ಮಹಾರಾಷ್ಟ್ರದಲ್ಲಿ ತಾಯಿಯ ಎದುರೇ ಅಪ್ರಾಪ್ತ ಮಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ವ್ಯಕ್ತಿಯ ಬಂಧನ

ತಾಯಿ ಎದುರೇ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ಬುಧವಾರ ಸಂಜೆ ತನ್ನ ತಾಯಿಯೊಂದಿಗೆ ಮನೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಬಾಲಕಿಯ ತಾಯಿ ಸಹಾಯಕ್ಕಾಗಿ ಕಿರುಚುತ್ತಿದ್ದಂತೆ ವ್ಯಕ್ತಿಯೊಬ್ಬ ಬಾಲಕಿಯ ಮೇಲೆ ದಾಳಿ ಮಾಡಿ ಕನಿಷ್ಠ ಎಂಟು ಬಾರಿ ಇರಿದಿದ್ದಾನೆ.

ಮಹಾರಾಷ್ಟ್ರದಲ್ಲಿ ತಾಯಿಯ ಎದುರೇ ಅಪ್ರಾಪ್ತ ಮಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ವ್ಯಕ್ತಿಯ ಬಂಧನ
ಪೊಲೀಸ್
Image Credit source: NDTV

Updated on: Aug 17, 2023 | 11:03 AM

ತಾಯಿಯ ಎದುರೇ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ಬುಧವಾರ ಸಂಜೆ ತನ್ನ ತಾಯಿಯೊಂದಿಗೆ ಮನೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಬಾಲಕಿಯ ತಾಯಿ ಸಹಾಯಕ್ಕಾಗಿ ಕಿರುಚುತ್ತಿದ್ದಂತೆ ವ್ಯಕ್ತಿಯೊಬ್ಬ ಬಾಲಕಿಯ ಮೇಲೆ ದಾಳಿ ಮಾಡಿ ಕನಿಷ್ಠ ಎಂಟು ಬಾರಿ ಇರಿದಿದ್ದಾನೆ.

ಸ್ಥಳೀಯರು ದಾಳಿಕೋರನನ್ನು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅಪರಾಧದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.

ಕಟ್ಟಡದ ಮೆಟ್ಟಿಲುಗಳ ಮೇಲೆ ರಕ್ತದ ಕಲೆಗಳಿದ್ದವು, ಅಪರಾಧಕ್ಕೆ ಬಳಸಿದ್ದ ಬಳಸಿದ್ದ ಚಾಕುವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ. ಬಾಲಕಿ ಟ್ಯೂಷನ್​ನಿಂದ ಮನೆಗೆ ತೆರಳುತ್ತಿದ್ದಳು, ಆರೋಪಿಯನ್ನು ಆದಿತ್ಯ ಕಾಂಬಳೆ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಹತ್ತು ವರ್ಷಗಳ ಕಾಲ ಜೈಲಿನಲ್ಲಿದ್ದು ಹೊರಬಂದ ಮೇಲೆ ಮಾಡಿದ್ದು ಮತ್ತದೇ ಹೇಯ ಕೃತ್ಯ

ಪೊಲೀಸರ ಮಾಹಿತಿ ಪ್ರಕಾರ ಸಂಜೆ ಏಳು ಗಂಟೆಯ ವೇಳೆ ಆರೋಪಿ ಆದಿತ್ಯ ದುರ್ಗಾ ದರ್ಶನ್ ಸೊಸೈಟಿಯ ಆವರಣದಲ್ಲಿ ಕಾಯುತ್ತಿದ್ದ, ಬಾಲಕಿ ಎಷ್ಟು ಗಂಟೆಗೆ ಬರುತ್ತಾಳೆ ಎಂದು ಎಲ್ಲರನ್ನೂ ಕೇಳುತ್ತಿದ್ದ.

ರಾತ್ರಿ 8 ಗಂಟೆ ಸುಮಾರಿಗೆ ಟ್ಯೂಷನ್​ನಿಂದ ವಾಪಸಾಗುತ್ತಿದ್ದಳು, ಆಕೆಯ ಮನೆಯ ಮೆಟ್ಟಿಲುಗಳ ಮೇಲೆ ಆರೋಪಿ ಕೂತಿದ್ದ, ಬಳಿಕ ಅವರು ಬರುವ ಸಂದರ್ಭ ನೋಡಿ ಮರೆಯಲ್ಲಿ ನಿಂತಿದ್ದ ಬಾಲಕಿ ಹಾಗೂ ತಾಯಿ ಮೆಟ್ಟಿಲುಗಳನ್ನು ಏರುತ್ತಿದ್ದಂತೆ ತಾಯಿಯನ್ನು ತಳ್ಳಿ ಮಗಳಿಗೆ ಚಾಕುವಿನಿಂದ 8 ಬಾರಿ ಇರಿದಿದ್ದಾನೆ, ತಕ್ಷಣವೇ ಬಾಲಕಿ ಅಲ್ಲೇ ಕುಸಿದುಬಿದ್ದಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:02 am, Thu, 17 August 23