AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಸ್ಟೋರೆಂಟ್​ಗಿಂತ ಜೊಮಾಟೋದಲ್ಲಿ ಭಾರೀ ರೇಟ್; ಆನ್​ಲೈನ್​ನಲ್ಲಿ ಡಿಬೇಟ್; ಕರ್ಮ ಫುಡ್ ಆ್ಯಪ್​ನದ್ದೋ, ಹೋಟೆಲ್​ನದ್ದೋ?

X user shows price difference in Zomato and Restaurant: ರೆಸ್ಟೋರೆಂಟ್ ಹಾಗೂ ಜೊಮಾಟೊದಲ್ಲಿ ಊಟದ ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಇರುತ್ತದೆ ಎಂದು ಎಕ್ಸ್ ಬಳಕೆದಾರರೊಬ್ಬರು ಎತ್ತಿ ತೋರಿಸಿದ್ದಾರೆ. ರೆಸ್ಟೋರೆಂಟ್​ನಲ್ಲಿ 320 ರೂ ಆಗುವ ಊಟಕ್ಕೆ ಜೊಮಾಟೊದಲ್ಲಿ 655 ರೂ ಆಗಿರುವುದನ್ನು ಸಾಕ್ಷ್ಯ ಸಮೇತ ಅವರು ತೋರಿಸಿದ್ದಾರೆ. ರೆಸ್ಟೋರೆಂಟ್​ಗಳಿಂದ ಫುಡ್ ಪ್ಲಾಟ್​ಫಾರ್ಮ್​ಗಳು ಶೇ. 35ರಷ್ಟು ಕಮಿಷನ್ ಪಡೆಯುವುದು ಸೇರಿದಂತೆ ವಿವಿಧ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿತವಾಗುತ್ತಿವೆ.

ರೆಸ್ಟೋರೆಂಟ್​ಗಿಂತ ಜೊಮಾಟೋದಲ್ಲಿ ಭಾರೀ ರೇಟ್; ಆನ್​ಲೈನ್​ನಲ್ಲಿ ಡಿಬೇಟ್; ಕರ್ಮ ಫುಡ್ ಆ್ಯಪ್​ನದ್ದೋ, ಹೋಟೆಲ್​ನದ್ದೋ?
ಜೊಮಾಟೊ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 11, 2026 | 3:36 PM

Share

ನವದೆಹಲಿ, ಜನವರಿ 11: ಸ್ವಿಗ್ಗಿ, ಜೊಮಾಟೋ ಇತ್ಯಾದಿ ಫುಡ್ ಆ್ಯಪ್​ಗಳು (food delivery platforms) ಜನರ ಮನೆ ಬಾಗಿಲಿಗೆ ಆಹಾರವನ್ನು ತಂದೊದಗಿಸುವ ಸೇವೆ ನೀಡುತ್ತವೆ. ಪ್ಲಾಟ್​ಫಾರ್ಮ್ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಲು ವಿವಿಧ ಶುಲ್ಕ ಸೇರಿ ಹೆಚ್ಚಿನ ಹಣವನ್ನು ಗ್ರಾಹಕರಿಗೆ ವಿಧಿಸಲಾಗುತ್ತದೆ. ಆದರೆ, ರೆಸ್ಟೋರೆಂಟ್​ಗೆ ಹೋಗಿ ಊಟ ಮಾಡುವುದಕ್ಕೂ ಆನ್ಲೈನ್​ನಲ್ಲಿ ಆರ್ಡರ್ ಮಾಡಿ ಊಟ ಮಾಡುವುದಕ್ಕೂ ಬೆಲೆಯಲ್ಲಿ ನೂರಾರು ರೂ ವ್ಯತ್ಯಾಸ ಆಗಿ ಹೋದರೆ? ಆನ್​ಲೈನ್​ನಲ್ಲಿ ಇಂಥದ್ದುಂದು ಡಿಬೇಟ್ ನಡೆದಿದೆ.

ನಳಿನಿ ಉನಾಗರ್ ಎಂಬಾಕೆ ಜೊಮಾಟೋ ಹೇಗೆ ವಿಪರೀತ ಬೆಲೆ ಹಾಕುತ್ತಿದೆ ಎಂದು ವಿವರಿಸಿ ಎಕ್ಸ್​ನಲ್ಲಿ ಟ್ವೀಟ್ ಮಾಡಿದ್ದಾಳೆ. ರೆಸ್ಟೋರೆಂಟ್​ನಲ್ಲಿ 320 ರೂ ಬೆಲೆಯ ಆಹಾರವು ಜೊಮಾಟೊದಲ್ಲಿ 655 ರೂ ಆಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರೋಕ್ ಅಶ್ಲೀಲ ಅವಾಂತರಗಳು; ತಪ್ಪೊಪ್ಪಿಕೊಂಡು ಭಾರತ ಸರ್ಕಾರದ ಆದೇಶ ಪಾಲಿಸಿದ ಎಕ್ಸ್

ಒಂದೇ ಆಹಾರವನ್ನು ರೆಸ್ಟೋರೆಂಟ್ ಹಾಗೂ ಜೊಮಾಟೊ ಎರಡರಲ್ಲೂ ಬೆಲೆ ಹೋಲಿಕೆ ಮಾಡಿದ್ದಾರೆ. ಚೈನೀಸ್ ಭೇಲ್ ಮತ್ತು ಮಂಚೂರಿಯನ್ ಅನ್ನು ರೆಸ್ಟೋರೆಂಟ್​ನಿಂದ ಪಾರ್ಸಲ್ ಕಟ್ಟಿಸಿಕೊಂಡು, ಅದರ ಬಿಲ್ 320 ರೂ ಆಗಿದೆ. ಅದೇ ರೆಸ್ಟೋರೆಂಟ್​ನಲ್ಲಿ ಅದೇ ಚೈನೀಸ್ ಭೇಲ್ ಮತ್ತು ಮಂಚೂರಿಯನ್ ಅನ್ನು ಬುಕ್ ಮಾಡಿದಾಗ ಅವುಗಳ ಬೆಲೆ 600 ರೂ ಸೇರಿ ಒಟ್ಟು ಬಿಲ್ 655 ರು ಆಗಿದೆ. ಇದರ ಫೋಟೋವನ್ನು ನಳಿನಿ ಅವರು ಶೇರ್ ಮಾಡಿದ್ದಾರೆ.

‘ಜೊಮಾಟೊದವರೆ, ನನ್ನ ಆರ್ಡರ್​ನ ವಾಸ್ತವ ಬೆಲೆ 320 ರೂ. ಆದರೆ, ಜೊಮಾಟೊದಲ್ಲಿ 655 ರು ಆಗಿದೆ. ಎಲ್ಲಾ ಡಿಸ್ಕೌಂಟ್​ಗಳನ್ನು ಹಾಕಿಯೂ ನಾನು 550 ರೂ ಪಾವತಿಸಬೇಕು. ಇಷ್ಟು ಬೆಲೆ ವ್ಯತ್ಯಾಸ ನಿಜಕ್ಕೂ ಅಸಹಜ. ಗ್ರಾಹಕರಿಂದ ಸಿಕ್ಕಾಪಟ್ಟೆ ವಸೂಲಿ ಮಾಡಲಾಗುತ್ತಿದೆ’ ಎಂದು ಈ ಮಹಿಳೆ ಟ್ವೀಟ್ ಮಾಡಿದ್ದಾರೆ.

ಇವರ ಟ್ವೀಟ್​ಗೆ ಜೊಮಾಟೊ ಪ್ರತಿಕ್ರಿಯಿಸಿದೆ. ನಮ್ಮ ಪ್ಲಾಟ್​ಫಾರ್ಮ್​ನಲ್ಲಿ ಬೆಲೆಯನ್ನು ನಿರ್ಧರಿಸುವುದು ರೆಸ್ಟೋರೆಂಟ್ ಪಾರ್ಟ್ನರ್​ಗಳೇ. ಗ್ರಾಹಕರು ಹಾಗು ರೆಸ್ಟೋರೆಂಟ್​ಗಳಿಗೆ ಮಧ್ಯವರ್ತಿಯಾಗಷ್ಟೇ ಜೊಮಾಟೊ ಕೆಲಸ ಮಾಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಬಿಲ್​ನಲ್ಲಿ ನಕಲಿ ಜಿಎಸ್​ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?

ಇದು ಆನ್​ಲೈನ್​ನಲ್ಲಿ ಚರ್ಚೆ ಹುಟ್ಟುಹಾಕಿದೆ. ರೆಸ್ಟೋರೆಂಟ್ ಪ್ಲಾಟ್​ಫಾರ್ಮ್​ಗಳಿಂದ ಜೊಮಾಟೊ ಶೇ. 35ರಷ್ಟು ಕಮಿಷನ್ ಪಡೆಯುತ್ತದೆ ಎಂದು ಹಲವರು ಎತ್ತಿತೋರಿಸಿದ್ದಾರೆ.

ನಳಿನಿ ಅವರ ಟ್ವೀಟ್

ಪ್ಲಾಟ್​ಫಾರ್ಮ್​ಗಳಲ್ಲಿ ಕಾಣುವ ಆಹಾರಗಳ ಬೆಲೆಯನ್ನು ನಿರ್ಧರಿಸುವುದು ರೆಸ್ಟೋರೆಂಟ್​ಗಳೇ. ಆದರೆ, ಭಾರೀ ದೊಡ್ಡ ಮೊತ್ತದ ಕಮಿಷನ್ ಅನ್ನು ಸರಿದೂಗಿಸಲು ರೆಸ್ಟೋರೆಂಟ್​ಗಳು ಬೆಲೆ ಏರಿಸುತ್ತವೆ. ರೆಸ್ಟೋರೆಂಟ್ ಬೆಲೆ ಏರಿಸಿದರೆ ಅದರಿಂದಲೂ ಫುಡ್ ಪ್ಲಾಟ್​ಫಾರ್ಮ್​ಗಳಿಗೆ ಲಾಭವಾಗುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಹೊರೆ ಆಗುವುದು ಎಂದು ಹಲವು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ