ಕದ್ದ ಚಿನ್ನವನ್ನು ಗುಜರಿಗೆ ಹಾಕಿದ ಮುಗ್ಧ ಕಳ್ಳನ ರೋಚಕ ಕಥೆ ಇಲ್ಲಿದೆ!

ಬಂಗಾರ ಸಿಕ್ಕಿದ ಖುಷಿಯಲ್ಲಿ ರಸ್ತೆಯಲ್ಲೇ ಬಂಗಾರವನ್ನು ತೂಕ ಮಾಡಿಸಿದ್ದಾನೆ ಐನಾತಿ ಆಸಾಮಿ! ಇಷ್ಟೆಲ್ಲಾ ಆದ ಮೇಲೆ ಕದ್ದ ಚಿನ್ನವನ್ನು ಎಲ್ಲಿ ಮಾರಬೇಕು ಎಂಬುದನ್ನೂ ತಿಳಿಯದೇ ಅದನ್ನೂ ಸೀದಾ ಹೊತ್ತೊಯ್ದು ಗುಜರಿಗೆ ಹಾಕಿಬಿಟ್ಟಿದ್ದಾನೆ!

Follow us
| Updated By: ಸಾಧು ಶ್ರೀನಾಥ್​

Updated on:Apr 05, 2023 | 1:10 PM

ಬೆಂಗಳೂರು: ಇದು ಕದ್ದ ಚಿನ್ನವನ್ನು ಗುಜರಿಗೆ ಹಾಕಿದ ಮುಗ್ಧ ಕಳ್ಳನೊಬ್ಬನ (Thief) ರೋಚಕ ಕಥೆ! ನಿರುದ್ಯೋಗದ ಬಾಣಲೆಯಲ್ಲಿ ಬೆಂದು, ಕೆಲಸ ಅರಸಿ ಬೆಂಗಳೂರಿಗೆ ಬಂದವನು ಕಳ್ಳನಾಗಿದ್ದ! ಆರು‌ ತಿಂಗಳ ಹಿಂದೆಯೇ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದು, ಇಲ್ಲಿ ಕಳ್ಳತನವನ್ನು ಕಸುಬಾಗಿಸಿಕೊಂಡಿದ್ದ ಖದೀಮ ಅವನು. ಯಶವಂತಪುರ ವ್ಯಾಪ್ತಿಯ ಮತ್ತಿಕೆರೆಯಲ್ಲಿ ಸದರಿ ಕಳ್ಳ ತನ್ನ ಕೈಚಳಕ ತೋರಿಸುತ್ತಿದ್ದ. ಕದ್ದ ಮಾಲನ್ನು ಗುಜರಿಗೆ (Scrap) ಹಾಕಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಆ ಆಸಾಮಿಗೆ ಅದೊಂದು ದಿನ ಕಬ್ಬಿಣದ ನಲ್ಲಿ (ಕೊಳಾಯಿ) ಮೇಲೆ ಕಣ್ಣು ಬಿದ್ದಿದೆ. ಕದಿಯಲು ಹೋಗಿದ್ದಾಗ ಒಂದಷ್ಟು ಹಣವೂ ಸಿಕ್ಕಿದೆ. ಜೊತೆಗೆ ಬಂಗಾರವನ್ನೂ (Gold) ಕದ್ದಿದ್ದಾನೆ. ಬಂಗಾರ ಸಿಕ್ಕಿದ ಖುಷಿಯಲ್ಲಿ ರಸ್ತೆಯಲ್ಲೇ ಬಂಗಾರವನ್ನು ತೂಕ ಮಾಡಿಸಿದ್ದಾನೆ ಐನಾತಿ ಆಸಾಮಿ!

ಅದಾಗಲೇ ‘ಗುಜರಿ’ ಅಡ್ಡ ಹೆಸರು ಸಂಪಾದಿಸಿರುವ ಆರೋಪಿ!

ಇಷ್ಟೆಲ್ಲಾ ಆದ ಮೇಲೆ ಕದ್ದ ಚಿನ್ನವನ್ನು ಎಲ್ಲಿ ಮಾರಬೇಕು ಎಂಬುದನ್ನೂ ತಿಳಿಯದೇ ಅದನ್ನೂ ಸೀದಾ ಹೊತ್ತೊಯ್ದು ಗುಜರಿಗೆ ಹಾಕಿಬಿಟ್ಟಿದ್ದಾನೆ! 7 ಲಕ್ಷ ರೂಪಾಯಿ ಮೌಲ್ಯದ 130 ಗ್ರಾಂ ಚಿನ್ನವನ್ನು ಗುಜರಿಗೆ ಹಾಕಿ ಬಡಪಾಯಿ ಕೇವಲ 30 ಸಾವಿರ ರೂಪಾಯಿ ಪಡೆದಿದ್ದ.

ಇದನ್ನೂ ಓದಿ:  Devanahalli: ಬ್ಯೂಟಿ ಪಾರ್ಲರ್ ಆಂಟಿಗಾಗಿ ಪತ್ನಿಯನ್ನೆ ಕೊಲೆ ಮಾಡಿದನಾ ಗಂಡ? ಮದುವೆಯಾಗಿ ಮಗುವಿದ್ದರೂ ಗಂಡನಿಗೆ ಬೇರೊಂದು ಲವ್ವಿಡವ್ವಿ!

ಸದ್ಯ ಆರೋಪಿ ಸುಬ್ರತೋ ಮಂಡಲ್ ಅಲಿಯಾಸ್ ಗುಜರಿ (Gujari) ಎಂಬಾತನನ್ನು ಬಂಧಿಸಲಾಗಿದ್ದು, ಬಂಧಿತನಿಂದ ಕಳ್ಳತನ ಮಾಡಿದ್ದ 130 ಗ್ರಾಂ ಚಿನ್ನ ಮತ್ತು ನಗದು ಸೀಜ್ ಮಾಡಿದ್ದಾರೆ. ಯಶವಂತಪುರ ಪೊಲೀಸರು (Yeshwanthpur Police) ಆರೋಪಿಯನ್ನು ಜೈಲಿಗಟ್ಟಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:11 am, Wed, 5 April 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್