AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೈವಾನ್ ಮೇಲೆ ಚೀನಾ ಆಕ್ರಮಣವಾದರೆ ನಿಷ್ಕ್ರಿಯಗೊಳ್ಳಲಿವೆ ಚಿಪ್ ಮೆಷೀನ್ಸ್; ಯಾಕೆ ಹೀಗೆ?

What if China occupies Taiwan?: ತೈವಾನ್ ದೇಶ ತನಗೆ ಸೇರಿದ್ದು ಎನ್ನುತ್ತಿರುವ ಚೀನಾ ಯಾವಾಗ ಬೇಕಾದರೂ ಆಕ್ರಮಣ ಮಾಡಬಹುದು ಎನ್ನಲಾಗುತ್ತಿದೆ. ವಿಶ್ವದ ಚಿಪ್ ಹಬ್ ಆಗಿರುವ ತೈವಾನ್ ಮೇಲೆ ಚೀನಾ ಆಕ್ರಮಣ ಮಾಡಿದಲ್ಲಿ ಕೆಲ ಸೂಕ್ಷ್ಮ ಚಿಪ್ ತಂತ್ರಜ್ಞಾನಗಳು ಚೀನಾ ಪಾಲಾಗಬಹುದು ಎನ್ನುವ ಭೀತಿ ಅಮೆರಿಕಕ್ಕೆ ಇದೆ. ನೆದರ್​​ಲ್ಯಾಂಡ್ಸ್ ಮೂಲಕ ಎಎಸ್​ಎಂಎಲ್ ಸಂಸ್ಥೆ ಅತ್ಯಾಧುನಿಕ ಚಿಪ್ ಮೇಕಿಂಗ್ ಯಂತ್ರಗಳನ್ನು ತೈವಾನ್​ನ ಟಿಎಸ್​​ಎಂಸಿಗೆ ಪೂರೈಸುತ್ತದೆ. ಈ ಮೆಷೀನ್​ಗಳನ್ನು ತಾನಿರುವ ಸ್ಥಳದಿಂದಲೇ ಡಿಸೇಬಲ್ ಮಾಡಬಹುದು ಎಂದು ಆ ಸಂಸ್ಥೆ ಹೇಳಿಕೊಂಡಿದೆ.

ತೈವಾನ್ ಮೇಲೆ ಚೀನಾ ಆಕ್ರಮಣವಾದರೆ ನಿಷ್ಕ್ರಿಯಗೊಳ್ಳಲಿವೆ ಚಿಪ್ ಮೆಷೀನ್ಸ್; ಯಾಕೆ ಹೀಗೆ?
ಚಿಪ್ ಮೆಷೀನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2024 | 7:08 PM

ನ್ಯೂಯಾರ್ಕ್, ಮೇ 21: ಒಂದು ವೇಳೆ ಚೀನಾ ದೇಶ ತೈವಾನ್ ಮೇಲೆ ಆಕ್ರಮಣ ಮಾಡಿದಲ್ಲಿ ಪ್ರಮುಖ ಚಿಪ್ ತಯಾರಕ ಕಂಪನಿಗಳಾದ ಎಎಸ್​ಎಂಎಲ್ (ASML) ಮತ್ತು ಟಿಎಸ್​ಎಂಎಸ್ (TSMC) ತಮ್ಮ ಚಿಪ್ ಮೆಷೀನ್​ಗಳನ್ನು ಡಿಸೇಬಲ್ ಮಾಡಲಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಎಎಸ್​ಎಂಎಲ್ ಹೋಲ್ಡಿಂಗ್ ಎನ್​ವಿ ನೆದರ್​ಲ್ಯಾಂಡ್ಸ್ ದೇಶದ ಕಂಪನಿಯಾಗಿದೆ. ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕೋ ಅಥವಾ ಟಿಎಸ್​ಎಂಸಿ ತೈವಾನ್ ಮೂಲದ ಕಂಪನಿಯಾಗಿದೆ. ಅಮೆರಿಕ ಸರ್ಕಾರವೇ ಖುದ್ದಾಗಿ ಈ ಮನವಿ ಮಾಡಿಕೊಂಡಿದೆಯಂತೆ. ಒಂದು ವೇಳೆ ತೈವಾನ್ ಮೇಲೆ ಚೀನಾ ಆಕ್ರಮಣ (china attacking taiwan) ಮಾಡಿಯೇ ಬಿಟ್ಟಲ್ಲಿ ಚಿಪ್ ತಯಾರಿಸುವ ಮೆಷಿನ್​ಗಳು ಚೀನಾ ಪಾಲಾಗಬಹುದು ಎನ್ನುವ ಆತಂಕವನ್ನು ನೆದರ್​​ಲ್ಯಾಂಡ್ಸ್ ಮತ್ತು ತೈವಾನ್ ಸರ್ಕಾರದ ಮುಂದೆ ಅಮೆರಿಕ ತೋಡಿಕೊಂಡಿದೆ ಎನ್ನಲಾಗುತ್ತಿದೆ.

ಚಿಪ್ ಮೆಷೀನ್ ಡಿಸೇಬಲ್ ಮಾಡಲು ಒಪ್ಪಿರುವ ಕಂಪನಿಗಳು

ಅಮೆರಿಕ ಆತಂಕ ತೋಡಿಕೊಂಡ ಬೆನ್ನಲ್ಲೇ ಡಚ್ ಮತ್ತು ತೈವಾನ್ ಸರ್ಕಾರಗಳು ತಮ್ಮ ದೇಶದ ಚಿಪ್ ತಯಾರಕ ಕಂಪನಿಗಳೊಂದಿಗೆ ಈ ಬಗ್ಗೆ ಮಾತನಾಡಿವೆ. ಎಎಸ್​ಎಂಎಲ್ ಚಿಪ್ ತಯಾರಿಸುವ ಮೆಷೀನ್​ಗಳನ್ನು ಸರಬರಾಜು ಮಾಡುತ್ತದೆ. ತೈವಾನ್​ನ ಟಿಎಸ್​ಎಂಸಿ ಅದರ ಪ್ರಮುಖ ಗ್ರಾಹಕ. ಈ ಮೆಷೀನ್​ಗಳನ್ನು ತಾವಿರುವ ಸ್ಥಳದಿಂದಲೇ ನಿಷ್ಕ್ರಿಯಗೊಳಿಸಲು ಸಾಧ್ಯ. ಚೀನಾವೇನಾದರೂ ತೈವಾನ್ ಮೇಲೆ ಆಕ್ರಮಣ ಮಾಡಿದರೆ ಇಲ್ಲಿಂದಲೇ ಮೆಷೀನ್ ಅನ್ನು ಡಿಸೇಬಲ್ ಮಾಡಲು ಸಾಧ್ಯ ಎಂದು ಎಎಸ್​ಎಂಎಲ್ ಸಂಸ್ಥೆಯ ಅಧಿಕಾರಿಗಳು ತಮ್ಮ ಸರ್ಕಾರಕ್ಕೆ ಭರವಸೆ ಕೊಟ್ಟಿದೆಯಂತೆ.

ಇದನ್ನೂ ಓದಿ: ರಷ್ಯಾ ತೈಲಕ್ಕಾಗಿ ಸರ್ಕಾರಿ ಸಂಸ್ಥೆಗಳ ಜೊತೆ ಸೇರಿ ಸಂಧಾನ ನಡೆಸಿ: ರಿಲಾಯನ್ಸ್​ಗೆ ಸರ್ಕಾರ ಮನವಿ

ಎಎಸ್​ಎಂಎಲ್ ಚಿಪ್​ನಲ್ಲಿ ಅಂಥದ್ದೇನಿದೆ?

ನೆದರ್​ಲ್ಯಾಂಡ್ಸ್​ನ ಎಎಸ್​ಎಂಎಲ್ ಬಳಿ ಚಿಪ್ ತಯಾರಿಸಲು ವಿವಿಧ ರೀತಿಯ ಮೆಷೀನ್​ಗಳಿವೆ. ಇದರಲ್ಲಿ ಇಯುವಿ ಅಥವಾ ಎಕ್ಸ್​​ಟ್ರೀಮ್ ಅಲ್ಟ್ರಾವಯಲೆಟ್ ಮೆಷೀನ್​ಗಳೂ ಇವೆ. ಈ ಇಯುವಿ ಮೆಷೀನ್​ಗಳು ಹೈ ಫ್ರೀಕ್ವನ್ಸಿ ಲೈಟ್ ವೇವ್​ಗಳನ್ನು ಸೃಷ್ಟಿಸಿ ಅತಿಸಣ್ಣ ಮೈಕ್ರೋಚಿಪ್ ಟ್ರಾನ್ಸಿಸ್ಟರ್​ಗಳನ್ನು ಮುದ್ರಿಸಬಲ್ಲುವು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಪ್ಲಿಕೇಶನ್​ಗಳಿಗೆ ಬಳಸಲು ಮತ್ತು ಬಹಳ ಸೂಕ್ಷ್ಮ ಮಿಲಿಟರಿ ಅಪ್ಲಿಕೇಶನ್​ಗಳಿಗೆ ಬಳಸಲು ಈ ಪುಟ್ಟ ಚಿಪ್​ಗಳು ನೆರವಿಗೆ ಬರುತ್ತವೆ.

ಈ ಇಯುವಿ ಮೆಷೀನ್​ಗಳು ಒಂದು ಬಸ್ ಗಾತ್ರದ್ದಾಗಿರುತ್ತದೆ. ಇಡೀ ವಿಶ್ವದಲ್ಲಿ ನೆದರ್​ಲ್ಯಾಂಡ್ಸ್​ನ ಎಎಸ್​ಎಂಎಲ್ ಸಂಸ್ಥೆ ಮಾತ್ರವೇ ಈ ಮಹಾ ಚಿಪ್ ಯಂತ್ರವನ್ನು ತಯಾರಿಸುವುದು. ಒಂದು ಯಂತ್ರಕ್ಕೆ 217 ಮಿಲಿಯನ್ ಡಾಲರ್, ಅಥವಾ 1,800 ಕೋಟಿ ರೂ ಬೆಲೆ ಇದೆ.

ಇದನ್ನೂ ಓದಿ: ಒಂದೇ ವರ್ಷದಲ್ಲಿ 1 ಟ್ರಿಲಿಯನ್ ಡಾಲರ್ ಹೆಚ್ಚಿಸಿಕೊಂಡ ಭಾರತೀಯ ಷೇರುಪೇಟೆ; ಮೊದಲ ಬಾರಿಗೆ 5 ಟ್ರಿಲಿಯನ್ ಮೈಲಿಗಲ್ಲು

ಅಮೆರಿಕ-ಚೀನಾ ಚಿಪ್ ವಾರ್

ತಂತ್ರಜ್ಞಾನದಲ್ಲಿ ಹಲವು ದಶಕಗಳಿಂದ ಅಮೆರಿಕವೇ ಸೂಪರ್ ಪವರ್ ದೇಶವಾಗಿದೆ. ವೈಜ್ಞಾನಿಕ ಸಂಶೋಧನೆಗಳಿಂದ ಹಿಡಿದು ತಂತ್ರಜ್ಞಾನ ಆವಿಷ್ಕಾರಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಚೀನಾ ಕೂಡ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳೆದಿದೆ. ಕೆಲವೊಂದು ವಿಚಾರಗಳಲ್ಲಿ ಅಮೆರಿಕವನ್ನೂ ಮೀರಿಸಿ ಚೀನಾ ಮುನ್ನಡೆಯುತ್ತಿದೆ ಎನ್ನಲಾಗುತ್ತಿದೆ.

ಭವಿಷ್ಯದಲ್ಲಿ ಚಿಪ್​ಗಳು ಬಹಳ ದೊಡ್ಡ ಪಾತ್ರ ವಹಿಸಲಿವೆ. ಈ ತಂತ್ರಜ್ಞಾನವನ್ನು ಯಾರು ಹೆಚ್ಚು ಬೆಳೆಸಿಕೊಂಡು ಹೋಗುತ್ತಾರೋ ಅವರು ಪಾರುಪತ್ಯ ಮೆರೆಯಲಿದ್ದಾರೆ. ಅಂತೆಯೇ, ಈ ರೇಸ್​ನಲ್ಲಿ ಚೀನಾ ಮುಂಚೂಣಿಗೆ ಬರಬಾರದು ಎಂಬುದು ಅಮೆರಿಕದ ಇರಾದೆ. ಅದಕ್ಕೆ ಎಎಸ್​ಎಂಎಲ್​ನ ಅತ್ಯಾಧುನಿಕ ಚಿಪ್ ಮೇಕಿಂಗ್ ಮೆಷೀನ್​ನ ತಂತ್ರಜ್ಞಾನ ಚೀನೀಯರ ಕೈಗೆ ಸಿಗಬಾದು ಎಂದು ಅದು ಬಯಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್