AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sensex crosses 50,000 points: ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಏರಿಕೆ- ಇಳಿಕೆ ಹೊಯ್ದಾಟ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಇಂದು (ಏಪ್ರಿಲ್ 29, 2021) ಏರಿಕೆ ಹಾಗೂ ಇಳಿಕೆ ಮಧ್ಯೆ ಭಾರೀ ಹೊಯ್ದಾಟ ನಡೆಸುತ್ತಿದೆ.

Sensex crosses 50,000 points: ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಏರಿಕೆ- ಇಳಿಕೆ ಹೊಯ್ದಾಟ
ಸಾಂದರ್ಭಿಕ ಚಿತ್ರ
Srinivas Mata
|

Updated on: Apr 29, 2021 | 1:19 PM

Share

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ (ಏಪ್ರಿಲ್ 29, 2021) ಲಾಭ- ನಷ್ಟದ ಮಧ್ಯೆ ಹೊಯ್ದಾಡುತ್ತಿದೆ. ಈ ವರದಿ ಆಗುವ ಹೊತ್ತಿಗೆ ಸೆನ್ಸೆಕ್ಸ್ 209 ಪಾಯಿಂಟ್​ಗಳು ಮೇಲೇರಿ, 49,942ರಲ್ಲಿ ವಹಿವಾಟು ನಡೆಸುತ್ತಿದೆ. ಹಿಂದಿನ ದಿನದ ವ್ಯವಹಾರ ಮುಗಿಸಿದಾಗ 49.733.84ರಲ್ಲಿ ಕೊನೆಯಾಗಿತ್ತು. ಇನ್ನು ಈ ದಿನದ ಆರಂಭದಲ್ಲೇ 50 ಸಾವಿರ ಪಾಯಿಂಟ್​ಗಳ ಗಡಿ ದಾಟಿ, 50,093.86ರಲ್ಲಿ ವ್ಯವಹಾರ ಆರಂಭಿಸಿದ್ದು, ಒಂದು ಹಂತದಲ್ಲಿ ಸೂಚ್ಯಂಕವು 50,375.77 ಪಾಯಿಂಟ್​ಗಳಲ್ಲಿ ವ್ಯವಹಾರ ನಡೆಸಿ, ಹೂಡಿಕೆದಾರರಲ್ಲಿ ಉತ್ಸಾಹ ತುಂಬಿತು. ಆದರೆ ಏಪ್ರಿಲ್ ತಿಂಗಳ ಫ್ಯೂಚರ್ ಅಂಡ್ ಆಪ್ಷನ್​ನ ವ್ಯವಹಾರ ಚುಕ್ತಾ ಇರುವುದರಿಂದ ಭಾರೀ ಏರಿಳಿಯ ಕಂಡು ಬರುತ್ತಿದ್ದು, ಅದರ ಪರಿಣಾಮ ಷೇರಿನ ಬೆಲೆಗಳ ಮೇಲೆ ಆಗಿದೆ.

ಇನ್ನು ನಿಫ್ಟಿ 70.75 ಪಾಯಿಂಟ್ ಮೇಲೇರಿ, 14,935.30 ಪಾಯಿಂಟ್​ನಲ್ಲಿ ವಹಿವಾಟು ನಡೆಸಿತು. ದಿನದ ಆರಂಭದ ವ್ಯವಹಾರವನ್ನು 14,979 ಪಾಯಿಂಟ್​ನೊಂದಿಗೆ ಶುರು ಮಾಡಿದ ನಿಫ್ಟಿ, ಹಿಂದಿನ ಸೆಷನ್ ಅನ್ನು 14,864.55 ಪಾಯಿಂಟ್​ನೊಂದಿಗೆ ಮುಗಿಸಿತ್ತು. ಇಂದಿನ ವಹಿವಾಟಿನಲ್ಲಿ 15,044.35 ಪಾಯಿಂಟ್​ಗಳ ಗರಿಷ್ಠ ಮಟ್ಟವನ್ನು ನಿಫ್ಟಿ ಮುಟ್ಟಿತು. ಇಂದಿನ ವ್ಯವಹಾರದಲ್ಲಿ ಲೋಹದ ಷೇರುಗಳು ಭಾರೀ ಗಳಿಕೆಯನ್ನು ಕಂಡಿವೆ.

ನಿಫ್ಟಿಯಲ್ಲಿ ಗಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಜೆಎಸ್​ಡಬ್ಲ್ಯು ಸ್ಟೀಲ್ ಶೇ 6.76 ಟಾಟಾ ಸ್ಟೀಲ್ ಶೇ 5.52 ಬಜಾಜ್ ಫಿನ್​ಸರ್ವ್ ಶೇ 5.15 ಬಜಾಜ್ ಫೈನಾನ್ಸ್ ಶೇ 3.68 ಹಿಂಡಾಲ್ಕೊ ಶೇ 2.10

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಹೀರೋ ಮೋಟೋಕಾರ್ಪ್ ಶೇ -1.57 ಐಷರ್ ಮೋಟಾರ್ಸ್ ಶೇ -1.44 ಎಚ್​ಸಿಎಲ್ ಟೆಕ್ ಶೇ -1.36 ಮಹೀಂದ್ರಾ ಅಂಡ್ ಮಹೀಂದ್ರಾ ಶೇ -1.21 ಲಾರ್ಸನ್ ಶೇ -1.04

ಇದನ್ನೂ ಓದಿ: ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 3 ದಿನದಲ್ಲಿ 6.39 ಲಕ್ಷ ಕೋಟಿ ರೂಪಾಯಿ ಹೆಚ್ಚಳ

(Indian stock market index sensex crosses 50,000 point mark. Index swung between gain and loss)

ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್