ಮಕ್ಕಳಿಗೆ ದೊಣ್ಣೆಯಿಂದ ಹಲ್ಲೆ; ಪುತ್ರಿ ಸಾವು, ಪುತ್ರನಿಗೆ ಗಂಭೀರ ಗಾಯ, ತಾಯಿ ನೇಣಿಗೆ ಶರಣಾದ

ತನ್ನ ಮಾತು ಕೇಳುತ್ತಿಲ್ಲವೆಂದು ಕೇರಳಿದ ತಾಯಿ ಮಕ್ಕಳಿಗೆ ದೊಣ್ಣೆಯಿಂದ ಹೊಡೆದು ತಾನು ನೇಣಿಗೆ ಶರಣಾದ ಘಟನೆ ಹರಪನಹಳ್ಳಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಮಕ್ಕಳಿಗೆ ದೊಣ್ಣೆಯಿಂದ ಹಲ್ಲೆ; ಪುತ್ರಿ ಸಾವು, ಪುತ್ರನಿಗೆ ಗಂಭೀರ ಗಾಯ, ತಾಯಿ ನೇಣಿಗೆ ಶರಣಾದ
ಅಪರಾಧ
Updated By: ವಿವೇಕ ಬಿರಾದಾರ

Updated on: Oct 15, 2023 | 9:18 AM

ವಿಜಯನಗರ ಅ.15: ತನ್ನ ಮಾತು ಕೇಳುತ್ತಿಲ್ಲವೆಂದು ಕೇರಳಿದ ತಾಯಿ ಮಕ್ಕಳಿಗೆ ದೊಣ್ಣೆಯಿಂದ ಹೊಡೆದು ತಾನು ನೇಣಿಗೆ ಶರಣಾದ ಘಟನೆ ಹರಪನಹಳ್ಳಿ (Harappanhalli) ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ತಾಯಿಯ ಹಲ್ಲೆಯಿಂದ ಪುತ್ರಿ ಶಮಾ ಭಾನು (18) ಮೃತಪಟ್ಟಿದ್ದು, ಪುತ್ರ ಅಮಾನುಲ್ಲಾ (16) ತೀವ್ರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಲೆಗೈದ ಬೇಗಂಬಿ ಶಫಿಸಾಬ್ (50) ನೇಣಿಗೆ ಶರಣಾಗಿದ್ದಾಳೆ. ತನ್ನ ಮಾತು ಕೇಳುತ್ತಿಲ್ಲ ಎಂದು ತಾಯಿ ಬೇಗಂಬಿ ಶಫಿಸಾಬ್ ಇಬ್ಬರು ಮಕ್ಕಳನ್ನು ಕೊಲೆ ಮಾಡಲು ನಿರ್ಧರಿಸಿದ್ದಳು.

ಅದರಂತೆ ತಡರಾತ್ರಿ ಮಲಗಿದ್ದ ಶಮಾ ಭಾನು ಮತ್ತು ಅಮಾನುಲ್ಲಾಗೆ ದೊಣ್ಣೆಯಿಂದ ಹೊಡೆದಿದ್ದಾಳೆ. ಇಬ್ಬರು ಮಕ್ಕಳು ಮೃತಪಟ್ಟರೆಂದು ಬೇಗಂಬಿ ಶಫಿಸಾಬ್ ನೇಣಿಗೆ ಶರಣಾಗಿದ್ದಾಳೆ. ಬೆಳಿಗ್ಗೆ ಅಕ್ಕಪಕ್ಕದವರು ನೋಡಿದಾಗ ಉಸಿರಾಡುತ್ತಿದ್ದ ಮಗನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಭೇಟಿ ಪರಿಶೀಲನೆ ನಡೆಸಿದ್ದಾರೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಯುವತಿ ಮೇಲೆ ಅತ್ಯಾಚರ ಪ್ರಕರಣ: ಓರ್ವ ಆರೋಪಿಯ ಬಂಧನ; ಮೂವರಿಗಾಗಿ ಶೋಧ

ಮಚ್ಚಿನಿಂದ ಕೊಚ್ಚಿ ರೌಡಿಶೀಟರ್​ನ ಕೊಲೆ

ರಾಮನಗರ: ಮಚ್ಚಿನಿಂದ ಕೊಚ್ಚಿ ರೌಡಿಶೀಟರ್​ನ ಕೊಲೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಕೆರೆಮೇಗಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಲೋಕೇಶ್(34)​ ಕೊಲೆಯಾದ ರೌಡಿಶೀಟರ್. ರೌಡಿಶೀಟರ್ ಲೋಕೇಶ್​​ನನ್ನು ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್​ಪಿ ಕಾರ್ತಿಕ್ ರೆಡ್ಡಿ, ಎಎಸ್‌ಪಿ ಸುರೇಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:06 am, Sun, 15 October 23