AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

China

China

ಚೀನಾ, ಅಧಿಕೃತವಾಗಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ, ಪ್ರದೇಶದ ಪ್ರಕಾರ ಮೂರನೇ ಅತಿದೊಡ್ಡ ದೇಶವಾಗಿದೆ. ಪೂರ್ವ ಏಷ್ಯಾದಲ್ಲಿ ನೆಲೆಗೊಂಡಿರುವ ಇದು ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿದ್ದು ಕಲೆ, ವಿಜ್ಞಾನ ಮತ್ತು ತತ್ತ್ವಶಾಸ್ತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಇದರ ರಾಜಧಾನಿ ಬೀಜಿಂಗ್.

ಚೀನಾ ಕ್ಷಿಪ್ರ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಹೊಂದಿದ್ದು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ಗ್ರೇಟ್ ವಾಲ್, ಯಾಂಗ್ಟ್ಜಿ ನದಿ ಮತ್ತು ಶಾಂಘೈನಂತಹ ಆಧುನಿಕ ಮಹಾನಗರಗಳು ಸೇರಿದಂತೆ ವೈವಿಧ್ಯಮಯ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಚೀನಾ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ನೇತೃತ್ವದ ಸಮಾಜವಾದಿ ಏಕ-ಪಕ್ಷದ ವ್ಯವಸ್ಥೆಯನ್ನು ಹೊಂದಿದೆ.

ಚೀನಾದ ಜಾಗತಿಕ ಪ್ರಭಾವವು ವ್ಯಾಪಾರ, ತಂತ್ರಜ್ಞಾನ ಮತ್ತು ಭೌಗೋಳಿಕ ರಾಜಕೀಯದಲ್ಲಿ ವಿಸ್ತರಿಸಿದೆ. ಇದು ಪರಿಸರ ಸಮಸ್ಯೆಗಳು, ಮಾನವ ಹಕ್ಕುಗಳ ಕಾಳಜಿ ಮತ್ತು ಪ್ರಾದೇಶಿಕ ವಿವಾದಗಳಂತಹ ಸವಾಲುಗಳನ್ನು ಎದುರಿಸುತ್ತಿದೆ. ಜಾಗತಿಕ ವ್ಯವಹಾರಗಳನ್ನು ರೂಪಿಸುವಲ್ಲಿ ದೇಶವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನೂ ಹೆಚ್ಚು ಓದಿ

India’s Power: ವಿದ್ಯುತ್ ಉತ್ಪಾದನೆ ಹೆಚ್ಚಳ: ಚೀನಾ, ಅಮೆರಿಕ ನಂತರ ಭಾರತವೇ ಮುಂದು

Power generation capacity growth in India: ಕಳೆದ ಐದು ವರ್ಷದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ದೇಶಗಳ ಸಾಲಿನಲ್ಲಿ ಭಾರತ 3ನೇ ಸ್ಥಾನ ಪಡೆದಿದೆ. ಚೀನಾ, ಅಮೆರಿಕ ನಂತರ ಭಾರತವು ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಅತಿ ಹೆಚ್ಚಳ ಕಂಡಿದೆ ಎಂದು ಐಇಎ ಹೇಳಿದೆ. ಭಾರತದಲ್ಲಿ ಕಮರ್ಷಿಯಲ್ ಮತ್ತು ರೆಸಿಡೆನ್ಷಿಯಲ್ ಸ್ಥಳ, ಎಸಿ, ಗೃಹೋಪಕರಣ, ಕೈಗಾರಿಕೆಗಳು ವಿದ್ಯುತ್​​ಗೆ ಬೇಡಿಕೆ ಹೆಚ್ಚಿಸಿವೆ.

IMEC: ಗ್ಲೋಬಲ್ ಸಮಿಟ್​​ನಲ್ಲಿ IMEC ಬಗ್ಗೆ ಚರ್ಚೆ; ಭಾರತಕ್ಕೆ ಈ ಕಾರಿಡಾರ್ ವರದಾನ ಹೇಗೆ?

India Middle-east Europe Economic Corridor: ಮಧ್ಯಪ್ರಾಚ್ಯದ ಕೆಲ ದೇಶಗಳು, ಯೂರೋಪ್, ಅಮೆರಿಕ ಮತ್ತು ಭಾರತ ಭಾಗಿಯಾಗಿರುವ ಐಎಂಇಸಿ ಕಾರಿಡಾರ್ ಭಾರತಕ್ಕೆ ಗೇಮ್ ಚೇಂಜರ್ ಆಗಬಹುದು. ಈ ಕಾರಿಡಾರ್ ಬಗ್ಗೆ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ತಜ್ಞರು ಮಾತನಾಡಿದ್ದಾರೆ. ಈ ಯೋಜನೆ ಭಾರತಕ್ಕೆ ಹಾಗೂ ವಿಶ್ವದ ಆರ್ಥಿಕತೆಗೆ ಎಷ್ಟು ಸಹಕಾರಿಯಾಗಬಲ್ಲುದು ಎಂದು ಚರ್ಚಿಸಿದ್ದಾರೆ.

ವಿರಳ ಭೂಖನಿಜಗಳ ರಫ್ತು: ಜಪಾನ್ ಜೊತೆಗೆ ಒಪ್ಪಂದ ರದ್ದುಗೊಳಿಸಲು ಭಾರತ ಮುಂದು; ಕಾರಣ ಏನು?

India conserving rare earth minerals: ವಿರಳ ಭೂಖನಿಜಗಳನ್ನು ಜಪಾನ್​​ಗೆ ಸರಬರಾಜು ಮಾಡುವುದನ್ನು ನಿಲ್ಲಿಸುವಂತೆ ಐಆರ್​​ಇಎಲ್​​ಗೆ ಸರ್ಕಾರ ಸೂಚಿಸಿರುವುದು ತಿಳಿದುಬಂದಿದೆ. ಜಪಾನೀ ಕಂಪನಿಗೆ 13 ವರ್ಷ ಕಾಲ ವಿರಳ ಭೂಖನಿಜ ರಫ್ತು ಮಾಡಲು ಐಆರ್​​ಇಎಲ್ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಈ ವಸ್ತುಗಳ ಮೈನಿಂಗ್ ಮಾಡುವ ಸಾಮರ್ಥ್ಯ ಕಡಿಮೆ. ಇದಕ್ಕೆ ಬಹಳ ಬೇಡಿಕೆ ಇದ್ದು ಚೀನಾ ಮೇಲೆ ಅವಲಂಬನೆ ಇದೆ. ಹೀಗಾಗಿ, ಇದರ ರಫ್ತನ್ನು ಭಾರತ ನಿಲ್ಲಿಸಿ ದೇಶೀಯ ಮಾರುಕಟ್ಟೆಗೆ ಅದನ್ನು ತಿರುಗಿಸಲು ಮುಂದಾಗಿದೆ.

iPhone sales: ಚೀನಾದಲ್ಲಿ ಐಫೋನ್ ಮತ್ತೆ ನಂ. 1; ವಿವೋ, ಶವೋಮಿ, ಓಪ್ಪೋವನ್ನು ಹಿಂದಿಕ್ಕಿದ ಆ್ಯಪಲ್

Apple iPhones see highest sales in 2025 May: ಆ್ಯಪಲ್ ಕಂಪನಿಯು 2025ರ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ ಉತ್ತಮ ಮಾರಾಟ ಕಾಣುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಐಫೋನ್ ಮಾರಾಟ ಶೇ. 15ರಷ್ಟು ಏರಿಕೆ ಆಗಿದೆ. ಆ್ಯಪಲ್​​ಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಚೀನಾದಲ್ಲಿ ಐಫೋನ್ ಮಾರಾಟ ಹೆಚ್ಚುತ್ತಿದೆ. ಮೇ ತಿಂಗಳಲ್ಲಿ ಸ್ಥಳೀಯ ಕಂಪನಿಗಳನ್ನು ಮೀರಿಸಿ ಐಫೋನ್ ಹೆಚ್ಚು ಮಾರಾಟ ಕಂಡಿದೆ.

ಚಿನ್ನ ಸಾಕಪ್ಪ ಎನ್ನುತ್ತಿದೆ ಭಾರತ; ಚಿನ್ನ ಇನ್ನೂ ಬೇಕಪ್ಪ ಎನ್ನುತ್ತಿದೆ ಚೀನಾ; ಚೀನೀಯರು ಚಿನ್ನದ ಹಿಂದೆ ಬಿದ್ದಿರೋದ್ಯಾಕೆ?

China vs India on gold rush: ಚೀನಾ ಸರ್ಕಾರ ಚಿನ್ನಕ್ಕೆ ಮಹತ್ವ ಕೊಡುವುದು ಮುಂದುವರಿದಿದೆ. ಅಲ್ಲಿನ ಸೆಂಟ್ರಲ್ ಬ್ಯಾಂಕ್ ದಾಖಲೆ ಪ್ರಮಾಣದಲ್ಲಿ ಚಿನ್ನ ಶೇಖರಿಸುತ್ತಿದೆ. ತನ್ನ ನಾಗರಿಕರಿಗೂ ಚಿನ್ನ ಖರೀದಿಸಲು ಉತ್ತೇಜಿಸುತ್ತಿದೆ. ಒಂದು ವರ್ಷದಲ್ಲಿ ಚಿನ್ನದ ಅನುಭೋಗ ಶೇ. 34ರಷ್ಟು ಹೆಚ್ಚಿದೆ. ಚೀನಾ ಚಿನ್ನದ ಹಿಂದೆ ಬಿದ್ದಿರೋದ್ಯಾಕೆ?

ಉಪ್ಪಿನಿಂದ ಓಡುವ ಸ್ಕೂಟರ್​​ಗಳು, ಅಗ್ಗವೂ ಹೌದು, ಪರಿಸರಪೂರಕವೂ ಹೌದು; ಮುಂಚೂಣಿಯಲ್ಲಿ ಚೀನಾ, ರೇಸ್​​ನಲ್ಲಿ ಭಾರತ

Sodium Ion powered batteries: ಚೀನಾ ದೇಶದಲ್ಲಿ ಸೋಡಿಯಂ ಅಯಾನ್ ಶಕ್ತ ಬ್ಯಾಟರಿಗಳ ತಯಾರಿಕೆ ಬಹಳ ಹೆಚ್ಚಾಗುತ್ತಿದೆ. ಲಿಥಿಯಂ ಅಯಾನ್ ಬ್ಯಾಟರಿಗಿಂತ ಇವು ಬಹಳ ಅಗ್ಗ ಎನಿಸಿವೆ. ಅಲ್ಲಿ ಸೋಡಿಯಂ ಬ್ಯಾಟರಿ ಚಾಲಿತ ವಾಹನಗಳ ತಯಾರಿಕೆ ಹೆಚ್ಚುತ್ತಿದೆ. ಭಾರತದಲ್ಲೂ ಸೋಡಿಯಂ ಚಾಲಿತ ಸ್ಕೂಟರ್ ಈ ವರ್ಷಾಂತ್ಯದಲ್ಲೇ ಮಾರುಕಟ್ಟೆಗೆ ಬರಬಹುದು.

China Debt Trap: ಚೀನಾದ ಸಾಲದ ಕುಣಿಕೆಗೆ ಸಿಕ್ಕಿರೋದು ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ, ಇಲ್ಲಿದೆ ಟಾಪ್-10 ಪಟ್ಟಿ

List of countries in China debt trap: ಚೀನಾದಿಂದ ಯಥೇಚ್ಛವಾಗಿ ಸಾಲ ಪಡೆದು ತೀರಿಸಲಾಗದೆ ತಮ್ಮ ಜುಟ್ಟನ್ನು ಬಿಟ್ಟುಕೊಟ್ಟಿರುವ, ಕೊಡುತ್ತಿರುವ ಹಲವು ದೇಶಗಳಿವೆ. ಪಾಕಿಸ್ತಾನದ ಹೆಸರು ಮೊದಲು ಕೇಳಿಬರುತ್ತದೆ. ಪಾಕಿಸ್ತಾನ ಮಾತ್ರವಲ್ಲ, ಹಲವು ಆಫ್ರಿಕನ್ ದೇಶಗಳೂ ಕೂಡ ಚೀನಾದ ಡೆಟ್ ಅಸ್ತ್ರಕ್ಕೆ ಸಿಲುಕಿವೆ. ನಿಷ್ಪ್ರಯೋಜಕ ಎನಿಸುವ ಯೋಜನೆಗಳಿಗೆ ಸಾಲ ಪಡೆದು ಅದರ ಹೊರೆ ಇಳಿಸಲಾಗದೇ ಇರುವುದು ಈ ಸ್ಥಿತಿಗೆ ಕಾರಣ.

ಭಾರತದ ಡ್ರೋನ್ ನಾಶಕ ಡಿ4 ಸಿಸ್ಟಂ ಖರೀದಿಗೆ ತೈವಾನ್ ಆಸಕ್ತಿ; ಚೀನಾದ ಆ ಕಡೆ ಮಗ್ಗುಲಿನಲ್ಲಿ ಭಾರತದ ಬಲ?

Taiwan wants India's indigenous D4 drone destroyer: ಆಪರೇಷನ್ ಸಿಂದೂರ್ ವೇಳೆ ಟರ್ಕಿ ಮೂಲದ ನೂರಾರು ಡ್ರೋನ್​​ಗಳನ್ನು ನಾಶ ಮಾಡಿದ್ದ ಭಾರತದ ಡಿ4 ಆ್ಯಂಟಿ-ಡ್ರೋನ್ ಸಿಸ್ಟಂ ಖರೀದಿಸಲು ತೈವಾನ್ ಆಸಕ್ತಿ ತೋರಿದೆ. ಡಿಆರ್​​ಡಿಒ ಅಭಿವೃದ್ಧಿಪಡಿಸಿ, ಬಿಇಎಲ್ ಮತ್ತು ಝೆನ್ ತಯಾರಿಸುವ ಡಿ4 ಸಿಸ್ಟಂಗಳು ಡ್ರೋನ್​​ಗಳನ್ನು ಗುರುತಿಸಿ ನಾಶ ಮಾಡಬಲ್ಲುವು. ಪಾಕಿಸ್ತಾನಕ್ಕೆ ಸಹಾಯ ಮಾಡುವ ಚೀನಾಗೆ ಎದುರಾಗಿ ತೈವಾನ್​​​ಗೆ ಸಹಾಯ ಮಾಡಲು ಭಾರತಕ್ಕೆ ಇದು ಸರಿಯಾದ ಸಮಯ ಎನ್ನಲಾಗಿದೆ.

ವಿರಳ ಭೂಖನಿಜದೊಂದಿಗೆ ಚೀನಾ ಆಟ; ಇಡೀ ವಿಶ್ವಕ್ಕೆ ಸಂಕಟ; ಭಾರತದಿಂದ ಪರ್ಯಾಯ ಮಾರ್ಗ ಹುಡುಕಾಟ

What are rare earth elements, that China using as weapons in its trade war?: ಬಹಳಷ್ಟು ಉತ್ಪನ್ನಗಳಿಗೆ ಅಗತ್ಯವಾಗಿರುವ ರೇರ್ ಅರ್ತ್ ಎಲಿಮೆಂಟ್ಸ್ ಅಥವಾ ವಿರಳ ಭೂಖನಿಜಗಳಿಗೆ ಚೀನಾ ಮೇಲೆ ವಿಶ್ವದ ಅವಲಂಬನೆ ಇದೆ. ಚೀನಾ ಈಗ ಈ ವಸ್ತುಗಳ ರಫ್ತನ್ನು ನಿಲ್ಲಿಸಿ ಜಾಗತಿಕವಾಗಿ ಆತಂಕದ ಅಲೆ ಸೃಷ್ಟಿಸಿದೆ. ಭಾರತವೂ ಪೀಡಿತವಾಗಿರುವ ದೇಶವಾಗಿದ್ದು, ಈಗ ಈ ಅಪರೂಪದ ಖನಿಜಗಳಿಗಾಗಿ ಪರ್ಯಾಯ ಮಾರ್ಗಗಳನ್ನು ಅವಲೋಕಿಸುತ್ತಿದೆ.

ಭಾರತ ವಿರುದ್ಧ ಕೆಲಸ ಮಾಡೋದಿಲ್ಲ ಪಾಕಿಸ್ತಾನ-ಚೀನಾದ ‘ಬ್ರಹ್ಮಪುತ್ರ’ ಅಸ್ತ್ರ; ಯಾವ ಲಾಜಿಕ್ಕು?

What happens if China stops Brahmaputra river flow to India: ಪಾಕಿಸ್ತಾನಕ್ಕೆ ನೀವು ಸಿಂಧೂ ನದಿ ನೀರು ಬಿಡಲಿಲ್ಲವೆಂದರೆ ನಿಮಗೆ ಬ್ರಹ್ಮಪುತ್ರ ನದಿ ನೀರು ಕೊಡೋದಿಲ್ಲ ಎಂದು ಭಾರತಕ್ಕೆ ಚೀನಾ ಪರೋಕ್ಷ ಎಚ್ಚರಿಕೆ ಕೊಟ್ಟಿದೆ. ಆದರೆ, ಬ್ರಹ್ಮಪುತ್ರ ನದಿ ನೀರನ್ನು ಚೀನಾ ತಡೆದರೆ ಭಾರತಕ್ಕೆ ಹಾನಿಯಾಗುವಂಥದ್ದು ಕಡಿಮೆ ಎನ್ನುವುದು ಅಸ್ಸಾಮ್ ಮುಖ್ಯಮಂತ್ರಿ ಅನಿಸಿಕೆ. ಬ್ರಹ್ಮಪುತ್ರ ನದಿ ಭಾರತದಲ್ಲಿ ಹೆಚ್ಚಾಗಿ ಹರಿಯುತ್ತದೆ. ಭಾರತದಲ್ಲೇ ಬೀಳುವ ಮಳೆಯ ನೀರಿನಿಂದ ಈ ನದಿ ತುಂಬುತ್ತದೆ ಎಂಬುದು ಅವರ ವಾದ.

ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಜಾತಿಗಣತಿಕ್ಕಿಂತ ಮೊದಲು ಸರ್ಕಾರ ಮರಗಣತಿ ಮಾಡಿಸುವುದೊಳಿತು!
ಜಾತಿಗಣತಿಕ್ಕಿಂತ ಮೊದಲು ಸರ್ಕಾರ ಮರಗಣತಿ ಮಾಡಿಸುವುದೊಳಿತು!
ಯಾವುದೇ ಕ್ಷಣದಲ್ಲಿ ಕೆಆರ್​ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ
ಯಾವುದೇ ಕ್ಷಣದಲ್ಲಿ ಕೆಆರ್​ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ