AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇಡು ತೀರಿಸಿಕೊಳ್ಳಿ: ವಿಜಯೋತ್ಸವ ಪರೇಡ್​ನಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವೀರಾವೇಶದ ಭಾಷಣ

2ನೇ ಮಹಾಯುದ್ಧದ ವೀರೋಚಿತ ಹೋರಾಟದ ನೆನಪುಗಳನ್ನು ಮತ್ತೆ ನೇವರಿಸಿ ರಷ್ಯನ್ನರು ಸಂಘರ್ಷಕ್ಕೆ ಸಜ್ಜಾಗಬೇಕು. ದ್ವೇಷ ತೀರಿಸಿಕೊಳ್ಳಬೇಕು ಎಂದು ಕರೆ ನೀಡಿದರು

ಸೇಡು ತೀರಿಸಿಕೊಳ್ಳಿ: ವಿಜಯೋತ್ಸವ ಪರೇಡ್​ನಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವೀರಾವೇಶದ ಭಾಷಣ
ವ್ಲಾದಿಮಿರ್ ಪುಟಿನ್
TV9 Web
| Edited By: |

Updated on: May 09, 2022 | 10:43 AM

Share

ಮಾಸ್ಕೊ: 1945ರಲ್ಲಿ ನಾಜಿ ಜರ್ಮನಿ ವಿರುದ್ಧ ರಷ್ಯಾ ಯುದ್ಧ ಜಯಿಸಿದಂತೆಯೇ 2022ರಲ್ಲಿಯೂ ನಾವು ಗೆಲುವು ಸಾಧಿಸಲಿದ್ದೇವೆ. 2ನೇ ಮಹಾಯುದ್ಧದಲ್ಲಿ ನಾಜಿಗಳನ್ನು ಸೋಲಿಸಲು ಶ್ರಮಿಸಿದ್ದ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ದೇಶಗಳಿಗೆ ಅಭಿನಂದನೆಗಳು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದರು. 2ನೇ ಮಹಾಯುದ್ಧದಲ್ಲಿ ಬರ್ಲಿನ್ ವಶಪಡಿಸಿಕೊಂಡು, ವಿಜಯ ಘೋಷಿಸಿದ 77ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸೈನಿಕರು 1945ರಂತೆ ಇಂದಿಗೂ ಕೊಳಕು ನಾಜಿಗಳ ವಿರುದ್ಧ ಹೋರಾಡುತ್ತಿದ್ದಾರೆ. 1945ರ ಮಾದರಿಯಲ್ಲಿ ಈ ಬಾರಿಯೂ ಗೆಲುವು ನಮ್ಮದೇ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಷ್ಯಾ ಉಕ್ರೇನ್ ಯದ್ಧ ಕುರಿತು ಮತ್ತಷ್ಟು ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

ಹಲವು ದೇಶಗಳ ಜನರನ್ನು ಬಾಧಿಸಿದ ನಾಜಿ ವಾದ ಮತ್ತೆ ಬೆಳೆಯಲು ಅವಕಾಶ ಕೊಡಬಾರದು. ತಮ್ಮ ತಂದೆ ಮತ್ತು ತಾತಂದಿರ ನೆನಪುಗಳ ಉತ್ತರಾಧಿಕಾರಿಗಳಾಗಲು ಮುಂದಿನ ತಲೆಮಾರು ಹೆಮ್ಮೆಪಡುತ್ತದೆ ಎಂದು ಅವರು ಹೇಳಿದರು. ಲೆಕ್ಕವಿಲ್ಲದಷ್ಟು ತ್ಯಾಗಗಳ ಮೂಲಕ ನಮ್ಮ ದೇಶದಲ್ಲಿ ನಾಜಿ ವಾದವನ್ನು ಮಣಿಸಿದೆವು. ಇಂಥ ತ್ಯಾಗ ಮಾಡಿದ ಸೈನಿಕರು ಮತ್ತು ನಾಗರಿಕರನ್ನು ನಾನು ಸ್ಮರಿಸುತ್ತೇನೆ ಎಂದು ಪುಟಿನ್ ಹಲವು ಬಾರಿ ಹೇಳಿದರು. ‘ದುರಂತವೆಂದರೆ ಇಂದು ನಾಜಿ ವಾದವು ಮತ್ತೊಂದು ರೀತಿಯಲ್ಲಿ ತನ್ನ ತಲೆ ಎತ್ತುತ್ತಿದೆ. ಫ್ಯಾಸಿಸ್ಟ್​ಗಳ ಹಿಡಿತದಲ್ಲಿರಯವ ಉಕ್ರೇನ್, ರಷ್ಯಾಕ್ಕೆ ಮತ್ತು ಉಕ್ರೇನ್​ನಲ್ಲಿರುವ ರಷ್ಯನ್ ಭಾಷಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಈಗಿನ ಉಕ್ರೇನ್ ಆಡಳಿತದಲ್ಲಿರುವ ನಾಜಿ ವಾದಿಗಳಿಂದ ಅಪಾಯವಿದೆ’ ಎಂದು ವಿಶ್ಲೇಷಿಸಿದರು.

ನಾವು 77 ವರ್ಷಗಳ ಹಿಂದೆ ಯಾವ ವಾದವನ್ನು ಸೋಲಿಸಿದ್ದೇವೆಯೋ ಅದೇ ವಾದ ಈಗ ಮತ್ತೆ ವಿಜೃಂಭಿಸುತ್ತಿದೆ. 2ನೇ ಮಹಾಯುದ್ಧದ ವೀರೋಚಿತ ಹೋರಾಟದ ನೆನಪುಗಳನ್ನು ಮತ್ತೆ ನೇವರಿಸಿ ರಷ್ಯನ್ನರು ಸಂಘರ್ಷಕ್ಕೆ ಸಜ್ಜಾಗಬೇಕು. ದ್ವೇಷ ತೀರಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಉಕ್ರೇನ್​ನ ಎಲ್ಲ ನಿವಾಸಿಗಳಿಗೆ ನಾನು ಶಾಂತಿಯುತ ಬದುಕಿನೊಂದಿಗೆ ಉತ್ತಮ ಭವಿಷ್ಯವನ್ನು ಆಶಿಸುತ್ತೇನೆ ಎಂದರು. 2ನೇ ಮಹಾಯುದ್ಧವನ್ನು ‘ದೇಶಭಕ್ತಿಯ ಯುದ್ಧ’ (ಗ್ರೇಸ್ ಪೇಟ್ರಿಯಾಟಿಕ್ ವಾರ್) ಎಂದು ಕರೆಯುವ ರಷ್ಯಾ ಪ್ರತಿ ವರ್ಷ ಮೇ 9ರಂದು ವಿಜಯೋತ್ಸವ ಪರೇಡ್​ಗಳನ್ನು ನಡೆಸುತ್ತದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೂಚನೆಯಂತೆ ರಷ್ಯನ್ ಪಡೆಗಳು ಫೆಬ್ರುವರಿ 24ರಂದು ವಿಶೇಷ ಕಾರ್ಯಾಚರಣೆಗಾಗಿ ಉಕ್ರೇನ್ ಪ್ರವೇಶಿಸಿದವು. ಉಕ್ರೇನ್​ನ ಮಿಲಿಟರಿ ಶಕ್ತಿ ಕಡಿಮೆ ಮಾಡುವುದು ಮತ್ತು ನಾಜಿ ವಾದವನ್ನು ಸೋಲಿಸುವುದು ರಷ್ಯಾದ ಉದ್ದೇಶ ಎಂದು ಘೋಷಿಸಲಾಗಿದೆ. ಉಕ್ರೇನ್ 1991ರವರೆಗೂ ರಷ್ಯಾದ ಭಾಗವೇ ಆಗಿತ್ತು.

ಇದನ್ನೂ ಓದಿ: ಮೇ 9ರ ಒಳಗೆ ಉಕ್ರೇನ್ ಯುದ್ಧ ಮುಗಿಸುವ ಆತುರ ರಷ್ಯಾಕ್ಕೆ ಇಲ್ಲ: ಪುಟಿನ್ ಆಪ್ತ ಲಾವ್​ರೊವ್

ಇದನ್ನೂ ಓದಿ: Video: ರಷ್ಯಾ ಸೈನಿಕರ ಆಕ್ರಮಣದಿಂದ ಕಾಲು-ಕೈಬೆರಳುಗಳನ್ನು ಕಳೆದುಕೊಂಡ ನರ್ಸ್​ ಮದುವೆ; ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾದ ಆಸ್ಪತ್ರೆ ಸಿಬ್ಬಂದಿ

Follow Us
Web contact
Web contact

TV9 Kannada

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ