Sign In

By signing in or creating an account, you agree with Associated Broadcasting Company's Terms & Conditions and Privacy Policy.

Chhattisgarh: ಒಂದೇ ಕುಟುಂಬದ ಮೂವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

ಜಶ್‌ಪುರ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ, ಆತನ ಪತ್ನಿ ಮತ್ತು ಅವರ ಮಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

Chhattisgarh: ಒಂದೇ ಕುಟುಂಬದ ಮೂವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 08, 2022 | 2:53 PM

ಜಶ್‌ಪುರ: ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ, ಆತನ ಪತ್ನಿ ಮತ್ತು ಅವರ ಮಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಹತ್ಯೆಗೆ ವಾಮಾಚಾರ ಕಾರಣವಾಗಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಆದರೆ ಅವರು ಎಲ್ಲಾ ದೃಷ್ಟಿಗಳಿಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ. ಅಲ್ಲದೇ ಈಗಾಗಲೇ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಕಡಮತೋಳಿ ಗ್ರಾಮದಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಮೃತರನ್ನು ಅರ್ಜುನ್ ತೆಂಡುವಾ (43), ಅವರ ಪತ್ನಿ ಫಿರ್ನಿ ತೆಂಡುವಾ (40) ಮತ್ತು ಪುತ್ರಿ ಸಂಜನಾ (19) ಎಂದು ಗುರುತಿಸಲಾಗಿದೆ ಎಂದು ಜಶ್‌ಪುರದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಿ ರವಿಶಂಕರ್ ತಿಳಿಸಿದ್ದಾರೆ. .

ಈ ಮೂವರನ್ನು ಕೂಡ ಅವರ ಮನೆಯೊಳಗೆ ಹರಿತವಾದ ಆಯುಧಗಳಿಂದ ಕೊಲ್ಲಲಾಗಿದೆ, ಆರೋಪಿಗಳಿ ಈ ಕುಟುಂಬಕ್ಕೆ ಪರಿಚಯ ಎಂದು ಪೊಲೀಸರು ಶಂಕಿಸಿದ್ದಾರೆ.

ಕುಟುಂಬದವರು ಬಹಳ ದಿನಗಳಿಂದ ವಾಮಾಚಾರ ನಡೆಸುತ್ತಿದ್ದರು ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ. ಜನರು ಕುಟುಂಬಕ್ಕೆ ಭಯಪಡುತ್ತಿದ್ದರು ಏಕೆಂದರೆ ಅವರು ಕೆಲವು ಅಲೌಕಿಕ ಶಕ್ತಿಗಳನ್ನು ಹೊಂದಿದ್ದಾರೆಂದು ಅವರು ನಂಬಿದ್ದರು. ಗ್ರಾಮದ ವ್ಯಕ್ತಿಯೊಬ್ಬರು ಕೆಲವು ವಾಮಾಚಾರದ ವಿಚಾರದಲ್ಲಿ ಮೃತರೊಂದಿಗೆ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ನಮ್ಮ ಮುಂದಿದೆ. ಕೆಲವರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಕೊಲೆ ಪ್ರಕರಣ ದಾಖಲಾಗಿದ್ದು, ಅಪರಾಧ ಪತ್ತೆ ಹಚ್ಚಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹತ್ಯೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಶುಕ್ರವಾರ, ಆ ವ್ಯಕ್ತಿ ಜಮೀನು ವಿವಾದವನ್ನು ಬಗ್ಗೆ ತಿಳಿದು ಬಂದಿದೆ, ಇನ್ನೊಂದು ತಂಡವು ಕೆಲಸ ಮಾಡುತ್ತಿದೆ ಎಂದು ಎಸ್ಪಿ ಹೇಳಿದರು.

Published On - 2:51 pm, Sat, 8 October 22