AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Job Cut: 1500 ಮ್ಯಾನೇಜ್​ಮೆಂಟ್ ಉದ್ಯೋಗ ಕಡಿತದ ಘೋಷಣೆ ಮಾಡಿದ ಯುನಿಲಿವರ್

ಯುನಿಲಿವರ್ ಕಂಪೆನಿಯಿಂದ 1500 ಮ್ಯಾನೇಜ್​ಮೆಂಟ್ ಉದ್ಯೋಗದ ಕಡಿತದ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Job Cut: 1500 ಮ್ಯಾನೇಜ್​ಮೆಂಟ್ ಉದ್ಯೋಗ ಕಡಿತದ ಘೋಷಣೆ ಮಾಡಿದ ಯುನಿಲಿವರ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jan 25, 2022 | 11:38 PM

Share

ಯುನಿಲಿವರ್ (Unilever) ಮಂಗಳವಾರದಂದು ಘೋಷಣೆ ಮಾಡಿರುವಂತೆ ಸುಮಾರು 1,500 ಮ್ಯಾನೇಜ್‌ಮೆಂಟ್ ಉದ್ಯೋಗಗಳನ್ನು ಕಡಿತಗೊಳಿಸಲಿದೆ (Job Cut). ಕಂಪೆನಿಯೊಂದರ ಸ್ವಾಧೀನದ ಬಿಡ್ ವಿಫಲವಾದ ನಂತರ ಷೇರುದಾರರ ಕಳವಳವನ್ನು ನಿವಾರಿಸುವ ನಿಟ್ಟಿನಲ್ಲಿ ಕಂಪೆನಿಯು ಈ ಗುರಿಯನ್ನು ಹೊಂದಿದೆ ಮತ್ತು ಪ್ರಭಾವಿ ಹೂಡಿಕೆದಾರರು ಈ ಕನ್ಸ್ಯೂಮರ್ ಗೂಡ್ಸ್ ಕಂಪೆನಿಯಲ್ಲಿ ಪಾಲನ್ನು ಹೆಚ್ಚು ಹೊಂದಿದ್ದಾರೆ. ಪ್ರಪಂಚದಾದ್ಯಂತ ಸುಮಾರು 1,49,000 ಜನರನ್ನು ನೇಮಿಸಿಕೊಂಡಿರುವ ಡೌ ಸೋಪ್ ಮತ್ತು ಮ್ಯಾಗ್ನಮ್ ಐಸ್ ಕ್ರೀಮ್ ತಯಾರಕ ಕಂಪೆನಿಯಾದ ಯುನಿಲಿವರ್ ಮಂಗಳವಾರದಂದು ತನ್ನ ವ್ಯವಹಾರವನ್ನು ಐದು ಹೊಸ ವಿಭಾಗಗಳಾಗಿ ಆಯೋಜಿಸುವುದಾಗಿ ಹೇಳಿತು – ಸೌಂದರ್ಯ ಮತ್ತು ಯೋಗಕ್ಷೇಮ, ವೈಯಕ್ತಿಕ ಆರೈಕೆ, ಮನೆಯ ಆರೈಕೆ, ಪೋಷಣೆ ಮತ್ತು ಐಸ್ ಕ್ರೀಮ್ ಇವೇ ಆ 5 ವಿಭಾಗಗಳು.

“ನಮ್ಮ ಹೊಸ ಸಾಂಸ್ಥಿಕ ಮಾದರಿಯನ್ನು ಕಳೆದ ವರ್ಷದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಐದು ವರ್ಗ-ಕೇಂದ್ರಿತ ವ್ಯಾಪಾರ ಗುಂಪುಗಳಿಗೆ ಬದಲಾವಣೆ ಮಾಡಿಕೊಳ್ಳುವುದರಿಂದ ಗ್ರಾಹಕ ಮತ್ತು ಚಾನೆಲ್ ಟ್ರೆಂಡ್‌ಗಳಿಗೆ ಹೆಚ್ಚು ಸ್ಪಂದಿಸಲು, ಜತೆಗೆ ಸ್ಪಷ್ಟ ಹೊಣೆಗಾರಿಕೆಯೊಂದಿಗೆ ನಮಗೆ ಸಾಧ್ಯವಾಗುತ್ತದೆ,” ಎಂದು ಸಿಇಒ ಅಲನ್ ಜೋಪ್ ಹೇಳಿದ್ದಾರೆ. ಯುನಿಲಿವರ್ ಷೇರುಗಳು ಕಳೆದ ವರ್ಷದಲ್ಲಿ ಸುಮಾರು ಶೇ 13ರಷ್ಟು ಕುಸಿದಿದೆ. ಕಳೆದ ವಾರ 50 ಶತಕೋಟಿ ಪೌಂಡ್‌ಗಳಿಗೆ (67 ಶತಕೋಟಿ ಡಾಲರ್) ಗ್ಲಾಕ್ಸೊ ಸ್ಮಿತ್‌ಕ್ಲೈನ್‌ನ ಗ್ರಾಹಕ ಆರೋಗ್ಯ ವ್ಯವಹಾರವನ್ನು ಖರೀದಿಸುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕೈ ಬಿಟ್ಟಿದೆ.

ಪ್ರಭಾವಿ ಹೂಡಿಕೆದಾರ ನೆಲ್ಸನ್ ಪೆಲ್ಟ್ಜ್‌ನ ಟ್ರೈಯಾನ್ ಪಾಲುದಾರರು ವಿಶ್ವದ ಎರಡನೇ ಅತಿದೊಡ್ಡ ವೈಯಕ್ತಿಕ ಆರೈಕೆ ಉತ್ಪನ್ನಗಳ ತಯಾರಕರಲ್ಲಿ ಪಾಲನ್ನು ಹೆಚ್ಚಿಸುತ್ತಿದ್ದಾರೆ ಎಂಬ ವರದಿಗಳ ನಂತರ ಈ ಪ್ರಕಟಣೆಯು ಬಂದಿದೆ.

ಇದನ್ನೂ ಓದಿ: Work From Home: 18ಕ್ಕೂ ಹೆಚ್ಚು ತಿಂಗಳ ನಂತರ ಮತ್ತೆ ಆಫೀಸಿಗೆ ಬರಬೇಕಂದರೆ ಉದ್ಯೋಗಿಗಳು- ಉದ್ಯೋಗದಾತರು ಏನಂತಾರೆ?

Published On - 11:37 pm, Tue, 25 January 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ