AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market: ಷೇರುಪೇಟೆಯ ಟಾಪ್10 ಕಂಪನಿಗಳಲ್ಲಿ ಲಾಭ ಮಾಡಿದ್ದು ಎರಡೆಯಾ? ಷೇರುದಾರರಿಗೆ ಒಂದು ವಾರದಲ್ಲಿ 1.17 ಲಕ್ಷ ಕೋಟಿ ಹಣ ನಷ್ಟ

8 Companies Lose 1.17 Lakh Value In 1 Week: ಬಿಎಸ್​ಇಯ ಅತಿಹೆಚ್ಚು ಮೌಲ್ಯದ 10 ಕಂಪನಿಗಳ ಪೈಕಿ ಎಂಟು ಕಂಪನಿಗಳ ಷೇರುಗಳು ಬಹಳ ನಷ್ಟ ಕಂಡಿವೆ. ಷೇರು ಮೌಲ್ಯ ಕುಸಿತದಿಂದ ಒಂದು ವಾರದಲ್ಲಿ ಕಳೆದುಕೊಂಡ ಹಣ 1.17 ಲಕ್ಷ ಕೋಟಿ ಎನ್ನಲಾಗಿದೆ. ಇದರಲ್ಲಿ ಇನ್ಫೋಸಿಸ್ ಅತಿಹೆಚ್ಚು ಆಘಾತ ಅನುಭವಿಸಿದ ಕಂಪನಿ.

Share Market: ಷೇರುಪೇಟೆಯ ಟಾಪ್10 ಕಂಪನಿಗಳಲ್ಲಿ ಲಾಭ ಮಾಡಿದ್ದು ಎರಡೆಯಾ? ಷೇರುದಾರರಿಗೆ ಒಂದು ವಾರದಲ್ಲಿ 1.17 ಲಕ್ಷ ಕೋಟಿ ಹಣ ನಷ್ಟ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 23, 2023 | 3:48 PM

Share

ನವದೆಹಲಿ: ಷೇರು ಮಾರುಕಟ್ಟೆಗಳಲ್ಲಿ ಒಂದಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (BSE) ಕಳೆದ ವಾರ ಬಹಳಷ್ಟು ನಷ್ಟ ಕಂಡಿದೆ. 30 ಷೆರುಗಳ ಬಿಎಸ್​ಇ ಸೆನ್ಸೆಕ್ಸ್ 775.96 ಪಾಯಿಂಟ್ಸ್ ಕಳೆದುಕೊಂಡಿದೆ. ಇನ್ಫೋಸಿಸ್ ಹಣಕಾಸು ವರದಿ ಮತ್ತು ಅದರ ಷೇರು ಕುಸಿತ ಕಳೆದ ವಾರದ ಹೈಲೈಟ್ ಎನಿಸಿದೆ. ಬಿಎಸ್​ಇಯ ಅತಿಹೆಚ್ಚು ಮೌಲ್ಯದ 10 ಕಂಪನಿಗಳ ಪೈಕಿ ಎಂಟು ಕಂಪನಿಗಳ ಷೇರುಗಳು ಬಹಳ ನಷ್ಟ ಕಂಡಿವೆ. 10 ಕಂಪನಿಗಳಲ್ಲಿ ಎರಡು ಷೇರು ಮಾತ್ರ ಈ ವಾರ ತುಸು ಸಕಾರಾತ್ಮಕವಾಗಿ ಬೆಳವಣಿಗೆ ಕಂಡಿದೆ. ಉಳಿದ ಎಂಟು ಕಂಪನಿಗಳು ಷೇರು ಮೌಲ್ಯ ಕುಸಿತದಿಂದ ಒಂದು ವಾರದಲ್ಲಿ ಕಳೆದುಕೊಂಡ ಹಣ (Market Capitalization) 1,17,493.78 ಕೋಟಿ ರೂ (1.17 ಲಕ್ಷ ಕೋಟಿ) ಎನ್ನಲಾಗಿದೆ. ಇದರಲ್ಲಿ ಇನ್ಫೋಸಿಸ್ ಅತಿಹೆಚ್ಚು ಆಘಾತ ಅನುಭವಿಸಿದ ಕಂಪನಿ.

ಬಿಎಸ್​ಇನಲ್ಲಿ 10 ಅತಿ ಹೆಚ್ಚು ಮೌಲ್ಯದ ಕಂಪನಿಗಳ ಪೈಕಿ ಇನ್ಫೋಸಿಸ್, ರಿಲಾಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಎಚ್​ಡಿಎಫ್​ಸಿ ಬ್ಯಾಂಕ್, ಹಿಂದೂಸ್ತಾನ್ ಯುನಿಲಿವರ್, ಭಾರ್ತಿ ಏರ್​ಟೆಲ್, ಐಸಿಐಸಿಐ, ಐಟಿಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವೆ. ಇವುಗಳ ಪೈಕಿ ಐಟಿಸಿ ಮತ್ತು ಎಸ್​ಬಿಐ ಹೊರತುಪಡಿಸಿ ಉಳಿದ ಕಂಪನಿಗಳ ಷೇರುಗಳು ಕಳೆದ ವಾರ ಕುಸಿತ ಕಂಡಿವೆ.

ಇನ್ಫೋಸಿಸ್​ಗೆ ಭಾರೀ ಆಘಾತ ತಂದ ಷೇರುಪೇಟೆ

ಇನ್ಫೋಸಿಸ್ ಏಪ್ರಿಲ್ 13ರಂದು ಕೊನೆಯ ತ್ರೈಮಾಸಿಕದ ತನ್ನ ಹಣಕಾಸು ವರದಿಯನ್ನು ಪ್ರಕಟಿಸಿತ್ತು. ಅದರಲ್ಲಿ ಇನ್ಫೋಸಿಸ್ ಲಾಭ ಹೆಚ್ಚಳವಾದರೂ, ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಲಾಭ ಬಂದಿದೆ. ಅಲ್ಲದೇ ಮುಂದಿನ ವರ್ಷಕ್ಕೆ ಕಂಪನಿಯ ಆದಾಯ ಹೆಚ್ಚಳದ ನಿರೀಕ್ಷೆಯನ್ನೂ ಅದು ತಗ್ಗಿಸಿತು. ಈ ವರದಿ ಪ್ರಕಟವಾಗುತ್ತಲೇ ಷೇರುಪೇಟೆಯಲ್ಲಿ ಇನ್ಫೋಸಿಸ್​ಗೆ ಆಘಾತಗಳು ಎದುರಾದವು. ಷೇರು ಮೌಲ್ಯ ಕುಸಿತದ ಭರಾಟೆ ನಡೆಯಿತು. ಅದರ ಮಾರ್ಕೆಟ್ ವ್ಯಾಲ್ಯುಯೇಶನ್ 5,09,215 ಕೋಟಿಗೆ ಇಳಿಯಿತು. ಅಂದರೆ ಸುಮಾರು 66,854 ಕೋಟಿ ರೂನಷ್ಟು ಹಣವನ್ನು ಇನ್ಫೋಸಿಸ್ ನಷ್ಟ ಮಾಡಿಕೊಂಡಿತು.

ಇದನ್ನೂ ಓದಿGold Prediction: ಇನ್ನೊಂದು ವರ್ಷದಲ್ಲಿ ಚಿನ್ನದ ಬೆಲೆ ಎಷ್ಟು ಹೆಚ್ಚಾಗುತ್ತದೆ? ನಿಮ್ಮ ಹಣ ಎಷ್ಟು ಬೆಳೆಯುತ್ತದೆ? ಇಲ್ಲಿದೆ ಡೀಟೇಲ್ಸ್

ಷೇರುಪೇಟೆಯಲ್ಲಿ ಈ ವಾರ ನಷ್ಟ ಮಾಡಿಕೊಂಡ ಇತರ ಕಂಪನಿಗಳು

  • ಎಚ್​ಡಿಎಫ್​ಸಿ ಬ್ಯಾಂಕ್​ಗೆ ಆದ ನಷ್ಟ 10,880 ಕೊಟಿ ರೂ
  • ಐಸಿಐಸಿಐ ಬ್ಯಾಂಕ್​ಗೆ ಆದ ನಷ್ಟ 10,462 ಕೋಟಿ ರೂ
  • ಟಿಸಿಎಸ್ ಸಂಸ್ಥೆಗೆ ಆದ ನಷ್ಟ 10,318 ಕೋಟಿ ರೂ
  • ಯೂನಿಲಿವರ್​ಗೆ ಆದ ನಷ್ಟ 8,458 ಕೋಟಿ ರೂ
  • ಎಚ್​ಡಿಎಫ್​ಸಿ ಸಂಸ್ಥೆಗೆ ಆದ ನಷ್ಟ 5,172 ಕೋಟಿ ರೂ
  • ರಿಲಾಯನ್ಸ್ ಇಂಡಸ್ಟ್ರೀಸ್ ಕಳೆದುಕೊಂಡ ಹಣ 4,566 ಕೋಟಿ ರೂ
  • ಭಾರ್ತಿ ಎರ್​ಟೆಲ್​ನ ಷೇರುಗಳ ಕುಸಿತದಿಂದ ಆದ ನಷ್ಟ 780 ಕೋಟಿ ರೂ

ಇನ್ನೊಂದೆಡೆ ಈ ಟಾಪ್ 10 ಕಂಪನಿಗಳಲ್ಲಿ ಐಟಿಸಿಯ ಮಾರ್ಕೆಟ್ ವ್ಯಾಲುಯೇಶನ್ 15,907 ಕೋಟಿ ರೂನಷ್ಟ ಹೆಚ್ಚಾಗಿದೆ. ಎಸ್​ಬಿಐ ಗಳಿಕೆ 8,796 ಕೋಟಿ ರೂನಷ್ಟು ಹೆಚ್ಚಳ ಕಂಡಿದೆ.

ಇದನ್ನೂ ಓದಿLady Duped: ವರ್ಕ್ ಫ್ರಂ ಹೋಮ್ ಆಸೆಗೆ ಬಿದ್ದ ಯುವತಿಗೆ 11ಲಕ್ಷ ರೂ ಪಂಗನಾಮ; ದುಷ್ಕರ್ಮಿಗಳ ಚಾಕಚಕ್ಯತೆ ಬಗ್ಗೆ ಹುಷಾರ್..!

ಬಿಎಸ್​ಇ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೌಲ್ಯಯುತ 10 ಕಂಪನಿಗಳ ಪಟ್ಟಿ

ಈ ಪಟ್ಟಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಮೊದಲ ಸ್ಥಾನದಲ್ಲಿದ್ದರೆ, ಭಾರ್ತಿ ಏರ್ಟೆಲ್ 10ನೇ ಸ್ಥಾನದಲ್ಲಿದೆ. ಈ ಪಟ್ಟಿ ಇಲ್ಲಿದೆ:

  • ರಿಲಾಯನ್ಸ್ ಇಂಡಸ್ಟ್ರೀಸ್ ಲಿ (ಆರ್​ಐಎಲ್)
  • ಟಿಸಿಎಸ್
  • ಎಚ್​ಡಿಎಫ್​ಸಿ ಬ್ಯಅಂಕ್
  • ಐಸಿಐಸಿಐ ಬ್ಯಾಂಕ್
  • ಹಿಂದೂಸ್ತಾನ್ ಯೂನಿಲಿವರ್
  • ಇನ್ಫೋಸಿಸ್
  • ಐಟಿಸಿ
  • ಎಚ್​ಡಿಎಫ್​ಸಿ
  • ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ
  • ಭಾರ್ತಿ ಏರ್​ಟೆಲ್

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Sun, 23 April 23

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್