AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲಕ್ಕೆ ಬದಲಾಗಿ ಷೇರುಗಳನ್ನು ಕೊಟ್ಟ ಸ್ಪೈಸ್​ಜೆಟ್; ವಿಮಾನ ಗುತ್ತಿಗೆ ನೀಡಿದವರಿಗೆ ಸಿಕ್ಕಲಿದೆ 4.8 ಕೋಟಿ ಷೇರು

Spicejet Updates: ಅರ್ಧದಷ್ಟು ವಿಮಾನಗಳ ಹಾರಾಟ ನಿಲ್ಲಿಸಿ ಬಿಕ್ಕಟ್ಟಿಗೆ ಸಿಲುಕಿರುವ ಸ್ಪೈಸ್​ಜೆಟ್ ಸಂಸ್ಥೆ ಚೇತರಿಸಿಕೊಳ್ಳುವ ಹಾದಿಯಲ್ಲಿದೆ. 2,500 ಕೋಟಿ ರೂ ಮೊತ್ತದಷ್ಟು ಬಂಡವಾಳ ಸಂಗ್ರಹಿಸುವ ಪ್ರಸ್ತಾಪಕ್ಕೆ ಕಳೆದ ವಾರ ಸ್ಪೈಸ್​ಜೆಟ್ ಷೇರುದಾರರು ಅನುಮೋದನೆ ನೀಡಿದ್ದರು. ಇದೀಗ 9 ವಿಮಾನ ಗುತ್ತಿಗೆ ಕಂಪನಿಗಳ ಬಾಕಿ ಸಾಲ ತೀರಿಸಲು 231 ಕೋಟಿ ರೂ ಮೊತ್ತದ 4.8 ಕೋಟಿ ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಲಾಗಿದೆ.

ಸಾಲಕ್ಕೆ ಬದಲಾಗಿ ಷೇರುಗಳನ್ನು ಕೊಟ್ಟ ಸ್ಪೈಸ್​ಜೆಟ್; ವಿಮಾನ ಗುತ್ತಿಗೆ ನೀಡಿದವರಿಗೆ ಸಿಕ್ಕಲಿದೆ 4.8 ಕೋಟಿ ಷೇರು
ಸ್ಪೈಸ್​ಜೆಟ್ ವಿಮಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 05, 2023 | 12:43 PM

ನವದೆಹಲಿ, ಸೆಪ್ಟೆಂಬರ್ 5: ಬಿಕ್ಕಟ್ಟಿಗೆ ಸಿಲುಕಿರುವ ಸ್ಪೈಸ್​ಜೆಟ್ ಸಂಸ್ಥೆ (Spicejet Airlines) ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದೆ. ದಿವಾಳಿಯಾಗುವುದನ್ನು (Bankruptcy) ತಪ್ಪಿಸಿಕೊಳ್ಳಲು ಹೆಣಗುತ್ತಿರುವ ಸ್ಪೈಸ್​ಜೆಟ್ ಇದೀಗ ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಷೇರುಗಳನ್ನು ಆಫರ್ ಮಾಡಿದೆ. ತನಗೆ ವಿಮಾನಗಳನ್ನು ಗುತ್ತಿಗೆ ಕೊಟ್ಟಿರುವವರ ಪೈಕಿ 9 ಸಂಸ್ಥೆಗಳಿಗೆ (Aircraft Lessors) 4.81 ಕೋಟಿ ಈಕ್ವಿಟಿ ಷೇರುಗಳನ್ನು ಆದ್ಯತಾ ಆಧಾರದಲ್ಲಿ ಸ್ಪೈಸ್ ಜೆಟ್ ಅಲಾಟ್ ಮಾಡಿದೆ. ಇದರೊಂದಿಗೆ ಈ 9 ಸಂಸ್ಥೆಗಳ 231 ಕೋಟಿ ರೂ ಮೊತ್ತದ ಸಾಲ ಈಗ ಷೇರಾಗಿ ಬದಲಾಗುತ್ತದೆ. ಸ್ಪೈಸ್​ಜೆಟ್​ನ ಷೇರುದಾರರು (Spicejet shareholders) ಕಳೆದ ವಾರ ಹಲವು ನಿರ್ಣಯಗಳಿಗೆ ಅನುಮೋದನೆ ನೀಡಿದ್ದರು. ಅದರಲ್ಲಿ ವಿಮಾನ ಗುತ್ತಿಗೆ ಸಂಸ್ಥೆಗಳಿಗೆ ಪಾವತಿಸಬೇಕಿದ್ದ ಬಾಕಿ ಹಣವನ್ನು ನೀಡುವುದೂ ಸೇರಿದೆ. ಹಾಗೆಯೇ, 2,500 ಕೋಟಿ ರೂ ಮೊತ್ತದ ಬಂಡವಾಳ ಸಂಗ್ರಹಿಸುವ ಕಾರ್ಯಗಳಿಗೂ ಷೇರುದಾರರ ಅನುಮೋದನೆ ಸಿಕ್ಕಿದೆ.

ಫೆಬ್ರುವರಿ ತಿಂಗಳಲ್ಲಿ ವಿಮಾನ ಗುತ್ತಿಗೆ ಸಂಸ್ಥೆ ಕಾರ್ಲೈಲ್ ಏವಿಯೇಶನ್ ಸಂಸ್ಥೆಗೆ ನೀಡಬೇಕಿದ್ದ 100 ಮಿಲಿಯನ್ ಡಾಲರ್ ಬಾಕಿ ಹಣವನ್ನು ಸ್ಪೈಸ್​ಜೆಟ್ ಈಕ್ವಿಟಿ ಮತ್ತು ಡಿಬಂಚರ್​ಗಳಾಗಿ ಪರಿವರ್ತಿಸಿ ಸಮಾಧಾನಗೊಲಿಸಿದೆ. ಈಗ ಬೇರೆ 9 ಸಂಸ್ಥೆಗಳ ಬಾಕಿ ಹಣವನ್ನೂ ಇದೇ ರೀತಿ ಈಕ್ವಿಟಿಯಾಗಿ ಪರಿವರ್ತಿಸಿದೆ.

ಇದನ್ನೂ ಓದಿ: ನಜಾರ ಟೆಕ್ನಾಲಜೀಸ್ ಮೇಲೆ ನಿಖಿಲ್ ಕಾಮತ್ 100 ಕೋಟಿ ರೂ ಹೂಡಿಕೆ; ಗೇಮಿಂಗ್ ಕಂಪನಿ ಬಗ್ಗೆ ಕಾಮತ್​ಗೆ ಯಾಕೆ ಒಲವು?

ಒಂಬತ್ತು ಸಂಸ್ಥೆಗಳಿಗೆ 4.81 ಕೋಟಿ ಈಕ್ವಿಟಿ ಷೇರುಗಳನ್ನು ನೀಡಿರುವುದು ಮಾತ್ರವಲ್ಲ, ಸ್ಪೈಸ್ ಹೆಲ್ತ್ ಕೇರ್ ಪ್ರೈ ಲಿ ಸಂಸ್ಥೆಗೂ 3.41 ಕೋಟಿ ಈಕ್ವಿಟಿ ಷೇರುಗಳನ್ನು ವಿತರಿಸಿದೆ. 29.84 ರೂ ಇಷ್ಯೂ ಪ್ರೈಸ್​ಲ್ಲಿ 13.15 ಕೋಟಿ ವಾರಂಟ್​​ಗಳನ್ನೂ ಕೊಟ್ಟಿದೆ.

ಸ್ಪೈಸ್​ಜೆಟ್ ಸಂಸ್ಥೆ ನಾನಾ ಕಾರಣಗಳಿಂದ ತನ್ನ ಹಲವು ವಿಮಾನ ಹಾರಾಟ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಒಂದು ಸಮಯದಲ್ಲಿ 67 ವಿಮಾನಗಳನ್ನು ಹೊಂದಿದ್ದ ಅದು ಈಗ 40ಕ್ಕಿಂತ ಕಡಿಮೆ ವಿಮಾನಗಳನ್ನು ಮಾತ್ರ ಕಾರ್ಯಾಚರಿಸುತ್ತಿದೆ. ಇನ್ನುಳಿದ ವಿಮಾನಗಳನ್ನು ಮತ್ತೆ ಕಾರ್ಯಾಚರಿಸುವ ಪ್ರಯತ್ನದಲ್ಲಿದೆ.

ಇದನ್ನೂ ಓದಿ: ಮೂರೇ ವರ್ಷದಲ್ಲಿ 1 ಲಕ್ಷಕ್ಕೆ 12 ಲಕ್ಷ ಲಾಭ; ಇದು ಬಿಸಿಎಲ್ ಇಂಡಸ್ಟ್ರೀಸ್ ಷೇರು ಚಮತ್ಕಾರ

ಸ್ಪೈಸ್​ಜೆಟ್ ತೀವ್ರ ಬಿಕ್ಕಟ್ಟಿಗೆ ಸಿಲುಕಿದ ಬಳಿಕ ಅದರ ಮಾರುಕಟ್ಟೆಮೌಲ್ಯ ಗಣನೀಯವಾಗಿ ಕುಸಿದಿತ್ತು. ಹೊಸ ವೈಮಾನಿಕ ಸಂಸ್ಥೆ ಆಕಾಶ ಏರ್​ಲೈನ್ಸ್​ನ ಮಾರುಕಟ್ಟೆಮೊತ್ತಕ್ಕಿಂತಲೂ ಸ್ಪೈಸ್​ಜೆಟ್​ನದ್ದು ಕಡಿಮೆ ಆಗಿಹೋಗಿತ್ತು. ಇದೀಗ ಒಂದು ವಿಮಾನ ಗುತ್ತಿಗೆ ಕಂಪನಿಗಳಿಗೆ ಷೇರುಹಂಚಿಕೆ ಮಾಡಿ ಸಾಲ ತೀರಿಸಲು ಕ್ರಮ ಕೈಗೊಂಡ ಬಳಿಕ ಸ್ಪೈಸ್​ಜೆಟ್​ನ ಷೇರುಬೆಲೆ ಇಂದು (ಸೆ. 5) ಶೇ. 7ಕ್ಕಿಂತಲೂ ಹೆಚ್ಚಾಗಿರುವುದು ಗಮನಾರ್ಹ. ಮಂಗಳವಾರ ಬೆಳಗ್ಗೆ 10ಕ್ಕೆ ಅದರ ಷೇರುಬೆಲೆ 33 ರೂಗಿಂತ ಹೆಚ್ಚಾಗಿದೆ. ಅದರ ಒಟ್ಟು ಮಾರುಕಟ್ಟೆ ಬಂಡವಾಳ 1.98 ಲಕ್ಷಕೋಟಿ ರೂ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:29 am, Tue, 5 September 23

ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಶಿವಾನಂದ ರಾಜೀನಾಮೆ ಸಲ್ಲಿಸಿರುವುದು ಕೇವಲ ನಾಟಕ ಮಾತ್ರ: ವಿಶ್ವನಾಥ್
ಶಿವಾನಂದ ರಾಜೀನಾಮೆ ಸಲ್ಲಿಸಿರುವುದು ಕೇವಲ ನಾಟಕ ಮಾತ್ರ: ವಿಶ್ವನಾಥ್
ಡಿಎಂಕೆ ಸಂಸದ ರಾಜಾ ಭಾಷಣ ಮಾಡುವಾಗ ಬಿದ್ದ ಫೆಡ್​ಲೈಟ್ ಕಂಬ
ಡಿಎಂಕೆ ಸಂಸದ ರಾಜಾ ಭಾಷಣ ಮಾಡುವಾಗ ಬಿದ್ದ ಫೆಡ್​ಲೈಟ್ ಕಂಬ
ಉಗ್ರರಿಗೆ ಸಹಾಯ ಮಾಡಿದ್ದ ಇಮ್ತಿಯಾಜ್ ನದಿಗೆ ಹಾರಿ ಪ್ರಾಣ ಬಿಟ್ಟ
ಉಗ್ರರಿಗೆ ಸಹಾಯ ಮಾಡಿದ್ದ ಇಮ್ತಿಯಾಜ್ ನದಿಗೆ ಹಾರಿ ಪ್ರಾಣ ಬಿಟ್ಟ