AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ದಿನದ ಹಿಂದೆ ಎಂ.ಸ್ಯಾಂಡ್​ ಟಿಪ್ಪರ್​ನಲ್ಲಿ ಯುವಕನ ಶವ: ಮಾಸ್ಕ್​ನಿಂದ ಮೃತದೇಹ ಪತ್ತೆ

ಅಕ್ರಮವಾಗಿ ದನದ ಮಾಂಸ ಸಾಗಿಸ್ತಿದ್ದ ಹಿನ್ನಲೆ. ಪೋಶೆಟ್ಟಿಹಳ್ಳಿ ಗ್ರಾಮದ ಬಳಿ ಬೊಲೆರೊ ಹಾಗೂ ಮೂವರು ಆರೋಪಿಗಳನ್ನು ಹಿಡಿಯಲಾಗಿದೆ. ಸ್ಥಳಿಯ ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

2 ದಿನದ ಹಿಂದೆ ಎಂ.ಸ್ಯಾಂಡ್​ ಟಿಪ್ಪರ್​ನಲ್ಲಿ ಯುವಕನ ಶವ: ಮಾಸ್ಕ್​ನಿಂದ ಮೃತದೇಹ ಪತ್ತೆ
2 ದಿನದ ಹಿಂದೆ ಎಂ.ಸ್ಯಾಂಡ್​ ಟಿಪ್ಪರ್​ನಲ್ಲಿ ಯುವಕನ ಶವ: ಮಾಸ್ಕ್​ನಿಂದ ಮೃತದೇಹ ಪತ್ತೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 09, 2022 | 11:43 AM

ಬೆಂಗಳೂರು: 2 ದಿನದ ಹಿಂದೆ ಎಂ ಸ್ಯಾಂಡ್​ ಟಿಪ್ಪರ್​ನಲ್ಲಿ ಮೃತದೇಹ ಪತ್ತೆಯಾಗಿದ್ದು, ಒಂದು ಮಾಸ್ಕ್​ನಿಂದ ಅಪರಿಚಿತ ಮೃತದೇಹದ ಗುರುತು ಪತ್ತೆ ಮಾಡಲಾಗಿದೆ. ತಮಿಳುನಾಡಿನಿಂದ ಎಂ ಸ್ಯಾಂಡ್​ ತುಂಬಿಕೊಂಡು ಬಂದಿದ್ದ ಟಿಪ್ಪರ್, ಬೆಂಗಳುರಿನ ಮಾರತ್ತಹಳ್ಳಿ ಪೊಲೀಸರ ತನಿಖೆ ವೇಳೆ ಮಾಸ್ಕ್​ ಪತ್ತೆಯಾಗಿದೆ. ಮಾಸ್ಕ್​ ಮೇಲಿನ ಹೆಸರು ನೋಡಿ ಹೊಸಕೋಟೆ ಸುತ್ತ ವಿಚಾರಣೆ ಮಾಡಲಾಗಿದ್ದು, ಮೇ 5ರಿಂದ ಪಿಯು ವಿದ್ಯಾರ್ಥಿ ಸೋಮನಾಥ ನಾಪತ್ತೆಯಾಗಿದ್ದ. ಹೊಸಕೋಟೆಯಲ್ಲಿ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮೇ 6ರಂದು ಎಂ ಸ್ಯಾಂಡ್ ಟಿಪ್ಪರ್​ನಲ್ಲಿ ಯುವಕನ ಶವ ಸಿಕ್ಕಿತ್ತು. ನನ್ನ ಸಾವಿಗೆ ನಾನೇ ಕಾರಣವೆಂದು ಡೆತ್​ನೋಟ್​ ಸಹ ಸಿಕ್ಕಿತ್ತು. ಕಾಲೇಜು ಯುವತಿ ಜತೆ ಚಾಟ್​ ಮಾಡಿದ್ದು,​​ ಕಾಲೇಜಿನ ಗ್ರೂಪ್​ಗೆ ಸ್ಕ್ರೀನ್​ ಶಾಟ್  ಕೆಲವು ಯುವಕರು ಹಾಕಿದ್ದಾರೆ. ಇದೇ ವಿಚಾರಕ್ಕೆ ಬೇಸರದಿಂದ ಯುವಕ ಸೋಮನಾಥ ಮನೆಬಿಟ್ಟಿದ್ದ. ವಿಷಸೇವಿಸಿ ಟಿಪ್ಪರ್​​ನಲ್ಲಿ ಮಗಿದ್ದಾಗ ಯುವಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಯುವಕ ಟಿಪ್ಪರ್​ ಒಳಗೆ ಇದ್ದಾಗ ಕ್ರಷರ್​ನಲ್ಲಿ ಎಂ ಸ್ಯಾಂಡ್​ ಸುರಿದಾಗ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಸಾವಿನ ಕಾರಣ ತಿಳಿಯಬಹುದಾಗಿದೆ.

ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದವರ ಬಂಧನ

ಚಿಕ್ಕಬಳ್ಳಾಫುರ: ಅಕ್ರಮವಾಗಿ ದನದ ಮಾಂಸ ಸಾಗಿಸ್ತಿದ್ದ ಹಿನ್ನಲೆ. ಪೋಶೆಟ್ಟಿಹಳ್ಳಿ ಗ್ರಾಮದ ಬಳಿ ಬೊಲೆರೊ ಹಾಗೂ ಮೂವರು ಆರೋಪಿಗಳನ್ನು ಹಿಡಿಯಲಾಗಿದೆ. ಸ್ಥಳಿಯ ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಆಂದ್ರ ಮೂಲದ ಎ.ಪಿ.39, ಟಿಕ್ಯೂ 2663 ಬೊಲೆರೊ ವಾಹನ. ಆಂದ್ರದ ಹಿಂದೂಪುರದಿಂದ ಬೆಂಗಳೂರಿಗೆ ಅಕ್ರಮವಾಗಿ ದನಸ ಮಾಂಸ ಸಾಗಾಟ ಮಾಡಲಾಗುತ್ತಿತ್ತು. ಮುಖ್ಯ ರಸ್ತೆಗಳ ಬದಲು ಹಳ್ಳಿ ರಸ್ತೆಗಳಲ್ಲೊಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ವಿಲ್ಹಿಂಗ್ ಆಸೆಗೆ ಬಿದ್ದು ಬೈಕ್ ಕಳ್ಳತನ

ತುಮಕೂರು: ನಗರದ ಜಯನಗರ ಹಾಗೂ ತಿಲಕ್ ಪಾರ್ಕ್ ಪೊಲೀಸರ ಕಾರ್ಯಚರಣೆಯಿಂದ ವಿಲ್ಹಿಂಗ್ ಆಸೆಗೆ ಬಿದ್ದು ಬೈಕ್ ಕಳ್ಳತನ ಮಾಡುತ್ತಿದ್ದ  ನಾಲ್ಕು ಜನ ಅಸಾಮಿಗಳ ಬಂಧನ ಮಾಡಲಾಗಿದೆ. ಬಂಧಿತರಿಂದ 16 ದ್ವಿಚಕ್ರ ವಾಹನಗಳು ವಶ ಪಡಿಸಿಕೊಂಡಿದ್ದು, ಅನೈತಿಕ ಚಟುವಟಿಕೆ ಹಾಗೂ ವಿಲ್ಹಿಂಗ್​ಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ತುಮಕೂರು ನಗರದಲ್ಲಿ ಬೈಕ್ ಕಳ್ಳತನ ಹೆಚ್ಚಾಗಿದ್ದು, ಈ ಸಂಬಂಧ ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಪೊಲೀಸರು ಬಲೆಬಿಸಿದ್ದರು. ಆರೋಪಿಗಳ ಬಂಧನದಿಂದ ನಗರದ ತಿಲಕ್ ಪಾರ್ಕ್, ಜಯನಗರ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವುವಾಗಿದ್ದ 16 ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಸದ್ಯ ಆರೋಪಿಗಳನ್ನ ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ