AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ನಾನೇ ಡಾನ್ ಆಗುತ್ತೇನೆ..! ವೈರಲ್ ಆಯ್ತು ಆಡಿಯೋ

ಅವಲಹಳ್ಳಿ‌ ಪೊಲೀಸರಿಗೆ ಮೆಂಟಲ್ ಮಂಜ ಆವಾಜ್ ಹಾಕಿದ್ದಾನೆ ಎಂದೇ ಕ್ರೈಂ ಜಗತ್ತಿನಲ್ಲಿ ಮಾತು ಕೇಳಿಬರುತ್ತಿದೆ. ಆಡಿಯೋ ವೈರಲ್ ಮೂಲಕ ರೌಡಿ ಪಟ್ಟಕ್ಕಾಗಿ ಬೆಂಗಳೂರಲ್ಲಿ ರೌಡಿಶೀಟರ್​ಗಳ ನಡುವೆ ಶೀತಲ ಸಮರ ನಡೆದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿಗೆ ನಾನೇ ಡಾನ್ ಆಗುತ್ತೇನೆ..! ವೈರಲ್ ಆಯ್ತು ಆಡಿಯೋ
ಮೆಂಟಲ್ ಮಂಜ
TV9 Web
| Edited By: |

Updated on:Oct 02, 2021 | 4:47 PM

Share

ಬೆಂಗಳೂರು: ಕುಳ್ಳ ವೆಂಕಟೇಶ್​ನನ್ನು ಕೊಲೆ ಮಾಡಿದ್ದು ನಾನೇ, ನಾನು ಬೆಂಗಳೂರಿಗೆ ಡಾನ್ ಆಗುತ್ತೇನೆ ಎಂಬ ಆಡಿಯೋವೊಂದು ಭರ್ಜರಿ ವೈರಲ್ ಆಗುತ್ತಿದೆ ಈ ಆಡಿಯೋದಲ್ಲಿ ಕೇಳಿಸುವ ಧ್ವನಿ ಮೆಂಟಲ್ ಮಂಜ ಎಂಬಾತನದು ಎನ್ನಲಾಗಿದ್ದು, ಅವಲಹಳ್ಳಿ‌ ಪೊಲೀಸರಿಗೆ ಮೆಂಟಲ್ ಮಂಜ ಆವಾಜ್ ಹಾಕಿದ್ದಾನೆ ಎಂದೇ ಕ್ರೈಂ ಜಗತ್ತಿನಲ್ಲಿ ಮಾತು ಕೇಳಿಬರುತ್ತಿದೆ. ಆಡಿಯೋ ವೈರಲ್ ಮೂಲಕ ರೌಡಿ ಪಟ್ಟಕ್ಕಾಗಿ ಬೆಂಗಳೂರಲ್ಲಿ ರೌಡಿಶೀಟರ್​ಗಳ ನಡುವೆ ಶೀತಲ ಸಮರ ನಡೆದಿರುವುದು ಬೆಳಕಿಗೆ ಬಂದಿದೆ.

ವೈರಲ್ ಆದ ಆಡಿಯೋದಲ್ಲಿ ನಾನು ಬೆಂಗಳೂರಿಗೇ ಡಾನ್ ಆಗುತ್ತೇನೆ. ಕುಳ್ಳ ವೆಂಕಟೇಶ್​ನನ್ನು ಕೊಂದದ್ದೇ ನಾನು ಎಂದು ಎಂಬ ಮಾತುಗಳು ಕೇಳುತ್ತದೆ. ಸೆಪ್ಟೆಂಬರ್ 25ರಂದು ಹಾಡಹಗಲಲ್ಲೇ ಕುಳ್ಳ ವೆಂಕಟೇಶ್​ನ ಮರ್ಡರ್ ಆಗಿತ್ತು. ನಡುರಸ್ತೆಯಲ್ಲೇ ಹಂತಕರು ಲಾಂಗು ಮಚ್ಚಿನಿಂದ ಕುಳ್ಳ ಮಂಜನನ್ನು ಕೊಚ್ಚಿ ಕೊಲೆ ಮಾಡಿದ್ದರು. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಕುಳ್ಳ ವೆಂಕಟೇಶನ ಹತ್ಯೆಯಾಗಿತ್ತು. ಪ್ರಕರಣ ಸಂಬಂಧ ಅನಿಲ್, ಅಪ್ಪು ಸೇರಿದಂತೆ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಕುಳ್ಳ ವೆಂಕಟೇಶ್​ಗೂ ಅನಿಲ್​ಗೂ ಏರಿಯಾ ವಿಚಾರಕ್ಕೆ ಗಲಾಟೆ ನಡೆದಿತ್ತು. ಅದೇ ಕಾರಣಕ್ಕೆ ಅನಿಲ್ ಮತ್ತು ಸಂಗಡಿಗರು ಕುಳ್ಳ ವೆಂಕಟೇಶ್​ನ ಕೊಲೆ ಮಾಡಿದ ಆರೋಪದಡಿ ಬಂಧಿಸಲಾಗಿದೆ. ಆದರೆ ಕುಳ್ಳ ವೆಂಕಟೇಶ್​ನ   ಕೊಲೆ ಮಾಡಿದ್ದುಅನಿಲ್ ಅಲ್ಲ, ನಾನು ಎಂದು ಆಡಿಯೋದಲ್ಲಿ ಹೇಳಿಕೊಳ್ಳಲಾಗಿದೆ. ಆದರೆ ಆ ಆಡಿಯೋದಲ್ಲಿ ಇರುವ ಧ್ವನಿ ಯಾರದ್ದು ಎಂಬುದರ ಬಗ್ಗೆ ಈವರೆಗೂ ಯಾವುದೇ ಖಚಿತ ಮಾಹಿತಿ ತಿಳಿದುಬಂದಿಲ್ಲ.ಭೂಗತ ಲೋಕದಲ್ಲಿ ಮಾತ್ರ ಆ ಧ್ವನಿ ಮೆಂಟಲ್ ಮಂಜನದ್ದು ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ: 

Nomads Education : ಅಪರಾಧ ಜಗತ್ತಿನೊಳಗೆ ಅಲೆಮಾರಿ ಮಕ್ಕಳ ಮುಖಗಳನ್ನು ಎದುರುಗೊಳ್ಳುವುದು ಬೇಡ ಅಲ್ಲವೆ?

Viral Video: ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕಾಣಿಸಿಕೊಂಡ ಮಂಗ; ವಿಡಿಯೊ ವೈರಲ್

Published On - 4:41 pm, Sat, 2 October 21

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ