AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಷ್ಯಾ ಸೈನಿಕರ ಆಕ್ರಮಣದಿಂದ ಕಾಲು-ಕೈಬೆರಳುಗಳನ್ನು ಕಳೆದುಕೊಂಡ ನರ್ಸ್​ ಮದುವೆ; ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾದ ಆಸ್ಪತ್ರೆ ಸಿಬ್ಬಂದಿ

ಮದುವೆಗಾಗಿ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆಯನ್ನೂ ಮಾಡಲಾಗಿತ್ತು. ವೆಡ್ಡಿಂಗ್ ಕೇಕ್​ ಕೂಡ ತಯಾರಾಗಿತ್ತು. ಎಲ್ಲವನ್ನೂ ಆಸ್ಪತ್ರೆಯ ಸಿಬ್ಬಂದಿಯೇ ಖುದ್ದಾಗಿ ನಿಂತು ಮಾಡಿದ್ದರು.

Video: ರಷ್ಯಾ ಸೈನಿಕರ ಆಕ್ರಮಣದಿಂದ ಕಾಲು-ಕೈಬೆರಳುಗಳನ್ನು ಕಳೆದುಕೊಂಡ ನರ್ಸ್​ ಮದುವೆ; ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾದ ಆಸ್ಪತ್ರೆ ಸಿಬ್ಬಂದಿ
ನರ್ಸ್​ ತನ್ನ ಪ್ರಿಯಕರನೊಂದಿಗೆ ವಿವಾಹವಾದ ಸಂದರ್ಭ
TV9 Web
| Edited By: |

Updated on:May 05, 2022 | 1:48 PM

Share

ಉಕ್ರೇನ್​ನಲ್ಲಿ ರಷ್ಯಾ ಯುದ್ಧ ಸಾರಿ ತಿಂಗಳುಗಳೇ ಕಳೆದುಹೋಗಿದೆ. ಇಷ್ಟು ದಿನಗಳಲ್ಲಿ ಪ್ರಾಣಕಳೆದುಕೊಂಡವರು, ಗಾಯಗೊಂಡವರು, ಅನಾಥರಾದವರು, ದೇಶಬಿಟ್ಟು ಹೋದವರು, ನಿರ್ಗತಿಕರಾದವರು ಅದೆಷ್ಟೋ ಜನ. ಇದೆಲ್ಲದರ ಮಧ್ಯೆ ಉಕ್ರೇನ್​​ನಲ್ಲಿ ಮನಮಿಡಿಯುವ ಘಟನೆಗಳು ನಡೆಯುತ್ತಿವೆ. ಅದರ ವಿಡಿಯೋಗಳು ವೈರಲ್ ಆಗುವ ಜತೆಗೆ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸುದ್ದಿಯಾಗುತ್ತಿದೆ. ಅದೇ ರೀತಿ ರಷ್ಯಾ ಸೇನೆ ಮಾರ್ಚ್​​ನಲ್ಲಿ ನಡೆಸಿದ್ದ ನೆಲಬಾಂಬ್​ ಸ್ಫೋಟದಿಂದಾಗಿ ಕಾಲುಗಳನ್ನು ಮತ್ತು ಕೈಯಿಯ ನಾಲ್ಕು ಬೆರಳುಗಳನ್ನು ಕಳೆದುಕೊಂಡಿದ್ದ ನರ್ಸ್​ವೊಬ್ಬರು ಈಗ ತನ್ನ ಪ್ರಿಯಕರನೊಂದಿಗೆ ಮದುವೆಯಾದ ವಿಡಿಯೋ ವೈರಲ್ ಆಗುತ್ತಿದ್ದು, ಇದು ಮನಕಲಕುವಂತಿದೆ. ಕಾಲಿಲ್ಲದ ಯುವತಿಯನ್ನು, ಆಕೆಯ ಪತಿ, ಪುಟ್ಟ ಮಗುವಿನಂತೆ ಎತ್ತಿಕೊಂಡು, ಮುದ್ದಾಡುತ್ತ ನೃತ್ಯ ಮಾಡಿದ ಭಾವನಾತ್ಮಕವಾದ ವಿಡಿಯೋ ಇದು.

ಈ ಜೋಡಿಯ ವಿಡಿಯೋವನ್ನು ಕಾರ್ಯತಂತ್ರದ ಸಂವಹನ ಮತ್ತು ಮಾಹಿತಿ ಭದ್ರತಾ ಕೇಂದ್ರ ಶೇರ್ ಮಾಡಿಕೊಂಡಿದೆ. ಈ ಕೇಂದ್ರ ಉಕ್ರೇನ್​​ನ ಸಂಸ್ಕೃತಿ ಮತ್ತು ಮಾಹಿತಿ ನೀತಿ ಸಚಿವಾಲಯಕ್ಕೆ ಸೇರಿದ ಸಂಸ್ಥೆಯೇ ಆಗಿದ್ದು, ಯುದ್ಧಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತದೆ. ನರ್ಸ್ ಹೆಸರು ಒಕ್ಸಾನಾ ಎಂದಾಗಿದ್ದು, ಆಕೆಯ ಪತಿ ವಿಕ್ಟರ್​. ಇವರಿಬ್ಬರದ್ದೂ ಆರು ವರ್ಷಗಳ ಪ್ರೀತಿ. ಮದುವೆಯಾಗದೆ ಇದ್ದರೂ ಇಬ್ಬರು ಮಕ್ಕಳಿದ್ದಾರೆ. ಎಲ್​​ವಿವ್​ನ ಆಸ್ಪತ್ರೆಯಲ್ಲಿ ಇಬ್ಬರೂ ವಿವಾಹವಾಗಿದ್ದು, ಮಕ್ಕಳೂ ಇದ್ದರು.

ಇವರ ಮದುವೆಗಾಗಿ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆಯನ್ನೂ ಮಾಡಲಾಗಿತ್ತು. ವೆಡ್ಡಿಂಗ್ ಕೇಕ್​ ಕೂಡ ತಯಾರಾಗಿತ್ತು. ಎಲ್ಲವನ್ನೂ ಆಸ್ಪತ್ರೆಯ ಸಿಬ್ಬಂದಿಯೇ ಖುದ್ದಾಗಿ ನಿಂತು ಮಾಡಿದ್ದರು. ಮದುಮಗಳು ಬಿಳಿಬಣ್ಣದ ಉಡುಪು ತೊಟ್ಟು, ಉಕ್ರೇನಿಯನ್​​ ಸಂಪ್ರದಾಯದ ಹೂವಿನ ಕಿರೀಟ ತೊಟ್ಟಿದ್ದಳು.  ಮುಂದಿನ ದಿನಗಳಲ್ಲಿ ಒಕ್ಸಾನಾ ಪ್ರೊಸ್ಥೆಟಿಕ್​ ಮೂಲಕ ಕೃತಕ ಕಾಲುಗಳನ್ನು ಪಡೆಯಬಹುದು. ಆದರೆ ಅವರ ಗಾಯ ಸಂಪೂರ್ಣವಾಗಿ ಒಣಗಿದ ಬಳಿಕವಷ್ಟೇ ಈ ಕೃತಕ ಕಾಲುಗಳ ಜೋಡಣೆ ಸಾಧ್ಯ ಎಂದು ಆಸ್ಪತ್ರೆಯಲ್ಲಿ ಹೇಳಲಾಗಿದೆ. ಹೀಗಾಗಿ ಇವರಿಬ್ಬರೂ ಜರ್ಮನಿಗೆ ಹೋಗಲಿದ್ದಾರೆ  ಎಂದೂ ಹೇಳಲಾಗಿದೆ.  ವಿಡಿಯೋ ನೋಡಿದ ನೆಟ್ಟಿಗರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಮೇ 9ರಿಂದ ಶ್ರೀರಾಮ ಸೇನೆಯಿಂದ ಬೃಹತ್ ಓಂಕಾರ ಅಭಿಯಾನ ನಡೆಯುತ್ತೆ -ಪ್ರಮೋದ್ ಮುತಾಲಿಕ್

Published On - 1:48 pm, Thu, 5 May 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ