AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sensex crosses 50,000 points: ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಏರಿಕೆ- ಇಳಿಕೆ ಹೊಯ್ದಾಟ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಇಂದು (ಏಪ್ರಿಲ್ 29, 2021) ಏರಿಕೆ ಹಾಗೂ ಇಳಿಕೆ ಮಧ್ಯೆ ಭಾರೀ ಹೊಯ್ದಾಟ ನಡೆಸುತ್ತಿದೆ.

Sensex crosses 50,000 points: ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಏರಿಕೆ- ಇಳಿಕೆ ಹೊಯ್ದಾಟ
ಸಾಂದರ್ಭಿಕ ಚಿತ್ರ
Srinivas Mata
|

Updated on: Apr 29, 2021 | 1:19 PM

Share

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ (ಏಪ್ರಿಲ್ 29, 2021) ಲಾಭ- ನಷ್ಟದ ಮಧ್ಯೆ ಹೊಯ್ದಾಡುತ್ತಿದೆ. ಈ ವರದಿ ಆಗುವ ಹೊತ್ತಿಗೆ ಸೆನ್ಸೆಕ್ಸ್ 209 ಪಾಯಿಂಟ್​ಗಳು ಮೇಲೇರಿ, 49,942ರಲ್ಲಿ ವಹಿವಾಟು ನಡೆಸುತ್ತಿದೆ. ಹಿಂದಿನ ದಿನದ ವ್ಯವಹಾರ ಮುಗಿಸಿದಾಗ 49.733.84ರಲ್ಲಿ ಕೊನೆಯಾಗಿತ್ತು. ಇನ್ನು ಈ ದಿನದ ಆರಂಭದಲ್ಲೇ 50 ಸಾವಿರ ಪಾಯಿಂಟ್​ಗಳ ಗಡಿ ದಾಟಿ, 50,093.86ರಲ್ಲಿ ವ್ಯವಹಾರ ಆರಂಭಿಸಿದ್ದು, ಒಂದು ಹಂತದಲ್ಲಿ ಸೂಚ್ಯಂಕವು 50,375.77 ಪಾಯಿಂಟ್​ಗಳಲ್ಲಿ ವ್ಯವಹಾರ ನಡೆಸಿ, ಹೂಡಿಕೆದಾರರಲ್ಲಿ ಉತ್ಸಾಹ ತುಂಬಿತು. ಆದರೆ ಏಪ್ರಿಲ್ ತಿಂಗಳ ಫ್ಯೂಚರ್ ಅಂಡ್ ಆಪ್ಷನ್​ನ ವ್ಯವಹಾರ ಚುಕ್ತಾ ಇರುವುದರಿಂದ ಭಾರೀ ಏರಿಳಿಯ ಕಂಡು ಬರುತ್ತಿದ್ದು, ಅದರ ಪರಿಣಾಮ ಷೇರಿನ ಬೆಲೆಗಳ ಮೇಲೆ ಆಗಿದೆ.

ಇನ್ನು ನಿಫ್ಟಿ 70.75 ಪಾಯಿಂಟ್ ಮೇಲೇರಿ, 14,935.30 ಪಾಯಿಂಟ್​ನಲ್ಲಿ ವಹಿವಾಟು ನಡೆಸಿತು. ದಿನದ ಆರಂಭದ ವ್ಯವಹಾರವನ್ನು 14,979 ಪಾಯಿಂಟ್​ನೊಂದಿಗೆ ಶುರು ಮಾಡಿದ ನಿಫ್ಟಿ, ಹಿಂದಿನ ಸೆಷನ್ ಅನ್ನು 14,864.55 ಪಾಯಿಂಟ್​ನೊಂದಿಗೆ ಮುಗಿಸಿತ್ತು. ಇಂದಿನ ವಹಿವಾಟಿನಲ್ಲಿ 15,044.35 ಪಾಯಿಂಟ್​ಗಳ ಗರಿಷ್ಠ ಮಟ್ಟವನ್ನು ನಿಫ್ಟಿ ಮುಟ್ಟಿತು. ಇಂದಿನ ವ್ಯವಹಾರದಲ್ಲಿ ಲೋಹದ ಷೇರುಗಳು ಭಾರೀ ಗಳಿಕೆಯನ್ನು ಕಂಡಿವೆ.

ನಿಫ್ಟಿಯಲ್ಲಿ ಗಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಜೆಎಸ್​ಡಬ್ಲ್ಯು ಸ್ಟೀಲ್ ಶೇ 6.76 ಟಾಟಾ ಸ್ಟೀಲ್ ಶೇ 5.52 ಬಜಾಜ್ ಫಿನ್​ಸರ್ವ್ ಶೇ 5.15 ಬಜಾಜ್ ಫೈನಾನ್ಸ್ ಶೇ 3.68 ಹಿಂಡಾಲ್ಕೊ ಶೇ 2.10

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಹೀರೋ ಮೋಟೋಕಾರ್ಪ್ ಶೇ -1.57 ಐಷರ್ ಮೋಟಾರ್ಸ್ ಶೇ -1.44 ಎಚ್​ಸಿಎಲ್ ಟೆಕ್ ಶೇ -1.36 ಮಹೀಂದ್ರಾ ಅಂಡ್ ಮಹೀಂದ್ರಾ ಶೇ -1.21 ಲಾರ್ಸನ್ ಶೇ -1.04

ಇದನ್ನೂ ಓದಿ: ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 3 ದಿನದಲ್ಲಿ 6.39 ಲಕ್ಷ ಕೋಟಿ ರೂಪಾಯಿ ಹೆಚ್ಚಳ

(Indian stock market index sensex crosses 50,000 point mark. Index swung between gain and loss)

Follow Us
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು