AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಮಹಿಳೆ, ಕೊನೆಗೂ ಸಿಕ್ಕಿ ಬಿದ್ದಿದ್ಹೇಗೆ?

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಮಹಿಳೆಯೊಬ್ಬಳು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರೂ ಲಿವ್ ಇನ್​ ಸಂಬಂಧದಲ್ಲಿದ್ದರು, ಆದರೆ ತಮ್ಮ ಮಧ್ಯೆ ಮಗ ಬರಬಾರದೆಂದು ಆತನನ್ನು ಹತ್ಯೆ ಮಾಡಿದ್ದಾಳೆ.

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಮಹಿಳೆ, ಕೊನೆಗೂ ಸಿಕ್ಕಿ ಬಿದ್ದಿದ್ಹೇಗೆ?
ಸಾವುImage Credit source: The Statesman
ನಯನಾ ರಾಜೀವ್
|

Updated on:Aug 16, 2023 | 11:49 AM

Share

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಮಹಿಳೆಯೊಬ್ಬಳು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರೂ ಲಿವ್ ಇನ್​ ಸಂಬಂಧದಲ್ಲಿದ್ದರು, ಆದರೆ ತಮ್ಮ ಮಧ್ಯೆ ಮಗ ಬರಬಾರದೆಂದು ಆತನನ್ನು ಹತ್ಯೆ ಮಾಡಿದ್ದಾಳೆ. 11 ವರ್ಷದ ದಿವ್ಯಾಂಶ್​ನನ್ನು ಕತ್ತು ಹಿಸುಕಿ ಕೊಂದು, ಬಳಿಕ ಮನೆಯ ಹಾಸಿಗೆಯಲ್ಲಿ ಅಮಾಯಕನ ಶವವನ್ನು ಬಚ್ಚಿಟ್ಟಿದ್ದಾಳೆ. ಆದರೆ, ದೆಹಲಿ ಪೊಲೀಸರ ಅಪರಾಧ ವಿಭಾಗವು 24 ವರ್ಷದ ಆರೋಪಿ ಪೂಜಾಳನ್ನು ಬಂಧಿಸಿದೆ. ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಆ.10ರಂದು ಮಧ್ಯಾಹ್ನ ಮನೆಯಲ್ಲಿ ಮಲಗಿದ್ದ ದಿವ್ಯಾಂಶ್‌ನನ್ನು ಪೂಜಾ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಪೂಜಾ ಮತ್ತು ಜಿತೇಂದ್ರ 2019 ರಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಜಿತೇಂದ್ರ ತನ್ನ ಹೆಂಡತಿಗೆ ವಿಚ್ಛೇದನ ನೀಡುವ ಮೂಲಕ ಪೂಜಾಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು, ಆದರೆ 2022 ರಲ್ಲಿ ಜಿತೇಂದ್ರ ಪೂಜಾಳನ್ನು ತೊರೆದು ತನ್ನ ಹೆಂಡತಿ ಮತ್ತು ಮಗ ದಿವ್ಯಾಂಶ್ ಜೊತೆ ವಾಸಿಸಲು ಹೋಗಿದ್ದ.

ಇದರಿಂದ ಜಿತೇಂದ್ರನ ಮೇಲೆ ಕೋಪಗೊಂಡ ಪೂಜಾ, ಆತನಿಗೆ ತಕ್ಕ ಪಾಠ ಕಲಿಸಲು ಬಯಸಿದ್ದಳು. ತನ್ನ ಮಗ ದಿವ್ಯಾಂಶ್‌ನಿಂದಾಗಿ ಜಿತೇಂದ್ರ ತನ್ನನ್ನು ಮದುವೆಯಾಗಲು ನಿರಾಕರಿಸಿದನೆಂದು ಪೂಜಾ ಭಾವಿಸಿದಳು, ನಂತರ ಅವಳು ಜಿತೇಂದ್ರ ಮತ್ತು ತನ್ನ ನಡುವಿನ ಮುಳ್ಳಾಗಿ ದಿವ್ಯಾಂಶ್‌ನನ್ನು ಇದ್ದಾನೆ ಎಂದುಕೊಂಡಳು.

ಮತ್ತಷ್ಟು ಓದಿ: ಬೀದರ್: ಕಳ್ಳತನಕ್ಕೆ ಅಡ್ಡಿ: ವಯೋವೃದ್ಧೆಗೆ ಚಾಕು ಇರಿದ ಅಪ್ರಾಪ್ತ ಬಾಲಕ

ಆಗಸ್ಟ್ 10 ರಂದು ಪೂಜಾ ಇಂದ್ರಪುರಿಯಲ್ಲಿರುವ ಜಿತೇಂದ್ರನ ಮನೆಯ ವಿಳಾಸವನ್ನು ಕಾಮನ್ ಫ್ರೆಂಡ್ ಬಳಿ ಕೇಳಿದ್ದಳು. ಬಳಿಕ ಜಿತೇಂದ್ರನ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಪೊಲೀಸರಿಂದ ಬಂದ ಮಾಹಿತಿ ಪ್ರಕಾರ, ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ದಿವ್ಯಾಂಶು ಹಾಸಿಗೆಯ ಮೇಲೆ ಮಲಗಿದ್ದ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಆರೋಪಿ ಪೂಜಾ, ಅಮಾಯಕನ ಪ್ರಾಣ ತೆಗೆದಿದ್ದು, ಅದೇ ಹಾಸಿಗೆಯಲ್ಲಿ ಶವವನ್ನು ಬಚ್ಚಿಟ್ಟು ಓಡಿ ಹೋಗಿದ್ದಾಳೆ.

300 ಸಿಸಿಟಿವಿಗಳ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಸಹಾಯದಿಂದ ಪೂಜಾಳನ್ನು ಗುರುತಿಸಿದ್ದಾರೆ. ಅದರ ನಂತರ, ನಜಾಫ್‌ಗಢ-ನಾಗ್ಲೋಯ್ ರಸ್ತೆಯಲ್ಲಿರುವ ರಂಹೋಲಾ, ನಿಹಾಲ್ ವಿಹಾರ್ ಮತ್ತು ರಿಶಾಲ್ ಗಾರ್ಡನ್ ಪ್ರದೇಶಗಳ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡಲಾಯಿತು.

3 ದಿನಗಳ ಕಠಿಣ ಪರಿಶ್ರಮದ ನಂತರ ಆರೋಪಿ ಪೂಜಾಳನ್ನು ಬಕ್ಕರ್‌ವಾಲಾ ಪ್ರದೇಶದಲ್ಲಿ ಬಂಧಿಸಲಾಗಿದೆ. ಬಂಧನದ ನಂತರ ಪೂಜಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:48 am, Wed, 16 August 23

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್