Sign In

By signing in or creating an account, you agree with Associated Broadcasting Company's Terms & Conditions and Privacy Policy.

Social Trailblazer: ಯುವಜನರ ನವೋತ್ಸಾಹದಲ್ಲಿ ಭಾರತ ಹೊಸ ಹೆಜ್ಜೆ: ಸೋಷಿಯಲ್ ಟ್ರೇಲ್​ಬ್ಲೇಜರ್ ಕಾರ್ಯಕ್ರಮ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಶ್ಲಾಘನೆ

Union Minister Dharmendra Pradhan Inaugurates Social Trailblazer Event: ಎಲ್​ಐಸಿ ಎಚ್​ಎಫ್​ಎಲ್ ಮತ್ತು ಐಆರ್​ಎಂಎ ಐಸೀಡ್ ಫೌಂಡೇಶನ್ ಜಂಟಿಯಾಗಿ ಆಯೋಜಿಸಿರುವ ಎರಡನೇ ಆವೃತ್ತಿಯ ಸೋಷಿಯಲ್ ಟ್ರೇಲ್​ಬ್ಲೇಜರ್ ಕಾರ್ಯಕ್ರಮವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದ್ದಾರೆ.

Social Trailblazer: ಯುವಜನರ ನವೋತ್ಸಾಹದಲ್ಲಿ ಭಾರತ ಹೊಸ ಹೆಜ್ಜೆ: ಸೋಷಿಯಲ್ ಟ್ರೇಲ್​ಬ್ಲೇಜರ್ ಕಾರ್ಯಕ್ರಮ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಶ್ಲಾಘನೆ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 05, 2023 | 10:49 AM

ನವದೆಹಲಿ: ಯುವ ಶಕ್ತಿಯ ಉದ್ಯಮಶೀಲತಾ ಉತ್ಸಾಹ ಹಾಗೂ ಹೊಸ ಆಲೋಚನೆಗಳಿಂದ ಬಲ ಪಡೆದ ಭಾರತ ಹೊಸ ಹಂತಕ್ಕೆ ಕಾಲಿಡುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Union Education Minister Dharmendra Pradhan) ಅಭಿಪ್ರಾಯಪಟ್ಟಿದ್ದಾರೆ. ಎಲ್​ಐಸಿ ಹೌಸಿಂಗ್ ಫೈನಾನ್ಸ್ ಲಿ ಮತ್ತು ಐಆರ್​ಎಂಎ ಐಸೀಡ್ ಫೌಂಡೇಶನ್ (IRMA iSeed Foundation) ವತಿಯಿಂದ ಆಯೋಜಿಸಲಾಗಿದ್ದ ಎರಡನೇ ಆವೃತ್ತಿಯ ಸೋಷಿಯಲ್ ಟ್ರೇಲ್​ಬ್ಲೇಜರ್ (Social Trailblazer) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಧರ್ಮೇಂದ್ರ ಪ್ರಧಾನ್, ತಳಮಟ್ಟದಲ್ಲಿ ಸಾಮಾಜಿಕ ಉದ್ಯಮಶೀಲತಾ ವ್ಯವಸ್ಥೆಗೆ ಉತ್ತೇಜನ ತುಂಬುವ ಕೆಲಸವಾಗಬೇಕು ಎಂದಿದ್ದಾರೆ.

20 ಸಾಮಾಜಿಕ ಉದ್ದಿಮೆದಾರರನ್ನು ಸೃಷ್ಟಿಸಿ ಸಮಾಧಾನಗೊಳ್ಳಬಾರದು ಎಂದು ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಗೆ ತಿಳಿಹೇಳಿದ ಕೇಂದ್ರ ಸಚಿವರು, ಸೋಷಿಯಲ್ ಟ್ರೇಲ್​ಬ್ಲೇಜರ್​ನಂತಹ ನವೀನ ಕಾರ್ಯಕ್ರಮಗಳು ಸಮಾಜಕ್ಕೆ ಒಳಿತು ಮಾಡುವ ಯುವಸಮುದಾಯದ ಪ್ರಯತ್ನಗಳಿಗೆ ಶಕ್ತಿ ತುಂಬಬಲ್ಲುವು ಎಂದಿದ್ದಾರೆ. ಹಾಗೆಯೇ, ಎಲ್​ಐಸಿ ಎಚ್​ಎಫ್​ಎಲ್ ಮತ್ತು ಐಆರ್​ಎಂಎ ಈ ಎರಡೂ ಸಂಸ್ಥೆಗಳು ಸರಿಯಾದ ಜಾಗದಲ್ಲಿ ಒಟ್ಟಿಗೆ ಸೇರಿರುವುದನ್ನು ಧರ್ಮೇಂದ್ರ ಪ್ರಧಾನ್ ಶ್ಲಾಘಿಸಿದ್ದಾರೆ.

ಇದನ್ನೂ ಓದಿInspiring: ಕಾಲೇಜು ಶುಲ್ಕ ಕಟ್ಟಲು ಚಹಾ ಮಾರುತ್ತಿದ್ದ ವಿಜಯ್ ಇವತ್ತು ಸಾವಿರ ಕೋಟಿ ರೂ ರಾಯಲ್ ಓಕ್ ಒಡೆಯ

‘ಐಆರ್​ಎಂಎ ಮತ್ತು ಎಲ್​ಐಸಿ ಎಚ್​ಎಫ್​ಎಲ್ ಸಂಸ್ಥೆಗಳು ಸಾಮಾಜಿಕ ಉದ್ದಿಮೆಗಳಿಗೆ ಸಹಾಯವಾಗಲು ಒಟ್ಟಿಗೆ ಪ್ರಯತ್ನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಯುವ ಶಕ್ತಿಯ ಉದ್ಯಮಶೀಲತಾ ಶಕ್ತಿಯೊಂದಿಗೆ ನವ ಭಾರತ ಹೊಸ ಹಂತಕ್ಕೆ ಪ್ರವೇಶಿಸುತ್ತದೆ. ಇಂಥ ಅನನ್ಯ ಕಾರ್ಯಕ್ರಮಗಳು ಯುವಜನರ ಸಮಾಜಸೇವಾ ಕೈಂಕರ್ಯಕ್ಕೆ ಹೊಸ ಉತ್ಸಾಹ ತುಂಬುತ್ತದೆ’ ಎಂದು ಕೇಂದ್ರ ಶಿಕ್ಷಣ ಸಚಿವರೂ ಆದ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಇನ್ಸ್​ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉಮಾಕಾಂತ್ ದಾಶ್ ಹಾಗೂ ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯ ಸಿಇಒ ಮತ್ತು ಎಂಡಿ ವೈ ವಿಶ್ವನಾಥ್ ಗೌಡ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿJio Bharat: 999 ರೂ ಬೆಲೆಯ ಜಿಯೋ ಭಾರತ್ ಫೋನ್; 10ಕೋಟಿ 2ಜಿ ಗ್ರಾಹಕರ ಸೆಳೆಯುವ ನಿರೀಕ್ಷೆ; ಷೇರುಪೇಟೆಯಲ್ಲಿ ಏರ್​ಟೆಲ್ ತತ್ತರ

ಎಲ್​ಐಸಿ ಎಚ್​ಎಫ್​ಎಲ್ ಮತ್ತು ಐಆರ್​ಎಂಎ ಸಂಸ್ಥೆಗಳು ಒಟ್ಟುಗೂಡಿ ನಡೆಸುತ್ತಿರುವ ಸೋಷಿಯಲ್ ಟ್ರೇಲ್​ಬ್ಲೇಜರ್ ಕಾರ್ಯಕ್ರಮವು ದೇಶದ ಯುವ ಸಮುದಾಯದವರಲ್ಲಿ ಸಾಮಾಜಿಕ ಕಾಳಜಿ ಇರುವ ಉದ್ಯಮಶೀಲತೆಗೆ ಉತ್ತೇಜನ ತುಂಬುವ ಉದ್ದೇಶ ಹೊಂದಿದೆ. ಆರೋಗ್ಯ, ಕಸತ್ಯಾಜ್ಯ ನಿರ್ವಹಣೆ, ಸ್ವಚ್ಛ ಇಂಧನ, ಕೃಷಿ ವ್ಯವಹಾರ, ಶಿಕ್ಷಣ, ಕೌಶಲ್ಯ ಅಭಿವೃದ್ದಿ ಕ್ಷೇತ್ರಗಳಲ್ಲಿ ನವ ಉದ್ದಿಮೆದಾರರನ್ನು ಬೆಳೆಸುವುದು ಈ ಕಾರ್ಯಕ್ರಮದ ಗುರಿ ಎಂದೆನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ