AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ತಾನು ಪರೀಕ್ಷೆಯಲ್ಲಿ ಫೇಲ್​ ಆಗಬಹುದೆಂಬ ಭಯದಿಂದ ಅಪ್ಪನನ್ನು ಕೊಂದ ಬಾಲಕ; ಪಾರಾಗಲು ಮಾಡಿದ್ದು ಕ್ರಿಮಿನಲ್​ ಐಡಿಯಾ

ಆದರೆ ವೀರೇಂದ್ರನನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ಕೈವಾಡ ಈ ಕೊಲೆಯಲ್ಲಿ ಇಲ್ಲ ಎಂಬುದು ಗೊತ್ತಾಯಿತು. ಬಳಿಕ 10ನೇ ತರಗತಿ ಹುಡುಗನನ್ನೇ ವಿಚಾರಣೆ ನಡೆಸಲಾಯಿತು. ನಂತರ ಆತ ಒಪ್ಪಿಕೊಂಡ..ದೊಡ್ಡದಾಗಿ ಅತ್ತುಬಿಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

Shocking News: ತಾನು ಪರೀಕ್ಷೆಯಲ್ಲಿ ಫೇಲ್​ ಆಗಬಹುದೆಂಬ ಭಯದಿಂದ ಅಪ್ಪನನ್ನು ಕೊಂದ ಬಾಲಕ; ಪಾರಾಗಲು ಮಾಡಿದ್ದು ಕ್ರಿಮಿನಲ್​ ಐಡಿಯಾ
ಪ್ರಾತಿನಿಧಿಕ ಚಿತ್ರ
TV9 Web
| Updated By: Lakshmi Hegde|

Updated on: Apr 07, 2022 | 8:09 AM

Share

ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣವೂ ಹೆಚ್ಚುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣನಾಗಬಹುದು ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವವರು ಇದ್ದಾರೆ. ಫಲಿತಾಂಶ ಬಂದ ಮೇಲೆ ಕಡಿಮೆ ಅಂಕ ಬಂತು, ಫೇಲ್ ಆದೆ ಎಂದು ಸಾಯುವವರೂ ಇದ್ದಾರೆ. ಇದೆಲ್ಲವೂ ತಪ್ಪು. ಆದರೆ ಮಕ್ಕಳಲ್ಲಿರುವ ಭಯ, ಅಂಕ ಕಡಿಮೆ ಬಂದಾಗ ಅವರಷ್ಟಕ್ಕೇ ಅವರು ಅವಮಾನ ಆಯಿತು, ಮನೆಯಲ್ಲಿ ಬಯ್ಯುತ್ತಾರೆ, ಪಾಲಕರು ಹೊಡೆಯುತ್ತಾರೆ ಎಂದು ಭಾವಿಸಿ ತಮ್ಮ ಜೀವ ಕಳೆದುಕೊಳ್ಳುತ್ತಾರೆ. ಆದರೆ ಮಧ್ಯಪ್ರದೇಶದಲ್ಲೊಂದು ಶಾಕಿಂಗ್​ ಘಟನೆ ನಡೆದಿದೆ. ಇಲ್ಲಿ 15ವರ್ಷದ ಬಾಲಕನೊಬ್ಬ ತಾನು ಪರೀಕ್ಷೆಯಲ್ಲಿ ಫೇಲ್​ ಆಗಬಹುದು ಎಂದು ಹೆದರಿ ಅಪ್ಪನನ್ನೇ ಕೊಂದಿದ್ದಾನೆ. ಅಷ್ಟೇ ಅಲ್ಲ, ಈ ಕೊಲೆಯನ್ನು ಪಕ್ಕದ ಮನೆಯವನ ತಲೆಗೆ ಕಟ್ಟಲೂ ಪ್ರಯತ್ನ ಪಟ್ಟಿದ್ದಾನೆ.

ಮೃತ ವ್ಯಕ್ತಿಯ ಹೆಸರು ದುಳಿಚಾಂದ್​ ಅಹಿರ್ವಾರ್. ಏಪ್ರಿಲ್​ 3ರಂದು ರಾತ್ರಿ ಮಲಗಿದ್ದಾಗ ಕೊಡಲಿಯಿಂದ ಕೊಲ್ಲಲ್ಪಟ್ಟಿದ್ದಾರೆ. ಪುತ್ರನೇ ಹೋಗಿ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ನಾನು ಗಲಾಟೆ ಕೇಳಿ ಹೊರಗೆ ಬಂದೆ, ಪಕ್ಕದ ಮನೆಯವನಾದ ವೀರೇಂದ್ರ ಅಹಿರ್ವಾರ್​ ಮತ್ತು ಇನ್ನೊಬ್ಬಾತ ಓಡಿಹೋಗಿದ್ದನ್ನು ನಾನು ನೋಡಿದೆ ಎಂದೂ ದೂರಿನಲ್ಲಿ ತಿಳಿಸಿದ್ದ.  ಈ ವೀರೇಂದ್ರ ಮತ್ತು ಬಾಲಕನ ಮನೆಯ ನಡುವೆ ಭಿನ್ನಾಭಿಪ್ರಾಯವಿತ್ತು. ಆಗಾಗ ಜಗಳವಾಗುತ್ತಿತ್ತು. ಅದನ್ನು ಸದ್ಬಳಕೆ ಮಾಡಿಕೊಂಡು, ತಾನು ಪಾರಾಗುವ ಪ್ರಯತ್ನ ಇವನದಾಗಿತ್ತು. ಆದರೆ ವೀರೇಂದ್ರನನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ಕೈವಾಡ ಈ ಕೊಲೆಯಲ್ಲಿ ಇಲ್ಲ ಎಂಬುದು ಗೊತ್ತಾಯಿತು. ಬಳಿಕ 10ನೇ ತರಗತಿ ಹುಡುಗನನ್ನೇ ವಿಚಾರಣೆ ನಡೆಸಲಾಯಿತು. ನಂತರ ಆತ ಒಪ್ಪಿಕೊಂಡ..ದೊಡ್ಡದಾಗಿ ಅತ್ತುಬಿಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ಸರಿಯಾಗಿ ವಿದ್ಯಾಭ್ಯಾಸ ಮಾಡುವುದಿಲ್ಲ, ಓದುವುದಿಲ್ಲ ಎಂದು ನನ್ನ ಅಪ್ಪ ಸದಾ ನಿಂದಿಸುತ್ತಿದ್ದರು. ಪರೀಕ್ಷೆಯಲ್ಲಿ ಫೇಲ್​ ಆದರೆ ಮನೆಯಿಂದ ಹೊರಹಾಕುವ ಬೆದರಿಕೆಯನ್ನೂ ಹಾಕಿದ್ದರು. ಹೀಗಾಗಿ ಕಡಿಮೆ ಅಂಕ ಬಂದು, ಅನುತ್ತೀರ್ಣನಾದರೆ ಅವರು ಹೊಡೆಯುತ್ತಾರೆ, ಬೈಯ್ಯುತ್ತಾರೆ ಎಂದು ಹೆದರಿ ಕೊಂದು ಹಾಕಿದೆ ಎಂದು ಬಾಲಕ  ಒಪ್ಪಿಕೊಂಡಿದ್ದಾಗಿಯೂ ಮಾಹಿತಿ ನೀಡಿದ್ದಾರೆ. ಸದ್ಯ ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. ನಂತರ ಬಾಲಾಪರಾಧಿ ಕೇಂದ್ರಕ್ಕೆ ಕಳಿಸಲಾಗುವುದು ಎಂದೂ  ಹೇಳಿದ್ದಾರೆ.

ಇದನ್ನೂ ಓದಿ: Pat Cummins: ಮೊದಲ ಪಂದ್ಯದಲ್ಲೇ ಕಮಿನ್ಸ್​ ಸ್ಫೋಟಕ ಆಟ: ಕೇವಲ 14 ಎಸೆತಗಳಲ್ಲಿ ಅರ್ಧಶತಕದ ದಾಖಲೆ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?