Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಫೋಸಿಸ್​ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್​ನ ಯಶೋಗಾಥೆ

Dadasaheb Bhagat's Inspiring Story: ಇನ್ಫೋಸಿಸ್ ಸಂಸ್ಥೆಯ ಗೆಸ್ಟ್ ಹೌಸ್​ನಲ್ಲಿ ರೂಮ್ ಬಾಯ್ ಆಗಿದ್ದ ಭಗತ್ ದಾದಾಸಾಹೇಬ್ ಇವತ್ತು ನೈನ್ತ್ ಮೋಶನ್ ಮತ್ತು ಡೂಗ್ರಾಫಿಕ್ಸ್ ಎಂಬ ಎರಡು ಕಂಪನಿಗಳ ಒಡೆಯರಾಗಿದ್ದಾರೆ. ವಿಶ್ವದ ಅತಿದೊಡ್ಡ ಡಿಸೈನ್ ಪೋರ್ಟಲ್ ರೂಪಿಸುವ ಗುರಿ ಹೊಂದಿರುವ ಭಗತ್ ಅವರ ಜೀವನಗಾಥೆ ನಿಜಕ್ಕೂ ಸ್ಫೂರ್ತಿಯುತವಾಗಿದೆ.

ಇನ್ಫೋಸಿಸ್​ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್​ನ ಯಶೋಗಾಥೆ
ದಾದಾಸಾಹೇಬ್ ಭಗತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 21, 2023 | 4:14 PM

ಸಾಧನೆಯಲ್ಲಿ ಪ್ರತಿಭೆ, ಅದೃಷ್ಟಕ್ಕಿಂತ ಹೆಚ್ಚಾಗಿ ಮನೋಸ್ಥೈರ್ಯ ಬಹಳ ಮುಖ್ಯ. ಎದುರಾಗುವ ಅನಿರೀಕ್ಷಿತ ಸವಾಲುಗಳು, ಘಟನೆಗಳನ್ನು ಎದುರಿಸಲು ಈ ಗುಣ ಮುಖ್ಯ. ನೈನ್ತ್​ಮೋಶನ್ (NinthMotion) ಮತ್ತು ಡೂಗ್ರಾಫಿಕ್ಸ್ (DooGraphics) ಎಂಬೆರಡು ಕಂಪನಿಗಳ ಮಾಲೀಕನ ಕಥೆ ನಿಜಕ್ಕೂ ರೋಲ್ ಮಾಡೆಲ್ ಆಗಿದೆ. ಇನ್ಫೋಸಿಸ್ ಸಂಸ್ಥೆಯಲ್ಲಿ ಆಫೀಸ್ ಬಾಯ್ ಆಗಿ ವೃತ್ತಿ ಬದುಕು ಆರಂಭಿಸಿದ ದಾದಾಸಾಹೇಬ್ ಭಗತ್ (Dadasaheb Bhagat) ಇವತ್ತು ಬಹಳ ಎತ್ತರಕ್ಕೆ ಬೆಳೆದಿರುವ ಕಥೆ ನಿಜಕ್ಕೂ ಸ್ಫೂರ್ತಿ ಕೊಡುವಂಥದ್ದು.

ಮಹಾರಾಷ್ಟ್ರದ ಬೀಡ್ ಜಿಲ್ಲೆಯವರಾದ 29 ವರ್ಷದ ದಾದಾಸಾಹೇಬ್ ಭಗತ್ ಐಟಿಐ ಡಿಪ್ಲೊಮಾ ಓದಿದ್ದಾರೆ. ಯಾವುದಾದರೂ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಬೇಕಾದವರು ಪುಣೆಯಲ್ಲಿ ಇನ್ಫೋಸಿಸ್​ನ ಗೆಸ್ಟ್ ಹೌಸ್​ನಲ್ಲಿ ರೂಮ್ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾರೆ. ಗೆಸ್ಟ್ ಹೌಸ್​ಗೆ ಬಂದ ಅತಿಥಿಗಳಿಗೆ ಚಹಾ, ನೀರು ಇತ್ಯಾದಿ ಸೇವೆ ಒದಗಿಸುವುದು ಅವರ ಕಾಯಕವಾಗಿತ್ತು.

ರೂಮ್ ಬಾಯ್ ಆದರೂ ಹೊಸ ದಾರಿ ತುಳಿದ ಭಗತ್

ದಾದಾಸಾಹೇಬ್ ಭಗತ್ ಐಟಿಐ ಡಿಪ್ಲೊಮಾ ಮಾಡಿದ್ದರೂ ಇನ್ಫೋಸಿಸ್​ನಲ್ಲಿ ರೂಮ್ ಬಾಯ್ ಆಗಿದ್ದರು. ಅಲ್ಲಿ ಕೆಲಸ ಮಾಡುತ್ತಿರುವಾಗ ಅವರಿಗೆ ಸಾಫ್ಟ್​ವೇರ್ ಕ್ಷೇತ್ರದ ಮೌಲ್ಯದ ಬಗ್ಗೆ ತಿಳಿದುಕೊಂಡು ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರು. ಆದರೆ, ಕಾಲೇಜು ಮೆಟ್ಟಿಲು ಹತ್ತದ ಅವರಿಗೆ ಸಾಫ್ಟ್​ವೇರ್ ಎಂಜಿನಿಯರ್ ಆಗುವುದು ಗಗನಕುಸುಮವೇ ಆಗಿತ್ತು.

ಇದನ್ನೂ ಓದಿ: ಪುಟ್ಟ ಮನೆ, ಕಾರು ಬಿಟ್ಟು ಸಾವಿರಾರು ಕೋಟಿ ಮೌಲ್ಯದ ಆಸ್ತಿ ದಾನ; ಕೈಯಲ್ಲಿ ಮೊಬೈಲ್ ಫೋನ್ ಕೂಡ ಇಲ್ಲ; ಇದು ಶ್ರೀರಾಮ್ ಗ್ರೂಪ್ ಸ್ಥಾಪಕರ ಕಥೆ

ಆಗ ಅವರಿಗೆ ಅನಿಮೇಶನ್ ಮತ್ತು ಡಿಸೈನ್ ಕೋರ್ಸ್ ಕಲಿಯಲು ಕೆಲವರು ಸಲಹೆ ಕೊಟ್ಟರು. ರಾತ್ರಿ ಹೊತ್ತು ಕೆಲಸ ಮಾಡುತ್ತಲೇ ಬೆಳಗಿನ ಅವಧಿಯಲ್ಲಿ ಅನಿಮೇಶನ್ ಕೋರ್ಸ್ ಮಾಡತೊಡಗಿದರು ಭಗತ್. ಕೋರ್ಸ್ ಮುಗಿದ ಬಳಿಕ ಮುಂಬೈನಲ್ಲಿ ಅವರಿಗೆ ಕೆಲಸ ಸಿಕ್ಕಿತು. ಬಳಿಕ ಹೈದರಾಬಾದ್​ನಲ್ಲಿ ಕೆಲಸ ಮಾಡಿದರು. ಇಲ್ಲಿ ಕೆಲಸ ಮಾಡುವಾಗಲೇ ಪೈಥಾನ್ ಮತ್ತು ಸಿ++ ಸಾಫ್ಟ್​ವೇರ್ ಕಲಿಯಲು ಆರಂಭಿಸಿದರು.

ಆನ್​ಲೈನ್ ಟೆಂಪ್ಲೇಟ್ ವಿನ್ಯಾಸ

ಹೈದರಾಬಾದ್​ನಲ್ಲಿ ಕೆಲಸ ಮಾಡುವಾಗ ಭಗತ್ ಅವರಿಗೆ ವಿಶುವಲ್ ಎಫೆಕ್ಟ್ಸ್ ನಿರ್ಮಾಣದಲ್ಲಿ ಬಹಳ ಸಮಯ ಹಿಡಿಯುವುದು ಅರಿವಿಗೆ ಬಂದಿತು. ಆಗ ಅವರಿಗೆ ಮರುಬಳಕೆಯ ಟೆಂಪ್ಲೇಟ್​ನ ಒಂದು ಸಂಗ್ರಹ ರಚಿಸುವ ಅವಶ್ಯಕತೆ ಕಾಣಿಸಿತು. ಅಂತೆಯೇ, ಅವರು ಆನ್​ಲೈನ್​ನಲ್ಲಿ ಟೆಂಪ್ಲೇಟ್ ಡಿಸೈನ್ ಮಾಡತೊಡಗಿದರು.

ಅಪಘಾತಗೊಂಡು ಹಾಸಿಗೆ ಹಿಡಿದರೂ ತಮ್ಮ ಟೆಂಪ್ಲೇಟ್ ವಿನ್ಯಾಸ ಕಾರ್ಯ ಬಿಡಲಿಲ್ಲ. 2015ರಲ್ಲಿ ಅವರು ನೈನ್ತ್​ಮೋಶನ್ ಎಂಬ ಕಂಪನಿ ಸ್ಥಾಪಿಸಿದರು. ಬಿಬಿಸಿ ಸ್ಟುಡಿಯೋಸ್, 9ಎಕ್ಸ್​ಎಂ ಮ್ಯೂಸಿಕ್ ಚಾನಲ್ ಸೇರಿದಂತೆ ಜಾಗತಿಕವಾಗಿ 6,000 ಕ್ಲಯಂಟ್​ಗಳನ್ನು ಭಗತ್ ಗಿಟ್ಟಿಸಿದರು.

ಇದನ್ನೂ ಓದಿ: Ambiga Subramanian: ಹೆಮ್ಮೆಯ ಬೆಂಗಳೂರು ನಾರಿ ಅಂಬಿಗಾ ಸುಬ್ರಮಣಿಯನ್; ಸ್ವಂತವಾಗಿ ಬೆಳೆದು ಯಶಸ್ವಿ ಉದ್ಯಮಿಯಾದ ಈ ಮಹಿಳೆಯ ಸಾಧನೆ ಏನು?

ಡೂಗ್ರಾಫಿಕ್ಸ್ ಕಂಪನಿ

ವಿಶುವಲ್ ಟೆಂಪ್ಲೇಟ್ ಲೈಬ್ರರಿ ಬಳಿಕ ಭಗತ್ ದಾದಾಸಾಹೇಬ್ ಅವರು ಆನ್​ಲೈನ್ ಗ್ರಾಫಿಕ್ಸ್ ಡಿಸೈನ್​ಗೂ ಕ್ಯಾನ್ವಾ ರೀತಿಯಲ್ಲಿ ಸಿದ್ಧ ಟೆಂಪ್ಲೇಟ್​​ಗಳನ್ನು ನಿರ್ಮಿಸುವ ಆಲೋಚನೆ ಮಾಡಿದರು. ಅಂತೆಯೇ ಪುಣೆಯಲ್ಲಿ ಡೂ ಗ್ರಾಫಿಕ್ಸ್ ಕಂಪನಿ ಸ್ಥಾಪನೆ ಆಯಿತು.

ಕೋವಿಡ್-19ರ ಸಂದರ್ಭದಲ್ಲಿ ಲಾಕ್ ಡೌನ್ ಇದ್ದರಿಂದ ಭಗತ್ ಅವರು ಪುಣೆ ಬಿಟ್ಟು ತಮ್ಮ ಹಳ್ಳಿಗೆ ಹೋಗಬೇಕಾಯಿತು. ಊರಿನಲ್ಲಿ ನೆಟ್ವರ್ಕ್ ಸರಿಯಾಗಿರಲಿಲ್ಲ. ಊರಿನಾಚೆ ಗುಡ್ಡದ ಮೇಲೆ ದನದ ಕೊಟ್ಟಿಗೆಯಲ್ಲಿ ಭಗತ್ ಸಿಂಗ್ ಕೆಲಸ ಮಾಡತೊಡಗುತ್ತಾರೆ. ತಾವು ಅನಿಮೇಶನ್ ಮತ್ತು ಡಿಸೈನ್ ಹೇಳಿಕೊಟ್ಟ ಸ್ನೇಹಿತರನ್ನು ಸೇರಿಸಿ ಆ ಶೆಡ್​ನಲ್ಲಿ ಕೆಲಸ ಮಾಡುತ್ತಾರೆ. ಗ್ರಾಮದ ಹಲವು ಮಕ್ಕಳಿಗೂ ಇವರು ತರಬೇತಿ ಕೊಡುತ್ತಾರೆ. ಅಂತೆಯೇ ಇವರ ಕಂಪನಿ ಬೆಳೆಯುತ್ತಾ ಹೋಗುತ್ತದೆ.

ಇನ್ನು, ಡೂಗ್ರಾಫಿಕ್ಸ್ ಕಂಪನಿಯನ್ನು ವಿಶ್ವದ ಅತಿದೊಡ್ಡ ಡಿಸೈನ್ ಪೋರ್ಟಲ್ ಆಗಿ ರೂಪಿಸುವ ಹೆಗ್ಗುರಿಯಲ್ಲಿ ಭಗತ್ ದಾದಾಸಾಹೇಬ್ ಇದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!