AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ನಾನೇ ಡಾನ್ ಆಗುತ್ತೇನೆ..! ವೈರಲ್ ಆಯ್ತು ಆಡಿಯೋ

ಅವಲಹಳ್ಳಿ‌ ಪೊಲೀಸರಿಗೆ ಮೆಂಟಲ್ ಮಂಜ ಆವಾಜ್ ಹಾಕಿದ್ದಾನೆ ಎಂದೇ ಕ್ರೈಂ ಜಗತ್ತಿನಲ್ಲಿ ಮಾತು ಕೇಳಿಬರುತ್ತಿದೆ. ಆಡಿಯೋ ವೈರಲ್ ಮೂಲಕ ರೌಡಿ ಪಟ್ಟಕ್ಕಾಗಿ ಬೆಂಗಳೂರಲ್ಲಿ ರೌಡಿಶೀಟರ್​ಗಳ ನಡುವೆ ಶೀತಲ ಸಮರ ನಡೆದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿಗೆ ನಾನೇ ಡಾನ್ ಆಗುತ್ತೇನೆ..! ವೈರಲ್ ಆಯ್ತು ಆಡಿಯೋ
ಮೆಂಟಲ್ ಮಂಜ
TV9 Web
| Edited By: |

Updated on:Oct 02, 2021 | 4:47 PM

Share

ಬೆಂಗಳೂರು: ಕುಳ್ಳ ವೆಂಕಟೇಶ್​ನನ್ನು ಕೊಲೆ ಮಾಡಿದ್ದು ನಾನೇ, ನಾನು ಬೆಂಗಳೂರಿಗೆ ಡಾನ್ ಆಗುತ್ತೇನೆ ಎಂಬ ಆಡಿಯೋವೊಂದು ಭರ್ಜರಿ ವೈರಲ್ ಆಗುತ್ತಿದೆ ಈ ಆಡಿಯೋದಲ್ಲಿ ಕೇಳಿಸುವ ಧ್ವನಿ ಮೆಂಟಲ್ ಮಂಜ ಎಂಬಾತನದು ಎನ್ನಲಾಗಿದ್ದು, ಅವಲಹಳ್ಳಿ‌ ಪೊಲೀಸರಿಗೆ ಮೆಂಟಲ್ ಮಂಜ ಆವಾಜ್ ಹಾಕಿದ್ದಾನೆ ಎಂದೇ ಕ್ರೈಂ ಜಗತ್ತಿನಲ್ಲಿ ಮಾತು ಕೇಳಿಬರುತ್ತಿದೆ. ಆಡಿಯೋ ವೈರಲ್ ಮೂಲಕ ರೌಡಿ ಪಟ್ಟಕ್ಕಾಗಿ ಬೆಂಗಳೂರಲ್ಲಿ ರೌಡಿಶೀಟರ್​ಗಳ ನಡುವೆ ಶೀತಲ ಸಮರ ನಡೆದಿರುವುದು ಬೆಳಕಿಗೆ ಬಂದಿದೆ.

ವೈರಲ್ ಆದ ಆಡಿಯೋದಲ್ಲಿ ನಾನು ಬೆಂಗಳೂರಿಗೇ ಡಾನ್ ಆಗುತ್ತೇನೆ. ಕುಳ್ಳ ವೆಂಕಟೇಶ್​ನನ್ನು ಕೊಂದದ್ದೇ ನಾನು ಎಂದು ಎಂಬ ಮಾತುಗಳು ಕೇಳುತ್ತದೆ. ಸೆಪ್ಟೆಂಬರ್ 25ರಂದು ಹಾಡಹಗಲಲ್ಲೇ ಕುಳ್ಳ ವೆಂಕಟೇಶ್​ನ ಮರ್ಡರ್ ಆಗಿತ್ತು. ನಡುರಸ್ತೆಯಲ್ಲೇ ಹಂತಕರು ಲಾಂಗು ಮಚ್ಚಿನಿಂದ ಕುಳ್ಳ ಮಂಜನನ್ನು ಕೊಚ್ಚಿ ಕೊಲೆ ಮಾಡಿದ್ದರು. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಕುಳ್ಳ ವೆಂಕಟೇಶನ ಹತ್ಯೆಯಾಗಿತ್ತು. ಪ್ರಕರಣ ಸಂಬಂಧ ಅನಿಲ್, ಅಪ್ಪು ಸೇರಿದಂತೆ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಕುಳ್ಳ ವೆಂಕಟೇಶ್​ಗೂ ಅನಿಲ್​ಗೂ ಏರಿಯಾ ವಿಚಾರಕ್ಕೆ ಗಲಾಟೆ ನಡೆದಿತ್ತು. ಅದೇ ಕಾರಣಕ್ಕೆ ಅನಿಲ್ ಮತ್ತು ಸಂಗಡಿಗರು ಕುಳ್ಳ ವೆಂಕಟೇಶ್​ನ ಕೊಲೆ ಮಾಡಿದ ಆರೋಪದಡಿ ಬಂಧಿಸಲಾಗಿದೆ. ಆದರೆ ಕುಳ್ಳ ವೆಂಕಟೇಶ್​ನ   ಕೊಲೆ ಮಾಡಿದ್ದುಅನಿಲ್ ಅಲ್ಲ, ನಾನು ಎಂದು ಆಡಿಯೋದಲ್ಲಿ ಹೇಳಿಕೊಳ್ಳಲಾಗಿದೆ. ಆದರೆ ಆ ಆಡಿಯೋದಲ್ಲಿ ಇರುವ ಧ್ವನಿ ಯಾರದ್ದು ಎಂಬುದರ ಬಗ್ಗೆ ಈವರೆಗೂ ಯಾವುದೇ ಖಚಿತ ಮಾಹಿತಿ ತಿಳಿದುಬಂದಿಲ್ಲ.ಭೂಗತ ಲೋಕದಲ್ಲಿ ಮಾತ್ರ ಆ ಧ್ವನಿ ಮೆಂಟಲ್ ಮಂಜನದ್ದು ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ: 

Nomads Education : ಅಪರಾಧ ಜಗತ್ತಿನೊಳಗೆ ಅಲೆಮಾರಿ ಮಕ್ಕಳ ಮುಖಗಳನ್ನು ಎದುರುಗೊಳ್ಳುವುದು ಬೇಡ ಅಲ್ಲವೆ?

Viral Video: ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕಾಣಿಸಿಕೊಂಡ ಮಂಗ; ವಿಡಿಯೊ ವೈರಲ್

Published On - 4:41 pm, Sat, 2 October 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ