Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಕ್​ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಕ್ಕೆ ಲಾರಿ ಮಾಲೀಕರ ವಿರೋಧ; ಜೀವಿತಾವಧಿ ತೆರಿಗೆ ಹಿಂಪಡೆಯುವ ಕ್ರಮಕ್ಕೆ ಸ್ವಾಗತ

Truck Owners Oppose Mandatory AC Cabin: ಟ್ರಕ್ ಚಾಲಕರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಸರಕು ಸಾಗಣೆ ವಾಹನಗಳಲ್ಲಿ ಡ್ರೈವರ್ ಕ್ಯಾಬಿನ್​ಗೆ ಎಸಿ ಅಳವಡಿಕೆ 2025ರ ಅಕ್ಟೋಬರ್​ನಿಂದ ಕಡ್ಡಾಯಪಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಲಾರಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮೋಟಾರ್ ಟ್ರಾನ್ಸ್​ಪೋರ್ಟ್ ಕಾಂಗ್ರೆಸ್ ಅಧ್ಯಕ್ಷ ಷಣ್ಮುಗಪ್ಪ ಟಿವಿ9 ಜೊತೆ ಮಾತನಾಡಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರ ಜೀವಿತಾವಧಿ ತೆರಿಗೆ ವಿಧಿಸುವುದನ್ನ ಹಿಂಪಡೆದಿರೋದಕ್ಕೆ ಲಾರಿ ಮಾಲೀಕರು ಖುಷಿ ಆಗಿದ್ದಾರೆ.

ಟ್ರಕ್​ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಕ್ಕೆ ಲಾರಿ ಮಾಲೀಕರ ವಿರೋಧ; ಜೀವಿತಾವಧಿ ತೆರಿಗೆ ಹಿಂಪಡೆಯುವ ಕ್ರಮಕ್ಕೆ ಸ್ವಾಗತ
ಸಾಂದರ್ಭಿಕ ಚಿತ್ರ
Follow us
Vinayak Hanamant Gurav
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Dec 14, 2023 | 5:46 PM

ಬೆಂಗಳೂರು, ಡಿಸೆಂಬರ್ 14: ಎಲ್ಲಾ ಕರ್ಮಷಿಯಲ್ ಟ್ರಕ್ ವಾಹನಗಳಲ್ಲಿ 2025ರ ಅಕ್ಟೋಬರ್​ನಿಂದ ಎಸಿ ಕ್ಯಾಬಿನ್ (Air Condition System) ಕಡ್ಡಾಯಗೊಳಿಸಿ ಕೇಂದ್ರ ಸಾರಿಗೆ ಇಲಾಖೆ ಮೊನ್ನೆ ಅಧಿಸೂಚನೆ ಹೊರಡಿಸಿತ್ತು. ಸರ್ಕಾರದ ಈ ಕ್ರಮಕ್ಕೆ ಲಾರಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಎಸಿ ಅಳವಡಿಕೆಯಿಂದ ಶೇ. 40ರಷ್ಟು ಡೀಸೆಲ್ ಬಳಕೆ ಆಗುತ್ತದೆ. ಎಂಜಿನ್ ಬೇಗ ಕೆಡುತ್ತದೆ. ಎಸಿ ಅಳವಡಿಕೆಯನ್ನು ಕಡ್ಡಾಯ ಮಾಡುವುದು ಬೇಡ. ಪರ್ಯಾಯ ಮಾರ್ಗ ಕೊಡಿ ಎಂದು ಅಖಿಲ ಭಾರತ ಮೋಟಾರು ಸಾರಿಗೆ ಸಂಸ್ಥೆ (All India Motor Transport congress) ಅಧ್ಯಕ್ಷ ಷಣ್ಮುಗಪ್ಪ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.

ಮೋಟಾರು ವಾಹನ ತೆರಿಗೆ 2023 ರ ವಿಧೇಯಕ ಮಂಡನೆಯಾಗಿತ್ತು. ಈ ಬಗ್ಗೆ ಲಾರಿ ಮಾಲೀಕರ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಸರ್ಕಾರ ಜೀವಿತಾವಧಿ ತೆರಿಗೆ ವಿಧಿಸುವುದನ್ನ ಹಿಂಪಡೆದು, ಹಿಂದಿನಂತೆ ತ್ರೈಮಾಸಿಕ ತೆರಿಗೆ ಸಂಗ್ರಹ ಕಲ್ಪಿಸಲು ಅವಕಾಶ ನೀಡಿ 2 ನೇ ವಿಧೇಯಕ ಮೂಲಕ ತಿದ್ದುಪಡಿಗೆ ಮಂಡನೆ ಮಾಡಿತ್ತು. ಇದನ್ನು ಸ್ವಾಗತಿಸಿರುವ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್​ಪೋರ್ಟ್ ಕಾಂಗ್ರೆಸ್ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: EV Import: ಎಲೆಕ್ಟ್ರಿಕ್ ಕಾರು ಆಮದಿಗೆ ತೆರಿಗೆ ವಿನಾಯಿತಿ ಇಲ್ಲ: ಸರ್ಕಾರ ಸಂದೇಶ; ಇಲಾನ್ ಮಸ್ಕ್, ಟೆಸ್ಲಾ ಮುಂದಿನ ಹಾದಿ ಏನು?

ಪ್ರಸ್ತುತ, ಯಾವ ವಾಹನಕ್ಕೆ ಎಷ್ಟು ತೆರಿಗೆ?

  • 1.5 ಟನ್‍ನಿಂದ 2 ಟನ್ ತೂಕದ ಹೊಸ ಸರಕು ಸಾಗಣೆ ವಾಹನಗಳಿಗೆ 20 ಸಾವಿರ ರೂ.
  • 2 ರಿಂದ 3 ಟನ್ ವಾಹನಗಳಿಗೆ 30 ಸಾವಿರ ರೂ.
  • 3 ರಿಂದ 5.5 ಟನ್ ವಾಹನಗಳಿಗೆ 40 ಸಾವಿರ ರೂ.
  • 5.5 ರಿಂದ 7.5 ಟನ್ ತೂಕದ ವಾಹನಗಳಿಗೆ 60 ಸಾವಿರ ರೂ.
  • 7.5 ರಿಂದ 9.5 ಟನ್ ವಾಹನಗಳಿಗೆ 80 ಸಾವಿರ ರೂ.
  • 9.5 ಟನ್‍ನಿಂದ 12 ಟನ್ ತೂಕದ ವಾಹನಗಳಿಗೆ 1 ಲಕ್ಷ ರೂ. ಜೀವಿತಾವಧಿ ತೆರಿಗೆ ನಿಗದಿ
  • 5 ಲಕ್ಷ ರೂ. ಮೀರದ ಹೊಸ ಸಾರ್ವಜನಿಕ ವಾಹನಗಳ ನೋಂದಣಿಗೆ ಅದರ ಬೆಲೆಯ ಶೇ. 13ರಷ್ಟು.
  • 10 ಲಕ್ಷದೊಳಗಿನ ವಾಹನಗಳಿಗೆ ಅದರ ಬೆಲೆಯ ಶೇ.14.
  • 20 ಲಕ್ಷದೊಳಗಿನ ವಾಹನಗಳಿಗೆ ಅದರ ಬೆಲೆಯ ಶೇ. 17
  • 20 ಲಕ್ಷ ಮೇಲ್ಪಟ್ಟ ವಾಹನಗಳಿಗೆ ಅದರ ಬೆಲೆಯ ಶೇ.18
  • ವಿದ್ಯುತ್ ಚಾಲಿತ ವಾಹನಗಳಿಗೆ ಅದರ ಬೆಲೆಯ ಶೇ. 4ರಷ್ಟು ತೆರಿಗೆ ನಿಗದಿ.

ಇದನ್ನೂ ಓದಿ: ಚಿನ್ನದ ಬೆಲೆ ಹೆಚ್ಚಳದ ಹಿಂದೆ ಇದೆಯಾ ಅಮೆರಿಕದ ಬಡ್ಡಿದರ? ಬಡ್ಡಿಗೂ ಚಿನ್ನಕ್ಕೂ ಏನಿದು ಸಂಬಂಧ?

ಹಿಂದಿನ ತೆರಿಗೆ ಎಷ್ಟಿತ್ತು?

  • 1.5-2 ಟನ್ ವಾಹನ –10,000 ರೂ.
  • 2-3 ಟನ್ ವಾಹನ –15,000 ರೂ.
  • 3-5.5 ಟನ್ ವಾಹನ – 20,000 ರೂ.
  • 5.5-7.5 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 60,000 ರೂ.)
  • 7.5-9.5 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 80,000 ರೂ.)
  • 9.5-12 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 1 ಲಕ್ಷ ರೂ)

ಒಟ್ಟಿನಲ್ಲಿ ರಾಜ್ಯ ಸರ್ಕಾರ ಜೀವಿತಾವಧಿ ವಾಹನ ತೆರಿಗೆ ವಿಧಿಸುವುದನ್ನ ಹಿಂಪಡೆದಿರೋದಕ್ಕೆ ಖುಷ್ ಆಗಿದ್ದಾರೆ. ಆದರೆ ಅತ್ತ ಕೇಂದ್ರ ಸರ್ಕಾರ 2025 ರಿಂದ ಬರುವ ಎಲ್ಲಾ ಹೊಸ ಗೂಡ್ಸ್ ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿರೋದು ವಿರೋಧಕ್ಕೆ ಕಾರಣವಾಗಿದೆ. ಈಗಾಗಲೆ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಿಗೆ ಎಸಿ ವಾಹನ ಕರಡು ಹಿಂಪಡೆಯುವಂತೆ ಮೋಟಾರ್ ಅಸೋಸಿಯೇಷನ್ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕರುಡು ಹಿಂಪಡೆಯುತ್ತಾ ಇಲ್ಲವಾ ಕಾದು ನೋಡಬೇಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ