AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nifty Next 50 Index: ಝೊಮ್ಯಾಟೊ, ಪೇಟಿಎಂ, ನೈಕಾ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕಕ್ಕೆ ಸೇರ್ಪಡೆ

ಝೊಮ್ಯಾಟೊ, ಪೇಟಿಎಂ, ನೈಕಾ ಸೇರಿದಂತೆ ಇತರ ಸ್ಟಾಕ್​ಗಳನ್ನು ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕದಲ್ಲಿ ಸೇರ್ಪಡೆ ಮಾಡುವುದಕ್ಕೆ ತೀರ್ಮಾನ ಮಾಡಲಾಗಿದೆ.

Nifty Next 50 Index: ಝೊಮ್ಯಾಟೊ, ಪೇಟಿಎಂ, ನೈಕಾ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕಕ್ಕೆ ಸೇರ್ಪಡೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 26, 2022 | 1:49 PM

Share

ಮುಂಬರುವ ಅರೆ- ವಾರ್ಷಿಕ ಸೂಚ್ಯಂಕ ಪರಿಶೀಲನೆಯಲ್ಲಿ ಹೊಸದಾಗಿ ಲಿಸ್ಟ್ ಆದ ಝೊಮ್ಯಾಟೋ, ಒನ್​97 ಕಮ್ಯುನಿಕೇಷನ್ಸ್ (ಪೇಟಿಎಂ), ಎಫ್​ಎಸ್​ಎನ್​ ಇ-ಕಾಮರ್ಸ್ ವೆಂಚರ್ಸ್ (ನೈಕಾ) ಅನ್ನು ನಿಫ್ಟಿ (Nifty) ಮುಂದಿನ 50ರ ಸೂಚ್ಯಂಕದಲ್ಲಿ ಸೇರ್ಪಡೆ ಮಾಡಲಾಗುವುದು. ಪರಿಷ್ಕೃತ ಪಟ್ಟಿಯು ಮಾರ್ಚ್ 31ರಿಂದ ಅನ್ವಯ ಆಗುತ್ತದೆ. ಎಸ್​ಆರ್​ಎಫ್​, ಇಂಡಿಯನ್ ಆಯಿಲ್ ಮತ್ತು ಮೈಂಡ್​ಟ್ರೀ ಸಹ ಒಳಗೊಳ್ಳಲಿದೆ. ಇವುಗಳು ಕ್ರಮವಾಗಿ 4.7 ಕೋಟಿ ಡಾಲರ್, 4 ಕೋಟಿ ಡಾಲರ್ ಮತ್ತು 3.3 ಕೋಟಿ ಡಾಲರ್ ಒಳಹರಿವು ಕಾಣಲಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ವಿನಿಮಯ ಕೇಂದ್ರದಿಂದ ಘೋಷಣೆ ಮಾಡಿದ ಪ್ರಕಾರ, ಹೊಸದಾದ ಅರ್ಹತಾ ಮಾನದಂಡಗಳ ಮಾರ್ಪಾಟಿನ ನಂತರ, ಕಳೆದ ವರ್ಷ ಲಿಸ್ಟ್ ಆದಂಥ ಈ ಸ್ಟಾಕ್​ಗಳು ಸೂಚ್ಯಂಕಕ್ಕೆ ಸೇರ್ಪಡೆ ಆಗಿವೆ.

ಎನ್​ಎಸ್​ಇ ಸೂಚ್ಯಂಕ ಲಿಮಿಟೆಡ್​ನ ಸೂಚ್ಯಂಕ ನಿರ್ವಹಣೆ ಉಪ-ಸಮಿತಿ- ಈಕ್ವಿಟಿ (IMSC) ಸ್ಟಾಕ್​ಗಳ ನಿಫ್ಟಿ ಈಕ್ವಿಟಿ ಸೂಚ್ಯಂಕ ಮತ್ತು ಬದಲಿಯನ್ನು ನಿಯಮಿತವಾಗಿ ಮಾಡುವುದಕ್ಕೆ ನಿಯಮಾವಳಿಯಲ್ಲಿ ಬದಲಾಯಿಸುವುದಕ್ಕೆ ನಿರ್ಧರಿಸಿದೆ. ಮಾರ್ಚ್ 31, 2022ರಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಗುರುವಾರದಂದು ಎನ್​ಎಸ್​ಇ ಸುತ್ತೋಲೆಯಲ್ಲಿ ತಿಳಿಸಿದೆ. ಅರ್ಹತಾ ಮಾನದಂಡ ಎಂದು ನಿಗದಿ ಮಾಡಿರುವುದರಲ್ಲಿ ಕಟ್​-ಆಫ್​ ದಿನಾಂಕದಂದು ಕನಿಷ್ಠ ಒಂದು ಕ್ಯಾಲೆಂಡರ್​ ತಿಂಗಳು ಲಿಸ್ಟಿಂಗ್ ಇತಿಹಾಸವನ್ನು ಹೊಂದಿರಬೇಕು. ಈ ಹಿಂದೆ ಅದು ಮೂರು ತಿಂಗಳಿತ್ತು. ಇದರಿಂದಾಗಿ ನೈಕಾ, ಪೇಟಿಎಂ, ಪಾಲಿಸಿಬಜಾರ್ ಮತ್ತು ಲೇಟೆಂಟ್ ವ್ಯೂ ಇವೆಲ್ಲ 2021ರ ಅಕ್ಟೋಬರ್​ನಲ್ಲಿ ಲಿಸ್ಟ್ ಆಗಿದ್ದವು.

ನೈಕಾ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಮೈಂಡ್​ಟ್ರೀ ಲಿ., ಪೇಟಿಎಂ, ಎಸ್​ಆರ್​ಎಫ್​ ಲಿಮಿಟೆಡ್​ ಮತ್ತು ಝೊಮ್ಯಾಟೋ ಲಿಮಿಟೆಡ್ ಈ ಆರು ಸ್ಟಾಕ್​ಗಳು ನಿಫ್ಟಿ- 50ಯಲ್ಲಿ ಸೇರ್ಪಡೆ ಆಗಲಿದೆ. ಅಪೋಲೋ ಹಾಸ್ಪಿಟಲ್ ಎಂಟರ್​ಪ್ರೈಸ್​, ಅರಬಿಂದೋ ಫಾರ್ಮಾ, ಎಚ್​ಪಿಸಿಎಲ್, ಐಜಿಎಲ್​, ಜಿಂದಾಲ್ ಸ್ಟೀಲ್ ಅಂಡ್​ ಪವರ್, ಯೆಸ್​ ಬ್ಯಾಂಕ್ ಇವುಗಳಿಗೆ ಬದಲಿಯಾಗಿ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕವನ್ನು ಸೇರಲಿದೆ.

ನಿಫ್ಟಿ-50 ಸೂಚ್ಯಂಕಕ್ಕೆ ಸೇರ್ಪಡೆ ಆಗುವುದರ ಲಾಭ ಏನು?:

ಹೀಗೆ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕಕ್ಕೆ ಸೇರ್ಪಡೆ ಆಗುವುದರೊಂದಿಗೆ ಸಾಕಷ್ಟು ಇಂಡೆಕ್ಸ್​ ಫಂಡ್​ಗಳು ಮತ್ತು ಇಟಿಎಫ್​ಗಳು ಈ ಸ್ಟಾಕ್​ಗಳನ್ನು ತಮ್ಮ ಪೋರ್ಟ್​ಫೋಲಿಯೋದಲ್ಲಿ ಸೇರಿಸಿಕೊಳ್ಳುತ್ತವೆ. ಹೀಗೆ ಮಾಡುವುದರಿಂದ ಈ ಹೊಸ ತಲೆಮಾರಿನ ಸ್ಟಾರ್ಟ್​ ಅಪ್​ ಕಂಪೆನಿಗಳಿಗೆ ಅಗತ್ಯ ಇರುವ ಬೆಂಬಲ ದೊರಕಿಸುತ್ತದೆ. ಮುಂಬರುವ ವರ್ಷಗಳಲ್ಲಿ ಇಂಥದ್ದೇ ಕಂಪೆನಿಗಳು ನಿಫ್ಟಿಯಲ್ಲಿ ಸೇರ್ಪಡೆ ಆಗುವ ಮೂಲಕ ಸಾಂಪ್ರದಾಯಿಕ ಉದ್ಯಮದ ಮಾದರಿಗೆ ಪರ್ಯಾಯ ದೊರೆತಂತಾಗುತ್ತದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

ಸೂಚ್ಯಂಕದಲ್ಲಿ ಸೇರ್ಪಡೆ ಮಾಡಿದ ಕಾರಣಕ್ಕೆ ಯಾವಾಗ ಇಟಿಎಫ್​ಗಳ ಮ್ಯಾನೇಜರ್​ಗಳು ಈ ಷೇರುಗಳನ್ನು ಖರೀದಿಸಲು ಆರಂಭ ಮಾಡುತ್ತಾರೋ ಆಗ ವಾಲ್ಯೂಮ್ ಹೆಚ್ಚುತ್ತದೆ. ಮರು ಸಮತೋಲನ ಆಗುವಾಗ ಬೆಲೆ ಮೇಲ್ಮುಖವಾಗಿ ಸಾಗುತ್ತದೆ. ಆದರೆ ಈಗ ಕೂಡ ಈ ಸ್ಟಾಕ್​ನಲ್ಲಿ ಅಪಾಯ ಇದ್ದೇ ಇದೆ. ಒಟ್ಟು ಪೋರ್ಟ್​ಫೋಲಿಯೋದ ಪೈಕಿ ಶೇ 2ರಿಂದ ಶೇ 4ರಷ್ಟನ್ನು ಮಾತ್ರ ಇವುಗಳಿಗೆ ಮೀಸಲಿಡಬಹುದು. ಅದು ಕೂಡ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲ್ಯಾನ್ ಅಡಿಯಲ್ಲಿ ಹೂಡಿಕೆ ಮಾಡಬಹುದು ಎಂದು ಪರಿಣತರು ಅಭಿಪ್ರಾಯ ಪಡುತ್ತಾರೆ. ಈಗ ಬೆಲೆ ಇಳಿಕೆ ಆಗಿರುವಾಗ ಖರೀದಿಗೆ ಉತ್ತಮ ಸಮಯ ಇದು ಎಂಬುದನ್ನು ಸೇರಿಸುತ್ತಾರೆ.

ಇದನ್ನೂ ಓದಿ: NSE Scam: ಎನ್​ಎಸ್​ಇ ಹಗರಣದಲ್ಲಿ ಮಾಜಿ ಸಿಒಒ ಆನಂದ್​ ಸುಬ್ರಮಣಿಯನ್​ರನ್ನು ಬಂಧಿಸಿದ ಸಿಬಿಐ

Follow Us
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​