AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಮಹಿಳೆ, ಕೊನೆಗೂ ಸಿಕ್ಕಿ ಬಿದ್ದಿದ್ಹೇಗೆ?

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಮಹಿಳೆಯೊಬ್ಬಳು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರೂ ಲಿವ್ ಇನ್​ ಸಂಬಂಧದಲ್ಲಿದ್ದರು, ಆದರೆ ತಮ್ಮ ಮಧ್ಯೆ ಮಗ ಬರಬಾರದೆಂದು ಆತನನ್ನು ಹತ್ಯೆ ಮಾಡಿದ್ದಾಳೆ.

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಮಹಿಳೆ, ಕೊನೆಗೂ ಸಿಕ್ಕಿ ಬಿದ್ದಿದ್ಹೇಗೆ?
ಸಾವುImage Credit source: The Statesman
ನಯನಾ ರಾಜೀವ್
|

Updated on:Aug 16, 2023 | 11:49 AM

Share

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಮಹಿಳೆಯೊಬ್ಬಳು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರೂ ಲಿವ್ ಇನ್​ ಸಂಬಂಧದಲ್ಲಿದ್ದರು, ಆದರೆ ತಮ್ಮ ಮಧ್ಯೆ ಮಗ ಬರಬಾರದೆಂದು ಆತನನ್ನು ಹತ್ಯೆ ಮಾಡಿದ್ದಾಳೆ. 11 ವರ್ಷದ ದಿವ್ಯಾಂಶ್​ನನ್ನು ಕತ್ತು ಹಿಸುಕಿ ಕೊಂದು, ಬಳಿಕ ಮನೆಯ ಹಾಸಿಗೆಯಲ್ಲಿ ಅಮಾಯಕನ ಶವವನ್ನು ಬಚ್ಚಿಟ್ಟಿದ್ದಾಳೆ. ಆದರೆ, ದೆಹಲಿ ಪೊಲೀಸರ ಅಪರಾಧ ವಿಭಾಗವು 24 ವರ್ಷದ ಆರೋಪಿ ಪೂಜಾಳನ್ನು ಬಂಧಿಸಿದೆ. ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಆ.10ರಂದು ಮಧ್ಯಾಹ್ನ ಮನೆಯಲ್ಲಿ ಮಲಗಿದ್ದ ದಿವ್ಯಾಂಶ್‌ನನ್ನು ಪೂಜಾ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಪೂಜಾ ಮತ್ತು ಜಿತೇಂದ್ರ 2019 ರಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಜಿತೇಂದ್ರ ತನ್ನ ಹೆಂಡತಿಗೆ ವಿಚ್ಛೇದನ ನೀಡುವ ಮೂಲಕ ಪೂಜಾಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು, ಆದರೆ 2022 ರಲ್ಲಿ ಜಿತೇಂದ್ರ ಪೂಜಾಳನ್ನು ತೊರೆದು ತನ್ನ ಹೆಂಡತಿ ಮತ್ತು ಮಗ ದಿವ್ಯಾಂಶ್ ಜೊತೆ ವಾಸಿಸಲು ಹೋಗಿದ್ದ.

ಇದರಿಂದ ಜಿತೇಂದ್ರನ ಮೇಲೆ ಕೋಪಗೊಂಡ ಪೂಜಾ, ಆತನಿಗೆ ತಕ್ಕ ಪಾಠ ಕಲಿಸಲು ಬಯಸಿದ್ದಳು. ತನ್ನ ಮಗ ದಿವ್ಯಾಂಶ್‌ನಿಂದಾಗಿ ಜಿತೇಂದ್ರ ತನ್ನನ್ನು ಮದುವೆಯಾಗಲು ನಿರಾಕರಿಸಿದನೆಂದು ಪೂಜಾ ಭಾವಿಸಿದಳು, ನಂತರ ಅವಳು ಜಿತೇಂದ್ರ ಮತ್ತು ತನ್ನ ನಡುವಿನ ಮುಳ್ಳಾಗಿ ದಿವ್ಯಾಂಶ್‌ನನ್ನು ಇದ್ದಾನೆ ಎಂದುಕೊಂಡಳು.

ಮತ್ತಷ್ಟು ಓದಿ: ಬೀದರ್: ಕಳ್ಳತನಕ್ಕೆ ಅಡ್ಡಿ: ವಯೋವೃದ್ಧೆಗೆ ಚಾಕು ಇರಿದ ಅಪ್ರಾಪ್ತ ಬಾಲಕ

ಆಗಸ್ಟ್ 10 ರಂದು ಪೂಜಾ ಇಂದ್ರಪುರಿಯಲ್ಲಿರುವ ಜಿತೇಂದ್ರನ ಮನೆಯ ವಿಳಾಸವನ್ನು ಕಾಮನ್ ಫ್ರೆಂಡ್ ಬಳಿ ಕೇಳಿದ್ದಳು. ಬಳಿಕ ಜಿತೇಂದ್ರನ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಪೊಲೀಸರಿಂದ ಬಂದ ಮಾಹಿತಿ ಪ್ರಕಾರ, ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ದಿವ್ಯಾಂಶು ಹಾಸಿಗೆಯ ಮೇಲೆ ಮಲಗಿದ್ದ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಆರೋಪಿ ಪೂಜಾ, ಅಮಾಯಕನ ಪ್ರಾಣ ತೆಗೆದಿದ್ದು, ಅದೇ ಹಾಸಿಗೆಯಲ್ಲಿ ಶವವನ್ನು ಬಚ್ಚಿಟ್ಟು ಓಡಿ ಹೋಗಿದ್ದಾಳೆ.

300 ಸಿಸಿಟಿವಿಗಳ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಸಹಾಯದಿಂದ ಪೂಜಾಳನ್ನು ಗುರುತಿಸಿದ್ದಾರೆ. ಅದರ ನಂತರ, ನಜಾಫ್‌ಗಢ-ನಾಗ್ಲೋಯ್ ರಸ್ತೆಯಲ್ಲಿರುವ ರಂಹೋಲಾ, ನಿಹಾಲ್ ವಿಹಾರ್ ಮತ್ತು ರಿಶಾಲ್ ಗಾರ್ಡನ್ ಪ್ರದೇಶಗಳ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡಲಾಯಿತು.

3 ದಿನಗಳ ಕಠಿಣ ಪರಿಶ್ರಮದ ನಂತರ ಆರೋಪಿ ಪೂಜಾಳನ್ನು ಬಕ್ಕರ್‌ವಾಲಾ ಪ್ರದೇಶದಲ್ಲಿ ಬಂಧಿಸಲಾಗಿದೆ. ಬಂಧನದ ನಂತರ ಪೂಜಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:48 am, Wed, 16 August 23

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು