AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI income: ಬ್ಯಾಂಕುಗಳನ್ನು ನಿಯಂತ್ರಿಸುವ ಆರ್​​ಬಿಐಗೆ ಆದಾಯ ಎಲ್ಲಿಂದ ಬರುತ್ತೆ? ಇಲ್ಲಿದೆ ಡೀಟೇಲ್ಸ್

Income of RBI: ಆರ್​​​ಬಿಐ ಕಳೆದ ಹಣಕಾಸು ವರ್ಷ ಎರಡು ಲಕ್ಷ ಕೋಟಿ ರೂಗಿಂತ ಹೆಚ್ಚು ಮೊತ್ತವನ್ನು ಸರ್ಕಾರಕ್ಕೆ ಡಿವಿಡೆಂಡ್ ಆಗಿ ನೀಡಿತ್ತು. ಈ ವರ್ಷ ಇನ್ನೂ ಹೆಚ್ಚಿನ ಮೊತ್ತ ಕೊಡುವ ನಿರೀಕ್ಷೆ ಇದೆ. ಕಮರ್ಷಿಯಲ್ ಬ್ಯಾಂಕ್ ಅಲ್ಲದ ಆರ್​​ಬಿಐಗೆ ಇಷ್ಟೊಂದು ಆದಾಯ ಮತ್ತು ಲಾಭ ಎಲ್ಲಿಂದ ಬರುತ್ತದೆ? ಈ ಬಗ್ಗೆ ಮಾಹಿತಿ ಇಲ್ಲಿದೆ...

RBI income: ಬ್ಯಾಂಕುಗಳನ್ನು ನಿಯಂತ್ರಿಸುವ ಆರ್​​ಬಿಐಗೆ ಆದಾಯ ಎಲ್ಲಿಂದ ಬರುತ್ತೆ? ಇಲ್ಲಿದೆ ಡೀಟೇಲ್ಸ್
ಭಾರತೀಯ ರಿಸರ್ವ್ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 23, 2025 | 2:31 PM

Share

ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank of India) ಭಾರತದ ಬ್ಯಾಂಕಿಂಗ್ ನಿಯಂತ್ರಕ ಸಂಸ್ಥೆ. ಇವತ್ತು ಸರ್ಕಾರಕ್ಕೆ ಅದು 2024-25ರ ಹಣಕಾಸು ವರ್ಷದ ತನ್ನ ಡಿವಿಡೆಂಡ್ ಅನ್ನು ನೀಡಲಿದೆ. ಹಿಂದಿನ ವರ್ಷ (2023-24ರಲ್ಲಿ) 2.1 ಲಕ್ಷ ಕೋಟಿ ರೂ ಹಣವನ್ನು ಸರ್ಕಾರಕ್ಕೆ ಕೊಟ್ಟಿತ್ತು. ಅದು ಸಾರ್ವಕಾಲಿಕ ದಾಖಲೆ ಮೊತ್ತವಾಗಿದೆ. 2022-23ರ ವರ್ಷದಲ್ಲಿ ಕೊಟ್ಟಿರುವುದಕ್ಕಿಂತ ಎರಡು ಪಟ್ಟು ಹೆಚ್ಚಿನ ಮೊತ್ತ ಅದು. ಈ ವರ್ಷ ಸರ್ಕಾರಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇರುವುದರಿಂದ ರಿಸರ್ವ್ ಬ್ಯಾಂಕ್ ಇನ್ನೂ ಹೆಚ್ಚಿನ ಮೊತ್ತವನ್ನು ಕೊಟ್ಟರೆ ಅಚ್ಚರಿ ಇರಲ್ಲ.

ಆರ್​​ಬಿಐನಿಂದ ಸರ್ಕಾರಕ್ಕೆ ಯಾವ ಆಧಾರದಲ್ಲಿ ಡಿವಿಡೆಂಡ್ ನೀಡುತ್ತದೆ?

ಲಿಸ್ಟೆಡ್ ಕಂಪನಿಗಳು ತಮ್ಮ ಆದಾಯದಲ್ಲಿ ಇಂತಿಷ್ಟು ಭಾಗವನ್ನು ಡಿವಿಡೆಂಡ್ ಆಗಿ ಘೋಷಿಸುತ್ತವೆ. ಕಂಪನಿಯ ನಿರ್ದೇಶಕರ ಮಂಡಳಿ ಇದನ್ನು ನಿರ್ಧರಿಸುತ್ತದೆ. ಪ್ರತೀ ಷೇರಿಗೆ ಡಿವಿಡೆಂಡ್ ನಿಗದಿತವಾಗಿರುತ್ತದೆ. ಲಿಸ್ಟೆಡ್ ಕಂಪನಿಯಲ್ಲವಾದರೂ ಆರ್​​ಬಿಐ ತನ್ನ ಆದಾಯದಲ್ಲಿ ಇಂತಿಷ್ಟು ಭಾಗವನ್ನು ಡಿವಿಡೆಂಡ್ ಆಗಿ ಸರ್ಕಾರಕ್ಕೆ ನೀಡುತ್ತದೆ. ಎಷ್ಟು ಡಿವಿಡೆಂಡ್ ಎಂದು ನಿರ್ಧರಿಸಲು ಇಸಿಎಫ್ ಸೂತ್ರವನ್ನು ಅನುಸರಿಸಲಾಗುತ್ತದೆ.

2019ರಲ್ಲಿ ಪರಿಷ್ಕರಿಸಲಾದ ಎಕನಾಮಿಕ್ ಕ್ಯಾಪಿಟಲ್ ಫ್ರೇಮ್​​ವರ್ಕ್ ಪ್ರಕಾರ ಆರ್​​ಬಿಐ ಸರ್ಕಾರಕ್ಕೆ ಡಿವಿಡೆಂಡ್ ಕೊಡುತ್ತದೆ. ತನ್ನ ಬ್ಯಾಲನ್ಸ್ ಶೀಟ್​ನಲ್ಲಿ ಶೇ. 5.5ರಿಂದ ಶೇ. 6.5ರಷ್ಟು ಮೊತ್ತವನ್ನು ರಿಸ್ಕ್ ಬಫರ್ ಆಗಿ ಇಟ್ಟುಕೊಳ್ಳುತ್ತದೆ. ಇನ್ನುಳಿದ ಹೆಚ್ಚುವರಿ ಮೊತ್ತವನ್ನು ಸರ್ಕಾರಕ್ಕೆ ನೀಡಲು ಪರಿಗಣಿಸಬಹುದು.

ಇದನ್ನೂ ಓದಿ: 1 ಬ್ಯಾರಲ್ ಕಚ್ಛಾ ತೈಲದಿಂದ ಪೆಟ್ರೋಲ್, ಡೀಸಲ್ ಸೇರಿ ಏನೆಲ್ಲಾ ತಯಾರಿಸಬಹುದು ಗೊತ್ತಾ?

ರಿಸರ್ವ್ ಬ್ಯಾಂಕ್​​ಗೆ ಆದಾಯ ಎಲ್ಲಿಂದ ಬರುತ್ತದೆ?

  • ಬಾಂಡ್​ಗಳು: ಸರ್ಕಾರ ವಿತರಿಸುವ ಗವರ್ನ್ಮೆಂಟ್ ಬಾಂಡ್, ಟ್ರೆಶರಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಆರ್​​ಬಿಐ ಖರೀದಿಸುತ್ತದೆ. ಅದರಲ್ಲಿ ಬಡ್ಡಿ ಸಿಗುತ್ತದೆ.
  • ಫಾರೆಕ್ಸ್: ಆರ್​​ಬಿಐ ವಿದೇಶೀ ವಿನಿಮಯ ಮೀಸಲು ನಿಧಿ ಇಟ್ಟುಕೊಳ್ಳುತ್ತದೆ. ಇದರಲ್ಲಿ ಡಾಲರ್, ಯೂರೋ ಇತ್ಯಾದಿ ಪ್ರಮುಖ ಕರೆನ್ಸಿಗಳು ಇರುತ್ತವೆ. ಚಿನ್ನವನ್ನೂ ಖರೀದಿಸುತ್ತದೆ. ಇವುಗಳಿಂದ ಆರ್​​ಬಿಐಗೆ ಲಾಭ ಸಿಗುತ್ತದೆ.
  • ಮುಕ್ತ ಮಾರುಕಟ್ಟೆ: ಸರ್ಕಾರಿ ಬಾಂಡ್ ಇತ್ಯಾದಿ ಸೆಕ್ಯೂರಿಟಿಗಳನ್ನು ಖರೀದಿಸುವುದು, ಮಾರುವುದರ ಮೂಲಕ ಆರ್​​ಬಿಐ ಆದಾಯ ಮಾಡುತ್ತದೆ.
  • ರಿಪೋ ಆದಾಯ: ರಿಪೋ ಮೂಲಕ ಬ್ಯಾಂಕುಗಳಿಗೆ ಆರ್​​ಬಿಐ ಸಾಲ ಕೊಡುತ್ತದೆ. ಇದರಲ್ಲಿ ಬಡ್ಡಿ ಆದಾಯ ಸಿಗುತ್ತದೆ.
  • ಸರ್ವಿಸ್ ಫೀ: ಸರ್ಕಾರಿ ಮತ್ತು ವಾಣಿಜ್ಯಾತ್ಮಕ ಬ್ಯಾಂಕುಗಳಿಗೆ ನೀಡುವ ಸಾಲ ನಿರ್ವಹಣೆ ಸೇವೆ ಇತ್ಯಾದಿ ಬ್ಯಾಂಕಿಂಗ್ ಸರ್ವಿಸ್​​ಗಳಿಗೆ ಆರ್​​ಬಿಐ ನಿರ್ದಿಷ್ಟ ಶುಲ್ಕ ವಿಧಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!