AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Microsoft CEO: ಇಂಥದ್ದು ವಿಶ್ವದಲ್ಲಿ ಬೇರೆಲ್ಲೂ ಇಲ್ಲ: ಭಾರತದ ಪೇಮೆಂಟ್ ವ್ಯವಸ್ಥೆಗೆ ಮೈಕ್ರೋಸಾಫ್ಟ್ ಮುಖ್ಯಸ್ಥರು ಫಿದಾ

ಇಂಡಿಯಾಸ್ಟ್ಯಾಕ್ ನೋಡಿದರೆ ಅದ್ಭುತ ಎನಿಸುತ್ತದೆ. ವಿಶ್ವದಲ್ಲಿ ಬೇರೆಲ್ಲೂ ಇಂಥದ್ದು ಇಲ್ಲ... ಸಾರ್ವಜನಿಕ ಡಿಜಿಟಲ್ ಸೌಲಭ್ಯದೆಡೆ ನಡೆದಿರುವ ಕಾರ್ಯ ಅಚ್ಚರಿ ಹುಟ್ಟಿಸುತ್ತದೆ ಎಂದು ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ಹೊಗಳಿದ್ದಾರೆ.

Microsoft CEO: ಇಂಥದ್ದು ವಿಶ್ವದಲ್ಲಿ ಬೇರೆಲ್ಲೂ ಇಲ್ಲ: ಭಾರತದ ಪೇಮೆಂಟ್ ವ್ಯವಸ್ಥೆಗೆ ಮೈಕ್ರೋಸಾಫ್ಟ್ ಮುಖ್ಯಸ್ಥರು ಫಿದಾ
satya nadella and Modi Image Credit source: google image
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Jan 05, 2023 | 7:11 PM

Share

ನಮ್ಮ ಅಕೌಂಟ್​​ನಲ್ಲಿ ಹಣ, ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಬೆರಳ ತುದಿಯಲ್ಲೇ ಬಹುತೇಕ ಎಲ್ಲಾ ಕೆಲಸವನ್ನೂ ಮಾಡಬಹುದು. ಹಣ ಕಳುಹಿಸುವುದು, ಬಿಲ್ ಕಟ್ಟುವುದು, ಕೆವೈಸಿ ಅರ್ಜಿ ತುಂಬುವುದು ಇತ್ಯಾದಿ ಲೆಕ್ಕವಿಲ್ಲದಷ್ಟು ಹಣಕಾಸು ಕಾರ್ಯಗಳನ್ನು ಕುಳಿತಲ್ಲೇ ಮಾಡಬಹುದು. ಸರ್ಕಾರಿ ಯೋಜನೆಗಳ ಹಣವು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ವರ್ಗವಾಗುತ್ತದೆ. ಒಟ್ಟಾರೆ ಭಾರತದಲ್ಲಿ ಪೇಮೆಂಟ್ ವ್ಯವಸ್ಥೆಯ ಒಂದು ದೊಡ್ಡ ಕ್ರಾಂತಿಯೇ ಆಗಿದೆ. ಆಧಾರ್, ಯುಪಿಐ ಇತ್ಯಾದಿ ಇವು ಪೇಮೆಂಟ್ ವ್ಯವಸ್ಥೆಯ ಭಾಗವಾಗಿವೆ. ಅಮೆರಿಕವೂ ಒಳಗೊಂಡಂತೆ ವಿಶ್ವದಲ್ಲಿ ಬೇರೆಲ್ಲೂ ಇಷ್ಟು ಅಗಾಧವಾದ ಮತ್ತು ಸಮರ್ಪಕವಾದ ಪಾವತಿ ವ್ಯವಸ್ಥೆ ರೂಪುಗೊಂಡಿಲ್ಲ. ಭಾರತವೇ ಒನ್ ಅಂಡ್ ಓನ್ಲಿ ಎನ್ನಬಹುದು. ವಿಶ್ವದ ಅನೇಕ ತಜ್ಞರು ಭಾರತದ ತಂತ್ರಜ್ಞಾನ ನೈಪುಣ್ಯಕ್ಕೆ ಬೆರಗು ವ್ಯಕ್ತಪಡಿಸಿರುವುದುಂಟು. ಈಗ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ. ಭಾರತಕ್ಕೆ ಪ್ರವಾಸ ಬಂದಿರುವ ಮೈಕ್ರೋಸಾಫ್ಟ್ ಸಿಇಒ ಇಲ್ಲಿನ ಪಾವತಿ ವ್ಯವಸ್ಥೆಯ ಬಗ್ಗೆ ಅಕ್ಷರಶಃ ಬೆರಗುಪಟ್ಟಿದ್ದಾರೆ.

ಇದನ್ನು ಓದಿ:Job Cut: ಆರ್ಥಿಕ ಹಿಂಜರಿತದ ಮುಂಜಾಗ್ರತೆಯಿಂದ ವಿಶ್ವದ ಮೂರನೇ ಅತ್ಯಂತ ಹೆಚ್ಚು ಮಾರುಕಟ್ಟೆ ಮೌಲ್ಯದ ಕಂಪೆನಿಯಲ್ಲಿ ಉದ್ಯೋಗ ಕಡಿತ

“ಇಂಡಿಯಾಸ್ಟ್ಯಾಕ್ ನೋಡಿದರೆ ಅದ್ಭುತ ಎನಿಸುತ್ತದೆ. ವಿಶ್ವದಲ್ಲಿ ಬೇರೆಲ್ಲೂ ಇಂಥದ್ದು ಇಲ್ಲ… ಸಾರ್ವಜನಿಕ ಡಿಜಿಟಲ್ ಸೌಲಭ್ಯದೆಡೆ ನಡೆದಿರುವ ಕಾರ್ಯ ಅಚ್ಚರಿ ಹುಟ್ಟಿಸುತ್ತದೆ, ಜೊತೆಗೆ ಸ್ಫೂರ್ತಿದಾಯಕವೂ ಎನಿಸಿದೆ. ಡಿಜಿಟಲ್ ಕ್ರಾಂತಿ ಉಪಯೋಗಿಸಿ ನಡೆಯುತ್ತಿರುವ ಸ್ವಾವಲಂಬಿ ಆರ್ಥಿಕ ಪ್ರಗತಿಯತ್ತ ಬಹಳ ಆಳ ಇಳಿದಿರುವುದು ಪ್ರಶಂಸನೀಯ” ಎಂದು ಸತ್ಯ ನಾದೆಲ್ಲಾ ಹೊಗಳಿದ್ದಾರೆ.

ಇಲ್ಲಿ ಅವರ ಹೇಳಿಕೆ ಮೊದಲಲ್ಲಿ ಬರುವ ಇಂಡಿಯಾಸ್ಟ್ಯಾಕ್ ಎಂದರೆ ಸಂಸ್ಥೆಯ ಹೆಸರಲ್ಲ. ಆಧಾರ್, ಯುಪಿಐ ಇತ್ಯಾದಿ ಪೇಮೆಂಟ್ ವ್ಯವಸ್ಥೆಗೆ ಪೂರಕವಾಗಿ ಇರುವ ವಿವಿಧ ಅಂಗಗಳು, ತಂತ್ರಜ್ಞಾನ ಇತ್ಯಾದಿ ಎಲ್ಲವೂ ಒಳಗೊಂಡ ಒಂದು ವ್ಯವಸ್ಥೆಯಾಗಿದೆ. ಸರ್ಕಾರಿ ಟೆಕ್ ಸಂಸ್ಥೆಗಳು, ಖಾಸಗಿ ಕಂಪನಿಗಳು, ತಂತ್ರಾಂಶ ಅಭಿವೃದ್ಧಿಗಾರರು ಎಲ್ಲರಿಗೂ ತಂತ್ರಜ್ಞಾನ ಸೌಲಭ್ಯ ಒದಗಿಸುವ ವ್ಯವಸ್ಥೆ ಇದು. ವಿಶ್ವದ ಹಲವು ಟೆಕ್ಕಿಗಳು ಭಾರತದ ಈ ವಿಶೇಷ ತಂತ್ರಜ್ಞಾನ ಸಾಧನೆಯನ್ನು ಪ್ರಶಂಸಿಸಿದ್ದಾರೆ.

ಭಾರತಕ್ಕೆ ನಾಲ್ಕು ದಿನ ಭೇಟಿ ಕೊಟ್ಟಿರುವ ಮೈಕ್ರೋಸಾಫ್ಟ್ ಸಿಇಒ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಿದರು. ಡಿಜಿಟಲ್ ವ್ಯವಸ್ಥೆಯನ್ನು ಬಳಸಿ ಆರ್ಥಿಕ ಉನ್ನತಿ ಸಾಧಿಸಲು ಸರ್ಕಾರ ಗಮನ ಹರಿಸಿರುವುದನ್ನು ಪ್ರಸ್ತಾಪಿಸಿ ಅವರು ಶ್ಲಾಘನೆ ವ್ಯಕ್ತಪಡಿಸಿ ಟ್ವೀಟ್ ಕೂಡ ಮಾಡಿದ್ದಾರೆ.

ಕ್ಲೌಡ್ ಬಹಳ ಮುಖ್ಯ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಈ ವೇಳೆ ಕ್ಲೌಡ್ ತಂತ್ರಜ್ಞಾನದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಡಿಗೋ, ಗೋದ್ರೇಜ್, ಟಾಟಾ ಡಿಜಿಟಲ್, ಫ್ಲಿಪ್ ಕಾರ್ಟ್ ಮೊದಲಾದ ಭಾರತೀಯ ಕಂಪನಿಗಳು ಕ್ಲೌಡ್ ಟೆಕ್ನಾಲಜಿಯತ್ತ ಗಮನ ನೆಟ್ಟಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಮುಂದಿನ ದಿನಗಳು ಕ್ಲೌಡ್ ತಂತ್ರಜ್ಞಾನದ ದಿನಗಳಾಗಿರುತ್ತವೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?