Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Personal Loan: ಎಸ್​ಬಿಐ ಯೋನೋ ಮೂಲಕ ಫಟಾಫಟ್​ ಪರ್ಸನಲ್ ಲೋನ್ ರಿಯಲ್ ಟೈಮ್ ಎಕ್ಸ್​ಪ್ರೆಸ್ ಕ್ರೆಡಿಟ್

ಯೋನೋ ಮೂಲಕ ರಿಯಲ್ ಟೈಮ್ ಎಕ್ಸ್​ಪ್ರೆಸ್ ಕ್ರೆಡಿಟ್ ನೀಡುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಘೋಷಣೆ ಮಾಡಿದೆ.

SBI Personal Loan: ಎಸ್​ಬಿಐ ಯೋನೋ ಮೂಲಕ ಫಟಾಫಟ್​ ಪರ್ಸನಲ್ ಲೋನ್ ರಿಯಲ್ ಟೈಮ್ ಎಕ್ಸ್​ಪ್ರೆಸ್ ಕ್ರೆಡಿಟ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 23, 2022 | 6:23 PM

ಸ್ಟೇಟ್ ಬ್ಯಾಂಕ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಸೋಮವಾರ ಘೋಷಣೆ ಮಾಡಿದ ಪ್ರಕಾರ, ಯೋನೋ ಪ್ಲಾಟ್​ಫಾರ್ಮ್​ನಲ್ಲಿ (Yono) ರಿಯಲ್ ಟೈಮ್ ಎಕ್ಸ್​ಪ್ರೆಸ್ ಕ್ರೆಡಿಟ್ ಪರಿಚಯಿಸುತ್ತಿದೆ. ಈ ಮೂಲಕ ಅರ್ಹ ಗ್ರಾಹಕರಿಗೆ 35 ಲಕ್ಷ ರೂಪಾಯಿ ತನಕ ವೈಯಕ್ತಿಕ ಸಾಲ (Personal Loan) ದೊರೆಯುತ್ತದೆ. ಬ್ಯಾಂಕ್ ತಿಳಿಸಿರುವ ಪ್ರಕಾರ, ಈ ಸಾಲದ ಉತ್ಪನ್ನವು ವೇತನದಾರ ಗ್ರಾಹಕರಿಗಾಗಿ ಇದೆ. ಎಕ್ಸ್​ಪ್ರೆಸ್ ಕ್ರೆಡಿಟ್ ಇದೀಗ ಡಿಜಿಟಲ್ ರೂಪದಲ್ಲಿ ಸಿಗುತ್ತಿದ್ದು, ಗ್ರಾಹಕರು ಯೋನೋ ಮೂಲಕ ಇದನ್ನು ಪಡೆಯಬಹುದು. ಇದು ಶೇ 100ರಷ್ಟು ಕಾಗದರಹಿತ ಆಗಿರುತ್ತದೆ. ಮೊದಲಿಂದ ಕೊನೆ ತನ ಎಂಟು ಹಂತದ ಪಯಣ ಆಗಿರಲಿದೆ ಮತ್ತು ಡಿಜಿಟಲ್ ಅನುಭವ ನೀಡಲಿದೆ.

ರಿಯಲ್ ಟೈಮ್ ಎಕ್ಸ್​ಪ್ರೆಸ್ ಸಾಲದ ಅಡಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ರಕ್ಷಣಾ ವಲಯದ ವೇತನದಾರ ಗ್ರಾಹಕರು ವೈಯಕ್ತಿಕ ಸಾಲ ಪಡೆಯುವ ಸಲುವಾಗಿ ಎಸ್​ಬಿಐ ಶಾಖೆಗೆ ಭೇಟಿ ನೀಡುವ ಅಗತ್ಯ ಇಲ್ಲ. ಕ್ರೆಡಿಟ್ ಪರಿಶೀಲನೆ, ಅರ್ಹತೆ, ವಿತರಣೆ ಮತ್ತು ದಾಖಲಾತಿಗಳ ಸಂಗ್ರಹ ಎಲ್ಲವೂ ರಿಯಲ್​ಟೈಮ್​ನಲ್ಲಿ ಡಿಜಿಟಲ್​ ಆಗಿ ಮುಗಿಯುತ್ತದೆ, ಎನ್ನಲಾಗಿದೆ.

ಎಸ್​ಬಿಐ ಅಧ್ಯಕ್ಷ ದಿನೇಶ್ ಖರ ಮಾತನಾಡಿ, ರಿಯಲ್ ಟೈಮ್ ಎಕ್ಸ್​ಪ್ರೆಸ್ ಕ್ರೆಡಿಟ್ ಸಾಲ ವ್ಯವಸ್ಥೆಯನ್ನು ರಿಯಲ್​ಟೈಮ್​ನಲ್ಲಿ ನಮ್ಮ ಅರ್ಹ ಗ್ರಾಹಕರಿಗೆ ಯೋನೋ ಮೂಲಕ ಪರಿಚಯಿಸುತ್ತಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ. ಈ ಎಕ್ಸ್​ಪ್ರೆಸ್ ಕ್ರೆಡಿಟ್ ಉತ್ಪನ್ನದ ಮೂಲಕ ಸಾಲ ಪ್ರಕ್ರಿಯೆಯಲ್ಲಿ ನಮ್ಮ ಗ್ರಾಹಕರಿಗೆ ಡಿಜಿಟಲ್, ತಡೆರಹಿತ ಮತ್ತು ಕಾಗದರಹಿತ ಅನುಭವವನ್ನು ದೊರಕಿಸುತ್ತದೆ. ನಾವು ಎಸ್​ಬಿಐನಲ್ಲಿ ಬ್ಯಾಂಕಿಂಗ್ ಸರಳಗೊಳಿಸಲು ನಿರಂತರವಾಗಿ ತಂತ್ರಜ್ಞಾನ ಮುಂಚೂಣಿಯ ವಿಸ್ತೃತ ಡಿಜಿಟಲ್​ ಬ್ಯಾಂಕಿಂಗ್ ಅನುಭವವನ್ನು ಗ್ರಾಹಕರಿಗೆ ಒದಗಿಸುತ್ತಿದ್ದೇವೆ, ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Electric Car Loan: ಎಸ್​ಬಿಐನಿಂದ ಎಲೆಕ್ಟ್ರಿಕ್ ಕಾರು ಸಾಲ ಶೇ 7.25 ಬಡ್ಡಿ ದರದಿಂದ ಆರಂಭ

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ