AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Job Cut: 1500 ಮ್ಯಾನೇಜ್​ಮೆಂಟ್ ಉದ್ಯೋಗ ಕಡಿತದ ಘೋಷಣೆ ಮಾಡಿದ ಯುನಿಲಿವರ್

ಯುನಿಲಿವರ್ ಕಂಪೆನಿಯಿಂದ 1500 ಮ್ಯಾನೇಜ್​ಮೆಂಟ್ ಉದ್ಯೋಗದ ಕಡಿತದ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Job Cut: 1500 ಮ್ಯಾನೇಜ್​ಮೆಂಟ್ ಉದ್ಯೋಗ ಕಡಿತದ ಘೋಷಣೆ ಮಾಡಿದ ಯುನಿಲಿವರ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jan 25, 2022 | 11:38 PM

Share

ಯುನಿಲಿವರ್ (Unilever) ಮಂಗಳವಾರದಂದು ಘೋಷಣೆ ಮಾಡಿರುವಂತೆ ಸುಮಾರು 1,500 ಮ್ಯಾನೇಜ್‌ಮೆಂಟ್ ಉದ್ಯೋಗಗಳನ್ನು ಕಡಿತಗೊಳಿಸಲಿದೆ (Job Cut). ಕಂಪೆನಿಯೊಂದರ ಸ್ವಾಧೀನದ ಬಿಡ್ ವಿಫಲವಾದ ನಂತರ ಷೇರುದಾರರ ಕಳವಳವನ್ನು ನಿವಾರಿಸುವ ನಿಟ್ಟಿನಲ್ಲಿ ಕಂಪೆನಿಯು ಈ ಗುರಿಯನ್ನು ಹೊಂದಿದೆ ಮತ್ತು ಪ್ರಭಾವಿ ಹೂಡಿಕೆದಾರರು ಈ ಕನ್ಸ್ಯೂಮರ್ ಗೂಡ್ಸ್ ಕಂಪೆನಿಯಲ್ಲಿ ಪಾಲನ್ನು ಹೆಚ್ಚು ಹೊಂದಿದ್ದಾರೆ. ಪ್ರಪಂಚದಾದ್ಯಂತ ಸುಮಾರು 1,49,000 ಜನರನ್ನು ನೇಮಿಸಿಕೊಂಡಿರುವ ಡೌ ಸೋಪ್ ಮತ್ತು ಮ್ಯಾಗ್ನಮ್ ಐಸ್ ಕ್ರೀಮ್ ತಯಾರಕ ಕಂಪೆನಿಯಾದ ಯುನಿಲಿವರ್ ಮಂಗಳವಾರದಂದು ತನ್ನ ವ್ಯವಹಾರವನ್ನು ಐದು ಹೊಸ ವಿಭಾಗಗಳಾಗಿ ಆಯೋಜಿಸುವುದಾಗಿ ಹೇಳಿತು – ಸೌಂದರ್ಯ ಮತ್ತು ಯೋಗಕ್ಷೇಮ, ವೈಯಕ್ತಿಕ ಆರೈಕೆ, ಮನೆಯ ಆರೈಕೆ, ಪೋಷಣೆ ಮತ್ತು ಐಸ್ ಕ್ರೀಮ್ ಇವೇ ಆ 5 ವಿಭಾಗಗಳು.

“ನಮ್ಮ ಹೊಸ ಸಾಂಸ್ಥಿಕ ಮಾದರಿಯನ್ನು ಕಳೆದ ವರ್ಷದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಐದು ವರ್ಗ-ಕೇಂದ್ರಿತ ವ್ಯಾಪಾರ ಗುಂಪುಗಳಿಗೆ ಬದಲಾವಣೆ ಮಾಡಿಕೊಳ್ಳುವುದರಿಂದ ಗ್ರಾಹಕ ಮತ್ತು ಚಾನೆಲ್ ಟ್ರೆಂಡ್‌ಗಳಿಗೆ ಹೆಚ್ಚು ಸ್ಪಂದಿಸಲು, ಜತೆಗೆ ಸ್ಪಷ್ಟ ಹೊಣೆಗಾರಿಕೆಯೊಂದಿಗೆ ನಮಗೆ ಸಾಧ್ಯವಾಗುತ್ತದೆ,” ಎಂದು ಸಿಇಒ ಅಲನ್ ಜೋಪ್ ಹೇಳಿದ್ದಾರೆ. ಯುನಿಲಿವರ್ ಷೇರುಗಳು ಕಳೆದ ವರ್ಷದಲ್ಲಿ ಸುಮಾರು ಶೇ 13ರಷ್ಟು ಕುಸಿದಿದೆ. ಕಳೆದ ವಾರ 50 ಶತಕೋಟಿ ಪೌಂಡ್‌ಗಳಿಗೆ (67 ಶತಕೋಟಿ ಡಾಲರ್) ಗ್ಲಾಕ್ಸೊ ಸ್ಮಿತ್‌ಕ್ಲೈನ್‌ನ ಗ್ರಾಹಕ ಆರೋಗ್ಯ ವ್ಯವಹಾರವನ್ನು ಖರೀದಿಸುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕೈ ಬಿಟ್ಟಿದೆ.

ಪ್ರಭಾವಿ ಹೂಡಿಕೆದಾರ ನೆಲ್ಸನ್ ಪೆಲ್ಟ್ಜ್‌ನ ಟ್ರೈಯಾನ್ ಪಾಲುದಾರರು ವಿಶ್ವದ ಎರಡನೇ ಅತಿದೊಡ್ಡ ವೈಯಕ್ತಿಕ ಆರೈಕೆ ಉತ್ಪನ್ನಗಳ ತಯಾರಕರಲ್ಲಿ ಪಾಲನ್ನು ಹೆಚ್ಚಿಸುತ್ತಿದ್ದಾರೆ ಎಂಬ ವರದಿಗಳ ನಂತರ ಈ ಪ್ರಕಟಣೆಯು ಬಂದಿದೆ.

ಇದನ್ನೂ ಓದಿ: Work From Home: 18ಕ್ಕೂ ಹೆಚ್ಚು ತಿಂಗಳ ನಂತರ ಮತ್ತೆ ಆಫೀಸಿಗೆ ಬರಬೇಕಂದರೆ ಉದ್ಯೋಗಿಗಳು- ಉದ್ಯೋಗದಾತರು ಏನಂತಾರೆ?

Published On - 11:37 pm, Tue, 25 January 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ