AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕೌಂಟ್ ಅಪ್ಡೇಟ್ ನೆಪದಲ್ಲಿ ಕಸ್ಟಮರ್​ಗೆ ಕರೆ ಮಾಡಿ ಖದೀಮರಿಂದ ದೋಖಾ!

ಹುಬ್ಬಳ್ಳಿ: ನಿಮಗೆ ಲಾಟರಿಯಲ್ಲಿ ಬಹುಮಾನ ಬಂದಿದೆ. ಲಕ್ಕಿ ಡ್ರಾನಲ್ಲಿ ಸೆಲೆಕ್ಟ್ ಆಗಿದ್ದೀರಿ. ಇಲ್ಲ ಅಂದ್ರೆ ನಿಮ್ಮ ಅಕೌಂಟ್​ನಲ್ಲಿ ಏನೋ ಎಡವಟ್ಟಾಗಿದೆ ಅಂತಾ ಖದೀಮರು ಫೋನ್ ಮಾಡಿ ಬ್ಯಾಂಕ್ ಡೀಟೇಲ್ಸ್ ಪಡೆಯಬಹುದು. ನೀವು ಇಂತಹ ಬಣ್ಣ ಬಣ್ಣದ ಮಾತಿಗೆ ಮರುಳಾಗಿದ್ದೇ ಆದ್ರೆ, ಕಳ್ಳರು ನಿಮ್ಮ ಅಕೌಂಟ್​ಗೆ ಎಳ್ಳುನೀರು ಬಿಟ್ಟುಬಿಡ್ತಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೈಬರ್ ಕ್ರೈಂ ದೋಖಾ ಮೀತಿಮೀರಿದೆ. ಸಾರ್ವಜನಿಕರ ಮೊಬೈಲ್​ಗೆ ಬ್ಯಾಂಕ್ ಅಧಿಕಾರಿಗಳ ಸೋಗಲ್ಲಿ ಕರೆ ಮಾಡೋ ಖದೀಮರು ಬ್ಯಾಂಕ್ ಖಾತೆದಾರರ ಮಾಹಿತಿ ಕಲೆಹಾಕಿ ಟೋಪಿ ಹಾಕ್ತಿದ್ದಾರೆ. […]

ಅಕೌಂಟ್ ಅಪ್ಡೇಟ್ ನೆಪದಲ್ಲಿ ಕಸ್ಟಮರ್​ಗೆ ಕರೆ ಮಾಡಿ ಖದೀಮರಿಂದ ದೋಖಾ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 20, 2019 | 2:26 PM

Share

ಹುಬ್ಬಳ್ಳಿ: ನಿಮಗೆ ಲಾಟರಿಯಲ್ಲಿ ಬಹುಮಾನ ಬಂದಿದೆ. ಲಕ್ಕಿ ಡ್ರಾನಲ್ಲಿ ಸೆಲೆಕ್ಟ್ ಆಗಿದ್ದೀರಿ. ಇಲ್ಲ ಅಂದ್ರೆ ನಿಮ್ಮ ಅಕೌಂಟ್​ನಲ್ಲಿ ಏನೋ ಎಡವಟ್ಟಾಗಿದೆ ಅಂತಾ ಖದೀಮರು ಫೋನ್ ಮಾಡಿ ಬ್ಯಾಂಕ್ ಡೀಟೇಲ್ಸ್ ಪಡೆಯಬಹುದು. ನೀವು ಇಂತಹ ಬಣ್ಣ ಬಣ್ಣದ ಮಾತಿಗೆ ಮರುಳಾಗಿದ್ದೇ ಆದ್ರೆ, ಕಳ್ಳರು ನಿಮ್ಮ ಅಕೌಂಟ್​ಗೆ ಎಳ್ಳುನೀರು ಬಿಟ್ಟುಬಿಡ್ತಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೈಬರ್ ಕ್ರೈಂ ದೋಖಾ ಮೀತಿಮೀರಿದೆ. ಸಾರ್ವಜನಿಕರ ಮೊಬೈಲ್​ಗೆ ಬ್ಯಾಂಕ್ ಅಧಿಕಾರಿಗಳ ಸೋಗಲ್ಲಿ ಕರೆ ಮಾಡೋ ಖದೀಮರು ಬ್ಯಾಂಕ್ ಖಾತೆದಾರರ ಮಾಹಿತಿ ಕಲೆಹಾಕಿ ಟೋಪಿ ಹಾಕ್ತಿದ್ದಾರೆ.

ಅಕೌಂಟ್ ಅಪ್​ಡೇಟ್ ನೆಪದಲ್ಲಿ ಕಸ್ಟಮರ್​ಗೆ ಕರೆ ಮಾಡಿ ದೋಖಾ..! ಹೀಗೆ ಮೋಸದ ಕರೆಗೆ ಮಾರುಹೋಗಿ ಸಂಕಷ್ಟಕ್ಕೆ ಸಿಲುಕಿರುವ ಹುಬ್ಬಳ್ಳಿ ನಿವಾಸಿಯಾದ ಮಂಜುಳಾ ಪುತ್ರಿ ನಿಖಿತಾಗೆ ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಹೆಸರಲ್ಲಿ ಕಾಲ್ ಬಂದಿತ್ತು. ಹೀಗೆ ಕಾಲ್ ಮಾಡಿದ್ದವರು ಅಕೌಂಟ್​ನ ಮಾಹಿತಿ ಪಡೆದಿದ್ದರು. ಬ್ಯಾಂಕ್ ಬ್ಯಾಲೆನ್ಸ್ ಮತ್ತು ಟ್ರಾನ್ಸಕ್ಷನ್ ಡೀಟೇಲ್ಸ್ ಅನ್ನ ಪಡೆದು, ಮೊಬೈಲ್​ಗೆ ಲಿಂಕ್ ಒಂದನ್ನ ಕಳಿಸಿದ್ದರು. ಅಷ್ಟೇ.. ಅದನ್ನ ಕ್ಲಿಕ್ ಮಾಡೋಕೆ ಹೇಳಿದ್ದ ಖದೀಮರು ನಿಮ್ಮ ಅಕೌಂಟ್ ಅಪ್​ಡೇಟ್ ಆಗುತ್ತೆ ಅಂತಾ ಓಳು ಬಿಟ್ಟಿದ್ದರು. ಇತ್ತ ಖದೀಮರ ಮಾತು ನಂಬಿದ್ದ ಇವರಿಗೆ ಕ್ಷಣಮಾತ್ರದಲ್ಲಿ ಮೋಸ ಆಗಿತ್ತು. ಖಾತೆಯಲ್ಲಿದ್ದ 95 ಸಾವಿರ ರುಪಾಯಿ ಮಂಗಮಾಯವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ನಿಖಿತಾ ಹಾಗೂ ಮಂಜುಳಾ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಇಂಥ ಪ್ರಕರಣಗಳು ಒಂದೆರಡಲ್ಲ, ಅವಳಿ ನಗರದ ಬಹುತೇಕ ಜನ ಹೀಗೆ ಮೋಸ ಹೋಗಿದ್ದಾರಂತೆ. ಒಂದೇ ವಾರದಲ್ಲಿ 10ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿವೆ. ಇನ್ನು ಈ ಬಗ್ಗೆ ಜನರಲ್ಲಿ ಮನವಿ ಮಾಡಿರೋ ಪೊಲೀಸರು, ಅನಾಮಿಕ ಕರೆ ಬಂದ್ರೆ ಅಲರ್ಟ್ ಆಗಿರುವಂತೆ ಮನವಿ ಮಾಡಿದ್ದಾರೆ.

ಖದೀಮರ ಬಗ್ಗೆ ಇರಲಿ ಎಚ್ಚರಿಕೆ ಘಟನೆ ಬಗ್ಗೆ ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಆದಷ್ಟು ಬೇಗ ಮೋಸಗಾರರ ಜಾಡು ಸಿಗುವ ವಿಶ್ವಾಸವಿದೆ. ಆದ್ರೆ ಅನಾಮಿಕ ಕರೆ ಬಂದಾಗ, ಸಾರ್ವಜನಿಕರು ಬ್ಯಾಂಕ್ ಮಾಹಿತಿ ನೀಡಬಾರದು. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ. ಅನುಮಾನ ಬಂದಲ್ಲಿ ಕೂಡಲೇ ಪೊಲೀಸರನ್ನ ಸಂಪರ್ಕಿಸಿ, ಈ ಕುರಿತು ಮಾಹಿತಿ ನೀಡಿದರೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Published On - 10:05 am, Sun, 20 October 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!