AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Please Note: 2,000 ರೂ ನೋಟು ಸೆಪ್ಟಂಬರ್ 30ರ ಬಳಿಕ ಅಮಾನ್ಯಗೊಳ್ಳುತ್ತಾ? ಇಲ್ಲಿದೆ ಕೆಲ ವಾಸ್ತವ ಸಂಗತಿಗಳು

Rs 2,000 Note, MyGovIndia Clarification: 2,000 ರೂ ನೋಟನ್ನು ಚಲಾವಣೆಯಿಂದ ಹಿಂಪಡೆದದ್ದು ಮತ್ತು ಸೆಪ್ಟಂಬರ್ 30ರವರೆಗೆ ಈ ನೋಟುಗಳ ಜಮೆಗೆ ಕಾಲಾಕಾಶ ಕೊಟ್ಟಿದ್ದು ಗೊಂದಲಕ್ಕೆ ಕಾರಣ. ಆದರೆ, ಸೆಪ್ಟಂಬರ್ 30ರ ನಂತರ ಈ ನೋಟು ಅಮಾನ್ಯ ಅಥವಾ ಅಸಿಂಧುಗೊಳ್ಳುತ್ತದೆ ಎಂದು ಆರ್​ಬಿಐ ಎಲ್ಲಿಯೂ ಹೇಳಿಲ್ಲ.

Please Note: 2,000 ರೂ ನೋಟು ಸೆಪ್ಟಂಬರ್ 30ರ ಬಳಿಕ ಅಮಾನ್ಯಗೊಳ್ಳುತ್ತಾ? ಇಲ್ಲಿದೆ ಕೆಲ ವಾಸ್ತವ ಸಂಗತಿಗಳು
2,000 ರೂ ಮುಖಬೆಲೆಯ ನೋಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2023 | 1:52 PM

Share

ನವದೆಹಲಿ: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಮೊನ್ನೆ ಚಲಾವಣೆಯಿಂದ ಹಿಂತೆಗೆದುಕೊಂಡಿರುವುದಾಗಿ ಘೋಷಿಸಿತು. ಸೆಪ್ಟಂಬರ್ 30ರಷ್ಟರಲ್ಲಿ 2,000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಅಥವಾ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ಸರ್ಕಾರ ಹೇಳಿದೆ. 2016 ರ ನೋಟ್ ಬ್ಯಾನ್ ಕ್ರಮ ಸ್ಮರಣೆಯಲ್ಲಿರುವ ಹಿನ್ನೆಲೆಯಲ್ಲಿ ಬಹಳ ಜನರು ಸಹಜವಾಗಿಯೇ ಆತಂಕಗೊಂಡಿದ್ದರು. ಇದಕ್ಕೆ ಇಂಬುಕೊಡುವಂತೆ, 2,000 ರೂ ನೋಟು ಸೆಪ್ಟಂಬರ್ 30ರ ಬಳಿಕ ಅಮಾನ್ಯಗೊಳ್ಳುತ್ತದೆ ಎಂಬಂತೆ ಹಲವರು ರೀತಿಯ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ರೆಕ್ಕೆಪುಕ್ಕಗಳೊಂದಿಗೆ ಸೇರಿ ಶೇರ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ 2,000 ರೂ ನೋಟು ವಿಚಾರದಲ್ಲಿ ಕೆಲವೊಂದಿಷ್ಟು ಸ್ಪಷ್ಟನೆ ನೀಡಿದೆ. ಅದರ ಪ್ರಕಾರ ಸೆಪ್ಟಂಬರ್ 30ರ ಬಳಿಕವೂ ನೋಟು ಲೀಗಲ್ ಟೆಂಡರ್ ಆಗಿ ಮುಂದುವರಿಯುತ್ತದೆ ಎಂದು ಹೇಳಿದೆ.

ಸೆಪ್ಟಂಬರ್ 30ರ ಬಳಿಕ 2,000 ರೂ ನೋಟು ಏನಾಗುತ್ತದೆ? ವಾಸ್ತವ ಏನು?

2,000 ರೂ ನೋಟನ್ನು ಚಲಾವಣೆಯಿಂದ ಹಿಂಪಡೆದದ್ದು ಮತ್ತು ಸೆಪ್ಟಂಬರ್ 30ರವರೆಗೆ ಈ ನೋಟುಗಳ ಜಮೆಗೆ ಕಾಲಾಕಾಶ ಕೊಟ್ಟಿದ್ದು ಗೊಂದಲಕ್ಕೆ ಕಾರಣ. ಆದರೆ, ಸೆಪ್ಟಂಬರ್ 30ರ ನಂತರ ಈ ನೋಟು ಅಮಾನ್ಯ ಅಥವಾ ಅಸಿಂಧುಗೊಳ್ಳುತ್ತದೆ ಎಂದು ಆರ್​ಬಿಐ ಎಲ್ಲಿಯೂ ಹೇಳಿಲ್ಲ. ಸೆಪ್ಟಂಬರ್ 30ರ ಬಳಿಕವೂ ಆ ನೋಟು ಸಕ್ರಮವಾಗಿಯೇ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ2000 ರೂ. ನೋಟು ಬದಲಾವಣೆಗೆ ಫಾರ್ಮ್​​ ಬಿಡುಗಡೆ: ಇಲ್ಲಿದೆ ಭರ್ತಿ ಪ್ರಕ್ರಿಯೆ

ಆದರೆ, ಆ ಗಡುವಿನ ಒಳಗೆ ಯಾರಾದರೂ ತಮ್ಮಲ್ಲಿರುವ 2,000 ರೂ ನೋಟನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡದೇ ಹಾಗೇ ಇಟ್ಟುಕೊಂಡಿದ್ದರೆ ಏನಾಗುತ್ತದೆ ಎಂಬುದು ಪ್ರಶ್ನೆ. ಇದಕ್ಕೆ ಸರ್ಕಾರ ಅಥವಾ ಆರ್​​ಬಿಐ ಸ್ಪಷ್ಟಪಡಿಸಿಲ್ಲ. ನೋಟು ಅಸಿಂಧುಗೊಳ್ಳುವುದಿಲ್ಲ ಎಂದಷ್ಟೇ ಸ್ಪಷ್ಟಪಡಿಸಿರುವುದು. ಹೀಗಾಗಿ, 2,000 ರೂ ನೋಟನ್ನು ಹೊಂದಿರುವವರು ಅತಂಕಕ್ಕೆ ಒಳಗಾಗುವ ಪ್ರಮೇಯ ಇಲ್ಲ.

2,000 ರೂ ನೋಟು ಚಲಾವಣೆಯಿಂದ ಹಿಂಪಡೆದದ್ದು ಯಾಕೆ? ಏನು ಕಾರಣ?

2016ರಲ್ಲಿ 500 ರೂ ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಸರ್ಕಾರ ಅಮಾನ್ಯಗೊಳಿಸಿದಾಗ ದೇಶದಲ್ಲಿ ಕರೆನ್ಸಿ ಕೊರತೆ ಸೃಷ್ಟಿಯಾಗದಿರಲೆಂದು 2,000 ರೂ ನೋಟನ್ನು ಮುದ್ರಿಸಲಾಗಿತ್ತು. ಅದಾದ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಹೊಸ 500 ರೂ ಮುಖಬೆಲೆಯ ನೋಟುಗಳನ್ನು ನೋಟುಗಳನ್ನು ಮುದ್ರಿಸಲಾಗಿದೆ. ಇದರೊಂದಿಗೆ 2,000 ರೂ ನೋಟುಗಳ ಅವಶ್ಯಕತೆ ಕಡಿಮೆ ಅಗಿದೆ.

ಇದನ್ನೂ ಓದಿNote ban: ಭಾರತದಲ್ಲಿ ಇದುವರೆಗೆ ಯಾವೆಲ್ಲ ನೋಟುಗಳು ರದ್ದಾಗಿವೆ ಗೊತ್ತಾ? ನೀವು ಈ ಹಿಂದೆ ನೋಡಿರದ ನೋಟ್​ ಬ್ಯಾನ್​ ವೃತ್ತಾಂತ ಇಲ್ಲಿದೆ!

ಸರ್ಕಾರ 2018-19ರಲ್ಲೇ 2,000 ರೂ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿತ್ತು. ಸಾರ್ವಜನಿಕರಿಗೂ ಕೂಡ 2,000 ರೂ ನೋಟುಗಳ ಅವಶ್ಯಕತೆ ತೋರಿಲ್ಲ. ಅಲ್ಲದೇ ಆ ನೋಟುಗಳ ಚಲಾವಣೆಯಿಂದ ಸಣ್ಣ ವ್ಯಾಪಾರಿಗಳಿಗೆ ಚಿಲ್ಲರೆ ಸಮಸ್ಯೆಯೂ ತಲೆದೋರಿತ್ತು.

ಇದರ ಜೊತೆಗೆ ಯುಪಿಐ ಈಗ ಹೆಚ್ಚು ವ್ಯಾಪಕವಾಗಿರುವುದರಿಂದ 2,000 ರೂ ನೋಟಿನ ಪ್ರಸ್ತುತೆಯೂ ಹೊರಟುಹೋಗಿದೆ. ಸರ್ಕಾರ 2,000 ರೂ ನೋಟು ಮುದ್ರಣ ನಿಲ್ಲಿಸಿದಾಗಲೇ ಈ ನೋಟನ್ನು ಹಿಂಪಡೆಯಬಹುದು ಎಂದು ಭಾವಿಸಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ