ಧಾರವಾಡ: ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಮಗ

| Updated By: ವಿವೇಕ ಬಿರಾದಾರ

Updated on: Mar 03, 2024 | 1:51 PM

ಧಾರವಾಡ ನಗರದಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಪಿಂಚಣಿ ಹಣ ಮತ್ತು ಆಸ್ತಿ ಆಸೆಗಾಗಿ ಮಗ ತಾಯಿಯನ್ನು ಕೊಲೆ ಮಾಡಿ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಹೊಸಯಲ್ಲಾಪುರ ಬಡಾವಣೆಯ ಉಡುಪಿ ಓಣಿಯಲ್ಲಿ ನಡೆದಿದೆ.

ಧಾರವಾಡ: ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಮಗ
ಸಾಂದರ್ಭಿಕ ಚಿತ್ರ
Follow us on

ಧಾರವಾಡ, ಮಾರ್ಚ್​ 03: ಮಗ (Son) ತಾಯಿಯನ್ನು (Mother) ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ (Dharwad) ನಗರದ ಹೊಸಯಲ್ಲಾಪುರ ಬಡಾವಣೆಯ ಉಡುಪಿ ಓಣಿಯಲ್ಲಿ ನಡೆದಿದೆ. ಶಾರದಾ ಭಜಂತ್ರಿ (60) ಕೊಲೆಯಾದ ದುರ್ದೈವಿ. ರಾಜೇಶ ಭಜಂತ್ರಿ (40) ಕೊಲೆ ಮಾಡಿದ ವ್ಯಕ್ತಿ. ರಾಜೇಶ್​ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದನು. ತಾಯಿ ಶಾರದಾ ಭಜಂತ್ರಿ ಬರುತ್ತಿದ್ದ 19 ಸಾವಿರ ಪಿಂಚಣಿ ಹಣ ಮತ್ತು ಆಸ್ತಿ ಮೇಲೆ ರಾಜೇಶ್​ ಕಣ್ಣಿಟ್ಟಿದ್ದನು. ಪಿಂಚಣಿ ಹಣ ನನಗೆ ನೀಡು ಮತ್ತು ಖಾಲಿ ಜಾಗವನ್ನು ತನ್ನ ಹೆಸರಿಗೆ ಮಾಡುವಂತೆ ರಾಜೇಶ್​​ ತಾಯಿ ಶಾರದಾ ಭಜಂತ್ರಿ ದುಂಬಾಲು ಬಿದ್ದಿದ್ದನು. ಆದರೆ ಶಾರಾದಾ ಭಜಂತ್ರಿ ಇದಕ್ಕೆ ನಿರಾಕರಿಸಿದ್ದಳು. ಇದರಿಂದ ಇಬ್ಬರ ನಡುವೆ ಜಗಳವಾಗಿದೆ.

ಜಾಗಳ ತಾರಕಕ್ಕೇರಿ ರಾಜೇಶ್​ ತಾಯಿ ಶಾರಾದಾ ಭಜಂತ್ರಿಗೆ ರಾಡ್‌ನಿಂದ ಹಿಡೆದು ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಂಚಾರಿ ಕುರಿಗಾಹಿ ಮೇಲೆ ಹಲ್ಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ: ಕಿರೆಸೂರು ಗ್ರಾಮದ ಹೊಲದಲ್ಲಿ ಕುರಿ ಮೇಯಿಸಿದ ಕಾರಣಕ್ಕೆ ಕುರಿಗಾಹಿ ಹೊನ್ನಪ್ಪ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಕಿರೆಸೂರು ಗ್ರಾಮದ ವೆಂಕಟೇಶ್ ಸೋಮನಗೌಡ ಹಲ್ಲೆ ಮಾಡಿದ ಆರೋಪಿ. ಕುರಿಗಾಹಿಯನ್ನು ಕಿಮ್ಸ್​ಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಅಮಾನುಷ ಕೃತ್ಯ, ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಹಲ್ಲೆ

ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ

ಕೊಪ್ಪಳ: ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯಲ್ಲಿ ನಡೆದಿದೆ. ದ್ಯಾಮ ನಾಯಕ (28) ಆತ್ಮಹತ್ಯೆ ಮಾಡಿಕೊಂಡ ರೈತ. ರೈತ ದ್ಯಾಮ ನಾಯಕ ಬ್ಯಾಂಕ್ ಹಾಗೂ ಸ್ವ ಸಹಾಯ ಗುಂಪಿನಲ್ಲಿ ಸಾಲ ಮಾಡಿಕೊಂಡಿದ್ದನು. ಬರ ಹಿನ್ನೆಲೆಯಲ್ಲಿ ಬೆಳೆ ಕಳೆದುಕೊಂಡು ರೈತ ದ್ಯಾಮ ನಾಯಕ ಕಂಗಾಲಾಗಿದ್ದನು. ಈ ಮಧ್ಯೆ ಸಾಲಭಾದೆ ತಾಳಲಾರದೆ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ