Satya Nadella: ನನ್ನ ನೀನು ಮೋಸಗೊಳಿಸಲಾರೆ; ದಕ್ಷಿಣ ಭಾರತದ ತಿಂಡಿ ಬಗ್ಗೆ ಚಾಟ್​ಜಿಪಿಟಿ ಜತೆ ಸತ್ಯ ನಾದೆಲ್ಲಾ ಹೀಗೊಂದು ಸಂಭಾಷಣೆ!

‘ಚಾಟ್​ಜಿಪಿಟಿ’ ಓಪನ್ ಎಇಐ (ಕೃತಕ ಬುದ್ಧಿಮತ್ತೆ) ಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​​ವೇರ್ ಆಗಿದ್ದು, ಇದರ ಸ್ಥಾಪಕರಲ್ಲಿ ಉದ್ಯಮಿ ಎಲಾನ್​ ಮಸ್ಕ್ ಸಹ ಒಬ್ಬರಾಗಿದ್ದಾರೆ. ‘ಚಾಟ್​ಜಿಪಿಟಿ’ ಮತ್ತು ನಾದೆಲ್ಲಾ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆ ಇಲ್ಲಿದೆ.

Satya Nadella: ನನ್ನ ನೀನು ಮೋಸಗೊಳಿಸಲಾರೆ; ದಕ್ಷಿಣ ಭಾರತದ ತಿಂಡಿ ಬಗ್ಗೆ ಚಾಟ್​ಜಿಪಿಟಿ ಜತೆ ಸತ್ಯ ನಾದೆಲ್ಲಾ ಹೀಗೊಂದು ಸಂಭಾಷಣೆ!
ಸತ್ಯ ನಾದೆಲ್ಲಾ
Updated By: Ganapathi Sharma

Updated on: Jan 09, 2023 | 12:04 PM

ಬೆಂಗಳೂರು: ‘ಹೇಯ್, ಹಾಗೆಲ್ಲ ನೀನು ನನ್ನನ್ನು ಮೋಸಗೊಳಿಸಲಾಗದು. ಅದ್ಹೇಗೆ ಬಿರಿಯಾನಿಯನ್ನು (Biryani) ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿ ಎನ್ನುತ್ತೀ?’ ಹೀಗೆಂದು ಹೇಳಿದ್ದು ಮೈಕ್ರೋಸಾಫ್ಟ್ ಕಂಪನಿ ಮುಖ್ಯಸ್ಥ ಸತ್ಯ ನಾದೆಲ್ಲಾ (Satya Nadella). ಯಾರ ಜೊತೆ ಗೊತ್ತೇ? ಕೃತಕ ಬುದ್ಧಿಮತ್ತೆಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​ವೇರ್ ‘ಚಾಟ್​ಜಿಪಿಟಿ (ChatGPT)’ ಜತೆ! ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಟೆಕ್ ಸಮ್ಮಿಟ್​ಗೆ ಬಂದಿದ್ದ ಸತ್ಯ ನಾದೆಲ್ಲಾ, ‘ಚಾಟ್​ಜಿಪಿಟಿ’ ಜತೆ ಸಂಭಾಷಣೆ ನಡೆಸಿ, ದಕ್ಷಿಣ ಭಾರತದ ಬೆಳಗ್ಗಿನ ಉಪಾಹಾರದ ತಿಂಡಿಗಳು ಯಾವುವೆಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ‘ಚಾಟ್​ಜಿಪಿಟಿ’ ಇಡ್ಲಿ, ವಡಾ, ಉತ್ತಪ್ಪ, ದೋಸೆ, ಪೊಂಗಲ್ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳು ಎಂದಿದೆ. ಜತೆಗೆ ಬಿರಿಯಾನಿಯನ್ನೂ ಸೇರಿಸಿದೆ.

ತಕ್ಷಣವೇ ಪ್ರತಿಕ್ರಿಯಿಸಿದ ನಾದೆಲ್ಲಾ, ಬಿರಿಯಾನಿ ಬೆಳಗ್ಗಿನ ತಿಂಡಿ ಎಂದು ಹೇಳಿ ನನ್ನನ್ನು ಅವಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ‘ಚಾಟ್​ಜಿಪಿಟಿ’, ನೀವು ಹೇಳಿದ್ದು ನಿಜ. ಬಿರಿಯಾನಿಯನ್ನು ದಕ್ಷಿಣ ಭಾರತದ ಬೆಳಗ್ಗಿನ ತಿಂಡಿ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಭಾರತದ ಪ್ರಸ್ತುತ ಪರಿಸ್ಥಿತಿ ನೋಡಿ ನಾನು ಎದೆಗುಂದಿದ್ದೇನೆ; ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲ

ನಂತರ ದೋಸೆ, ವಡಾ ಮತ್ತು ಇಡ್ಲಿಗೆ ಸಂಬಂಧಿಸಿ ಪ್ಲೇ ಕ್ರಿಯೇಟ್ ಮಾಡುವಂತೆ ‘ಚಾಟ್​ಜಿಪಿಟಿ’ಗೆ ನಾದೆಲ್ಲಾ ಸೂಚಿಸಿದರು. ತಕ್ಷಣವೇ ಉತ್ತಮ ರೋಲ್​ಪ್ಲೇ ಕ್ರಿಯೇಟ್ ಮಾಡಿದ ‘ಚಾಟ್​ಜಿಪಿಟಿ’, ಮುಂಬೈಯ ಸ್ಟ್ರೀಟ್​​ ಫುಡ್ ವಡಾ ಪಾವ್, ಪಾವ್​ ಬಾಜಿ ಬಗ್ಗೆಯೂ ವಿಶ್ಲೇಷಿಸಿತು.

‘ಚಾಟ್​ಜಿಪಿಟಿ’ ಓಪನ್ ಎಇಐ (ಕೃತಕ ಬುದ್ಧಿಮತ್ತೆ) ಯಿಂದ ಅಭಿವೃದ್ಧಿಪಡಿಸಿದ ಸಾಫ್ಟ್​​ವೇರ್ ಆಗಿದ್ದು, ಇದರ ಸ್ಥಾಪಕರಲ್ಲಿ ಉದ್ಯಮಿ ಎಲಾನ್​ ಮಸ್ಕ್ ಸಹ ಒಬ್ಬರಾಗಿದ್ದಾರೆ. ‘ಚಾಟ್​ಜಿಪಿಟಿ’ ಮತ್ತು ನಾದೆಲ್ಲಾ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆಯ ಬಗ್ಗೆ ‘ಮನಿ ಕಂಟ್ರೋಲ್’ ಸುದ್ದಿ ತಾಣ ವರದಿ ಮಾಡಿ ಗಮನ ಸೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ