
ಬೆಂಗಳೂರು: ಆದಿತ್ಯ ಆಳ್ವಾಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಟಿವಿ9ಗೆ ಮಾಜಿ ಸಚಿವ, ದಿವಂಗತ ಜೀವರಾಜ್ ಆಳ್ವ ಕುಟುಂಬಸ್ಥರು ಹೇಳಿದ್ದಾರೆ.
ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಅವನಿಗಿಲ್ಲ:
ಆದಿತ್ಯನ ಚಟಗಳಿಂದಲೇ ನಾವು ಕುಟುಂಬಸ್ಥರು ದೂರವಾಗಿದ್ದೇವೆ ಎಂದಿರುವ ಜೀವರಾಜ್ ಆಳ್ವ ಕುಟುಂಬಸ್ಥರು, ತಾನು ಜೀವರಾಜ್ ಆಳ್ವಾರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ. ಫಾರ್ಮ್ಹೌಸ್ ಮಾಡುವುದಕ್ಕೆ ನಾಲ್ಕು ಎಕ್ರೆ ಜಾಗ ಖರೀದಿಸಿದ್ದರು. ಆದರೆ ಆ ಜಾಗದಲ್ಲಿ ಆದಿತ್ಯ ರೆಸಾರ್ಟ್ ಮಾಡಿಕೊಂಡಿದ್ದಾನೆ. ರೆಸಾರ್ಟ್ನಲ್ಲಿ ಅಕ್ರಮ ಚಟುವಟಿಕೆ ನಡೆಸ್ತಿದ್ದ ಬಗ್ಗೆ ನಮಗೆ ಬೇಸರ ಸಹ ಇದೆ ಎಂದು ಟಿವಿ9ಗೆ ದಿವಂಗತ ಜೀವರಾಜ್ ಆಳ್ವ ಕುಟುಂಬ ಸದಸ್ಯರು ಹೇಳಿದ್ದಾರೆ.
Published On - 1:27 pm, Tue, 15 September 20