AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಡಿಎಯಿಂದ ಸುಭದ್ರ ಸರ್ಕಾರದ ಭರವಸೆ; ಹೊಸ ಎತ್ತರಕ್ಕೆ ಏರಿದ ಷೇರು ಮಾರುಕಟ್ಟೆ; ಸೆನ್ಸೆಕ್ಸ್, ನಿಫ್ಟಿ ದಾಖಲೆ

PM Narendra Modi's speech makes Stock Market happier: ಪ್ರಧಾನಿ ನರೇಂದ್ರ ಮೋದಿ ಅವರು ಎನ್​ಡಿಎ ಒಕ್ಕೂಟದ ಎಲ್ಲಾ ಅಂಗಪಕ್ಷಗಳ ವಿಶ್ವಾಸ ಪಡೆದು ಆಡಳಿತ ನಿರ್ವಹಿಸುವುದಾಗಿ ನೀಡಿದ ಭರವಸೆ ಷೇರು ಮಾರುಕಟ್ಟೆಯ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಬಿಎಸ್​ಇನ ಸೆನ್ಸೆಕ್ಸ್ ಸೇರಿ ಎಲ್ಲಾ ಸೂಚ್ಯಂಕಗಳೂ ಶುಕ್ರವಾರ ಪಾಸಿಟಿವ್ ಆಗಿವೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲೂ ನಿಫ್ಟಿ ಸೇರಿದಂತೆ ಎಲ್ಲಾ ಸೂಚ್ಯಂಕಗಳು ಮೇಲೇರಿವೆ. ಒಟ್ಟಾರೆ ಷೇರು ಮಾರುಕಟ್ಟೆ ಹೊಸ ದಾಖಲೆಯ ವೇಗದಲ್ಲಿ ಮುನ್ನುಗ್ಗುತ್ತಿದೆ.

ಎನ್​ಡಿಎಯಿಂದ ಸುಭದ್ರ ಸರ್ಕಾರದ ಭರವಸೆ; ಹೊಸ ಎತ್ತರಕ್ಕೆ ಏರಿದ ಷೇರು ಮಾರುಕಟ್ಟೆ; ಸೆನ್ಸೆಕ್ಸ್, ನಿಫ್ಟಿ ದಾಖಲೆ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2024 | 3:04 PM

Share

ನವದೆಹಲಿ, ಜೂನ್ 7: ಷೇರು ಮಾರುಕಟ್ಟೆ (stock market) ಇಂದು ಶುಕ್ರವಾರ ಇನ್ನಿಲ್ಲದ ರೀತಿಯಲ್ಲಿ ಕಳೆಗಟ್ಟಿದೆ. ಜೂನ್ 4ರಂದು ಮತ ಎಣಿಕೆಯ ದಿನ ಪ್ರಪಾತಕ್ಕೆ ಬಿದ್ದಿದ್ದ ಮಾರುಕಟ್ಟೆ ಈಗ ಬಿದ್ದಷ್ಟೇ ವೇಗದಲ್ಲಿ ಫೀನಿಕ್ಸ್​ನಂತೆ ಮೇಲೇರಿದೆ. ಸೆನ್ಸೆಕ್ಸ್, ನಿಫ್ಟಿ ಹೀಗೆ ಪ್ರತಿಯೊಂದು ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಮುಂದುವರಿಯುತ್ತಿವೆ. ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತವಾಗಿದೆ. ಎಲ್ಲಾ ಎನ್​ಡಿಎ ಅಂಗ ಪಕ್ಷಗಳು ಸಂಪೂರ್ಣ ಬೇಷರತ್ ಆಗಿ ಮೋದಿಗೆ ಬೆಂಬಲ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೂ ಕೂಡ ಎನ್​ಡಿಎನ ಎಲ್ಲಾ ಅಂಗ ಪಕ್ಷಗಳನ್ನು ವಿಶ್ವಾಸದಿಂದ ತೆಗೆದುಕೊಂಡು ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಇವೆಲ್ಲವೂ ಮಾರುಕಟ್ಟೆಗೆ ವಿಶ್ವಾಸ ಹೆಚ್ಚಿಸಿವೆ. ಪರಿಣಾಮವಾಗಿ, ಷೇರುಪೇಟೆ ಹೊಸ ದಾಖಲೆ ಬರೆದಿದೆ.

ಇಂದು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಪ್ರಮುಖ ಸೂಚ್ಯಂಕವಾದ ಸೆನ್ಸೆಕ್ಸ್ ಬರೋಬ್ಬರಿ 1,600 ಅಂಕಗಳಷ್ಟು ಮೇಲೇರಿ 76,700.82 ರ ಮಟ್ಟ ಮುಟ್ಟಿತ್ತು. ವ್ಯವಹಾರದ ಕೊನೆಯ ಗಂಟೆಯಲ್ಲಿ 76,550 ಅಂಕಗಳ ಆಸುಪಾಸಿನ ಮಟ್ಟದಲ್ಲಿ ಸೆನ್ಸೆಕ್ಸ್ ಹೊಯ್ದಾಡುತ್ತಿತ್ತು.

ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ ಸೂಚ್ಯಂಕ ಕೂಡ 23,281 ಅಂಕಗಳ ಮಟ್ಟದವರೆಗೂ ಹೋಗಿತ್ತು. 480 ಅಂಕಗಳನ್ನು ನಿಫ್ಟಿ50 ಗಳಿಸಿತ್ತು. ಸದ್ಯ ಈ 50 ಷೇರುಗಳ ಸೂಚ್ಯಂಕ 23,242 ಅಂಕಗಳ ಆಸುಪಾಸಿನಲ್ಲಿದೆ.

ಎನ್​ಎಸ್​ಇನ ಸೂಚ್ಯಂಕಗಳ ಪೈಕಿ ಅತಿ ಹೆಚ್ಚಳ ಕಂಡಿದ್ದು ನಿಫ್ಟಿ ಐಟಿ, ನಿಫ್ಟಿ ಸ್ಮಾಲ್​ಕ್ಯಾಪ್50 ಮತ್ತು ನಿಫ್ಟಿ ಆಟೊ. ಇವು ಕ್ರಮವಾಗಿ ಶೇ. 3.10, ಶೇ. 2.53 ಮತ್ತು ಶೇ. 2.36ರಷ್ಟು ಹೆಚ್ಚಾಗಿವೆ. ಸ್ಮಾಲ್​ಕ್ಯಾಪ್100 ಸೂಚ್ಯಂಕ, ನಿಫ್ಟಿ ಎನರ್ಜಿ, ನಿಫ್ಟಿ ಕಮಾಡಿಟೀಸ್ ಮೊದಲಾದ ಕೆಲ ಸೂಚ್ಯಂಕಗಳೂ ಕೂಡ ಶುಕ್ರವಾರ ಶೇ. 2ಕ್ಕಿಂತಲೂ ಹೆಚ್ಚು ಹೆಚ್ಚಿವೆ.

ಇದನ್ನೂ ಓದಿ: ಮೇ 31ಕ್ಕೆ ಭಾರತದ ಫಾರೆಕ್ಸ್ ರಿಸರ್ವ್ಸ್ 651.5 ಬಿಲಿಯನ್ ಡಾಲರ್; ಇದು ಸಾರ್ವಕಾಲಿಕ ದಾಖಲೆ

ಶುಕ್ರವಾರ ಅತಿಹೆಚ್ಚು ಬೇಡಿಕೆ ಪಡೆದ ಸ್ಟಾಕುಗಳು

ನಿಫ್ಟಿ50 ಸೂಚ್ಯಂಕದಲ್ಲಿ ಲಿಸ್ಟ್ ಆಗಿರುವ 50 ಷೇರುಗಳಲ್ಲಿ ಎಸ್​ಬಿಐ ಲೈಫ್ ಇನ್ಷೂರೆನ್ಸ್ ಮತ್ತು ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಹೊರತುಪಡಿಸಿ ಉಳಿದ ಎಲ್ಲಾ 48 ಷೇರುಗಳೂ ಕೂಡ ಸಕಾರಾತ್ಮಕವಾಗಿ ವಹಿವಾಟು ಕಂಡಿವೆ. ಟಾಪ್ ಷೇರುಗಳು ಈ ಕೆಳಕಂಡಂತಿವೆ.

  1. ಮಹೀಂದ್ರ ಅಂಡ್ ಮಹೀಂದ್ರ: ಶೇ. 5.56 ಲಾಭ
  2. ವಿಪ್ರೋ: ಶೇ. 4.76
  3. ಇನ್ಫೋಸಿಸ್: ಶೇ. 4.27
  4. ಅಲ್ಟ್ರಾಟೆಕ್ ಸಿಮೆಂಟ್: ಶೇ. 4.19
  5. ಟಾಟಾ ಸ್ಟೀಲ್: ಶೇ. 3.98
  6. ಟೆಕ್ ಮಹೀಂದ್ರ: ಶೇ. 4.20
  7. ಟೈಟಾನ್ ಕಂಪನಿ: ಶೇ. 3.72
  8. ಎಲ್​ಟಿಐ ಮೈಂಡ್ ಟ್ರೀ: ಶೇ. 3.62
  9. ಬಜಾಜ್ ಫೈನಾನ್ಸ್: ಶೇ. 3.51
  10. ಟಾಟಾ ಮೋಟಾರ್ಸ್: ಶೇ. 3.35
  11. ಒಎನ್​ಜಿಸಿ: ಶೇ. 3.09

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ