನ್ನು ಖರೀದಿಸಿತ್ತು. ಆಗಸ್ಟ್ 23ರಂದು ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಎನ್​ಡಿಟಿವಿಯ ಶೇಕಡಾ 29.18ರಷ್ಟು ಷೇರುಗಳನ್ನು ಖರೀದಿಸಿತ್ತು. ಇನ್ನೂ ಶೇಕಡಾ 26ರಷ್ಟು ಷೇರುಗಳ ಖರೀದಿಗೆ ಆಸಕ್ತಿ ಹೊಂದಿರುವುದಾಗಿ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಆಗಲೇ ತಿಳಿಸಿತ್ತು. ನವೆಂಬರ್ 26ರಂದು ಅದಾನಿ ಸಮೂಹ ಷೇರು ಖರೀದಿಗೆ ಬಹಿರಂಗ ಆಫರ್ ಘೋಷಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ