AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RentoMojo Hack: ಬೆಂಗಳೂರು ಮೂಲದ ರೆಂಟೋಮೋಜೋಗೆ ಹ್ಯಾಕರ್ಸ್ ದಾಳಿ; 1.5 ಲಕ್ಷ ಗ್ರಾಹಕರ ಬ್ಯಾಂಕ್ ಕಾರ್ಡ್, ಯುಪಿಐ ಮಾಹಿತಿ ಸೋರಿಕೆಯಾಗಿದೆಯಾ?

Database of RentoMojo Attacked by Hackers: ಬೆಂಗಳೂರು, ಮುಂಬೈ, ಪುಣೆ ಮತ್ತು ದೆಹಲಿಯಲ್ಲಿ 1.5 ಗ್ರಾಹಕರನ್ನು ಹೊಂದಿರುವ ಆನ್​ಲೈನ್ ರೆಂಟಲ್ ಕಂಪನಿ ರೆಂಟೋಮೋಜೋದ ಒಂದು ಡಾಟಾಬೇಸ್ ಹ್ಯಾಕ್ ಆಗಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಗ್ರಾಹಕರ ಹಣಕಾಸು ಮಾಹಿತಿಯ ಸೋರಿಕೆಯಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

RentoMojo Hack: ಬೆಂಗಳೂರು ಮೂಲದ ರೆಂಟೋಮೋಜೋಗೆ ಹ್ಯಾಕರ್ಸ್ ದಾಳಿ; 1.5 ಲಕ್ಷ ಗ್ರಾಹಕರ ಬ್ಯಾಂಕ್ ಕಾರ್ಡ್, ಯುಪಿಐ ಮಾಹಿತಿ ಸೋರಿಕೆಯಾಗಿದೆಯಾ?
ರೆಂಟೋಮೋಜೋ ಡಾಟಾಬೇಸ್​ನಲ್ಲಿ ಕಳ್ಳತನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 20, 2023 | 1:11 PM

Share

ಬೆಂಗಳೂರು: ಬೈಕ್, ಪೀಠೋಕರಣ ಇತ್ಯಾದಿಯನ್ನು ಜನರಿಗೆ ಬಾಡಿಗೆಯ ಮೇಲೆ ಕೊಡುವ ಆನ್​ಲೈನ್ ರೆಂಟಲ್ ಕಂಪನಿ ರೆಂಟೋಮೋಜೋದಲ್ಲಿ (RentoMojo) ಡಾಟಾ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ರೆಂಟೋಮೋಜೋ ಸಂಸ್ಥೆಯೇ ಈ ಸಂಗತಿಯನ್ನು ಹೊರಗೆಡವಿದ್ದು, ತಾನು ಪ್ರಾಧಿಕಾರಗಳ ಗಮನಕ್ಕೆ ತಂದಿದ್ದು, ತನಿಖೆ ಕೂಡ ಆಗುತ್ತಿದೆ ಎಂದು ಹೇಳಿದೆ. 2014ರಲ್ಲಿ ಆರಂಭವಾದ ರೆಂಟೋಮೋಜೋ ಬೆಂಳೂರು, ಮುಂಬೈ, ದೆಹಲಿ ಮತ್ತು ಪುಣೆ ನಗರಗಳಲ್ಲಿ ರೆಂಟಲ್ ಸೇವೆ ಒದಗಿಸುತ್ತಿದೆ. ಇದಕ್ಕೆ ಒಂದೂವರೆ ಲಕ್ಷದಷ್ಟು ಜನರು ಸಬ್​ಸ್ಕ್ರೈಬರ್ ಆಗಿದ್ದಾರೆ. ಈಗ ರೆಂಟೋಮೋಜೋದಲ್ಲಿ ಡಾಟಾ ಕಳ್ಳತನ (Data Breach) ಆಗಿರುವುದು ಈ ಒಂದೂವರೆ ಲಕ್ಷ ಮಂದಿಗೆ ಆತಂಕ ತಂದಿದೆ. ಆದರೆ, ಕಂಪನಿಯು ತನ್ನ ಸಬ್​ಸ್ಕ್ರೈಬರ್​ಗಳೆಲ್ಲರಿಗೂ ಇಮೇಲ್ ಕಳುಹಿಸಿದ್ದು, ತೀರಾ ಸೂಕ್ಷ್ಮ ಮಾಹಿತಿಗಳು ದುಷ್ಕರ್ಮಿಗಳ ಕೈಗೆ ಸಿಗುವುದಿಲ್ಲ ಎಂದು ಭರವಸೆ ನೀಡಿದೆ ಎನ್ನಲಾಗಿದೆ.

‘ನಮ್ಮ ಒಂದು ಡಾಟಾಬೇಸ್​ನಲ್ಲಿ ಅನಧಿಕೃತವಾಗಿ ಯಾರೋ ಪ್ರವೇಶಿಸಿರುವುದನ್ನು ನಮ್ಮ ತಂಡ ಇತ್ತೀಚೆಗೆ ಗಮನಿಸಿದೆ. ನಮ್ಮ ಗ್ರಾಹಕರ ಮಾಹಿತಿಯನ್ನು ಅನಧಿಕೃತವಾಗಿ ಪಡೆಯಲು ಇವರಿಗೆ ಸಾಧ್ಯವಾಗಿರುವಂತೆ ತೋರುತ್ತಿದೆ. ಇದರಲ್ಲಿ ಕ್ಲೌಡ್ ಕಾನ್ಫಿಗರೇಶನ್​ನಲ್ಲಿರುವ ಲೋಪವನ್ನು ಬಳಸಿ ಖಾಸಗಿಯಾಗಿ ಗುರುತಿಸಬಲ್ಲ ಡಾಟಾ ಕದ್ದಿರುವುದೂ ಒಳಗೊಂಡಿದೆ’ ಎಂದು ರೆಂಟೋಮೋಜೋ ತನ್ನ ಇಮೇಲ್​ನಲ್ಲಿ ತಿಳಿಸಿದೆ.

ರೆಂಟೋಮೋಜೋ ಗ್ರಾಹಕರ ಬ್ಯಾಂಕ್ ಕಾರ್ಡ್, ಯುಪಿಐ ಮಾಹಿತಿ ಸುರಕ್ಷಿತ?

ಗ್ರಾಹಕರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಇತ್ಯಾದಿ ಹಣಕಾಸು ಸಾಧನಗಳ ಮಾಹಿತಿಯನ್ನು ಹ್ಯಾಕರ್​ಗಳು ಕದಿಯಲು ಆಗುವುದಿಲ್ಲ. ತನ್ನ ಆ್ಯಪ್ ಮತ್ತು ಪೋರ್ಟಲ್​ನ ಡಾಟಾಬೇಸ್​ನಲ್ಲಿ ಈ ಯಾವುದೇ ಮಾಹಿತಿಯನ್ನು ಸಂಗ್ರಹಿಸಲಾಗುವುದಿಲ್ಲ. ಹೀಗಾಗಿ, ಡಾಟಾಬೇಸ್ ಹ್ಯಾಕ್ ಮಾಡಿದವರಿಗೆ ಜನರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಮಾಹಿತಿ ಗೊತ್ತಾಗುವುದಿಲ್ಲ ಎಂದು ರೆಂಟೋಮೋಜೋ ಸ್ಪಷ್ಟಪಡಿಸಿದೆ.

ಇದನ್ನೂ ಓದಿAkshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ, ಬೆಳ್ಳಿ ಹಬ್ಬ; ವಿವಿಧ ಅಂಗಡಿಗಳಲ್ಲಿ ಭರ್ಜರಿ ಡಿಸ್ಕೌಂಟ್, ಗೋಲ್ಡ್ ಕಾಯಿನ್ ಗಿಫ್ಟ್; ಇಲ್ಲಿದೆ ಡೀಟೇಲ್ಸ್

ರೆಂಟೋಮೋಜೋ ಗ್ರಾಹಕರನ್ನು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರಾ ಹ್ಯಾಕರ್ಸ್?

ರೆಂಟೋಮೋಜೋದ ಕೆಲ ಗ್ರಾಹಕರು ಡಾಟಾ ಕಳ್ಳತನದ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ರಾಜಕುಮಾರ್ ಎಂಬ ವ್ಯಕ್ತಿ, ತನಗೆ ಹ್ಯಾಕರ್​ಗಳು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ. ನನ್ನ ಖಾಸಗಿ ಮಾಹಿತಿ ಬಿಡುಗಡೆ ಮಾಡುವಂತೆ ಹ್ಯಾಕರ್ಸ್ ಬೆದರಿಸುತ್ತಿದ್ದಾರೆ ಎಂದು ಇವರು ಟ್ವೀಟ್ ಮಾಡಿದ್ದಾರೆ.

ರೋನಕ್ ಪಾಂಡ್ಯ ಎಂಬುವವರು, ಈ ಹ್ಯಾಕರ್ಸ್ ದಾಳಿಯಿಂದ ತನಗೆ ಯಾವುದೇ ರೀತಿಯ ನಷ್ಟವಾದರೂ ಅದನ್ನು ರೆಂಟೋಮೋಜೋ ಭರಿಸಬೇಕು. ತಮ್ಮ ಟ್ವೀಟ್ ಅನ್ನೇ ದೂರೆಂದು ಪರಿಗಣಿಸಬೇಕು ಎಂದು ಬರೆದಿದ್ದಾರೆ.

ಇದನ್ನೂ ಓದಿShare Trading: ಷೇರುಪೇಟೆ ಸಹವಾಸ ಬೇಡ ಅಂತ ಬಿಟ್ಟವರ ಸಂಖ್ಯೆ 9 ತಿಂಗಳಲ್ಲಿ 53 ಲಕ್ಷ; ಷೇರುಗಳಿಗೆ ಹೂಡಿಕೆಯೂ ಕಡಿಮೆ; ಎಲ್ಲಿ ಹರಿದುಹೋಗುತ್ತಿದೆ ದುಡ್ಡು?

ಗ್ರಾಹಕರ ದತ್ತಾಂಶ ಸುರಕ್ಷತೆಗೆ ರೆಂಟೋಮೋಜೋ ವಿವಿಧ ಕ್ರಮ

ತನ್ನ ಗ್ರಾಹಕರ ದತ್ತಾಂಶಗಳ ಸುರಕ್ಷತೆಗೆ ತಾನು ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿರುವುದಾಗಿ ರೆಂಟೋಮೋಜೋ ಹೇಳಿದೆ. ಯಾವ್ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇಲ್ಲಿದೆ:

  • ಡಾಟಾಬೇಸ್​ನಲ್ಲಿರುವ ಎಲ್ಲಾ ಮಾಹಿತಿಯನ್ನೂ ಎನ್​ಕ್ರಿಪ್ಟ್ ಮಾಡಲಾಗಿದೆ.
  • ಇಂಟೆಲಿಜೆಂಟ್ ಥ್ರೆಟ್ ಡಿಟೆಕ್ಷನ್, ಸೆನ್ಸಿಟಿವ್ ಡಾಟಾ ಡಿಸ್ಕವರಿ ಇತ್ಯಾದಿ ಅತ್ಯಾಧುನಿಕ ಭದ್ರತಾ ವಿಧಾನಗಳ ಮೂಲಕ ಡಾಟಾಬೇಸ್ ವ್ಯವಸ್ಥೆ ಬಲಪಡಿಸಲಾಗಿದೆ.
  • ಹೆಚ್ಚುವರಿ ಸುರಕ್ಷತೆಯ ಎಳೆಯಾಗಿ ಮಲ್ಟಿ ಫ್ಯಾಕ್ಟರ್ ಅಥೆಂಟಿಕೆಸನ್ ವ್ಯವಸ್ಥೆಯ ಅಳವಡಿಕೆ
  • ಎಲ್ಲಾ ಅಕ್ಸೆಸ್ ಟೋಕನ್​ಗಳನ್ನು ರೊಟೇಟ್ ಮಾಡಲಾಗಿದೆ
  • ಎಲ್ಲಾ ಪಾಸ್​ವರ್ಡ್​ಗಳನ್ನು ಅಪ್​ಡೇಟ್ ಮಾಡಲಾಗಿದೆ.
  • ರೆಂಟೋಮೋಜೋದ ನೆಟ್​ವರ್ಕ್​ಗೆ ಎಂಡ್​ಪಾಯಿಂಟ್ ಡಿಟೆಕ್ಷನ್ ಅಂಡ್ ರೆಸ್ಪಾನ್ಸ್ (ಇಡಿಆರ್) ವ್ಯವಸ್ಥೆಯನ್ನು ಅಳವಡಿಸಲಾಗಿದೆ.
  • ಥರ್ಡ್ ಪಾರ್ಟಿ ಮತ್ತು ಓಪನ್ ಸೋರ್ಸ್ ಪ್ಲಗಿನ್​ಗಳನ್ನು ಮರುಪರಿಶೀಲಿಸಲಾಗಿದೆ.

ಗ್ರಾಹಕರ ಮಾಹಿತಿ ಸುರಕ್ಷತೆಗೆ ಮತ್ತು ಕಂಪನಿಯ ಡಾಟಾಬೇಸ್ ಸುರಕ್ಷತೆಗೆ ಇವಿಷ್ಟು ಕ್ರಮಗಳನ್ನು ಕೈಗೋಳ್ಳಲಾಗಿದೆ ಎಂದು ರೆಂಟೋಮೋಜೋ ಹೇಳಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್