ಬೆಂಗಳೂರು: ವೈದ್ಯನನ್ನು ಅಪಹರಿಸಿ ಕೊಲೆಗೈದಿದ್ದ ಹಂತಕರನ್ನ ಒಂದು ತಿಂಗಳ ಬಳಿಕ ಬಂಧಿಸಿದ ಪೊಲೀಸರು

|

Updated on: Mar 06, 2023 | 12:17 PM

ಫೆ.7ರಂದು ಖಾಸಗಿ ಆಸ್ಪತ್ರೆಯ ವೈದ್ಯ ಶ್ರೀಧರ್ ಎಂಬುವವರನ್ನ ಅಪಹರಿಸಿ ಕೊಲೆಗೈದು ಸೋಲದೇವನಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಲಾಗಿತ್ತು. ಇದೀಗ ಕೃತ್ಯ ಎಸಗಿದ ಹಂತಕರನ್ನ ಒಂದು ತಿಂಗಳ ಬಳಿಕ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು: ವೈದ್ಯನನ್ನು ಅಪಹರಿಸಿ ಕೊಲೆಗೈದಿದ್ದ ಹಂತಕರನ್ನ ಒಂದು ತಿಂಗಳ ಬಳಿಕ ಬಂಧಿಸಿದ ಪೊಲೀಸರು
ಖಾಸಗಿ ಆಸ್ಪತ್ರೆಯ ವೈದ್ಯ ಶ್ರೀಧರ್
Follow us on

ಬೆಂಗಳೂರು: ಫೆ.7ರಂದು ಯಲಹಂಕದ ಖಾಸಗಿ ಅಸ್ಪತ್ರೆಯಲ್ಲಿ ಫಿಸಿಯೋ ಥೆರಪಿಸ್ಟ್(Physiotherapist) ಅಗಿದ್ದ ಶ್ರೀಧರ್ ಎಂಬುವವರನ್ನ ಅಪಹರಿಸಿ ಕೊಲೆಗೈದು ಸೋಲದೇವನಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಲಾಗಿತ್ತು. ಇದೀಗ ಒಂದು ತಿಂಗಳ ಬಳಿಕ ಆಂಧ್ರ ಮೂಲದ ಮೂವರು ಅರೋಪಿಗಳಾದ ವೀರಾಂಜನೆಯೆಲು ಅಲಿಯಾಸ್ ಪುಲಿ, ಗೋವರ್ಧನ ಅಲಿಯಾಸ್ ಡಿಜೆ, ಭಾಸ್ಕರ್ ಅಲಿಯಾಸ್ ಬುಡಪ್ಪನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಮೊದಲಿಗೆ ಬೆಂಕಿಯಲ್ಲಿ ಸುಟ್ಟು ಅಪರಿಚಿತ ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲು ಮಾಡಲಾಗಿತ್ತು.
ಬಳಿಕ ತನಿಖೆ ವೇಳೆ ಅದು ವೈದ್ಯ ಶ್ರೀಧರ್ ಎಂಬುದು ಬೆಳಕಿ ಬಂದಿದೆ. ನಂತರ ಹಲವಾರು ಆಯಾಮದಿಂದ ತನಿಖೆ ಮಾಡಿದ ಬಳಿಕ ಶ್ರೀಧರ್​ನನ್ನು ಕೊಲೆ ಮಾಡಿ ಸುಟ್ಟು ಹಾಕಲಾಗಿದೆ ಎಂದು ಗೊತ್ತಾಗಿದೆ. ಈ ವೇಳೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಹಲವಾರು ದಿನಗಳ ಹಿಂದೆ ಬಾರ್​ನಲ್ಲಿ ಆಂಧ್ರ ಮೂಲದ ಈ ಮೂರು ವ್ಯಕ್ತಿಗಳ ನಡುವೆ ನಡೆದಿದ್ದ ಒಂದು ಗಲಾಟೆ ಈ ಕೊಲೆಗೆ ಕಾರಣ ಎಂಬುದು ಗೊತ್ತಾಗಿದೆ. ಕೂಡಲೇ ಮೂವರನ್ನು ಅರೆಸ್ಟ್ ಮಾಡಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ರಾತ್ರಿ ಮನೆಯಿಂದ ಆಚೆ ಹೋದವ ಬರ್ಬರವಾಗಿ ಕೊಲೆಯಾದ, ಆಂಟಿಗಾಗಿ ಬಿತ್ತು ಹೆಣ

ವಿಷ ಸೇವಿಸಿ ಪತಿ ಆತ್ಮಹತ್ಯೆ, ಪತ್ನಿ ವಿರುದ್ಧ ಪೊಲೀಸರಿಗೆ ದೂರು

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಉಗ್ಗೆಹಳ್ಳಿ ಗ್ರಾಮದ ಜಗದೀಶ್ ಎಂಬಾತ ಎರಡು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ಆತನ ಪತ್ನಿಯೇ ಕಾರಣ ಎಂದು ಮೃತನ ಕುಟುಂಬಸ್ಥರು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ನೇತ್ರಾವತಿ ವಿರುದ್ಧ ದೂರು ನೀಡಿದ್ದರು. ನಿನ್ನೆ(ಮಾ.5) ಮನೆಯಿಂದ ನಾಪತ್ತೆಯಾಗಿದ್ದ ಮೃತನ ಪತ್ನಿ ನೇತ್ರಾವತಿ, ಮನನೊಂದು ಮನೆಯ ಸಮೀಪದ ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತುಪ್ರಕರಣ ದಾಖಲಾಗಿತ್ತು.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Mon, 6 March 23