AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Job Cut: ಆರ್ಥಿಕ ಹಿಂಜರಿತದ ಮುಂಜಾಗ್ರತೆಯಿಂದ ವಿಶ್ವದ ಮೂರನೇ ಅತ್ಯಂತ ಹೆಚ್ಚು ಮಾರುಕಟ್ಟೆ ಮೌಲ್ಯದ ಕಂಪೆನಿಯಲ್ಲಿ ಉದ್ಯೋಗ ಕಡಿತ

Microsoft Corporation: ವಿಶ್ವದ ಅತ್ಯಂತ ಮೌಲ್ಯಯುತ ಕಂಪೆನಿ ಮೈಕ್ರೋಸಾಫ್ಟ್​ನಿಂದ ಉದ್ಯೋಗ ಕಡಿತ ಮಾಡಲು ನಿರ್ಧರಿಸಲಾಗಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.

Job Cut: ಆರ್ಥಿಕ ಹಿಂಜರಿತದ ಮುಂಜಾಗ್ರತೆಯಿಂದ ವಿಶ್ವದ ಮೂರನೇ ಅತ್ಯಂತ ಹೆಚ್ಚು ಮಾರುಕಟ್ಟೆ ಮೌಲ್ಯದ ಕಂಪೆನಿಯಲ್ಲಿ ಉದ್ಯೋಗ ಕಡಿತ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Jul 14, 2022 | 1:33 PM

Share

ಕನ್ಸಲ್ಟಿಂಗ್ ಮತ್ತು ಕಸ್ಟಮರ್ ಹಾಗೂ ಪಾರ್ಟನರ್ ಸಲ್ಯೂಷನ್ಸ್ ಸೇರಿದಂತೆ ವಿವಿಧ ಗುಂಪುಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ವಿಶ್ವದ ಮೂರನೇ ಅತಿ ದೊಡ್ಡ ಕಂಪೆನಿ ಮೈಕ್ರೋಸಾಫ್ಟ್ (Microsoft) ಮುಂದಾಗಿದೆ. ಇದು ಎಲ್ಲ ಭೌಗೋಳಿಕ ಭಾಗದಲ್ಲೂ ಹಬ್ಬಿದೆ. ಕಂಪೆನಿಯ ಒಟ್ಟು ಉದ್ಯೋಗಿಗಳ ಸಂಖ್ಯೆಯ ಪೈಕಿ ಶೇ 1ಕ್ಕಿಂತ ಕಡಿಮೆ ಉದ್ಯೋಗಿಗಳ ಮೇಲೆ ಇದರ ಪರಿಣಾಮ ಆಗಲಿದೆ ಎಂದು ಬ್ಲೂಮ್​ಬರ್ಗ್​ ವರದಿ ಮಾಡಿದೆ. ಜೂನ್ 30, 2022ಕ್ಕೆ ಕಂಪೆನಿಯ ಹಣಕಾಸು ವರ್ಷ ಕೊನೆಯಾದ ನಂತರದಲ್ಲಿ ಉದ್ಯಮ ಗುಂಪಿನ ಮರುಹೊಂದಿಕೆ ಹಾಗೂ ಜವಾಬ್ದಾರಿಗಳಲ್ಲಿನ ಬದಲಾವಣೆ ಮಾಡಿದ ಮೇಲೆ ಈ ನಡೆಯನ್ನು ಇಡಲಾಗಿದೆ. ವರದಿಯ ಪ್ರಕಾರ, ಮೈಕ್ರೋಸಾಫ್ಟ್​ನಿಂದ ಇತರ ಜವಾಬ್ದಾರಿಗಳಿಗೆ ನೇಮಕಾತಿ ಮಾಡಿಕೊಳ್ಳುವ ಯೋಜನೆ ಇದೆ. ಆದರೆ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳೊಂದಿಗೆ ಸದ್ಯದ ಹಣಕಾಸು ವರ್ಷ ಪೂರ್ಣಗೊಳಿಸಲಿದೆ.

“ನಾವು ಇಂದು ಸಣ್ಣ ಪ್ರಮಾಣದ ಹುದ್ದೆಗಳ ತೆಗೆದುಹಾಕಿದ್ದೇವೆ. ಎಲ್ಲ ಕಂಪೆನಿಗಳಂತೆಯೇ ನಮ್ಮ ಉದ್ಯಮದ ಆದ್ಯತೆಯನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡುತ್ತೇವೆ. ಅಗತ್ಯಕ್ಕೆ ಅನುಗುಣವಾಗಿ ರಚನಾತ್ಮಕ ಹೊಂದಾಣಿಕೆಯನ್ನು ಮಾಡುತ್ತೇವೆ. ನಮ್ಮ ಉದ್ಯಮದಲ್ಲಿನ ಹೂಡಿಕೆ ಮುಂದುವರಿಸುತ್ತೇವೆ ಮತ್ತು ಮುಂಬರುವ ವರ್ಷದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಳವಾಗುತ್ತದೆ,” ಎಂದು ಮೈಕ್ರೋಸಾಫ್ಟ್​ನ ಇಮೇಲ್ ಹೇಳಿಕೆ ಉದಾಹರಿಸಿ, ಬ್ಲೂಮ್​ಬರ್ಗ್ ವರದಿ ಮಾಡಿದೆ.

ಮತ್ತೊಂದು ವರದಿ ಪ್ರಕಾರ, ಆಲ್ಫಾಬೆಟ್​ ಇಂಕ್​ನ ಗೂಗಲ್​ ವರ್ಷದ ಬಾಕಿ ಅವಧಿಗೆ ನೇಮಕಾತಿಯನ್ನು ನಿಧಾನ ಮಾಡುವುದಕ್ಕೆ ಯೋಜಿಸುತ್ತಿದೆ. ಸಂಭವನೀಯ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿದೆ, ಎಂದು ಸಿಇಒ ಸುಂದರ್​ ಪಿಚೈ ಈಚೆಗೆ ಇಮೇಲ್​ನಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರೇ ತಿಳಿಸಿರುವಂತೆ, ಎಂಜಿನಿಯರಿಂಗ್, ತಾಂತ್ರಿಕ ಮತ್ತು ಇತರ ಮುಖ್ಯ ಹುದ್ದೆಗಳ ನೇಮಕಾತಿಗೆ ಕಂಪೆನಿಯು 2022 ಮತ್ತು 2023ರಲ್ಲಿ ಕಂಪೆನಿಯು ಗಮನ ನೀಡುವುದು.

Published On - 1:26 pm, Thu, 14 July 22

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ