Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಮಹಿಳೆ, ಕೊನೆಗೂ ಸಿಕ್ಕಿ ಬಿದ್ದಿದ್ಹೇಗೆ?

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಮಹಿಳೆಯೊಬ್ಬಳು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರೂ ಲಿವ್ ಇನ್​ ಸಂಬಂಧದಲ್ಲಿದ್ದರು, ಆದರೆ ತಮ್ಮ ಮಧ್ಯೆ ಮಗ ಬರಬಾರದೆಂದು ಆತನನ್ನು ಹತ್ಯೆ ಮಾಡಿದ್ದಾಳೆ.

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಮಹಿಳೆ, ಕೊನೆಗೂ ಸಿಕ್ಕಿ ಬಿದ್ದಿದ್ಹೇಗೆ?
ಸಾವುImage Credit source: The Statesman
Follow us
ನಯನಾ ರಾಜೀವ್
|

Updated on:Aug 16, 2023 | 11:49 AM

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಮಹಿಳೆಯೊಬ್ಬಳು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರೂ ಲಿವ್ ಇನ್​ ಸಂಬಂಧದಲ್ಲಿದ್ದರು, ಆದರೆ ತಮ್ಮ ಮಧ್ಯೆ ಮಗ ಬರಬಾರದೆಂದು ಆತನನ್ನು ಹತ್ಯೆ ಮಾಡಿದ್ದಾಳೆ. 11 ವರ್ಷದ ದಿವ್ಯಾಂಶ್​ನನ್ನು ಕತ್ತು ಹಿಸುಕಿ ಕೊಂದು, ಬಳಿಕ ಮನೆಯ ಹಾಸಿಗೆಯಲ್ಲಿ ಅಮಾಯಕನ ಶವವನ್ನು ಬಚ್ಚಿಟ್ಟಿದ್ದಾಳೆ. ಆದರೆ, ದೆಹಲಿ ಪೊಲೀಸರ ಅಪರಾಧ ವಿಭಾಗವು 24 ವರ್ಷದ ಆರೋಪಿ ಪೂಜಾಳನ್ನು ಬಂಧಿಸಿದೆ. ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಆ.10ರಂದು ಮಧ್ಯಾಹ್ನ ಮನೆಯಲ್ಲಿ ಮಲಗಿದ್ದ ದಿವ್ಯಾಂಶ್‌ನನ್ನು ಪೂಜಾ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಪೂಜಾ ಮತ್ತು ಜಿತೇಂದ್ರ 2019 ರಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಜಿತೇಂದ್ರ ತನ್ನ ಹೆಂಡತಿಗೆ ವಿಚ್ಛೇದನ ನೀಡುವ ಮೂಲಕ ಪೂಜಾಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು, ಆದರೆ 2022 ರಲ್ಲಿ ಜಿತೇಂದ್ರ ಪೂಜಾಳನ್ನು ತೊರೆದು ತನ್ನ ಹೆಂಡತಿ ಮತ್ತು ಮಗ ದಿವ್ಯಾಂಶ್ ಜೊತೆ ವಾಸಿಸಲು ಹೋಗಿದ್ದ.

ಇದರಿಂದ ಜಿತೇಂದ್ರನ ಮೇಲೆ ಕೋಪಗೊಂಡ ಪೂಜಾ, ಆತನಿಗೆ ತಕ್ಕ ಪಾಠ ಕಲಿಸಲು ಬಯಸಿದ್ದಳು. ತನ್ನ ಮಗ ದಿವ್ಯಾಂಶ್‌ನಿಂದಾಗಿ ಜಿತೇಂದ್ರ ತನ್ನನ್ನು ಮದುವೆಯಾಗಲು ನಿರಾಕರಿಸಿದನೆಂದು ಪೂಜಾ ಭಾವಿಸಿದಳು, ನಂತರ ಅವಳು ಜಿತೇಂದ್ರ ಮತ್ತು ತನ್ನ ನಡುವಿನ ಮುಳ್ಳಾಗಿ ದಿವ್ಯಾಂಶ್‌ನನ್ನು ಇದ್ದಾನೆ ಎಂದುಕೊಂಡಳು.

ಮತ್ತಷ್ಟು ಓದಿ: ಬೀದರ್: ಕಳ್ಳತನಕ್ಕೆ ಅಡ್ಡಿ: ವಯೋವೃದ್ಧೆಗೆ ಚಾಕು ಇರಿದ ಅಪ್ರಾಪ್ತ ಬಾಲಕ

ಆಗಸ್ಟ್ 10 ರಂದು ಪೂಜಾ ಇಂದ್ರಪುರಿಯಲ್ಲಿರುವ ಜಿತೇಂದ್ರನ ಮನೆಯ ವಿಳಾಸವನ್ನು ಕಾಮನ್ ಫ್ರೆಂಡ್ ಬಳಿ ಕೇಳಿದ್ದಳು. ಬಳಿಕ ಜಿತೇಂದ್ರನ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಪೊಲೀಸರಿಂದ ಬಂದ ಮಾಹಿತಿ ಪ್ರಕಾರ, ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ದಿವ್ಯಾಂಶು ಹಾಸಿಗೆಯ ಮೇಲೆ ಮಲಗಿದ್ದ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಆರೋಪಿ ಪೂಜಾ, ಅಮಾಯಕನ ಪ್ರಾಣ ತೆಗೆದಿದ್ದು, ಅದೇ ಹಾಸಿಗೆಯಲ್ಲಿ ಶವವನ್ನು ಬಚ್ಚಿಟ್ಟು ಓಡಿ ಹೋಗಿದ್ದಾಳೆ.

300 ಸಿಸಿಟಿವಿಗಳ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಸಹಾಯದಿಂದ ಪೂಜಾಳನ್ನು ಗುರುತಿಸಿದ್ದಾರೆ. ಅದರ ನಂತರ, ನಜಾಫ್‌ಗಢ-ನಾಗ್ಲೋಯ್ ರಸ್ತೆಯಲ್ಲಿರುವ ರಂಹೋಲಾ, ನಿಹಾಲ್ ವಿಹಾರ್ ಮತ್ತು ರಿಶಾಲ್ ಗಾರ್ಡನ್ ಪ್ರದೇಶಗಳ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡಲಾಯಿತು.

3 ದಿನಗಳ ಕಠಿಣ ಪರಿಶ್ರಮದ ನಂತರ ಆರೋಪಿ ಪೂಜಾಳನ್ನು ಬಕ್ಕರ್‌ವಾಲಾ ಪ್ರದೇಶದಲ್ಲಿ ಬಂಧಿಸಲಾಗಿದೆ. ಬಂಧನದ ನಂತರ ಪೂಜಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:48 am, Wed, 16 August 23

PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ