AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾಂಗ್​ ರೇಪ್​​ ಆಗಿದೆ ಎಂದು ದೂರು ಕೊಡಲು ಹೋದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪೊಲೀಸ್​ ಅಧಿಕಾರಿ

ಹುಡುಗಿಯನ್ನು ಮೊದಲು ನಾಲ್ವರು ಸೇರಿ ಅಪಹರಣ ಮಾಡಿ, ಭೋಪಾಲ್​​ಗೆ ಕರೆದುಕೊಂಡು ಹೋದರು. ನಾಲ್ಕು ದಿನ ಅಲ್ಲಿಟ್ಟುಕೊಂಡು ಆಕೆಯ ಮೇಲೆ ರೇಪ್​ ಮಾಡಿದ್ದಾರೆ. ಅದಾದ ಮೇಲೆ ವಾಪಸ್ ಊರಿಗೆ ಕರೆದುಕೊಂಡು ಬಂದು, ಅಲ್ಲಿನ ಪೊಲೀಸ್ ಸ್ಟೇಶನ್​ ಎದುರೇ ಬಿಟ್ಟು ಹೋಗಿದ್ದರು.

ಗ್ಯಾಂಗ್​ ರೇಪ್​​ ಆಗಿದೆ ಎಂದು ದೂರು ಕೊಡಲು ಹೋದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪೊಲೀಸ್​ ಅಧಿಕಾರಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on:May 04, 2022 | 10:25 AM

Share

ಲಖನೌ: ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ನೀಡಲು ಹೋದ 13ವರ್ಷದ ಬಾಲಕಿಯ ಮೇಲೆ ಪೊಲೀಸ್​ ಠಾಣೆಯ ಮುಖ್ಯ ಅಧಿಕಾರಿ ಮತ್ತೊಮ್ಮೆ ರೇಪ್​ ಮಾಡಿರುವ ಕ್ರೂರ ಘಟನೆ ಉತ್ತರ ಪ್ರದೇಶದ ಲಲಿತ್​ ಪುರದಲ್ಲಿ ನಡೆದಿದೆ. ತನ್ನ ಮೇಲೆ ನಾಲ್ವರು ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ದೂರು ನೀಡಲು ತನ್ನ ಸಂಬಂಧಿಯೊಬ್ಬರ ಜತೆ  ಹೋಗಿದ್ದಳು.  ಈ ವೇಳೆ ಠಾಣೆಯಲ್ಲಿದ್ದ ಅಧಿಕಾರಿ (SHO) ತಿಲಕ್​ಧಾರಿ ಸರೋಜ್​ ಬಾಲಕಿಯ ಮೇಲೆ ಮತ್ತೆ ಅತ್ಯಾಚಾರ ಮಾಡಿದ್ದಾನೆ. ಈಗ ಆತನನ್ನು ಅಮಾನತು ಮಾಡಲಾಗಿದ್ದು, ಕ್ರಿಮಿನಲ್ ಕೇಸ್​ ದಾಖಲಾಗಿದೆ.  ಪೊಲೀಸ್ ಅಧಿಕಾರಿ ಬಾಲಕಿಯ ಮೇಲೆ ರೇಪ್​ ಮಾಡಿ ಪರಾರಿಯಾಗಿದ್ದಾನೆ. ಹಾಗೇ, ಅದಕ್ಕೂ ಮೊದಲು ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ನಾಲ್ವರಲ್ಲಿ ಮೂವರು ಅರೆಸ್ಟ್ ಆಗಿದ್ದಾರೆ. 

ಹುಡುಗಿಯನ್ನು ಮೊದಲು ನಾಲ್ವರು ಸೇರಿ ಅಪಹರಣ ಮಾಡಿ, ಭೋಪಾಲ್​​ಗೆ ಕರೆದುಕೊಂಡು ಹೋದರು. ನಾಲ್ಕು ದಿನ ಅಲ್ಲಿಟ್ಟುಕೊಂಡು ಆಕೆಯ ಮೇಲೆ ರೇಪ್​ ಮಾಡಿದ್ದಾರೆ. ಅದಾದ ಮೇಲೆ ವಾಪಸ್ ಊರಿಗೆ ಕರೆದುಕೊಂಡು ಬಂದು, ಅಲ್ಲಿನ ಪೊಲೀಸ್ ಸ್ಟೇಶನ್​ ಎದುರೇ ಬಿಟ್ಟು ಹೋಗಿದ್ದರು. ಆಗ ಇದೇ ಪೊಲೀಸ್ ಅಧಿಕಾರಿ, ಬಾಲಕಿಯ ಬಳಿ ಎಲ್ಲವನ್ನೂ ವಿಚಾರಿಸಿ, ಅವಳ ಅತ್ತೆಯನ್ನು ಸ್ಟೇಶನ್​ಗೆ ಕರೆಸಿದ್ದ. ಹಾಗೇ, ಬಾಲಕಿಯನ್ನು ಆ ಮಹಿಳೆಯೊಂದಿಗೆ ಕಳಿಸಿದ್ದಲ್ಲದೆ, ‘ಮರುದಿನ ಬಾ ನಿನ್ನ ಹೇಳಿಕೆ ದಾಖಲಿಸಿಕೊಳ್ಳಬೇಕು’ ಎಂದು ಹೇಳಿದ್ದ. ಅದರಂತೆ ಮರುದಿನ ಬಾಲಕಿ ತನ್ನ ಅತ್ತೆಯೊಂದಿಗೆ ಪೊಲೀಸ್ ಠಾಣೆಗೆ ಹೋದಾಗ ಈ ಪೊಲೀಸ್​ ರಾಕ್ಷಸನಾಗಿದ್ದ. ಬಾಲಕಿಯನ್ನು ಒಳಗಿನ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ದುರದೃಷ್ಟಕ್ಕೆ ಆ ಅತ್ತೆಯ ಎದುರಿಗೇ ಇದೆಲ್ಲ ನಡೆದರೂ ಅವಳು ಬಾಯಿಮುಚ್ಚಿಕೊಂಡೇ ಇದ್ದಳು. ಹೀಗಾಗಿ ಆಕೆಯ ವಿರುದ್ಧವೂ ಕೇಸ್​ ದಾಖಲಾಗಿದೆ.

ಪೊಲೀಸ್ ಅಧಿಕಾರಿ ಸೇರಿ, ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಎಲ್ಲರ ವಿರುದ್ಧವೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿಯನ್ನು ಅಮಾನತು ಮಾಡಿದ್ದೇವೆ. ಹಾಗೇ, ನಾಪತ್ತೆಯಾಗಿರುವ ಆತನನ್ನು ಬಂಧಿಸಲು ತಂಡವನ್ನೂ ರಚಿಸಲಾಗಿದೆ. ಹಾಗೇ, ಹುಡುಗಿಯನ್ನು  ವೈದ್ಯಕೀಯ ತಪಾಸಣೆಗೆ ಕಳಿಸಲಾಗಿದೆ ಎಂದು ಲಲಿತ್​ಪುರ ಪೊಲೀಸ್ ಮುಖ್ಯಸ್ಥ ನಿಖಿಲ್​ ಪಾಠಕ್​ ತಿಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಕಮಿಷನರ್ ಕಮಲ್ ಪಂತ್ ವಿರುದ್ಧ ಬಿಜೆಪಿಯವರು ಮಾತಾಡಿದ್ದರಿಂದ ಪಿಎಸ್ಐ ಅಕ್ರಮ ಹೊರಬಂದಿದೆ -ಹೆಚ್ಡಿ ಕುಮಾರಸ್ವಾಮಿ

Published On - 10:25 am, Wed, 4 May 22

ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ